AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುರ್ಜ್ ಖಲೀಫಾ ಮೇಲೆ ಅಡ್ವಾನ್ಸ್ ಬುಕಿಂಗ್ ಶುರು ಮಾಡಿದ ಮೊದಲ ಸಿನಿಮಾ ‘ಚಂದು ಚಾಂಪಿಯನ್’

‘ಚಂದು ಚಾಂಪಿಯನ್​’ ಸಿನಿಮಾದಲ್ಲಿ ಕಾರ್ತಿಕ್​ ಆರ್ಯನ್​ ಅವರು ಮುಖ್ಯ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರ ಗೆಟಪ್​ ತುಂಬ ಡಿಫರೆಂಟ್​ ಆಗಿರಲಿದೆ. ನಿರ್ದೇಶಕ ಕಬೀರ್ ಖಾನ್​ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇಂದಿನಿಂದ (ಜೂನ್​ 9) ಸಿನಿಮಾದ ಅಡ್ವಾನ್ಸ್​ ಬುಕಿಂಗ್ ಓಪನ್​ ಆಗಿದೆ. ಅದು ಕೂಡ ಬುರ್ಜ್​ ಖಲೀಫಾ ಮೇಲೆ ಎಂಬುದು ವಿಶೇಷ.

ಬುರ್ಜ್ ಖಲೀಫಾ ಮೇಲೆ ಅಡ್ವಾನ್ಸ್ ಬುಕಿಂಗ್ ಶುರು ಮಾಡಿದ ಮೊದಲ ಸಿನಿಮಾ ‘ಚಂದು ಚಾಂಪಿಯನ್’
ಬುರ್ಜ್​ ಖಲೀಫಾ, ಕಾರ್ತಿಕ್​ ಆರ್ಯನ್​
Follow us
ಮದನ್​ ಕುಮಾರ್​
|

Updated on: Jun 09, 2024 | 8:04 PM

ಸಾಜಿದ್​ ನಾಡಿಯದ್ವಾಲ ಮತ್ತು ಕಬೀರ್​ ಖಾನ್​ ಅವರು ‘ಚಂದು ಚಾಂಪಿಯನ್​’ (Chandu Champion) ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ಸಕಲ ತಯಾರಿ ನಡೆದಿದೆ. ಈಗಾಗಲೇ ಅಡ್ವಾನ್ಸ್​ ಬುಕಿಂಗ್​ (Chandu Champion Advance Booking) ಓಪನ್​ ಮಾಡಲಾಗಿದೆ. ವಿಶೇಷ ಏನೆಂದರೆ, ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಕುರಿತು ಮಾಹಿತಿ ನೀಡಲು ಈ ಸಿನಿಮಾ ತಂಡ ಒಂದು ವಿಶೇಷ ದಾರಿಯನ್ನು ಅನುಸರಿಸಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿ ಹೊಂದಿರುವ ಬುರ್ಜ್​ ಖಲೀಫಾ (Burj Khalifa) ಮೇಲೆ ‘ಚಂದು ಚಾಂಪಿಯನ್​’ ಸಿನಿಮಾದ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಕುರಿತು ಮಾಹಿತಿ ಬಿತ್ತರಿಸಲಾಗಿದೆ.

ಬುರ್ಜ್​ ಖಲೀಫಾ ಮೇಲೆ ಸಿನಿಮಾಗಳ ಪ್ರಚಾರ ಮಾಡುವುದು ಹೊಸದೇನೂ ಅಲ್ಲ. ಈಗಾಗಲೇ ‘ವಿಕ್ರಾಂತ್​ ರೋಣ’ ಸೇರಿದಂತೆ ಅನೇಕ ಸಿನಿಮಾಗಳ ಪ್ರಮೋಷನ್​ ಕಂಟೆಂಟ್​ಗಳನ್ನು ಬಿತ್ತರಿಸಲಾಗಿತ್ತು. ಆದರೆ ಅವೆಲ್ಲವೂ ಟೀಸರ್​, ಟ್ರೇಲರ್​, ಫಸ್ಟ್​ ಲುಕ್​ ಇತ್ಯಾದಿ ಆಗಿದ್ದವು. ಇದೇ ಮೊದಲ ಬಾರಿಗೆ ‘ಚಂದು ಚಾಂಪಿಯನ್​’ ಸಿನಿಮಾ ತಂಡದವರು ಮುಂಗಡ ಟಿಕೆಟ್​ ಬುಕಿಂಗ್​ ಬಗ್ಗೆ ಮಾಹಿತಿ ಬಿತ್ತರಿಸುವ ಮೂಲಕ ಹೊಸತನ ತೋರಿದ್ದಾರೆ.

