AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neena Gupta: ಟೇಲರ್​, ವೈದ್ಯರಿಂದ ಬಾಲ್ಯದಲ್ಲೇ ಆಗಿತ್ತು ಲೈಂಗಿಕ ಕಿರುಕುಳ; ಕಹಿ ಘಟನೆ ಬಗ್ಗೆ ಬಾಯಿಬಿಟ್ಟ ನಟಿ ನೀನಾ ಗುಪ್ತಾ

Sach Kahun Toh: ಅಳತೆ ತೆಗೆದುಕೊಳ್ಳುವಾಗ ಟೇಲರ್​ ಅಸಭ್ಯವಾಗಿ ಮುಟ್ಟುತ್ತಿದ್ದ. ಕಣ್ಣಿನ ಡಾಕ್ಟರ್​ ಕೂಡ ನೀನಾ ಗುಪ್ತಾ ಅವರ ದೇಹದ ಇತರ ಅಂಗಗಳನ್ನು ಪರಿಶೀಲಿಸುತ್ತಿದ್ದ. ಆ ಬಗ್ಗೆ ಅವರು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

Neena Gupta: ಟೇಲರ್​, ವೈದ್ಯರಿಂದ ಬಾಲ್ಯದಲ್ಲೇ ಆಗಿತ್ತು ಲೈಂಗಿಕ ಕಿರುಕುಳ; ಕಹಿ ಘಟನೆ ಬಗ್ಗೆ ಬಾಯಿಬಿಟ್ಟ ನಟಿ ನೀನಾ ಗುಪ್ತಾ
ನೀನಾ ಗುಪ್ತಾ
Follow us
TV9 Web
| Updated By: ಮದನ್​ ಕುಮಾರ್​

Updated on:Oct 18, 2021 | 4:23 PM

ನಟಿ ನೀನಾ ಗುಪ್ತಾ ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಫೇಮಸ್​ ಆಗಿದ್ದಾರೆ. ತಮಗೆ ಅನಿಸಿದ್ದನ್ನು ಅವರು ಮುಲಾಜಿಲ್ಲದೇ ಹೇಳಿಕೊಳ್ಳುತ್ತಾರೆ. ಆದರೆ ಬಾಲ್ಯದಲ್ಲಿ ಅವರ ಮನಸ್ಥಿತಿ ಆ ರೀತಿ ಇರಲಿಲ್ಲ. ತಮ್ಮ ಮೇಲೆ ಲೈಂಗಿಕ ಶೋಷಣೆ ಆಗಿದ್ದರೂ ಕೂಡ ಅವರು ಅದನ್ನು ಕುಟುಂಬದವರ ಬಳಿ ಹೇಳಿಕೊಂಡಿರಲಿಲ್ಲ. ನೀನಾ ಗುಪ್ತಾಗೆ ವೈದ್ಯರು ಮತ್ತು ಟೇಲರ್​ ಕಿರುಕುಳ ನೀಡಿದ್ದರು. ಆ ಕಹಿ ಘಟನೆ ಬಗ್ಗೆ ತಮ್ಮ ಕುಟುಂಬದವರ ಬಳಿಯೂ ನೀನಾ ಹೇಳಿಕೊಂಡಿರಲಿಲ್ಲ. ಅದನ್ನು ತಮ್ಮ ಆತ್ಮಚರಿತ್ರೆಯಲ್ಲಿ ತೆರೆದಿಟ್ಟಿದ್ದಾರೆ.

