ಭಿಕ್ಷೆ ಬೇಡುವ ವ್ಯಕ್ತಿಗೆ ಆಮಿರ್​ ಖಾನ್​ ಸಿನಿಮಾದಲ್ಲಿ ಅವಕಾಶ; ನಂತರ ಬದಲಾಯ್ತು ಬದುಕು

ಜೀವನ ನಡೆಸಲು ದೆಹಲಿಯ ಬೀದಿಯಲ್ಲಿ ಮನೋಜ್​ ರಾಯ್​ ಭಿಕ್ಷೆ ಬೇಡುತ್ತಿದ್ದರು. ಅವರನ್ನು ಕರೆದು ‘ಪಿಕೆ’ ಸಿನಿಮಾದಲ್ಲಿ ಅವಕಾಶ ನೀಡಲಾಯಿತು. ಆ ಸಿನಿಮಾ ತೆರೆಕಂಡ ಬಳಿಕ ಮನೋಜ್​ ರಾಯ್​ ಜೀವನದಲ್ಲಿ ಬದಲಾವಣೆ ಆಯಿತು. ಹಣದ ಜೊತೆ ಅವರಿಗೆ ಜನಪ್ರಿಯತೆ ಕೂಡ ಸಿಕ್ಕಿತು. ಆ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ..

ಭಿಕ್ಷೆ ಬೇಡುವ ವ್ಯಕ್ತಿಗೆ ಆಮಿರ್​ ಖಾನ್​ ಸಿನಿಮಾದಲ್ಲಿ ಅವಕಾಶ; ನಂತರ ಬದಲಾಯ್ತು ಬದುಕು
ಆಮಿರ್​ ಖಾನ್​, ಮನೋಜ್​ ರಾಯ್
Follow us
|

Updated on: Apr 02, 2024 | 9:41 PM

ಚಿತ್ರರಂಗಕ್ಕೆ ಬಂದಮೇಲೆ ಅನೇಕರ ಬದುಕು ಬದಲಾಗಿದೆ. ಏನೂ ಇಲ್ಲದೇ ಇರುವವರು ಈ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. ಹಾಗೆಯೇ ಹಣ ಕಳೆದುಕೊಂಡವರು ಕೂಡ ಇದ್ದಾರೆ. ನಟರು ಮಾಡುವ ಸಣ್ಣ ಪಾತ್ರ ಕೂಡ ದೊಡ್ಡ ಪ್ರಭಾವ ಬೀರಿದ ಉದಾಹರಣೆ ಸಾಕಷ್ಟಿದೆ. ಕೆಲವರ ಬೆಳವಣಿಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಆಮಿರ್ ಖಾನ್​ (Aamir Khan) ನಟನೆಯ ‘ಪಿಕೆ’ ಸಿನಿಮಾದಲ್ಲಿ ಭಿಕ್ಷುಕನ (Beggar) ಪಾತ್ರ ಮಾಡಿದ ನಟನ ಬದುಕು ಕೂಡ ಅದೇ ರೀತಿ ಬದಲಾಯಿತು. ರಿಯಲ್​ ಲೈಫ್​ನಲ್ಲಿಯೂ ಭಿಕ್ಷೆ ಬೇಡುತ್ತಿದ್ದ ಮನೋಜ್​ ರಾಯ್​ (Manoj Roy) ಅವರಿಗೆ ಈ ಅವಕಾಶ ಸಿಕ್ಕಿದ್ದೇ ಒಂದು ಅಚ್ಚರಿ.

ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿದ್ದ ‘ಪಿಕೆ’ ಸಿನಿಮಾದಲ್ಲಿ ಕೇವಲ 5 ಸೆಕೆಂಡ್​​ ಕಾಣಿಸಿಕೊಳ್ಳುವ ಓರ್ವ ಭಿಕ್ಷುಕನ ಪಾತ್ರವಿದೆ. ಆ ಪಾತ್ರಕ್ಕೂ ಕೂಡ ಆಡಿಷನ್​ ಮಾಡಲಾಗಿತ್ತು! ಹೌದು, ನಿಜವಾಗಿ ಭಿಕ್ಷೆ ಬೇಡುವ ಕೆಲವು ವ್ಯಕ್ತಿಗಳನ್ನು ಕರೆದು ಆಡಿಷನ್​ ಮಾಡಿಸಲಾಗಿತ್ತು. ಅದರಲ್ಲಿ ಮನೋಜ್ ರಾಯ್​ ಕೂಡ ಇದ್ದರು. ಆಡಿಷನ್​ ಪ್ರಕ್ರಿಯೆ ಮತ್ತು ಶೂಟಿಂಗ್​ ಮುಗಿಯುವ ತನಕ ಉಚಿತವಾಗಿ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಮನೋಜ್​ ರಾಯ್​ ಅವರು ನಟಿಸಿಲು ಒಪ್ಪಿಕೊಂಡಿದ್ದರು!

