AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುರಸ್ತೆಯಲ್ಲಿ ರವೀನಾ ಟಂಡನ್​ಗೆ ಥಳಿಸಿದ ಜನರು; ಗಲಾಟೆ ಶುರು ಆಗಿದ್ದು ಹೇಗೆ?

‘ದಯವಿಟ್ಟು ನನಗೆ ಹೊಡೆಯಬೇಡಿ. ನನ್ನನ್ನು ತಳ್ಳಬೇಡಿ..’ ಎಂದು ಖ್ಯಾತ ನಟಿ ರವೀನಾ ಟಂಡನ್​ ಅವರು ಬೇಡಿಕೊಂಡಿದ್ದಾರೆ. ತುಂಬ ಗಾಬರಿಯಲ್ಲಿದ್ದ ಅವರನ್ನು ಜನರು ತಳ್ಳಾಡಿದ್ದಾರೆ. ಕೂದಲು ಹಿಡಿದು ಎಳೆದಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ‘ರವೀನಾ ಟಂಡನ್​ ಅವರೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಮೊಹಮ್ಮದ್​ ಎಂಬ ವ್ಯಕ್ತಿಯು ವೈರಲ್​ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ.

ನಡುರಸ್ತೆಯಲ್ಲಿ ರವೀನಾ ಟಂಡನ್​ಗೆ ಥಳಿಸಿದ ಜನರು; ಗಲಾಟೆ ಶುರು ಆಗಿದ್ದು ಹೇಗೆ?
ರವೀನಾ ಟಂಡನ್​
ಮದನ್​ ಕುಮಾರ್​
|

Updated on: Jun 02, 2024 | 4:23 PM

Share

ಬಾಲಿವುಡ್​ನ ಖ್ಯಾತ ನಟಿ ರವೀನಾ ಟಂಡನ್​ (Raveena Tandon) ಅವರು ಶನಿವಾರ ರಾತ್ರಿ ಹಲ್ಲೆಗೆ ಒಳಗಾಗಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ರವೀನಾ ಟಂಡನ್​ ಅವರ ಕಾರು ಚಾಲಕನ ಮೇಲೂ ಜನರು ಹಲ್ಲೆ (Assault) ಮಾಡಿದ್ದಾರೆ. ಈ ಗಲಾಟೆಯಲ್ಲಿ ರವೀನಾ ಟಂಡನ್​ ಕೂಡ ಮಹಿಳೆಯರ ಮೇಲೆ ಕೈ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಘಟನೆಯ ವಿಡಿಯೋ (Raveena Tandon Viral Video) ವೈರಲ್​ ಆಗಿದೆ. ರವೀನಾ ಟಂಡನ್​ ಅವರ ಕಾರು ಚಾಲಕ ರಿವರ್ಸ್​ ತೆಗೆಯುವ ವೇಳೆ ಪಾದಚಾರಿಗಳ ಜೊತೆ ಕಿರಿಕ್​ ಆಗಿದೆ ಎನ್ನಲಾಗಿದೆ.

‘ದಯವಿಟ್ಟು ನನಗೆ ಹೊಡೆಯಬೇಡಿ. ನನ್ನನ್ನು ತಳ್ಳಬೇಡಿ..’ ಎಂದು ರವೀನಾ ಟಂಡನ್​ ಅವರು ಬೇಡಿಕೊಂಡಿದ್ದಾರೆ. ತುಂಬ ಗಾಬರಿಯಲ್ಲಿದ್ದ ಅವರನ್ನು ಜನರು ತಳ್ಳಾಡಿದ್ದಾರೆ. ಕೂದಲು ಹಿಡಿದು ಎಳೆದಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಇನ್ನೂ ದೂರು ದಾಖಲಾಗಿಲ್ಲ ಎಂದು ವರದಿ ಆಗಿದೆ. ಈ ಬಗ್ಗೆ ಸರಿಯಾದ ಚಿತ್ರಣ ಸಿಗುವುದು ಬಾಕಿಯಿದೆ. ನಟಿಯ ಕಡೆಯಿಂದ ಸ್ಪಷ್ಟನೆ ಹೊರ ಬರಬೇಕಿದೆ.

ಇದನ್ನೂ ಓದಿ: ಮಹಿಳೆ ಮೇಲೆ ರವೀನಾ ಟಂಡನ್ ಹಲ್ಲೆ ಆರೋಪ: ವಿಡಿಯೋ ವೈರಲ್

ವೈರಲ್​ ವಿಡಿಯೋದಲ್ಲಿ ಮೊಹಮ್ಮದ್ ಎಂಬ ವ್ಯಕ್ತಿಯು ರವೀನಾ ಟಂಡನ್​ ಮೇಲೆ ಆರೋಪ ಹೊರಿಸಿದ್ದಾರೆ. ‘ನನ್ನ ಹೆಸರು ಮೊಹಮ್ಮದ್​. ನಾನು ಬಾಂದ್ರಾ ನಿವಾಸಿ. ನನ್ನ ತಾಯಿ, ಸಹೋದರಿ ಮುಂತಾದವರ ಜೊತೆ ನಾವು ಹೊರಗೆ ಹೋಗಿದ್ದೆವು. ಅಲ್ಲಿಂದ ವಾಪಸ್​ ಬರುವಾಗ, ರವೀನಾ ಟಂಡನ್​ ಮನೆಯ ಬಳಿ ನನ್ನ ತಾಯಿ ಮೇಲೆ ಅವರ ಚಾಲಕ ಕಾರು ಹತ್ತಿಸಿದ್ದಾನೆ. ಅದನ್ನು ಪ್ರಶ್ನಿಸಿದ್ದಕ್ಕೆ ಆತ ನಮ್ಮ ಮೇಲೆ ಹಲ್ಲೆ ಮಾಡಿದ’ ಎಂದು ಮೊಹಮ್ಮದ್​ ಹೇಳಿದ್ದಾರೆ.

ಹಲ್ಲೆಯ ವೈರಲ್​ ವಿಡಿಯೋ:

‘ರವೀನಾ ಟಂಡನ್​ ಅವರ ಕಾರು ಚಾಲಕ ನನ್ನ ತಾಯಿಗೆ ಹೊಡೆದಿದ್ದಾನೆ. ಅದಾದ ಬಳಿಕ ಕುಡಿದ ನಶೆಯಲ್ಲಿದ್ದ ರವೀನಾ ಟಂಡನ್​ ಅವರು ಕೂಡ ಹೊರಬಂದು ನನ್ನ ತಾಯಿ ಮೇಲೆ ಹಲ್ಲೆ ಮಾಡಿದರು. ತಾಯಿ ತಲೆಗೆ ಪೆಟ್ಟಾಗಿದೆ. ನಾವು ಇಲ್ಲಿ ಪೊಲೀಸ್​ ಠಾಣೆ ಎದುರು ನಾಲ್ಕು ಗಂಟೆಯಿಂದ ನಿಂತಿದ್ದೇವೆ. ನನ್ನನ್ನು ಯಾರೂ ಕೇಳುತ್ತಿಲ್ಲ. ನಮ್ಮ ದೂರನ್ನು ಯಾರೂ ಪಡೆಯುತ್ತಿಲ್ಲ. ರಾಜಿ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ನಾವು ಯಾಕೆ ರಾಜಿ ಮಾಡಿಕೊಳ್ಳಬೇಕು? ನಮಗೆ ನ್ಯಾಯ ಬೇಕು’ ಎಂದು ವೈರಲ್​ ವಿಡಿಯೋದಲ್ಲಿ ಮೊಹಮ್ಮದ್​ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?