AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The Delhi Files: ‘ದಿ ಕಾಶ್ಮೀರ್ ಫೈಲ್ಸ್’ ನಂತರ ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ಅನೌನ್ಸ್; ಇದೂ ಇತಿಹಾಸದಲ್ಲಿ ದಾಖಲಾಗದ ಕತೆಯೇ?

The Kashmir Files | Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಯಶಸ್ಸು ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯವರ ಮುಂದಿನ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿತ್ತು. ಕಳೆದ ಕೆಲವು ಸಮಯದಿಂದ ಈ ಬಗ್ಗೆ ಚರ್ಚೆಯಾಗುತ್ತಲೂ ಇತ್ತು. ಇದೀಗ ಸ್ವತಃ ನಿರ್ದೇಶಕರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ‘ದಿ ದೆಹಲಿ ಫೈಲ್ಸ್’ (The Delhi Files) ಅನೌನ್ಸ್ ಮಾಡಿದ್ದಾರೆ.

The Delhi Files: ‘ದಿ ಕಾಶ್ಮೀರ್ ಫೈಲ್ಸ್’ ನಂತರ ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ಅನೌನ್ಸ್; ಇದೂ ಇತಿಹಾಸದಲ್ಲಿ ದಾಖಲಾಗದ ಕತೆಯೇ?
‘ದಿ ದೆಹಲಿ ಫೈಲ್ಸ್’ ಪೋಸ್ಟರ್ (ಎಡ ಚಿತ್ರ), ವಿವೇಕ್ ಅಗ್ನಿಹೋತ್ರಿ (ಬಲ)
Follow us
TV9 Web
| Updated By: shivaprasad.hs

Updated on: Apr 16, 2022 | 3:52 PM

ಕೊರೊನಾ ನಂತರದ ಕಾಲಘಟ್ಟದಲ್ಲಿ ತೆರೆಕಂಡ ಹಿಂದಿ ಚಿತ್ರಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಗಮನಾರ್ಹವಾಗಿ ಗಳಿಕೆ ಮಾಡಿದ ಚಿತ್ರಗಳು ಕೇವಲ ಬೆರಳೆಣಿಕೆಯಷ್ಟು. ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಹೊರತಾಗಿ ಬೇರೆ ಸ್ಟಾರ್ ನಟರ ಚಿತ್ರಗಳಿಲ್ಲ ಎಂದೇ ಹೇಳಬೇಕು. ಆದರೆ ವಿವೇಕ್ ರಂಜನ್ ಅಗ್ನಿಹೋತ್ರಿ (Vivek Ranjan Agnihotri) ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಮಾರ್ಚ್ 11ರಂದು ತೆರೆಕಂಡಿದ್ದ ಚಿತ್ರ ದಾಖಲೆ ಬರೆದಿತ್ತು. ‘ರಾಧೆ ಶ್ಯಾಮ್’ನಂತಹ ಸ್ಟಾರ್ ಚಿತ್ರದ ಎದುರಿಗೆ ತೆರೆಕಂಡು ಮೊದಲ ದಿನ ಕೇವಲ 3 ಕೋಟಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದ್ದ ‘ದಿ ಕಾಶ್ಮೀರ್ ಫೈಲ್ಸ್’, ನಂತರ ಸಿಕ್ಕ ಧನಾತ್ಮಕ ಪ್ರತಿಕ್ರಿಯೆ ಹಾಗೂ ಸರ್ಕಾರಗಳ ಬೆಂಬಲದಿಂದ ಭರ್ಜರಿ ಗಳಿಸಿತ್ತು. ಪರಿಣಾಮವಾಗಿ ಚಿತ್ರವು ಬಾಕ್ಸಾಫೀಸ್​ನಲ್ಲಿ ಹತ್ತುಹಲವು ದಾಖಲೆ ಬರೆಯಿತು. ಇದುವರೆಗೆ ಒಟ್ಟಾರೆ ಚಿತ್ರದ ಕಲೆಕ್ಷನ್ ಭಾರತದಲ್ಲಿಯೇ 251 ಕೋಟಿ ರೂ ದಾಟಿದೆ. ಕೇವಲ ಹಿಂದಿಯಲ್ಲಿ ಮಾತ್ರ ತೆರೆಕಂಡಿದ್ದ ಈ ಚಿತ್ರ ದಕ್ಷಿಣದ ರಾಜ್ಯಗಳಲ್ಲಿ ಉತ್ತಮವಾಗಿ ಗಳಿಕೆ ಮಾಡಿದ್ದು ವಿಶೇಷ. ಈ ಚಿತ್ರದ ಯಶಸ್ಸು ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯವರ ಮುಂದಿನ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿತ್ತು. ಕಳೆದ ಕೆಲವು ಸಮಯದಿಂದ ಈ ಬಗ್ಗೆ ಚರ್ಚೆಯಾಗುತ್ತಲೂ ಇತ್ತು. ಇದೀಗ ಸ್ವತಃ ನಿರ್ದೇಶಕರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ‘ದಿ ದೆಹಲಿ ಫೈಲ್ಸ್’ (The Delhi Files) ಅನೌನ್ಸ್ ಮಾಡಿದ್ದಾರೆ.

