AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್ ಸ್ಟಾರ್ ಹೀರೋ ಮಾಡಿದ ಅವಮಾನ ನೆನೆದು ಕಣ್ಣೀರು ಹಾಕಿದ ನಟ

ಈಗ ಬಾಲಿವುಡ್​ನ ಭರವಸೆಯ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ನಟರೊಬ್ಬರು ತಮ್ಮ ಆರಂಭದ ದಿನಗಳಲ್ಲಿ ಯುವ ಸ್ಟಾರ್ ನಟನೊಬ್ಬ ತಮಗೆ ಮಾಡಿದ ಅವಮಾನ ನೆನೆದು ಕಣ್ಣೀರು ಹಾಕಿದ್ದಾರೆ. ತನಗೆ ಅವಮಾನ ಮಾಡಿದ ಆ ಯುವ ಸ್ಟಾರ್ ನಟನ ಹೆಸರನ್ನು ಅಪಾರಶಕ್ತಿ ಖುರಾನಾ ಹೇಳಿಲ್ಲವಾದರೂ ಆತ ಯಾರೆಂಬುದನ್ನು ನೆಟ್ಟಿಗರು ಹುಡುಕಿ ಹೊರತೆಗೆದಿದ್ದಾರೆ.

ಬಾಲಿವುಡ್ ಸ್ಟಾರ್ ಹೀರೋ ಮಾಡಿದ ಅವಮಾನ ನೆನೆದು ಕಣ್ಣೀರು ಹಾಕಿದ ನಟ
ಮಂಜುನಾಥ ಸಿ.
|

Updated on: Oct 23, 2024 | 3:38 PM

Share

ಬಾಲಿವುಡ್​ ಹೊರಗೆ ಮಾತ್ರ ಥಳುಕು-ಬಳುಕು, ಕ್ಯಾಮೆರಾದ ಮುಂದೆ ಎಲ್ಲರೂ ಒಳ್ಳೆಯವರಂತೆ, ಸುಭಗರಂತೆ ನಟಿಸುವ ಸಿನಿಮಾ ಜನ ತೆರೆಯ ಹಿಂದೆ ಕೀಳು ರಾಜಕೀಯ ಮಾಡುತ್ತಾರೆ. ಈಗ ಬಾಲಿವುಡ್​ನ ಭರವಸೆಯ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ಅಪಾರಶಕ್ತಿ ಖುರಾನಾ, ತಮ್ಮ ಆರಂಭದ ದಿನಗಳಲ್ಲಿ ಯುವ ಸ್ಟಾರ್ ನಟನೊಬ್ಬ ತಮಗೆ ಮಾಡಿದ ಅವಮಾನ ನೆನೆದು ಕಣ್ಣೀರು ಹಾಕಿದ್ದಾರೆ. ತನಗೆ ಅವಮಾನ ಮಾಡಿದ ಆ ಯುವ ಸ್ಟಾರ್ ನಟನ ಹೆಸರನ್ನು ಅಪಾರಶಕ್ತಿ ಖುರಾನಾ ಹೇಳಿಲ್ಲವಾದರೂ ಆತ ಯಾರೆಂಬುದನ್ನು ನೆಟ್ಟಿಗರು ಹುಡುಕಿ ಹೊರತೆಗೆದಿದ್ದಾರೆ.

ಅಪಾರಶಕ್ತಿ ಖುರಾನಾ, ಬಾಲಿವುಡ್​ನ ಭರವಸೆಯ ಯುವನಟ. ಅವರ ಸಹೋದರ ಆಯುಷ್ಮಾನ್ ಖುರಾನಾ ಈಗಾಗಲೇ ಬಾಲಿವುಡ್​ನ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನಾ ಪ್ರತಿಭೆಯಿಂದ ಒಂದರ ಹಿಂದೊಂದು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಅಪಾರಶಕ್ತಿ ಖುರಾನಾ, ಅಣ್ಣ ಆಯುಷ್ಮಾನ್ ಅಷ್ಟು ಪ್ರಸಿದ್ಧಿ ಮತ್ತು ಯಶಸ್ಸು ಗಳಿಸಿಲ್ಲವಾದರೂ ಬಾಲಿವುಡ್​ನಲ್ಲಿ ದೊಡ್ಡ ಭರವಸೆ ಮೂಡಿಸಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಪಡೆಯುತ್ತಾ ಸಾಗುತ್ತಿದ್ದಾರೆ.

