ಭಿಕ್ಷೆ ಬೇಡುವ ವ್ಯಕ್ತಿಗೆ ಆಮಿರ್​ ಖಾನ್​ ಸಿನಿಮಾದಲ್ಲಿ ಅವಕಾಶ; ನಂತರ ಬದಲಾಯ್ತು ಬದುಕು

ಜೀವನ ನಡೆಸಲು ದೆಹಲಿಯ ಬೀದಿಯಲ್ಲಿ ಮನೋಜ್​ ರಾಯ್​ ಭಿಕ್ಷೆ ಬೇಡುತ್ತಿದ್ದರು. ಅವರನ್ನು ಕರೆದು ‘ಪಿಕೆ’ ಸಿನಿಮಾದಲ್ಲಿ ಅವಕಾಶ ನೀಡಲಾಯಿತು. ಆ ಸಿನಿಮಾ ತೆರೆಕಂಡ ಬಳಿಕ ಮನೋಜ್​ ರಾಯ್​ ಜೀವನದಲ್ಲಿ ಬದಲಾವಣೆ ಆಯಿತು. ಹಣದ ಜೊತೆ ಅವರಿಗೆ ಜನಪ್ರಿಯತೆ ಕೂಡ ಸಿಕ್ಕಿತು. ಆ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ..

ಭಿಕ್ಷೆ ಬೇಡುವ ವ್ಯಕ್ತಿಗೆ ಆಮಿರ್​ ಖಾನ್​ ಸಿನಿಮಾದಲ್ಲಿ ಅವಕಾಶ; ನಂತರ ಬದಲಾಯ್ತು ಬದುಕು
ಆಮಿರ್​ ಖಾನ್​, ಮನೋಜ್​ ರಾಯ್

Updated on: Apr 02, 2024 | 9:41 PM

ಚಿತ್ರರಂಗಕ್ಕೆ ಬಂದಮೇಲೆ ಅನೇಕರ ಬದುಕು ಬದಲಾಗಿದೆ. ಏನೂ ಇಲ್ಲದೇ ಇರುವವರು ಈ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. ಹಾಗೆಯೇ ಹಣ ಕಳೆದುಕೊಂಡವರು ಕೂಡ ಇದ್ದಾರೆ. ನಟರು ಮಾಡುವ ಸಣ್ಣ ಪಾತ್ರ ಕೂಡ ದೊಡ್ಡ ಪ್ರಭಾವ ಬೀರಿದ ಉದಾಹರಣೆ ಸಾಕಷ್ಟಿದೆ. ಕೆಲವರ ಬೆಳವಣಿಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಆಮಿರ್ ಖಾನ್​ (Aamir Khan) ನಟನೆಯ ‘ಪಿಕೆ’ ಸಿನಿಮಾದಲ್ಲಿ ಭಿಕ್ಷುಕನ (Beggar) ಪಾತ್ರ ಮಾಡಿದ ನಟನ ಬದುಕು ಕೂಡ ಅದೇ ರೀತಿ ಬದಲಾಯಿತು. ರಿಯಲ್​ ಲೈಫ್​ನಲ್ಲಿಯೂ ಭಿಕ್ಷೆ ಬೇಡುತ್ತಿದ್ದ ಮನೋಜ್​ ರಾಯ್​ (Manoj Roy) ಅವರಿಗೆ ಈ ಅವಕಾಶ ಸಿಕ್ಕಿದ್ದೇ ಒಂದು ಅಚ್ಚರಿ.

ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿದ್ದ ‘ಪಿಕೆ’ ಸಿನಿಮಾದಲ್ಲಿ ಕೇವಲ 5 ಸೆಕೆಂಡ್​​ ಕಾಣಿಸಿಕೊಳ್ಳುವ ಓರ್ವ ಭಿಕ್ಷುಕನ ಪಾತ್ರವಿದೆ. ಆ ಪಾತ್ರಕ್ಕೂ ಕೂಡ ಆಡಿಷನ್​ ಮಾಡಲಾಗಿತ್ತು! ಹೌದು, ನಿಜವಾಗಿ ಭಿಕ್ಷೆ ಬೇಡುವ ಕೆಲವು ವ್ಯಕ್ತಿಗಳನ್ನು ಕರೆದು ಆಡಿಷನ್​ ಮಾಡಿಸಲಾಗಿತ್ತು. ಅದರಲ್ಲಿ ಮನೋಜ್ ರಾಯ್​ ಕೂಡ ಇದ್ದರು. ಆಡಿಷನ್​ ಪ್ರಕ್ರಿಯೆ ಮತ್ತು ಶೂಟಿಂಗ್​ ಮುಗಿಯುವ ತನಕ ಉಚಿತವಾಗಿ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಮನೋಜ್​ ರಾಯ್​ ಅವರು ನಟಿಸಿಲು ಒಪ್ಪಿಕೊಂಡಿದ್ದರು!

