AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neena Gupta: ಟೇಲರ್​, ವೈದ್ಯರಿಂದ ಬಾಲ್ಯದಲ್ಲೇ ಆಗಿತ್ತು ಲೈಂಗಿಕ ಕಿರುಕುಳ; ಕಹಿ ಘಟನೆ ಬಗ್ಗೆ ಬಾಯಿಬಿಟ್ಟ ನಟಿ ನೀನಾ ಗುಪ್ತಾ

Sach Kahun Toh: ಅಳತೆ ತೆಗೆದುಕೊಳ್ಳುವಾಗ ಟೇಲರ್​ ಅಸಭ್ಯವಾಗಿ ಮುಟ್ಟುತ್ತಿದ್ದ. ಕಣ್ಣಿನ ಡಾಕ್ಟರ್​ ಕೂಡ ನೀನಾ ಗುಪ್ತಾ ಅವರ ದೇಹದ ಇತರ ಅಂಗಗಳನ್ನು ಪರಿಶೀಲಿಸುತ್ತಿದ್ದ. ಆ ಬಗ್ಗೆ ಅವರು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

Neena Gupta: ಟೇಲರ್​, ವೈದ್ಯರಿಂದ ಬಾಲ್ಯದಲ್ಲೇ ಆಗಿತ್ತು ಲೈಂಗಿಕ ಕಿರುಕುಳ; ಕಹಿ ಘಟನೆ ಬಗ್ಗೆ ಬಾಯಿಬಿಟ್ಟ ನಟಿ ನೀನಾ ಗುಪ್ತಾ
ನೀನಾ ಗುಪ್ತಾ
TV9 Web
| Updated By: ಮದನ್​ ಕುಮಾರ್​|

Updated on:Oct 18, 2021 | 4:23 PM

Share

ನಟಿ ನೀನಾ ಗುಪ್ತಾ ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಫೇಮಸ್​ ಆಗಿದ್ದಾರೆ. ತಮಗೆ ಅನಿಸಿದ್ದನ್ನು ಅವರು ಮುಲಾಜಿಲ್ಲದೇ ಹೇಳಿಕೊಳ್ಳುತ್ತಾರೆ. ಆದರೆ ಬಾಲ್ಯದಲ್ಲಿ ಅವರ ಮನಸ್ಥಿತಿ ಆ ರೀತಿ ಇರಲಿಲ್ಲ. ತಮ್ಮ ಮೇಲೆ ಲೈಂಗಿಕ ಶೋಷಣೆ ಆಗಿದ್ದರೂ ಕೂಡ ಅವರು ಅದನ್ನು ಕುಟುಂಬದವರ ಬಳಿ ಹೇಳಿಕೊಂಡಿರಲಿಲ್ಲ. ನೀನಾ ಗುಪ್ತಾಗೆ ವೈದ್ಯರು ಮತ್ತು ಟೇಲರ್​ ಕಿರುಕುಳ ನೀಡಿದ್ದರು. ಆ ಕಹಿ ಘಟನೆ ಬಗ್ಗೆ ತಮ್ಮ ಕುಟುಂಬದವರ ಬಳಿಯೂ ನೀನಾ ಹೇಳಿಕೊಂಡಿರಲಿಲ್ಲ. ಅದನ್ನು ತಮ್ಮ ಆತ್ಮಚರಿತ್ರೆಯಲ್ಲಿ ತೆರೆದಿಟ್ಟಿದ್ದಾರೆ.

