ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು

ಈ ಕಹಿ ಘಟನೆ ನಡೆದಾಗ ಅಕ್ಷಯ್​ ಕುಮಾರ್​ ಅವರಿಗೆ ಕೇವಲ 6 ವರ್ಷ ವಯಸ್ಸು. ಅವರ ಜೊತೆ ಲಿಫ್ಟ್​ ಮ್ಯಾನ್​ ಅಸಭ್ಯವಾಗಿ ನಡೆದುಕೊಂಡಿದ್ದ. ಅದರಿಂದ ಅಕ್ಷಯ್​ ಮನಸ್ಸು ಘಾಸಿಗೊಂಡಿತ್ತು.

ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು
ಅಕ್ಷಯ್​ ಕುಮಾರ್​
Follow us
| Updated By: ಮದನ್​ ಕುಮಾರ್​

Updated on: Oct 24, 2021 | 9:07 AM

ಬಾಲ್ಯದಲ್ಲಿ ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಬಾಯಿ ಬಿಟ್ಟಿದ್ದಾರೆ. ಸ್ಟಾರ್​ ನಟ ಅಕ್ಷಯ್​ ಕುಮಾರ್​ ಕೂಡ ಈ ಬಗ್ಗೆ ಹೇಳಿಕೊಂಡಿದ್ದುಂಟು. ಬಾಲ್ಯದಲ್ಲಿದ್ದಾಗಲೇ ಅವರ ಮೇಲೆ ಲೈಂಗಿಕ ಶೋಷಣೆ ಆಗಿತ್ತು. ಆ ಘಟನೆಯಿಂದ ಅವರು ತುಂಬ ವಿಚಲಿತರಾಗಿದ್ದರು. ಅಲ್ಲದೇ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ಈ ಶಾಕಿಂಗ್ ಸಂಗತಿಯ ಬಗ್ಗೆ ಅಕ್ಷಯ್​ ಕುಮಾರ್​ ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು.​

ಈ ಕಹಿ ಘಟನೆ ನಡೆದಾಗ ಅಕ್ಷಯ್​ ಕುಮಾರ್​ ಅವರಿಗೆ ಕೇವಲ 6 ವರ್ಷ ವಯಸ್ಸು. ‘ನಾನು ಲಿಫ್ಟ್​ ಮೂಲಕ ನಮ್ಮ ಪಕ್ಕದ ಮನೆಗೆ ತೆರಳುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ಜೊತೆ ಲಿಫ್ಟ್​ ಮ್ಯಾನ್​ ಅಸಭ್ಯವಾಗಿ ನಡೆದುಕೊಂಡ. ಆತ ಕೆಟ್ಟ ರೀತಿಯಲ್ಲಿ ನನ್ನನ್ನು ಸ್ಪರ್ಶಿಸಿದ. ಇದರಿಂದ ನನ್ನ​ ಮನಸ್ಸು ಘಾಸಿಗೊಂಡಿತು. ನೇರವಾಗಿ ಹೋಗಿ ನಮ್ಮ ತಂದೆಯ ಬಳಿ ಅಳಲು ತೋಡಿಕೊಂಡೆ. ಅಪ್ಪ ಹೋಗಿ ಪೊಲೀಸರಿಗೆ ದೂರು ನೀಡಿದರು’ ಎಂದು ಆ ಕಹಿ ಘಟನೆಯನ್ನು ಅಕ್ಷಯ್​ ಕುಮಾರ್​ ವಿವರಿಸಿದ್ದರು.

‘ತನಿಖೆ ನಡೆದಾಗ ಗೊತ್ತಾಗಿದ್ದು ಏನೆಂದರೆ ಆ ಲಿಫ್ಟ್​ ಮ್ಯಾನ್​ಗೆ ಇಂಥ ಛಾಳಿ ಮೊದಲಿನಿಂದಲೂ ಇತ್ತು. ಪೊಲೀಸರು ಕ್ರಮ ಕೈಗೊಂಡು ಆತನನ್ನು ಬಂಧಿಸಿದರು. ಚಿಕ್ಕ ವಯಸ್ಸಿನಲ್ಲಿ ನಾನು ನಾಚಿಕೆ ಸ್ವಭಾವದವನಾಗಿದ್ದೆ. ತಂದೆ-ತಾಯಿ ಬಳಿ ಈ ವಿಚಾರ ಹೇಳಿಕೊಂಡೆ. ಇಂದಿಗೂ ಕೂಡ ಒಂದು ಕೆಟ್ಟ ಪದ ಮಾತನಾಡುವುದು ನನಗೆ ಕಷ್ಟ ಆಗುತ್ತದೆ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದರು.

ಅನೇಕ ಕಲಾವಿದರಿಗೆ ಈ ರೀತಿಯ ಕಹಿ ಘಟನೆಗಳು ಆಗಿವೆ. ನಟಿ ನೀನಾ ಗುಪ್ತಾ ಅವರು ತಮ್ಮ ಆತ್ಮಚರಿತ್ರೆ ‘ಸಚ್​ ಕಹೂ ತೋ’ ಪುಸ್ತಕದಲ್ಲಿ ಇಂಥ ಕೆಲವು ಸಂಗತಿಗಳನ್ನು ವಿವರಿಸಿದ್ದಾರೆ. ಬಾಲಕಿ ಆಗಿದ್ದಾಗ ಒಮ್ಮೆ ಅವರು ಕಣ್ಣಿನ ಆಸ್ಪತ್ರೆಗೆ ಹೋಗಿದ್ದರು. ಆರಂಭದಲ್ಲಿ ಕಣ್ಣು ಪರಿಶೀಲಿಸಿದ ವೈದ್ಯರು ನಂತರ ದೇಹದ ಇತರ ಭಾಗಗಳನ್ನು ನೋಡಲು ಆರಂಭಿಸಿದರಂತೆ. ಆ ಅಂಗಗಳು ಕಣ್ಣಿಗೆ ಸಂಬಂಧಿಸಿರಲಿಲ್ಲ. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ನೀನಾ ಗುಪ್ತಾ ಒಬ್ಬರೇ ಕುಳಿತು ಅತ್ತಿದ್ದರು. ಒಂದು ವೇಳೆ ತಾಯಿ ಬಳಿ ಹೇಳಿಕೊಂಡರೇ ತಮ್ಮದೇ ಏನೂ ತಪ್ಪಿರಬಹುದು ಅಂತ ಹೇಳಬಹುದು ಎಂಬ ಭಯದಲ್ಲಿ ಆ ವಿಚಾರವನ್ನು ನೀನಾ ಗುಪ್ತಾ ಮುಚ್ಚಿಟ್ಟರು.

ಇದನ್ನೂ ಓದಿ:

OMG 2: ‘ಓಹ್​ ಮೈ ಗಾಡ್​ 2’ ಪೋಸ್ಟರ್​ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ ಅಕ್ಷಯ್​ ಕುಮಾರ್​; ಹೇಗಿದೆ ಹೊಸ ಗೆಟಪ್​?

‘ತಪ್ಪಾಗಿ ಈ ಡ್ಯಾನ್ಸ್​ ಮಾಡಿದ್ರೆ ನಿಮ್ಮ ಭವಿಷ್ಯಕ್ಕೆ ತೊಂದರೆ ಆಗಬಹುದು’: ಅಕ್ಷಯ್​ ಕುಮಾರ್​ ವಾರ್ನಿಂಗ್​

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