AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ

Subhash Ghai: ‘ಸರಿ ಇಲ್ಲ ಎಂದು ಕೂಗಿದ ಸುಭಾಷ್​ ಘಾಯ್​, ಏನಾದರು ತುಂಬಿಕೊಂಡು ಬಾ ಅಂತ ಹೇಳಿದರು. ನನಗೆ ತುಂಬಾ ಮುಜುಗರ ಆಯಿತು’ ಎಂದು ನೀನಾ ಗುಪ್ತಾ ವಿವರಿಸಿದ್ದಾರೆ.

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ
‘ಚೋಲಿ ಕೆ ಪೀಚೆ ಕ್ಯಾ ಹೈ..’ ಹಾಡಿಯಲ್ಲಿ ನೀನಾ ಗುಪ್ತಾ
TV9 Web
| Edited By: |

Updated on:Jun 17, 2021 | 2:12 PM

Share

ಸಮಾಜಕ್ಕೆ ತಲೆ ಕೆಡಿಸಿಕೊಳ್ಳದೇ ತಮಗೆ ಬೇಕಾದಂತೆ ಬದುಕಿದವರು ನಟಿ ನೀನಾ ಗುಪ್ತಾ. ಮೊದಲಿನಿಂದಲೂ ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಖ್ಯಾತರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಆಟೋಬಯೋಗ್ರಫಿ ‘ಸಚ್​ ಕಹೂ ತೋ’ ಬಿಡುಗಡೆ ಮಾಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನೀನಾ ಗುಪ್ತಾ, ಈ ಪುಸ್ತಕದ ಮೂಲಕ ಅನೇಕ ವಿಚಾರಗಳನ್ನು ಬಯಲಿಗೆ ಎಳೆದಿದ್ದಾರೆ. ಬಾಲಿವುಡ್​ನ ಖ್ಯಾತ ನಿರ್ದೇಶಕ ಸುಭಾಷ್​ ಘಾಯ್​ ಬಗ್ಗೆ ಅವರು ಕೆಲವೊಂದು ಶಾಕಿಂಗ್​ ವಿಚಾರಗಳನ್ನು ಬರೆದುಕೊಂಡಿದ್ದಾರೆ. ಅದು ಈಗ ಚರ್ಚೆಗೆ ಕಾರಣವಾಗುತ್ತ, ವೈರಲ್​ ಆಗುತ್ತಿದೆ.

ಸುಭಾಷ್​ ಘಾಯ್​ ನಿರ್ದೇಶನದ ‘ಖಳನಾಯಕ್​’ ಸಿನಿಮಾ ದೊಡ್ಡಮಟ್ಟದಲ್ಲಿ ಸೌಂಡು ಮಾಡಿತ್ತು. 1993ರಲ್ಲಿ ಬಿಡುಗಡೆ ಆದ ಆ ಚಿತ್ರದಲ್ಲಿ ಸಂಜಯ್​ ದತ್​, ಮಾಧುರಿ ದೀಕ್ಷಿತ್​ ಮುಖ್ಯಭೂಮಿಕೆ ನಿಭಾಯಿಸಿದ್ದರು. ನಟಿ ನೀನಾ ಗುಪ್ತಾ ಅವರು ‘ಚೋಲಿ ಕೆ ಪೀಚೆ ಕ್ಯಾ ಹೈ..’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆ ಹಾಡು ಎಷ್ಟು ಫೇಮಸ್​ ಆಗಿತ್ತು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಆ ಗೀತೆಯ ಶೂಟಿಂಗ್​ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ಈಗ ನೀನಾ ಗುಪ್ತಾ ವಿವರಿಸಿದ್ದಾರೆ.