‘ದಂಗಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಪಾರಶಕ್ತಿ ಖುರಾನಾ, ಸಣ್ಣ-ಪುಟ್ಟ ಪಾತ್ರಗಳಲ್ಲಿಯೇ ನಟಿಸುತ್ತಾ ಬಂದವರು. ಇದೀಗ ಅವರ ‘ಬರ್ಲಿನ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಪ್ರಚಾರಕ್ಕೆಂದು ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅಪಾರಶಕ್ತಿ ಖುರಾನಾ, ತಾವು ಎದುರಿಸಿದ ಅತ್ಯಂತ ನೋವಿನ ಘಟನೆ ನೆನಪು ಮಾಡಿಕೊಂಡರು. ‘ನಾನು ಸಿನಿಮಾ ಒಂದರಲ್ಲಿ ನಟಿಸಿದ್ದೆ. ಆ ಸಿನಿಮಾ ಮುಖ್ಯ ಹೀರೋ ಈಗ ಸ್ಟಾರ್ ಯುವನಟ. ಆ ಸಿನಿಮಾದ ಟ್ರೈಲರ್ ಲಾಂಚ್ ಮುಂಬೈನಲ್ಲಿ ಆಗುತ್ತಿತ್ತು. ನಾನು ಖುಷಿಯಿಂದ ಚೆನ್ನಾಗಿ ರೆಡಿಯಾಗಿ ಇವೆಂಟ್​ಗೆ ಬಂದಿದ್ದೆ. ಅದಕ್ಕಾಗಿ ಹೊಸ ಬಟ್ಟೆ ಖರೀದಿಸಿ ಡಿಸೈನ್ ಮಾಡಿಸಿಕೊಂಡು ಬಂದಿದ್ದೆ. ಆದರೆ ಇನ್ನೇನು ಶೋ ಪ್ರಾರಂಭ ಆಗಬೇಕು ಎನ್ನುವಷ್ಟರಲ್ಲಿ ಆ ನಟ, ಅಪಾರಶಕ್ತಿ ಖುರಾನಾ ಅನ್ನು ಸ್ಟೇಜ್ ಹತ್ತಿಸಬೇಡಿ ಎಂದುಬಿಟ್ಟರು’ ಎಂದು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಸಮಂತಾ ಋತ್ ಪ್ರಭು ವಿರುದ್ಧ ಬಾಲಿವುಡ್​ನಲ್ಲಿ ನಡೆಯುತ್ತಿದೆಯೇ ಪಿತೂರಿ

ಆಗ ಇವೆಂಟ್​ನವರು, ‘ನೀವು ಈ ಕಾರ್ಯಕ್ರಮಕ್ಕೆ ಹಾಜರಾಗುವುದು ಬೇಡ. ನಿಮ್ಮನ್ನು ಬೇರೆ ಇವೆಂಟ್​ನಲ್ಲಿ ಮೀಡಿಯಾದವರಿಗೆ ಪರಿಚಯ ಮಾಡಿಸುತ್ತೇವೆ. ಈ ಶೋಗೆ ಬೇಡ’ ಎಂದರು. ನಾನು ಅಲ್ಲಿಯೇ ವೇದಿಕೆ ಹಿಂದೆಯೇ ನಿಂತಿದ್ದರೂ ಸಹ ನನ್ನನ್ನು ವೇದಿಕೆಗೆ ಕರೆಯಲಿಲ್ಲ. ಸಿನಿಮಾದ ಪಾತ್ರದ ಪರಿಚಯ ಮಾಡಿಸುವಾಗಲೂ ಸಹ ನನ್ನ ಹೆಸರನ್ನು ಸಹ ಯಾರೂ ಹೇಳಲಿಲ್ಲ. ನನಗೆ ಅಷ್ಟು ಅವಮಾನ ಎಂದೂ ಆಗಿರಲಿಲ್ಲ ಎಂದು ಆ ಘಟನೆ ಹೇಳುತ್ತಾ-ಹೇಳುತ್ತಾ ಕಣ್ಣೀರು ಹಾಕಿಬಿಟ್ಟರು ಅಪಾರಶಕ್ತಿ ಖುರಾನ.

ಅಂದಹಾಗೆ ಆಯುಷ್ಮಾನ್ ಖುರಾನಾಗೆ ಅವಮಾನ ಮಾಡಿದ ಆ ಸ್ಟಾರ್ ಯುವ ನಟ ಕಾರ್ತಿಕ್ ಆರ್ಯನ್. ‘ಲುಕಾಚುಪಿ’ ಸಿನಿಮಾನಲ್ಲಿ ಅಪಾರಶಕ್ತಿ ಖುರಾನಾ ಹಾಗೂ ಕಾರ್ತಿಕ್ ಆರ್ಯನ್ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದಲ್ಲಿ ಅಪಾರಶಕ್ತಿ ಖುರಾನಾಗೆ ತುಸು ಮುಖ್ಯ ಪಾತ್ರ ದೊರೆತಿತ್ತು. ಆದರೆ ಕಾರ್ತಿಕ್ ಆರ್ಯನ್ ಹೇಳಿದ್ದರಿಂದಲೇ ಅಪಾರಶಕ್ತಿ ಖುರಾನಾ ಅನ್ನು ಸಿನಿಮಾ ಪ್ರಚಾರದಿಂದ ದೂರ ಇಡಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್​​ ಗೋವಿಂದನ ಕರಾಳ ಇತಿಹಾಸ!
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್​​ ಗೋವಿಂದನ ಕರಾಳ ಇತಿಹಾಸ!
ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ತಮಿಳುನಾಡಿಗೆ ಮತ್ತೆ ನೀರು ಬಿಡಬೇಕೆಂಬ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ
ತಮಿಳುನಾಡಿಗೆ ಮತ್ತೆ ನೀರು ಬಿಡಬೇಕೆಂಬ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!