ಸ್ವತಂತ್ರ ಭಾರತದ ಪ್ರಮುಖ ಘಟನೆಗಳನ್ನು ಅದರಲ್ಲೂ ಇತಿಹಾಸದಲ್ಲಿ ದಾಖಲಾಗದ ವಿಷಯಗಳನ್ನು ಚಿತ್ರದ ಮೂಲಕ ತೆರೆದಿಡಲು ವಿವೇಕ್ ಅಗ್ನಿಹೋತ್ರಿ ಈ ಹಿಂದೆಯೇ ನಿರ್ಧರಿಸಿದ್ದರು. ಅದರಂತೆ ಮೊದಲ ಚಿತ್ರವಾಗಿ ‘ದಿ ತಾಷ್ಕೆಂಟ್ ಫೈಲ್ಸ್’ ತೆರೆಕಂಡಿತ್ತು. ಎರಡನೇ ಚಿತ್ರವಾಗಿ ‘ದಿ ಕಾಶ್ಮೀರ್ ಫೈಲ್ಸ್’ ತೆರೆಕಂಡಿತ್ತು. ಇದೀಗ ‘ದಿ ದೆಹಲಿ ಫೈಲ್ಸ್’ ಘೋಷಣೆಯಾಗಿದೆ.

ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ವಿವೇಕ್ ಅಗ್ನಿಹೋತ್ರಿ, ‘‘ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಯಶಸ್ಸು ಕಾಣಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಕಳೆದ ನಾಲ್ಕು ವರ್ಷಗಳಿಂದ ಪ್ರಾಮಾಣಿಕವಾಗಿ ಹಾಗೂ ಸತತ ಪರಿಶ್ರಮದ ಮೂಲಕ ಚಿತ್ರದಲ್ಲಿ ತೊಡಗಿಸಿಕೊಂಡಿದ್ದೆವು. ಕಾಶ್ಮೀರಿ ಹಿಂದೂಗಳ ಪರಿಸ್ಥಿತಿಯನ್ನು ಎಲ್ಲರಿಗೂ ತಲುಪಿಸುವುದು ಅದರ ಉದ್ದೇಶವಾಗಿತ್ತು. ಇದೀಗ ಹೊಸ ಚಿತ್ರಕ್ಕೆ ಕೆಲಸ ಮಾಡುವ ಸಮಯ’’ ಎಂದು ಟ್ವೀಟ್ ಮಾಡಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಟ್ವೀಟ್ ಇಲ್ಲಿದೆ:

‘ದಿ ದೆಹಲಿ ಫೈಲ್ಸ್’ ಕತೆ ಏನು?

