AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಷ್ಣೋಯಿಯಿಂದ ಬೆದರಿಕೆ, ಕಮಿಡಿಯನ್ ಮುನ್ನಾವರ್ ಫಾರುಖಿಗೂ ಭದ್ರತೆ

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಇತ್ತೀಚೆಗಷ್ಟೆ ಸಲ್ಮಾನ್ ಖಾನ್​ರ ಆಪ್ತ ಬಾಬಾ ಸಿದ್ಧಿಕಿಯನ್ನು ಕೊಂದಿದೆ. ಸಲ್ಮಾನ್ ಖಾನ್ ಅನ್ನೂ ಕೊಲ್ಲುವುದಾಗಿ ಹೇಳಿದೆ. ಇದರ ನಡುವೆ ಕಮಿಡಿಯನ್ ಮುನಾವರ್ ಫಾರೂಖಿ ಮೇಲೆ ಈ ಗ್ಯಾಂಗ್​ನ ಕಣ್ಣಿದ್ದು, ಮುಂಬೈ ಪೊಲೀಸರು ಮುನಾವರ್ ಭದ್ರತೆ ಹೆಚ್ಚಿಸಿದ್ದಾರೆ.

ಬಿಷ್ಣೋಯಿಯಿಂದ ಬೆದರಿಕೆ, ಕಮಿಡಿಯನ್ ಮುನ್ನಾವರ್ ಫಾರುಖಿಗೂ ಭದ್ರತೆ
ಮಂಜುನಾಥ ಸಿ.
|

Updated on: Oct 15, 2024 | 5:09 PM

Share

ಇತ್ತೀಚೆಗಷ್ಟೆ ಎನ್​ಸಿಪಿ ಮುಖಂಡ, ಬಾಂದ್ರಾ ಮಾಜಿ ಶಾಸಕ ಬಾಬಾ ಸಿದ್ಧಿಕಿಯನ್ನು ಕೆಲವು ಅಗಂತುಕರು ಕೊಂದಿದ್ದಾರೆ. ಈ ಕೃತ್ಯವನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ನವರೇ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್ ಖಾನ್​ ಅನ್ನು ಕೊಲ್ಲಲು ಟೊಂಕ ಕಟ್ಟಿ ನಿಂತಿರುವ ಬಿಷ್ಣೋಯಿ ಗ್ಯಾಂಗ್​ ನವರು, ಸಲ್ಮಾನ್ ಖಾನ್​ಗೆ ಆಪ್ತವಾಗಿರುವ ಬಾಬಾ ಸಿದ್ಧಿಕಿಯನ್ನು ಕೊಂದಿದ್ದು, ಇದರ ಜೊತೆಗೆ ತಾವು ಕೊಲ್ಲಲು ನಿರ್ಧರಿಸಿರುವ ಸೆಲೆಬ್ರಿಟಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಪಟ್ಟಿಯಲ್ಲಿ ಕಮಿಡಿಯನ್, ಬಿಗ್​ಬಾಸ್ ವಿನ್ನರ್ ಮುನಾವರ್ ಫಾರೂಖಿ ಹೆಸರು ಸಹ ಇದೆ.

ಮುನಾವರ್ ಸಿದ್ಧಿಕಿಯನ್ನು ಕೊಲ್ಲಲು ಸಹ ಬಿಷ್ಣೋಯಿ ಗ್ಯಾಂಗ್ ಪ್ರಯತ್ನ ಪಟ್ಟಿತಂತೆ. ಈಗಾಗಲೇ ಜೈಲಿನಲ್ಲಿರುವ ಬಿಷ್ಣೋಯಿ ಈ ವಿಷಯ ಹೇಳಿಕೊಂಡಿದ್ದಾನೆ. ಮುನಾವರ್ ಫಾರೂಖಿ, ದೆಹಲಿಗೆ ಬಂದಾಗ ಆತನನ್ನು ನಮ್ಮ ತಂಡದವರು ಫಾಲೋ ಮಾಡಿದ್ದರು, ಫಾರೂಖಿ ಉಳಿದುಕೊಂಡಿದ್ದ ಹೋಟೆಲ್​ನಲ್ಲಿಯೇ ರೂಂ ಸಹ ಬುಕ್ ಮಾಡಿದ್ದರು. ಆದರೆ ಪೊಲೀಸರಿಗೆ ಹೇಗೋ ಮಾಹಿತಿ ಸಿಕ್ಕು ಮುನಾವರ್ ಅನ್ನು ಬೇರೆ ಸ್ಥಳಕ್ಕೆ ಕೊಂಡೊಯ್ದರು. ಇಲ್ಲವಾದರೆ ಮುನಾವರ್​ನನ್ನು ಅಂದೇ ಕೊಲ್ಲುತ್ತಿದ್ದರು ಎಂದು ಹೇಳಿದ್ದಾನೆ. ಈ ವಿಷಯ ಹೊರಬೀಳುತ್ತಿದ್ದಂತೆ ಮುನಾವರ್ ಫಾರೂಖಿಯ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಹತ್ಯೆಗೆಂದು 60 ಶೂಟರ್​ಗಳನ್ನು ನೇಮಿಸಿದ್ದ ಲಾರೆನ್ಸ್ ಬಿಷ್ಣೋಯ್​

ಮುನಾವರ್ ಫಾರೂಖಿ ಗುಜರಾತ್​ನವರಾಗಿದ್ದು ಸ್ಟಾಂಡಪ್​ ಕಾಮೆಡಿಯನ್ ಆಗಿದ್ದಾರೆ. ಆದರೆ 2021 ರಲ್ಲಿ ಹಿಂದೂ ಧರ್ಮದ ಅವಹೇಳನ ಪ್ರಕರಣದಲ್ಲಿ ಮುನಾವರ್ ಜೈಲು ಪಾಲಾಗಿದ್ದರು. ಆ ನಂತರ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಮುನಾವರ್​ನ ಕಾಮಿಡಿ ಶೋಗಳನ್ನು ರದ್ದು ಮಾಡಲಾಯ್ತು. ಆ ನಂತರ ಮುನಾವರ್ ತಾವು ಕಾಮಿಡಿ ಬಿಡುತ್ತಿರುವುದಾಗಿ ಹೇಳಿದ್ದರು. ಅದಾದ ಬಳಿಕ ಕಂಗನಾ ರನೌತ್ ನಡೆಸಿಕೊಟ್ಟ ‘ಲಾಕ್​ ಅಪ್’ ಹೆಸರಿನ ಬಿಗ್​ಬಾಸ್ ಮಾದರಿಯ ರಿಯಾಲಿಟಿ ಶೋಗೆ ಹೋದ ಮುನಾವರ್ ಅಲ್ಲಿ ಬಹುಮಾನ ಗೆದ್ದರು. ಆ ನಂತರ ಬಿಗ್​ಬಾಸ್​ಗೆ ಸಹ ಹೋದ ಮುನಾವರ್ ಅಲ್ಲಿಯೂ ಸಹ ಗೆದ್ದು 50 ಲಕ್ಷ ಮತ್ತು ಒಂದು ಕಾರನ್ನು ಬಹುಮಾನವಾಗಿ ಪಡೆದರು. ಆ ಬಳಿಕ ಮತ್ತೆ ಕಾಮಿಡಿ ಮುಂದುವರೆಸಿದ್ದಾರೆ.

ಮುನಾವರ್, ಸಲ್ಮಾನ್ ಖಾನ್​ರ ಅಭಿಮಾನಿ ಆಗಿದ್ದು ಅದರ ಜೊತೆಗೆ ಹಿಂದೂ ಧರ್ಮದ ಅವಹೇಳನ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದ ಕಾರಣ ಮುನಾವರ್ ಅನ್ನು ಕೊಲ್ಲುವ ಪ್ರಯತ್ನವನ್ನು ಬಿಷ್ಣೋಯಿ ಗ್ಯಾಂಗ್ ಮಾಡಿತ್ತಂತೆ. ಬಿಷ್ಣೋಯಿ ಗ್ಯಾಂಗ್ ಬಿಡುಗಡೆ ಮಾಡಿರುವ ಹಿಟ್​ ಲಿಸ್ಟ್​ನಲ್ಲಿ, ಸಲ್ಮಾನ್ ಖಾನ್, ಬಾಬಾ ಸಿದ್ಧಿಕಿ ಪುತ್ರ ಜೀಶಾನ್ ಸಿದ್ಧಿಕಿ, ಈ ಹಿಂದೆ ಇದೇ ಗ್ಯಾಂಗ್​ನವರು ಕೊಂದಿರುವ ಸಿದ್ಧು ಮೂಸೆವಾಲಾ ಮ್ಯಾನೇಜರ್ ಶಂಗನ್​ಪ್ರೀತ್ ಸಿಂಗ್, ಕುಶಾಲ್ ಚೌಧರಿ ಅಲಿಯಾಸ್ ಗ್ಯಾಂಗ್​ಸ್ಟರಿ ಚೌಧರಿ, ಅಮಿತ್ ದಗಾರ್. ಇದಕ್ಕೆ ಈಗ ಮುನಾವರ್ ಫಾರೂಖಿ ಹೆಸರು ಸೇರಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್