AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vicky Kaushal: ಕತ್ರೀನಾ ಜೊತೆಗಿನ ಎಂಗೇಜ್​ಮೆಂಟ್ ಕುರಿತು ಕೊನೆಗೂ ಮೌನ ಮುರಿದ ವಿಕ್ಕಿ ಕೌಶಲ್

Katrina Kaif: ಬಾಲಿವುಡ್​ನಲ್ಲಿ ಸದ್ಯ ಚರ್ಚೆಯಲ್ಲಿರುವ ಗಾಸಿಪ್ ಜೋಡಿಗಳಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಜೋಡಿಯೂ ಒಂದು. ಇತ್ತೀಚೆಗೆ ವಿಕ್ಕಿ ಕೌಶಲ್ ನಿಶ್ಚಿತಾರ್ಥದ ಕುರಿತು ಮಾತನಾಡಿದ್ದು, ಗಾಸಿಪ್​ಗಳು ಅಂತ್ಯವಾಗುವ ಸಂದರ್ಭ ಗೋಚರಿಸಿದೆ.

Vicky Kaushal: ಕತ್ರೀನಾ ಜೊತೆಗಿನ ಎಂಗೇಜ್​ಮೆಂಟ್ ಕುರಿತು ಕೊನೆಗೂ ಮೌನ ಮುರಿದ ವಿಕ್ಕಿ ಕೌಶಲ್
ವಿಕ್ಕಿ ಕೌಶಲ್, ಕತ್ರಿನಾ ಕೈಫ್
TV9 Web
| Updated By: shivaprasad.hs|

Updated on: Oct 17, 2021 | 10:16 PM

Share

ಸದ್ಯ ಬಾಲಿವುಡ್ ನಟ ವಿಕ್ಕಿ ಕೌಶಲ್ ತಮ್ಮ ಚಿತ್ರ ‘ಸರ್ದಾರ್ ಉಧಮ್’ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಈ ನಡುವೆ ಅವರು ಬಹಳ ಚರ್ಚೆಯಾಗುತ್ತಿರುವ ಕತ್ರೀನಾ ಕೈಫ್ ಹಾಗೂ ಅಅವರ ಸಂಬಂಧದ ಕುರಿತು ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಚ್ಚರಿಯ ವಿಚಾರವೆಂದರೆ ಅವರು, ತಮ್ಮ ಮಾತಿನಲ್ಲಿ ಗಾಸಿಪ್​ಗಳನ್ನು ನಿರಾಕರಿಸಿಲ್ಲ. ಹಾಗಂತ ಒಪ್ಪಿಕೊಂಡೂ ಇಲ್ಲ. ಅದಾಗ್ಯೂ ಅಭಿಮಾನಿಗಳು ಖುಷಿಪಡುವಂತಹ ಸುದ್ದಿಯೊಂದನ್ನು ಅವರು ನೀಡಿದ್ದಾರೆ. ಏನದು? ಮುಂದೆ ಓದಿ.

ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಕ್ಕಿ ಕೌಶಲ್, ಕತ್ರೀನಾ ಜೊತೆಗಿನ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಅವರು ಈ ಹಿಂದೆ ಕತ್ರಿನಾ ಜೊತೆಗೆ ಎಂಗೇಜ್​ಮೆಂಟ್ ಆಗಿತ್ತು ಎಂಬ ಸುದ್ದಿ ಹರಿದಾಡಿದ್ದಕ್ಕೂ ಉತ್ತರ ನೀಡಿದ್ದಾರೆ. ‘ಈ ಎಲ್ಲದಕ್ಕೂ ಸಮಯ ಬರುತ್ತದೆ. ಆಗ ತಾನು ಉತ್ತರಿಸಲಿದ್ದೇನೆ’ ಎಂದು ಅವರು ನುಡಿದಿರುವುದಲ್ಲದೇ, ಸದ್ಯದಲ್ಲೇ ನಿಶ್ಚಿತಾರ್ಥವನ್ನೂ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ವಿಕ್ಕಿಯವರ ಈ ಮಾತು ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದ್ದು, ಕತ್ರಿನಾ- ವಿಕ್ಕಿ ಸದ್ಯದಲ್ಲೇ ಎಂಗೇಜ್​ಮೆಂಟ್ ಮಾಡಿಕೊಳ್ಳಲಿದ್ಧಾರೆ ಎನ್ನುತ್ತಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಜೊತೆಯಾಗಿ ಓಡಾಡಲು ಪ್ರಾರಂಭಿಸಿ ಕೆಲವು ಸಮಯ ಕಳೆದಿದೆ. ಇತ್ತೀಚೆಗೆ ಸರ್ದಾರ್ ಉಧಮ್  ಚಿತ್ರದ ಪ್ರೀಮಿಯರ್​​ನಲ್ಲಿ ಕತ್ರಿನಾ ಕಾಣಿಸಿಕೊಂಡಿದ್ದರು. ನಂತರ ಇನ್ಸ್ಟಾಗ್ರಾಂನಲ್ಲಿ ವಿಕ್ಕಿ ಕೌಶಲ್ ನಟನೆಯನ್ನು ಹೊಗಳಿದ್ದರು. ಅಲ್ಲದೇ, ಪ್ರೀಮಿಯರ್ ಸಂದರ್ಭದಲ್ಲಿ ವಿಕ್ಕಿ ಹಾಗೂ ಕತ್ರೀನಾ ಜೊತೆಗಿರುವ ಚಿತ್ರಗಳು ವೈರಲ್ ಆಗಿದ್ದವು.

‘ಸರ್ದಾರ್ ಉಧಮ್’ ಚಿತ್ರದ ಪ್ರೀಮಿಯರ್​ನಲ್ಲಿ ಕತ್ರೀನಾ:

ವಿಕ್ಕಿ ಕೌಶಲ್ ಹಾಗೂ ಕತ್ರಿನಾ 2019ರಿಂದಲೇ ಜೊತೆಯಾಗಿ ಸುತ್ತಾಡುತ್ತಿದ್ದಾರೆ. ಆದರೆ ಈರ್ವರು ಕೂಡ ಇದುವರೆಗೂ ತಮ್ಮ ಸಂಬಂಧದ ಬಗ್ಗೆ ಗಪ್​ಚುಪ್ ಎಂದಿಲ್ಲ. ಕೆಲ ಸಮಯದ ಹಿಂದೆ ಈ ಜೋಡಿ ಎಂಗೇಜ್​ಮೆಂಟ್ ಆಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು.  ಆದರೆ ಎರಡೂ ಕಡೆಯ ಕುಟುಂಬದವರು ಹಾಗೂ ಆಪ್ತರು ಅದನ್ನು ನಿರಾಕರಿಸಿದ್ದರು. ಈ ಬಾರಿ ವಿಕ್ಕಿ ಕೌಶಲ್ ಸ್ವತಃ ಎಂಗೇಜ್​ಮೆಂಟ್ ವಿಚಾರ ಮಾತನಾಡಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ:

ಸಾಕುನಾಯಿಗೆ ಬರೋಬ್ಬರಿ ₹ 15 ಕೋಟಿ ಆಸ್ತಿ ಬರೆಯಲು ಮುಂದಾದ ಮಾಡೆಲ್; ಇದರ ಹಿಂದಿದೆ ಅಚ್ಚರಿಯ ಕಾರಣ

ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್​ ಚಿರಂಜೀವಿ; ಚಿಂತೆಗೊಳಗಾದ ಫ್ಯಾನ್ಸ್​

ಶೋ ನಡುವೆ ಮಲೈಕಾ ಕೆನ್ನೆ ಮುಟ್ಟಿ, ನಮಸ್ಕಾರ ಮಾಡಿದ ಸ್ಪರ್ಧಿ; ಅನಿರೀಕ್ಷಿತ ಘಟನೆಗೆ ನಟಿಯ ರಿಯಾಕ್ಷನ್ ಏನಿತ್ತು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