ಇದನ್ನೂ ಓದಿ: ‘ಡ್ರಗ್ಸ್​ ತೆಗೆದುಕೊಳ್ಳುವುದು ನಿಲ್ಲಿಸಿ’: ಲೈವ್​ನಲ್ಲೇ ಆಮಿರ್​ ಖಾನ್​ಗೆ ಟ್ರೋಲ್​; ನಟನ ಉತ್ತರ ಏನು?

ತುಂಬ ಬಡ ಕುಟುಂಬದಿಂದ ಬಂದವರು ಮನೋಜ್​ ರಾಯ್​. ಬಾಲ್ಯದಲ್ಲೇ ಅವರು ತಾಯಿಯನ್ನು ಕಳೆದುಕೊಂಡರು. ತಂದೆ ದಿನಗೂಲಿ ಮಾಡಿ ಮಗನನ್ನು ಸಾಕಿದರು. ಆದರೆ ತಂದೆಯು ಅನಾರೋಗ್ಯಕ್ಕೆ ಒಳಗಾದ ಬಳಿಕ ಮನೋಜ್​ ಅವರು ಶಾಲೆ ಬಿಟ್ಟು ಭಿಕ್ಷೆ ಬೇಡಲು ಶುರು ಮಾಡಿದರು. ಕೆಲಸ ಹುಡುಕಿಕೊಂಡು ದೆಹಲಿಗೆ ಬಂದ ಅವರಿಗೆ ಕೆಲಸ ಸಿಗಲಿಲ್ಲ. ಆಗ ಅವರು ದೆಹಲಿಯ ಬೀದಿಗಳಲ್ಲಿ ಭಿಕ್ಷೆ ಬೇಡಿದರು. ಆಗಲೇ ಅವರಿಗೆ ‘ಪಿಕೆ’ ಸಿನಿಮಾದ ಅವಕಾಶ ಸಿಕ್ಕಿತು.

ಇದನ್ನೂ ಓದಿ: ಮಗನಿಗೆ ನೋವಾಗದ ರೀತಿಯಲ್ಲಿ ಸಂಸಾರದ ಸಮಸ್ಯೆ ಪರಿಹರಿಸಿಕೊಂಡ ಆಮಿರ್​ ಖಾನ್​-ಕಿರಣ್​ ರಾವ್​

ಅದು 5 ಸೆಕೆಂಡ್​ನ ಪಾತ್ರ ಆಗಿದ್ದರೂ ಕೂಡ ಮನೋಜ್​ ರಾಯ್​ ಅವರು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆಮಿರ್​ ಖಾನ್​ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟ ಅದು. ಆ ಸಿನಿಮಾ ಬಿಡುಗಡೆ ಆದ ಬಳಿಕ ಮನೋಜ್​ ರಾಯ್​ ಅವರಿಗೆ ಜನಪ್ರಿಯತೆ ಮತ್ತು ಒಂದಷ್ಟು ಹಣ ಸಿಕ್ಕಿತು. ಹಣವನ್ನು ತೆಗೆದುಕೊಂಡು ಅವರು ಊರಿಗೆ ವಾಪಸ್​ ಹೋದರು. ಅಲ್ಲಿ ಒಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಸೋಶಿಯಲ್​ ಮೀಡಿಯಾದಲ್ಲಿ ಖಾತೆ ಹೊಂದಿದರು. ನಂತರ ಅವರಿಗೆ ಗರ್ಲ್​ಫ್ರೆಂಡ್​ ಕೂಡ ಸಿಕ್ಕಳು. ಅಷ್ಟರಮಟ್ಟಿಗೆ ಮನೋಜ್​ ರಾಯ್​ ಬದುಕು ಬದಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?