AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂರಾರು ಕೋಟಿ ರೂ. ಒಡೆಯನಾದರೂ ಬಾಡಿಗೆ ಮನೆಯಲ್ಲೇ ಇದ್ದಾರೆ ಅನುಪಮ್​ ಖೇರ್; ಕಾರಣವೇನು?

ವಿಜಯ್ 69 ಚಿತ್ರದ ನಟ ಅನುಪಮ್ ಖೇರ್ ಅವರು ಕೋಟ್ಯಾಧಿಪತಿಯಾಗಿದ್ದರೂ ಸ್ವಂತ ಮನೆ ಹೊಂದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸಿಸುವ ಅವರು, ಸ್ವಂತ ಮನೆ ಖರೀದಿಸುವ ಬದಲು ಹಣವನ್ನು ಹೂಡಿಕೆ ಮಾಡುವುದು ಉತ್ತಮ ಎಂದು ಹೇಳಿದ್ದಾರೆ. ತಮ್ಮ ತಾಯಿಗೆ ಮಾತ್ರ ಶಿಮ್ಲಾದಲ್ಲಿ ಮನೆ ಖರೀದಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ನೂರಾರು ಕೋಟಿ ರೂ. ಒಡೆಯನಾದರೂ ಬಾಡಿಗೆ ಮನೆಯಲ್ಲೇ ಇದ್ದಾರೆ ಅನುಪಮ್​ ಖೇರ್; ಕಾರಣವೇನು?
ಅನುಪಮ್ ಖೇರ್
ರಾಜೇಶ್ ದುಗ್ಗುಮನೆ
|

Updated on: Nov 11, 2024 | 2:53 PM

Share

ಅನುಪಮ್ ಖೇರ್ ಅವರ ನಟನೆಯ ‘ವಿಜಯ್ 69’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿದೆ. ಅವರು ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಆದರೆ, ಅವರು ಈವರೆಗೆ ಸ್ವಂತ ಮನೆ ಹೊಂದಿಲ್ಲ. ಈ ವಿಚಾರವನ್ನು ಸ್ವತಃ ಅನುಪಮ್ ಖೇರ್ ಅವರೇ ರಿವೀಲ್ ಮಾಡಿದ್ದಾರೆ. ಸ್ವಂತ ಮನೆ ಹೊಂದದೇ ಇರಲು ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಇದನ್ನು ಕೆಲವರು ಒಪ್ಪಿಕೊಂಡಿದ್ದಾರೆ.

ಅನುಪಮ್ ಖೇರ್ ಅವರು ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದು, ಇದು ಬಾಡಿಗೆಯದ್ದು. ಈ ಬಗ್ಗೆ ಮಾತನಾಡಿರುವ ಅವರು, ‘ನಾನು ಅಪಾರ್ಟ್​​ಮೆಂಟ್​ನ ಬಾಡಿಗೆ ಪಡೆದು ಅಲ್ಲಿ ವಾಸವಾಗಿದ್ದೇನೆ. ನಾನು ಸ್ವಂತ ಮನೆ ಹೊಂದಬಾರದು ಎಂದು ನಿರ್ಧರಿಸಿದೆ. ಯಾರಿಗಾಗಿ ಈ ಸ್ವಂತ ಮನೆ? ಪ್ರತಿ ತಿಂಗಳು ಬಾಡಿಗೆ ಕಟ್ಟಿ ಹಾಯಾಗಿ ವಾಸ ಮಾಡಿ. ನೀವು ಮನೆ ಖರೀದಿ ಮಾಡಬೇಕು ಎಂದು ತೆಗೆದಿಟ್ಟ ಹಣವನ್ನು ಬ್ಯಾಂಕ್​ನಲ್ಲಿ ಇಡಿ. ಅದರಿಂದ ಬಾಡಿಗೆ ಕಟ್ಟಿ’ ಎಂದಿದ್ದಾರೆ ಅವರು.

‘ನೀವು ಹೋದ ಬಳಿಕ ನಿಮ್ಮ ಮನೆಗಾಗಿ ನಿಮ್ಮವರು ಜಗಳ ಆಡಬಹುದು. ಅದರ ಬದಲು ಹಣವನ್ನು ಹಂಚುವುದು ಉತ್ತಮ. ನಾನು ಶಿಮ್ಲಾದಲ್ಲಿ ನನ್ನ ತಾಯಿಗಾಗಿ ಒಂದು ಮನೆಯನ್ನು ಖರೀದಿಸಿದೆ. ಏಳು ವರ್ಷಗಳ ಹಿಂದೆ ನಾನು ನನ್ನ ತಾಯಿಗೆ ಏನು ಬೇಕು ಎಂದು ಕೇಳಿದೆ. ಮನೆ ಬೇಕು ಎಂದು ಹೇಳಿದರು. ಹೀಗಾಗಿ ಮನೆ ಖರೀದಿಸಿದೆ. ನನ್ನ ತಂದೆ ಮೃತಪಟ್ಟ ಬಳಿಕ ಅವರು ಅಲ್ಲಿ ವಾಸವಾಗಿರಲಿಲ್ಲ’ ಎಂದಿದ್ದಾರೆ ಅನುಪಮ್ ಖೇರ್.

ಇದನ್ನೂ ಓದಿ: ‘ವಿಜಯ್ 69’ ಚಿತ್ರಕ್ಕೆ ಅನುಪಮ್ ಖೇರ್ ಹಾಕಿದ ಶ್ರಮ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ

‘ಒಂದು ಬೆಡ್​ರೂಂ ಮನೆ ಬೇಕು ಎಂದರು. ನಾನು ಎಂಟು ಬೆಡ್​ರೂಂ ಮನೆ ಕೊಡಿಸಿದೆ. ಹೆಚ್ಚಿನ ಕರೆಂಟ್​ ಬಿಲ್ ಬರುತ್ತದೆ ಎಂದು ಅವರು ಅಲ್ಲಿಗೆ ಹೋದಾಗಲೆಲ್ಲ ಲೈಟ್​ನ ಆರಿಸಿ ಕುಳಿತುಕೊಳ್ಳುತ್ತಾರೆ. ವಿದ್ಯುತ್ ಬಿಲ್ ಹೆಚ್ಚು ಬರಹುದು’ ಎಂದಿದ್ದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್