‘ಮೊದಲ ಬಾರಿಗೆ ನಾನು ಹಾಡು ಕೇಳಿದಾಗ ತುಂಬ ಆಕರ್ಷಕವಾಗಿದೆ ಎಂಬುದು ತಿಳಿಯಿತು. ಆದರೆ ಅದರಲ್ಲಿ ನನ್ನ ಪಾತ್ರ ಏನು ಎಂಬುದನ್ನು ನಿರ್ದೇಶಕ ಸುಭಾಷ್ ಘಾಯ್​ ತಿಳಿಸಿದಾಗ ಅದನ್ನು ಮಾಡಲು ನಾನು ಸಿದ್ಧಳಾಗಿರಲಿಲ್ಲ. ನನಗೆ ಗುಜರಾತಿ ಬುಡಕಟ್ಟು ಜನಾಂಗದ ಕಾಸ್ಟ್ಯೂಮ್​ ತೊಡಿಸಿದರು. ಸರಿಯಾಗಿದೆಯಾ ಎಂಬುದನ್ನು ತಿಳಿದುಕೊಳ್ಳಲು ನನ್ನನ್ನು ಸುಭಾಶ್​ ಘಾಯ್​ ಎದುರು ನಿಲ್ಲಿಸಿದರು. ಇಲ್ಲ ಇಲ್ಲ ಇಲ್ಲ ಎಂದು ಸುಭಾಷ್​ ಘಾಯ್​ ಕೂಗಿದರು’ ಎಂದು ಆ ದಿನದ ನೆನಪಿನ ಪುಟವನ್ನು ತೆರೆದಿದ್ದಾರೆ ನೀನಾ ಗುಪ್ತಾ.

‘ಸರಿ ಇಲ್ಲ ಎಂದು ಕೂಗಿದ ಸುಭಾಷ್​ ಘಾಯ್​, ಏನಾದರು ತುಂಬಿಕೊಂಡು ಬಾ ಎಂದು ಹೇಳಿದರು. ನನಗೆ ತುಂಬಾ ಮುಜುಗರ ಆಯಿತು. ಅವರು ನನ್ನ ಬ್ಲೌಸ್​ ಬಗ್ಗೆ ಮಾತನಾಡುತ್ತಿದ್ದರು. ಅದನ್ನು ತುಂಬಿಕೊಂಡು ಬರಬೇಕು ಎಂದು ಹೇಳಿದರು. ಅದರಲ್ಲಿ ಅವರ ವೈಯಕ್ತಿಕ ಆಸಕ್ತಿ ಏನೂ ಇರಲಿಲ್ಲ ಎಂಬುದು ನನಗೆ ಗೊತ್ತಿತ್ತು. ದೃಶ್ಯಕ್ಕಾಗಿ ಅವರು ಏನೋ ಪ್ಲ್ಯಾನ್​ ಮಾಡಿದ್ದರು’ ಎಂದು ನೀನಾ ಗುಪ್ತಾ ಬರೆದುಕೊಂಡಿದ್ದಾರೆ.

‘ಆ ದಿನ ನಾನು ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿಲ್ಲ. ಮರುದಿನ ನಾನು ಹೆಚ್ಚು ಪ್ಯಾಡೆಡ್​ ಆಗಿರುವಂತಹ ಬ್ರಾ ಧರಿಸಿ, ಬೇರೆ ಕಾಸ್ಟ್ಯೂಮ್​ನಲ್ಲಿ ಅವರ ಮುಂದೆ ಹೋಗಿ ನಿಂತುಕೊಂಡೆ. ಅವರಿಗೆ ಖುಷಿ ಆಯಿತು ಎನಿಸುತ್ತದೆ. ತಮಗೆ ಏನು ಬೇಕು ಎಂಬ ವಿಚಾರದಲ್ಲಿ ಸುಭಾಷ್​ ಹೆಚ್ಚು ನಿರ್ದಿಷ್ಟವಾಗಿ ಇರುತ್ತಿದ್ದರು. ಅದಕ್ಕಾಗಿಯೇ ಅವರು ಒಳ್ಳೆಯ ನಿರ್ದೇಶಕನಾಗಿದ್ದು’ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ನೀನಾ ಗುಪ್ತಾ ಬರೆದಿದ್ದಾರೆ.

(‘ಚೋಲಿ ಕೆ ಪೀಚೆ ಕ್ಯಾ ಹೈ..’ ಹಾಡು)

ಇದನ್ನೂ ಓದಿ:

‘ಅಂದು ಪ್ಯಾಡೆಡ್​ ಬ್ರಾ ಧರಿಸುತ್ತಿದ್ದೆ; ಇಂದು ಹೀಗಾಗಿದ್ದೇನೆ’: ವರದನಾಯಕ ನಟಿ ಸಮೀರಾ ವಿಡಿಯೋ ವೈರಲ್​!

ಕ್ರಿಕೆಟಿಗನ ಜತೆಗಿನ ಸಂಬಂಧದಿಂದ ಬಾಲಿವುಡ್ ನಟಿಗೆ ಮಗು; ನಾನು ತಂದೆ ಆಗ್ತೀನಿ ಎಂದು ಮುಂದೆ ಬಂದಿದ್ದ ಗೆಳೆಯ

Published On - 2:03 pm, Thu, 17 June 21

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!