‘ಸಚ್​ ಕಹೂ ತೋ’ ಶೀರ್ಷಿಕೆಯಲ್ಲಿ ನೀನಾ ಗುಪ್ತಾ ಆಟೋ ಬಯೋಗ್ರಫಿ ಬರೆದಿದ್ದಾರೆ. ಅದರಲ್ಲಿ ಈ ಘಟನೆ ಬಗ್ಗೆ ವಿವರಿಸಲಾಗಿದೆ. ಬಾಲಕಿ ಆಗಿದ್ದಾಗ ಒಮ್ಮೆ ಅವರು ಕಣ್ಣಿನ ಆಸ್ಪತ್ರೆಗೆ ಹೋಗಿದ್ದರು. ಆರಂಭದಲ್ಲಿ ಕಣ್ಣು ಪರಿಶೀಲಿಸಿದ ವೈದ್ಯರು ನಂತರ ದೇಹದ ಇತರ ಭಾಗಗಳನ್ನು ನೋಡಲು ಆರಂಭಿಸಿದರಂತೆ. ಆ ಅಂಗಗಳು ಕಣ್ಣಿಗೆ ಸಂಬಂಧಿಸಿರಲಿಲ್ಲ. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ನೀನಾ ಗುಪ್ತಾ ಒಬ್ಬರೇ ಕುಳಿತು ಅತ್ತಿದ್ದರು. ಒಂದು ವೇಳೆ ತಾಯಿ ಬಳಿ ಹೇಳಿಕೊಂಡರೇ ತಮ್ಮದೇ ಏನೂ ತಪ್ಪಿರಬಹುದು ಅಂತ ಹೇಳಬಹುದು ಎಂಬ ಭಯದಲ್ಲಿ ಆ ವಿಚಾರವನ್ನು ನೀನಾ ಗುಪ್ತಾ ಮುಚ್ಚಿಟ್ಟರು.

ಅದೇ ರೀತಿ ಬಟ್ಟೆ ಹೊಲಿಸಲು ಟೇಲರ್​ ಬಳಿ ಹೋದಾಗಲೂ ನೀನಾ ಲೈಂಗಿಕ ಶೋಷಣೆಗೆ ಒಳಗಾಗಬೇಕಾಯಿತು. ಅಳತೆ ತೆಗೆದುಕೊಳ್ಳುವಾಗ ಟೇಲರ್​ ಅಸಭ್ಯವಾಗಿ ಮುಟ್ಟುತ್ತಿದ್ದ. ಅದನ್ನು ಕೂಡ ಮನೆಯವರ ಬಳಿ ನೀನಾ ಗುಪ್ತಾ ಹೇಳಿಕೊಳ್ಳಲಿಲ್ಲ. ಆ ಟೇಲರ್​ ಬಳಿ ಹೋಗುವುದಿಲ್ಲ ಎಂದು ಹೇಳಿದರೆ ಅದಕ್ಕೆ ಮನೆಯವರು ಕಾರಣ ಕೇಳುತ್ತಾರೆ. ಅದೆಲ್ಲ ಕಿರಿಕ್​ ಬೇಡ ಎಂದು ಅನಿವಾರ್ಯವಾಗಿ ಅದೇ ಟೇಲರ್​ ಬಳಿ ಪದೇಪದೇ ಹೋಗಬೇಕಾಯಿತು ಎಂದು ಆ ಕಹಿ ಘಟನೆಯನ್ನು ನೀನಾ ಗುಪ್ತಾ ವಿವರಿಸಿದ್ದಾರೆ.

‘ನಮ್ಮ ಕಾಲದ ಅನೇಕ ಹುಡುಗಿಯರು ಇದೇ ರೀತಿ ಕೆಟ್ಟ ಪರಿಸ್ಥಿತಿ ಎದುರಿಸಿದ್ದರು. ಆದರೆ ಅದನ್ನು ಮನೆಯಲ್ಲಿ ಹೇಳಿಕೊಂಡರೆ, ಸಿಕ್ಕಿರುವ ಸಣ್ಣ ಸ್ವಾತಂತ್ರ್ಯವನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಎಲ್ಲರೂ ಮೌನವಾಗಿದ್ದರು’ ಎಂದು ನೀನಾ ಗುಪ್ತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ

ಕಾಲೇಜು ದಿನಗಳಲ್ಲೇ ಮದುವೆಯಾಗಿದ್ದರು ನೀನಾ ಗುಪ್ತಾ; ವರ್ಷದೊಳಗೆ ಮುರಿದು ಬಿದ್ದ ಮೊದಲ ವಿವಾಹದ ಸತ್ಯ ಆತ್ಮಚರಿತ್ರೆಯಲ್ಲಿ ಬಹಿರಂಗ

Published On - 4:04 pm, Mon, 18 October 21

ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