ಇದನ್ನೂ ಓದಿ: ‘ಡ್ರಗ್ಸ್​ ತೆಗೆದುಕೊಳ್ಳುವುದು ನಿಲ್ಲಿಸಿ’: ಲೈವ್​ನಲ್ಲೇ ಆಮಿರ್​ ಖಾನ್​ಗೆ ಟ್ರೋಲ್​; ನಟನ ಉತ್ತರ ಏನು?

ತುಂಬ ಬಡ ಕುಟುಂಬದಿಂದ ಬಂದವರು ಮನೋಜ್​ ರಾಯ್​. ಬಾಲ್ಯದಲ್ಲೇ ಅವರು ತಾಯಿಯನ್ನು ಕಳೆದುಕೊಂಡರು. ತಂದೆ ದಿನಗೂಲಿ ಮಾಡಿ ಮಗನನ್ನು ಸಾಕಿದರು. ಆದರೆ ತಂದೆಯು ಅನಾರೋಗ್ಯಕ್ಕೆ ಒಳಗಾದ ಬಳಿಕ ಮನೋಜ್​ ಅವರು ಶಾಲೆ ಬಿಟ್ಟು ಭಿಕ್ಷೆ ಬೇಡಲು ಶುರು ಮಾಡಿದರು. ಕೆಲಸ ಹುಡುಕಿಕೊಂಡು ದೆಹಲಿಗೆ ಬಂದ ಅವರಿಗೆ ಕೆಲಸ ಸಿಗಲಿಲ್ಲ. ಆಗ ಅವರು ದೆಹಲಿಯ ಬೀದಿಗಳಲ್ಲಿ ಭಿಕ್ಷೆ ಬೇಡಿದರು. ಆಗಲೇ ಅವರಿಗೆ ‘ಪಿಕೆ’ ಸಿನಿಮಾದ ಅವಕಾಶ ಸಿಕ್ಕಿತು.

ಇದನ್ನೂ ಓದಿ: ಮಗನಿಗೆ ನೋವಾಗದ ರೀತಿಯಲ್ಲಿ ಸಂಸಾರದ ಸಮಸ್ಯೆ ಪರಿಹರಿಸಿಕೊಂಡ ಆಮಿರ್​ ಖಾನ್​-ಕಿರಣ್​ ರಾವ್​

ಅದು 5 ಸೆಕೆಂಡ್​ನ ಪಾತ್ರ ಆಗಿದ್ದರೂ ಕೂಡ ಮನೋಜ್​ ರಾಯ್​ ಅವರು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆಮಿರ್​ ಖಾನ್​ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟ ಅದು. ಆ ಸಿನಿಮಾ ಬಿಡುಗಡೆ ಆದ ಬಳಿಕ ಮನೋಜ್​ ರಾಯ್​ ಅವರಿಗೆ ಜನಪ್ರಿಯತೆ ಮತ್ತು ಒಂದಷ್ಟು ಹಣ ಸಿಕ್ಕಿತು. ಹಣವನ್ನು ತೆಗೆದುಕೊಂಡು ಅವರು ಊರಿಗೆ ವಾಪಸ್​ ಹೋದರು. ಅಲ್ಲಿ ಒಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಸೋಶಿಯಲ್​ ಮೀಡಿಯಾದಲ್ಲಿ ಖಾತೆ ಹೊಂದಿದರು. ನಂತರ ಅವರಿಗೆ ಗರ್ಲ್​ಫ್ರೆಂಡ್​ ಕೂಡ ಸಿಕ್ಕಳು. ಅಷ್ಟರಮಟ್ಟಿಗೆ ಮನೋಜ್​ ರಾಯ್​ ಬದುಕು ಬದಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us