ಕಾರ್ತಿಕ್​ ಆರ್ಯನ್​ ಅವರು ‘ಚಂದು ಚಾಂಪಿಯನ್​’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಗೆಟಪ್​ ತುಂಬ ಡಿಫರೆಂಟ್​ ಆಗಿರಲಿದೆ. ಈಗಾಗಲೇ ಪೋಸ್ಟರ್​ ಬಿಡುಗಡೆ ಆಗಿದ್ದು ಪ್ರೇಕ್ಷಕರ ಕೌತುಕ ಕೆರಳಿಸಿದೆ. ಇಂದಿನಿಂದ (ಜೂನ್​ 9) ಬುಕಿಂಗ್​​ ಶುರುವಾಗಿದೆ. ಬುರ್ಜ್​ ಖಲೀಫಾ ಮೇಲೆ ಬುಕಿಂಗ್​ ವಿವರ ಹಂಚಿಕೊಂಡ ಫೋಟೋ ವೈರಲ್​ ಆಗಿದೆ.

ಇದನ್ನೂ ಓದಿ: ಬರ್ತ್​ಡೇ ದಿನ ಬುರ್ಜ್​ ಖಲೀಫಾ ಮೇಲೆ ಮೂಡಿತು ಶಾರುಖ್​ ಫೋಟೋ; ವೈರಲ್​ ಆಯ್ತು ವಿಡಿಯೋ

ಜೂನ್​ 14ರಂದು ‘ಚಂದು ಚಾಂಪಿಯನ್​’ ಸಿನಿಮಾ ಬಿಡುಗಡೆ ಆಗಲಿದೆ. ಕಾರ್ತಿಕ್​ ಆರ್ಯನ್​ ಅವರ ವೃತ್ತಿ ಜೀವನದಲ್ಲಿ ಇದು ತುಂಬ ಮಹತ್ವದ ಸಿನಿಮಾ ಆಗಿರಲಿದೆ. ಅವರ ಅಭಿಮಾನಿಗಳು ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಪ್ಯಾರಾಲೆಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಮುರಳಿಕಾಂತ್​ ಪೇಟ್ಕರ್​ ಅವರ ಜೀವನದ ಕುರಿತು ಈ ಸಿನಿಮಾ ಇದೆ. ಕಬೀರ್ ಖಾನ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
ಬೆಂಗಳೂರು ಕಾಲ್ತುಳಿತ: ಘೋರ ದುರಂತವನ್ನು ಕನ್ನಡಿಗರು ಯಾವತ್ತೂ ಮರೆಯಲಾರರು
ಬೆಂಗಳೂರು ಕಾಲ್ತುಳಿತ: ಘೋರ ದುರಂತವನ್ನು ಕನ್ನಡಿಗರು ಯಾವತ್ತೂ ಮರೆಯಲಾರರು
ನನಗೂ ಉಸಿರುಗಟ್ಟಿತ್ತ; ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
ನನಗೂ ಉಸಿರುಗಟ್ಟಿತ್ತ; ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಸಾಕ್ಷಿಯಾದ ರಾಶಿ ಚಪ್ಪಲಿ
ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಸಾಕ್ಷಿಯಾದ ರಾಶಿ ಚಪ್ಪಲಿ
Daily Devotional: ಸಹವಾಸದಿಂದ ಏನೆಲ್ಲಾ ಪ್ರಭಾವ ಬೀರುತ್ತೆ ಗೊತ್ತಾ?
Daily Devotional: ಸಹವಾಸದಿಂದ ಏನೆಲ್ಲಾ ಪ್ರಭಾವ ಬೀರುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಅಶುಭ ಫಲ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಅಶುಭ ಫಲ
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು