AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುರ್ಜ್ ಖಲೀಫಾ ಮೇಲೆ ಅಡ್ವಾನ್ಸ್ ಬುಕಿಂಗ್ ಶುರು ಮಾಡಿದ ಮೊದಲ ಸಿನಿಮಾ ‘ಚಂದು ಚಾಂಪಿಯನ್’

‘ಚಂದು ಚಾಂಪಿಯನ್​’ ಸಿನಿಮಾದಲ್ಲಿ ಕಾರ್ತಿಕ್​ ಆರ್ಯನ್​ ಅವರು ಮುಖ್ಯ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರ ಗೆಟಪ್​ ತುಂಬ ಡಿಫರೆಂಟ್​ ಆಗಿರಲಿದೆ. ನಿರ್ದೇಶಕ ಕಬೀರ್ ಖಾನ್​ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇಂದಿನಿಂದ (ಜೂನ್​ 9) ಸಿನಿಮಾದ ಅಡ್ವಾನ್ಸ್​ ಬುಕಿಂಗ್ ಓಪನ್​ ಆಗಿದೆ. ಅದು ಕೂಡ ಬುರ್ಜ್​ ಖಲೀಫಾ ಮೇಲೆ ಎಂಬುದು ವಿಶೇಷ.

ಬುರ್ಜ್ ಖಲೀಫಾ ಮೇಲೆ ಅಡ್ವಾನ್ಸ್ ಬುಕಿಂಗ್ ಶುರು ಮಾಡಿದ ಮೊದಲ ಸಿನಿಮಾ ‘ಚಂದು ಚಾಂಪಿಯನ್’
ಬುರ್ಜ್​ ಖಲೀಫಾ, ಕಾರ್ತಿಕ್​ ಆರ್ಯನ್​
ಮದನ್​ ಕುಮಾರ್​
|

Updated on: Jun 09, 2024 | 8:04 PM

Share

ಸಾಜಿದ್​ ನಾಡಿಯದ್ವಾಲ ಮತ್ತು ಕಬೀರ್​ ಖಾನ್​ ಅವರು ‘ಚಂದು ಚಾಂಪಿಯನ್​’ (Chandu Champion) ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ಸಕಲ ತಯಾರಿ ನಡೆದಿದೆ. ಈಗಾಗಲೇ ಅಡ್ವಾನ್ಸ್​ ಬುಕಿಂಗ್​ (Chandu Champion Advance Booking) ಓಪನ್​ ಮಾಡಲಾಗಿದೆ. ವಿಶೇಷ ಏನೆಂದರೆ, ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಕುರಿತು ಮಾಹಿತಿ ನೀಡಲು ಈ ಸಿನಿಮಾ ತಂಡ ಒಂದು ವಿಶೇಷ ದಾರಿಯನ್ನು ಅನುಸರಿಸಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿ ಹೊಂದಿರುವ ಬುರ್ಜ್​ ಖಲೀಫಾ (Burj Khalifa) ಮೇಲೆ ‘ಚಂದು ಚಾಂಪಿಯನ್​’ ಸಿನಿಮಾದ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಕುರಿತು ಮಾಹಿತಿ ಬಿತ್ತರಿಸಲಾಗಿದೆ.

ಬುರ್ಜ್​ ಖಲೀಫಾ ಮೇಲೆ ಸಿನಿಮಾಗಳ ಪ್ರಚಾರ ಮಾಡುವುದು ಹೊಸದೇನೂ ಅಲ್ಲ. ಈಗಾಗಲೇ ‘ವಿಕ್ರಾಂತ್​ ರೋಣ’ ಸೇರಿದಂತೆ ಅನೇಕ ಸಿನಿಮಾಗಳ ಪ್ರಮೋಷನ್​ ಕಂಟೆಂಟ್​ಗಳನ್ನು ಬಿತ್ತರಿಸಲಾಗಿತ್ತು. ಆದರೆ ಅವೆಲ್ಲವೂ ಟೀಸರ್​, ಟ್ರೇಲರ್​, ಫಸ್ಟ್​ ಲುಕ್​ ಇತ್ಯಾದಿ ಆಗಿದ್ದವು. ಇದೇ ಮೊದಲ ಬಾರಿಗೆ ‘ಚಂದು ಚಾಂಪಿಯನ್​’ ಸಿನಿಮಾ ತಂಡದವರು ಮುಂಗಡ ಟಿಕೆಟ್​ ಬುಕಿಂಗ್​ ಬಗ್ಗೆ ಮಾಹಿತಿ ಬಿತ್ತರಿಸುವ ಮೂಲಕ ಹೊಸತನ ತೋರಿದ್ದಾರೆ.

ಕಾರ್ತಿಕ್​ ಆರ್ಯನ್​ ಅವರು ‘ಚಂದು ಚಾಂಪಿಯನ್​’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಗೆಟಪ್​ ತುಂಬ ಡಿಫರೆಂಟ್​ ಆಗಿರಲಿದೆ. ಈಗಾಗಲೇ ಪೋಸ್ಟರ್​ ಬಿಡುಗಡೆ ಆಗಿದ್ದು ಪ್ರೇಕ್ಷಕರ ಕೌತುಕ ಕೆರಳಿಸಿದೆ. ಇಂದಿನಿಂದ (ಜೂನ್​ 9) ಬುಕಿಂಗ್​​ ಶುರುವಾಗಿದೆ. ಬುರ್ಜ್​ ಖಲೀಫಾ ಮೇಲೆ ಬುಕಿಂಗ್​ ವಿವರ ಹಂಚಿಕೊಂಡ ಫೋಟೋ ವೈರಲ್​ ಆಗಿದೆ.

ಇದನ್ನೂ ಓದಿ: ಬರ್ತ್​ಡೇ ದಿನ ಬುರ್ಜ್​ ಖಲೀಫಾ ಮೇಲೆ ಮೂಡಿತು ಶಾರುಖ್​ ಫೋಟೋ; ವೈರಲ್​ ಆಯ್ತು ವಿಡಿಯೋ

ಜೂನ್​ 14ರಂದು ‘ಚಂದು ಚಾಂಪಿಯನ್​’ ಸಿನಿಮಾ ಬಿಡುಗಡೆ ಆಗಲಿದೆ. ಕಾರ್ತಿಕ್​ ಆರ್ಯನ್​ ಅವರ ವೃತ್ತಿ ಜೀವನದಲ್ಲಿ ಇದು ತುಂಬ ಮಹತ್ವದ ಸಿನಿಮಾ ಆಗಿರಲಿದೆ. ಅವರ ಅಭಿಮಾನಿಗಳು ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಪ್ಯಾರಾಲೆಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಮುರಳಿಕಾಂತ್​ ಪೇಟ್ಕರ್​ ಅವರ ಜೀವನದ ಕುರಿತು ಈ ಸಿನಿಮಾ ಇದೆ. ಕಬೀರ್ ಖಾನ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್