AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಜಯ್ 69’ ಚಿತ್ರಕ್ಕೆ ಅನುಪಮ್ ಖೇರ್ ಹಾಕಿದ ಶ್ರಮ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ ಅವರು ಇತ್ತೀಚೆಗೆ ಪೂರ್ಣಗೊಳಿಸಿದ ಐರನ್‌ಮ್ಯಾನ್ 70.3 ಟ್ರಯಥ್ಲಾನ್ ಮತ್ತು ಅನುಪಮ್ ಖೇರ್ ಅವರ ‘ವಿಜಯ್ 69’ ಚಿತ್ರದ ಬಗ್ಗೆ ಇಬ್ಬರೂ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಚರ್ಚಿಸಿದ್ದಾರೆ. ಟ್ರಯಥ್ಲಾನ್‌ನಲ್ಲಿ ತೇಜಸ್ವಿ ಅವರ ಸಾಧನೆ ಮತ್ತು ಚಿತ್ರದಲ್ಲಿ ಅನುಪಮ್ ಅವರ ಪರಿಶ್ರಮದ ಬಗ್ಗೆ ಮಾತನಾಡಿದ್ದಾರೆ.

‘ವಿಜಯ್ 69’ ಚಿತ್ರಕ್ಕೆ ಅನುಪಮ್ ಖೇರ್ ಹಾಕಿದ ಶ್ರಮ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ
ಅನುಪಮ್-ತೇಜಸ್ವಿ ಸೂರ್ಯ
Follow us
ರಾಜೇಶ್ ದುಗ್ಗುಮನೆ
|

Updated on:Nov 11, 2024 | 9:00 AM

ಸಂಸದ ತೇಜಸ್ವಿ ಸೂರ್ಯ ಅವರು ಟ್ರಯಥ್ಲಾನ್​ನಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು. ಅದನ್ನು ಪೂರ್ತಿಗೊಳಿಸಿದ್ದರು. ಅನುಪಮ್ ಖೇರ್ ನಟನೆಯ ‘ವಿಜಯ್ 69’ ಸಿನಿಮಾದಲ್ಲಿಯೂ ಟ್ರಯಥ್ಲಾನ್ ಬಗ್ಗೆ ಇದೆ. ಇವರಿಬ್ಬರೂ ಸೇರಿ ಇನ್​ಸ್ಟಾಗ್ರಾಮ್ ಲೈವ್ ನಡೆಸಿದ್ದಾರೆ. ಇಬ್ಬರೂ ಟ್ರಯಾಥ್ಲನ್ ಬಗ್ಗೆ ಮಾತನಾಡಿದ್ದಾರೆ. ಅನುಪಮ್ ಅವರು ‘ವಿಜಯ್ 69’ ಚಿತ್ರಕ್ಕೆ ಹಾಕಿದ ಶ್ರಮಕ್ಕೆ ತೇಜಸ್ವಿ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋನ ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ರಯಾಥ್ಲನ್​ ಹೇಗಿರುತ್ತದೆ ಎಂಬುದನ್ನು ಅವರು  ವಿವರಿಸಿದ್ದಾರೆ. ‘ಐರನ್​ ಮ್ಯಾನ್ 70.3 ಈವೇಂಟ್ ಗೋವಾದಲ್ಲಿ ನಡೆದಿತ್ತು. ಇದರಲ್ಲಿ ಟ್ರಯಾಥ್ಲನ್ ಇರುತ್ತದೆ. ಮೂರು ವಿವಿಧ ಚಟುವಟಿಕೆ ಇರುತ್ತವೆ. ಅರೇಬಿಯಾ ಸಮುದ್ರದಲ್ಲಿ 1.9 ಕಿಲೋ ಮೀಟರ್ ಈಜಬೇಕು. 19 ಕಿಲೋ ಸೈಕಲಿಂಗ್ ಇರುತ್ತದೆ, ಆ ಬಳಿಕ 21.1 ರನ್ನಿಂಗ್ ಇರುತ್ತದೆ’ ಎಂದಿದ್ದಾರೆ ತೇಜಸ್ವಿಸೂರ್ಯ. ಇದು ಹಾಫ್ ಐರನ್​ಮ್ಯಾನ್. ಇದನ್ನು ತೇಜಸ್ವಿ ಸೂರ್ಯ ಪೂರ್ಣಗೊಳಿಸಿದ್ದಾರೆ.

ಅನುಪಮ್ ಅವರು ಸಿನಿಮಾ ಬಗ್ಗೆ ವಿವರಿಸಿದ್ದಾರೆ. ‘ಅಕ್ಷಯ್ ರಾಯ್ ಅವರು ಬಂದು ಕಥೆ ಹೇಳಿದಾಗ ಖುಷಿ ಆಯ್ತು. ಜನರು ನನ್ನನ್ನು ಲೆಜೆಂಡ್ ಎಂದು ಕರೆಯುತ್ತಿದ್ದರು. ಆದರೆ, ಈಗ ಅಂಕಲ್ ಎಂದು ಕರೆಯುತ್ತಾರೆ. ನಾನು ಅದನ್ನು ತಪ್ಪು ಎಂದು ಸಾಬೀತು ಪಡಿಸಬೇಕು ಎಂದುಕೊಂಡೆ. ನನಗೆ ಕಳೆದ ವರ್ಷ ಸ್ವಿಮ್ಮಿಂಗ್ ಬರುತ್ತಿರಲಿಲ್ಲ. ಇದಕ್ಕೆ ಈಜು ಕಲಿಯಬೇಕು ಎಂದರು. ನಂತರ ವಿಎಫ್​ಎಕ್ಸ್ ಮಾಡೋಣ ಎಂದರು ನಿರ್ದೇಶಕರು. ಆದರೆ, ನಾನು ಕಲಿಯುತ್ತೇನೆ ಎಂದು ಕಲಿತೆ’ ಎಂದಿದ್ದಾರೆ ಅನುಪಮ್ ಖೇರ್. ಅನುಪಮ್ ಅವರು ತೇಜಸ್ವಿಯನ್ನು ‘ಯೂತ್ ಐಕಾನ್’ ಎಂದು ಕರೆದಿದ್ದಾರೆ.

View this post on Instagram

A post shared by Anupam Kher (@anupampkher)

ಇದನ್ನೂ ಓದಿ: 68ನೇ ವಯಸ್ಸಿಗೆ ಈಜು ಕಲಿತ ಅನುಪಮ್ ಖೇರ್; ಈ ವಯಸ್ಸಲ್ಲಿ ಚಾಲೆಂಜ್ ಸ್ವೀಕರಿಸೋದೇಕೆ?

‘ನಾವು ಹಲವು ಬಾರಿ ರೀಟೇಕ್ ಮಾಡಿದ್ದೇವೆ. ಹೀಗಾಗಿ, ಸಾಕಷ್ಟು ಕಷ್ಟ ಆಯಿತು. ಈ ಸಿನಿಮಾ ಅನೇಕರಿಗೆ ಸ್ಫೂರ್ತಿ ಕೊಟ್ಟಿದೆ. ವಯಸ್ಸಾದವರಿಗೆ ಮಾತ್ರವಲ್ಲ, ಯುವಕರಿಗೂ ಈ ಚಿತ್ರ ಸ್ಫೂರ್ತಿ ಆಗಿದೆ. ಮಕ್ಕಳು ತಮ್ಮ ತಂದೆ-ತಾಯಿಗೆ ಅದನ್ನು ಮಾಡಬೇಡಿ, ಇದನ್ನು ಮಾಡಬೇಡಿ ಎಂದು ಹೇಳಬಾರದು’ ಎಂದಿದ್ದಾರೆ ತೇಜಸ್ವಿಸೂರ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:56 am, Mon, 11 November 24

ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