ಈ ಬಾರಿ ಟ್ವೀಟ್​ನಲ್ಲಿ ಹೊಸ ಚಿತ್ರದ ಕತಾ ವಸ್ತುವಿನ ಬಗ್ಗೆ ವಿವೇಕ್ ಅಗ್ನಿಹೋತ್ರಿ ಗುಟ್ಟುಬಿಟ್ಟುಕೊಟ್ಟಿಲ್ಲ. ಹೀಗಾಗಿ ಚಿತ್ರದ ಕತಾ ವಸ್ತುವಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಜನರು ಕುತೂಹಲಗೊಂಡಿದ್ದಾರೆ. ಆದರೆ 2021ರಲ್ಲಿ ವಿವೇಕ್ ಅಗ್ನಿಹೋತ್ರಿ ‘ದಿ ದೆಹಲಿ ಫೈಲ್ಸ್’ ಬಗ್ಗೆ ಬರೆದುಕೊಂಡಿದ್ದರು. ಆಗ ಸಿಖ್ ಬಾಲಕನೊಬ್ಬ ಅಸಹಾಯಕನಾಗಿ ಅಳುತ್ತಿರುವ, ಹಿಂಬದಿಯಲ್ಲಿ ರಾಷ್ಟ್ರ ಲಾಂಛನವಿರುವ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದರು. ‘ದೆಹಲಿ ಫೈಲ್ಸ್’ನಲ್ಲಿ ಜೀವಿಸುವ ಹಕ್ಕಿನ ಬಗ್ಗೆ ಹೇಳುವುದಾಗಿ ವಿವೇಕ್ ಬರೆದುಕೊಂಡಿದ್ದರು. ಈ ಚಿತ್ರವೂ ಸ್ವತಂತ್ರ ಭಾರತದಲ್ಲಿ ನಡೆದ, ಇದುವರೆಗೆ ಯಾರೂ ಹೇಳದ ಕತೆ ಎಂದಿದ್ದರು ವಿವೇಕ್ ಅಗ್ನಿಹೋತ್ರಿ.

ವಿವೇಕ್ ಅಗ್ನಿಹೋತ್ರಿ ಹಳೆಯ ಟ್ವೀಟ್ ಇಲ್ಲಿದೆ:

ಹೊಸ ಚಿತ್ರದ ಮತ್ತಷ್ಟು ಮಾಹಿತಿ ಘೋಷಣೆ ಯಾವಾಗ?

ಪ್ರಸ್ತುತ ವಿವೇಕ್ ಅಗ್ನಿಹೋತ್ರಿ ‘ದಿ ದೆಹಲಿ ಫೈಲ್ಸ್’ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ‘ದಿ ಕಾಶ್ಮೀರ್ ಫೈಲ್ಸ್’ ನಂತರ ಅವರ ವ್ಯಾಪ್ತಿ ಹಿರಿದಾಗಿದ್ದು, ಚಿತ್ರತಂಡದಲ್ಲಿ ಬದಲಾವಣೆಯಾದರೂ ಅಚ್ಚರಿಯಿಲ್ಲ. ಹೀಗಾಗಿ ‘ದಿ ದೆಹಲಿ ಫೈಲ್ಸ್’ ಕತೆ ಸಿಖ್​ ಹಿನ್ನೆಲೆ ಹೊಂದಿದ್ದರೂ, ಈ ಹಿಂದೆ ಘೋಷಿಸಿದ ಚಿತ್ರತಂಡವೇ ಇದಕ್ಕೂ ಕೆಲಸ ಮಾಡಲಿದೆಯೇ ಎಂಬುದು ಖಚಿತವಾಗಿಲ್ಲ. ಇದನ್ನು ಶೀಘ್ರದಲ್ಲೇ ನಿರ್ದೇಶಕರು ಬಹಿರಂಗಪಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:

ದಿ ಕಾಶ್ಮೀರ್ ಫೈಲ್ಸ್ ವೀಕ್ಷಿಸಿದ ನಂತರ ಮುಸ್ಲಿಂ ಯುವಕನ ಮೇಲೆ ಕತ್ತಿಯಿಂದ ಹಲ್ಲೆ; ಪೊಲೀಸರು ಬಿಚ್ಚಿಟ್ಟರು ಘಟನೆಯ ಬೆಚ್ಚಿಬೀಳಿಸುವ ಸತ್ಯಾಂಶ

‘ಸ್ಟ್ರಾಂಗ್​ ಬಾಡಿ, ಸ್ಟ್ರಾಂಗ್​ ಮನಸ್ಸು’; ವಿಡಿಯೋ ಸಹಿತ ಸಾಕ್ಷಿ ತೋರಿಸಿದ ನಟಿ ಸಮಂತಾ

ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