‘ಸಚ್​ ಕಹೂ ತೋ’ ಶೀರ್ಷಿಕೆಯಲ್ಲಿ ನೀನಾ ಗುಪ್ತಾ ಆಟೋ ಬಯೋಗ್ರಫಿ ಬರೆದಿದ್ದಾರೆ. ಅದರಲ್ಲಿ ಈ ಘಟನೆ ಬಗ್ಗೆ ವಿವರಿಸಲಾಗಿದೆ. ಬಾಲಕಿ ಆಗಿದ್ದಾಗ ಒಮ್ಮೆ ಅವರು ಕಣ್ಣಿನ ಆಸ್ಪತ್ರೆಗೆ ಹೋಗಿದ್ದರು. ಆರಂಭದಲ್ಲಿ ಕಣ್ಣು ಪರಿಶೀಲಿಸಿದ ವೈದ್ಯರು ನಂತರ ದೇಹದ ಇತರ ಭಾಗಗಳನ್ನು ನೋಡಲು ಆರಂಭಿಸಿದರಂತೆ. ಆ ಅಂಗಗಳು ಕಣ್ಣಿಗೆ ಸಂಬಂಧಿಸಿರಲಿಲ್ಲ. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ನೀನಾ ಗುಪ್ತಾ ಒಬ್ಬರೇ ಕುಳಿತು ಅತ್ತಿದ್ದರು. ಒಂದು ವೇಳೆ ತಾಯಿ ಬಳಿ ಹೇಳಿಕೊಂಡರೇ ತಮ್ಮದೇ ಏನೂ ತಪ್ಪಿರಬಹುದು ಅಂತ ಹೇಳಬಹುದು ಎಂಬ ಭಯದಲ್ಲಿ ಆ ವಿಚಾರವನ್ನು ನೀನಾ ಗುಪ್ತಾ ಮುಚ್ಚಿಟ್ಟರು.

ಅದೇ ರೀತಿ ಬಟ್ಟೆ ಹೊಲಿಸಲು ಟೇಲರ್​ ಬಳಿ ಹೋದಾಗಲೂ ನೀನಾ ಲೈಂಗಿಕ ಶೋಷಣೆಗೆ ಒಳಗಾಗಬೇಕಾಯಿತು. ಅಳತೆ ತೆಗೆದುಕೊಳ್ಳುವಾಗ ಟೇಲರ್​ ಅಸಭ್ಯವಾಗಿ ಮುಟ್ಟುತ್ತಿದ್ದ. ಅದನ್ನು ಕೂಡ ಮನೆಯವರ ಬಳಿ ನೀನಾ ಗುಪ್ತಾ ಹೇಳಿಕೊಳ್ಳಲಿಲ್ಲ. ಆ ಟೇಲರ್​ ಬಳಿ ಹೋಗುವುದಿಲ್ಲ ಎಂದು ಹೇಳಿದರೆ ಅದಕ್ಕೆ ಮನೆಯವರು ಕಾರಣ ಕೇಳುತ್ತಾರೆ. ಅದೆಲ್ಲ ಕಿರಿಕ್​ ಬೇಡ ಎಂದು ಅನಿವಾರ್ಯವಾಗಿ ಅದೇ ಟೇಲರ್​ ಬಳಿ ಪದೇಪದೇ ಹೋಗಬೇಕಾಯಿತು ಎಂದು ಆ ಕಹಿ ಘಟನೆಯನ್ನು ನೀನಾ ಗುಪ್ತಾ ವಿವರಿಸಿದ್ದಾರೆ.

‘ನಮ್ಮ ಕಾಲದ ಅನೇಕ ಹುಡುಗಿಯರು ಇದೇ ರೀತಿ ಕೆಟ್ಟ ಪರಿಸ್ಥಿತಿ ಎದುರಿಸಿದ್ದರು. ಆದರೆ ಅದನ್ನು ಮನೆಯಲ್ಲಿ ಹೇಳಿಕೊಂಡರೆ, ಸಿಕ್ಕಿರುವ ಸಣ್ಣ ಸ್ವಾತಂತ್ರ್ಯವನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಎಲ್ಲರೂ ಮೌನವಾಗಿದ್ದರು’ ಎಂದು ನೀನಾ ಗುಪ್ತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ

ಕಾಲೇಜು ದಿನಗಳಲ್ಲೇ ಮದುವೆಯಾಗಿದ್ದರು ನೀನಾ ಗುಪ್ತಾ; ವರ್ಷದೊಳಗೆ ಮುರಿದು ಬಿದ್ದ ಮೊದಲ ವಿವಾಹದ ಸತ್ಯ ಆತ್ಮಚರಿತ್ರೆಯಲ್ಲಿ ಬಹಿರಂಗ

Published On - 4:04 pm, Mon, 18 October 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