AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ

Subhash Ghai: ‘ಸರಿ ಇಲ್ಲ ಎಂದು ಕೂಗಿದ ಸುಭಾಷ್​ ಘಾಯ್​, ಏನಾದರು ತುಂಬಿಕೊಂಡು ಬಾ ಅಂತ ಹೇಳಿದರು. ನನಗೆ ತುಂಬಾ ಮುಜುಗರ ಆಯಿತು’ ಎಂದು ನೀನಾ ಗುಪ್ತಾ ವಿವರಿಸಿದ್ದಾರೆ.

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ
‘ಚೋಲಿ ಕೆ ಪೀಚೆ ಕ್ಯಾ ಹೈ..’ ಹಾಡಿಯಲ್ಲಿ ನೀನಾ ಗುಪ್ತಾ
TV9 Web
| Updated By: Digi Tech Desk|

Updated on:Jun 17, 2021 | 2:12 PM

Share

ಸಮಾಜಕ್ಕೆ ತಲೆ ಕೆಡಿಸಿಕೊಳ್ಳದೇ ತಮಗೆ ಬೇಕಾದಂತೆ ಬದುಕಿದವರು ನಟಿ ನೀನಾ ಗುಪ್ತಾ. ಮೊದಲಿನಿಂದಲೂ ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಖ್ಯಾತರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಆಟೋಬಯೋಗ್ರಫಿ ‘ಸಚ್​ ಕಹೂ ತೋ’ ಬಿಡುಗಡೆ ಮಾಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನೀನಾ ಗುಪ್ತಾ, ಈ ಪುಸ್ತಕದ ಮೂಲಕ ಅನೇಕ ವಿಚಾರಗಳನ್ನು ಬಯಲಿಗೆ ಎಳೆದಿದ್ದಾರೆ. ಬಾಲಿವುಡ್​ನ ಖ್ಯಾತ ನಿರ್ದೇಶಕ ಸುಭಾಷ್​ ಘಾಯ್​ ಬಗ್ಗೆ ಅವರು ಕೆಲವೊಂದು ಶಾಕಿಂಗ್​ ವಿಚಾರಗಳನ್ನು ಬರೆದುಕೊಂಡಿದ್ದಾರೆ. ಅದು ಈಗ ಚರ್ಚೆಗೆ ಕಾರಣವಾಗುತ್ತ, ವೈರಲ್​ ಆಗುತ್ತಿದೆ.

ಸುಭಾಷ್​ ಘಾಯ್​ ನಿರ್ದೇಶನದ ‘ಖಳನಾಯಕ್​’ ಸಿನಿಮಾ ದೊಡ್ಡಮಟ್ಟದಲ್ಲಿ ಸೌಂಡು ಮಾಡಿತ್ತು. 1993ರಲ್ಲಿ ಬಿಡುಗಡೆ ಆದ ಆ ಚಿತ್ರದಲ್ಲಿ ಸಂಜಯ್​ ದತ್​, ಮಾಧುರಿ ದೀಕ್ಷಿತ್​ ಮುಖ್ಯಭೂಮಿಕೆ ನಿಭಾಯಿಸಿದ್ದರು. ನಟಿ ನೀನಾ ಗುಪ್ತಾ ಅವರು ‘ಚೋಲಿ ಕೆ ಪೀಚೆ ಕ್ಯಾ ಹೈ..’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆ ಹಾಡು ಎಷ್ಟು ಫೇಮಸ್​ ಆಗಿತ್ತು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಆ ಗೀತೆಯ ಶೂಟಿಂಗ್​ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ಈಗ ನೀನಾ ಗುಪ್ತಾ ವಿವರಿಸಿದ್ದಾರೆ.

‘ಮೊದಲ ಬಾರಿಗೆ ನಾನು ಹಾಡು ಕೇಳಿದಾಗ ತುಂಬ ಆಕರ್ಷಕವಾಗಿದೆ ಎಂಬುದು ತಿಳಿಯಿತು. ಆದರೆ ಅದರಲ್ಲಿ ನನ್ನ ಪಾತ್ರ ಏನು ಎಂಬುದನ್ನು ನಿರ್ದೇಶಕ ಸುಭಾಷ್ ಘಾಯ್​ ತಿಳಿಸಿದಾಗ ಅದನ್ನು ಮಾಡಲು ನಾನು ಸಿದ್ಧಳಾಗಿರಲಿಲ್ಲ. ನನಗೆ ಗುಜರಾತಿ ಬುಡಕಟ್ಟು ಜನಾಂಗದ ಕಾಸ್ಟ್ಯೂಮ್​ ತೊಡಿಸಿದರು. ಸರಿಯಾಗಿದೆಯಾ ಎಂಬುದನ್ನು ತಿಳಿದುಕೊಳ್ಳಲು ನನ್ನನ್ನು ಸುಭಾಶ್​ ಘಾಯ್​ ಎದುರು ನಿಲ್ಲಿಸಿದರು. ಇಲ್ಲ ಇಲ್ಲ ಇಲ್ಲ ಎಂದು ಸುಭಾಷ್​ ಘಾಯ್​ ಕೂಗಿದರು’ ಎಂದು ಆ ದಿನದ ನೆನಪಿನ ಪುಟವನ್ನು ತೆರೆದಿದ್ದಾರೆ ನೀನಾ ಗುಪ್ತಾ.

‘ಸರಿ ಇಲ್ಲ ಎಂದು ಕೂಗಿದ ಸುಭಾಷ್​ ಘಾಯ್​, ಏನಾದರು ತುಂಬಿಕೊಂಡು ಬಾ ಎಂದು ಹೇಳಿದರು. ನನಗೆ ತುಂಬಾ ಮುಜುಗರ ಆಯಿತು. ಅವರು ನನ್ನ ಬ್ಲೌಸ್​ ಬಗ್ಗೆ ಮಾತನಾಡುತ್ತಿದ್ದರು. ಅದನ್ನು ತುಂಬಿಕೊಂಡು ಬರಬೇಕು ಎಂದು ಹೇಳಿದರು. ಅದರಲ್ಲಿ ಅವರ ವೈಯಕ್ತಿಕ ಆಸಕ್ತಿ ಏನೂ ಇರಲಿಲ್ಲ ಎಂಬುದು ನನಗೆ ಗೊತ್ತಿತ್ತು. ದೃಶ್ಯಕ್ಕಾಗಿ ಅವರು ಏನೋ ಪ್ಲ್ಯಾನ್​ ಮಾಡಿದ್ದರು’ ಎಂದು ನೀನಾ ಗುಪ್ತಾ ಬರೆದುಕೊಂಡಿದ್ದಾರೆ.

‘ಆ ದಿನ ನಾನು ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿಲ್ಲ. ಮರುದಿನ ನಾನು ಹೆಚ್ಚು ಪ್ಯಾಡೆಡ್​ ಆಗಿರುವಂತಹ ಬ್ರಾ ಧರಿಸಿ, ಬೇರೆ ಕಾಸ್ಟ್ಯೂಮ್​ನಲ್ಲಿ ಅವರ ಮುಂದೆ ಹೋಗಿ ನಿಂತುಕೊಂಡೆ. ಅವರಿಗೆ ಖುಷಿ ಆಯಿತು ಎನಿಸುತ್ತದೆ. ತಮಗೆ ಏನು ಬೇಕು ಎಂಬ ವಿಚಾರದಲ್ಲಿ ಸುಭಾಷ್​ ಹೆಚ್ಚು ನಿರ್ದಿಷ್ಟವಾಗಿ ಇರುತ್ತಿದ್ದರು. ಅದಕ್ಕಾಗಿಯೇ ಅವರು ಒಳ್ಳೆಯ ನಿರ್ದೇಶಕನಾಗಿದ್ದು’ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ನೀನಾ ಗುಪ್ತಾ ಬರೆದಿದ್ದಾರೆ.

(‘ಚೋಲಿ ಕೆ ಪೀಚೆ ಕ್ಯಾ ಹೈ..’ ಹಾಡು)

ಇದನ್ನೂ ಓದಿ:

‘ಅಂದು ಪ್ಯಾಡೆಡ್​ ಬ್ರಾ ಧರಿಸುತ್ತಿದ್ದೆ; ಇಂದು ಹೀಗಾಗಿದ್ದೇನೆ’: ವರದನಾಯಕ ನಟಿ ಸಮೀರಾ ವಿಡಿಯೋ ವೈರಲ್​!

ಕ್ರಿಕೆಟಿಗನ ಜತೆಗಿನ ಸಂಬಂಧದಿಂದ ಬಾಲಿವುಡ್ ನಟಿಗೆ ಮಗು; ನಾನು ತಂದೆ ಆಗ್ತೀನಿ ಎಂದು ಮುಂದೆ ಬಂದಿದ್ದ ಗೆಳೆಯ

Published On - 2:03 pm, Thu, 17 June 21

ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