AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತೇ ದಿನದಲ್ಲಿ ‘KGF 2’ ಲೈಫ್​​ ಟೈಮ್ ಕಲೆಕ್ಷನ್ ಬ್ರೇಕ್ ಮಾಡಲಿದೆ ‘ಧುರಂಧರ್ 2’

ಧುರಂಧರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದು, ಒಂದೇ ವಾರದಲ್ಲಿ ಸಾವಿರ ಕೋಟಿ ರೂ. ಗಳಿಸಿದೆ. ಹತ್ತೇ ದಿನದಲ್ಲಿ ‘ಕೆಜಿಎಫ್ 2’ರ ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದೆ. ರಣವೀರ್ ಸಿಂಗ್ ನಟನೆಯ ಈ ಚಿತ್ರ ವಿಶ್ವಮಟ್ಟದಲ್ಲಿ ಈಗಾಗಲೇ 1128 ಕೋಟಿ ರೂ. ಸಂಗ್ರಹಿಸಿದೆ. ಟಿಕೆಟ್ ದರ ಏರಿಕೆ ಸಹ ಈ ಯಶಸ್ಸಿಗೆ ಕಾರಣವಾಗಿದೆ.

ಹತ್ತೇ ದಿನದಲ್ಲಿ ‘KGF 2’ ಲೈಫ್​​ ಟೈಮ್ ಕಲೆಕ್ಷನ್ ಬ್ರೇಕ್ ಮಾಡಲಿದೆ ‘ಧುರಂಧರ್ 2’
ರಣವೀರ್-ಯಶ್
ರಾಜೇಶ್ ದುಗ್ಗುಮನೆ
|

Updated on: Mar 28, 2026 | 7:05 AM

Share

‘ಧುರಂಧರ್ 2’ ಸಿನಿಮಾ (Dhurandhar 2 Movie) ಬಾಕ್ಸ್ ಆಫೀಸ್​​​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಕಲೆಕ್ಷನ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಈ ಸಿನಿಮಾ ಒಂದೇ ವಾರಕ್ಕೆ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು 10 ದಿನಕ್ಕೆ ‘ಕೆಜಿಎಫ್ 2’ ಲೈಫ್​​ಟೈಮ್ ದಾಖಲೆಯನ್ನು ಬ್ರೇಕ್ ಮಾಡುವ ಎಲ್ಲಾ ಸೂಚನೆ ಸಿಕ್ಕಿದೆ. ಹೀಗೆಯೇ ಗಳಿಕೆ ಮುಂದುವರಿದರೆ ಸಿನಿಮಾ ಮತ್ತಷ್ಟು ದಾಖಲೆಗಳನ್ನು ಬ್ರೇಕ್ ಮಾಡುವ ಸಾಧ್ಯತೆ ಇದೆ.

‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ ಪಾಲ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ವಿಶ್ವ ಮಟ್ಟದಲ್ಲಿ 1,128 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇಂದು ಚಿತ್ರದ ಕಲೆಕ್ಷನ್ 100 ಕೋಟಿ ರೂಪಾಯಿ ದಾಟಲಿದೆ. ಹಾಗಾದಲ್ಲಿ ‘ಕೆಜಿಎಫ್ 2’ ದಾಖಲೆಯನ್ನು ಈ ಸಿನಿಮಾ 10 ದಿನದಲ್ಲಿ ಬ್ರೇಕ್ ಮಾಡಿದಂತೆ ಆಗಲಿದೆ.

ಯಶ್​ ನಟನೆಯ ‘ಕೆಜಿಎಫ್ 2’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ 1200 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಬಾಲಿವುಡ್​​ನಲ್ಲೂ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಈಗ ಆ ದಾಖಲೆ ಕೇವಲ 10 ದಿನದಲ್ಲಿ ‘ಧುರಂಧರ್ 2’ ಉಡೀಸ್ ಮಾಡಿದೆ.

ಇದನ್ನೂ ಓದಿ: ನಮಗೆ ರಸ್ತೆ ಇಲ್ಲ, 500 ಕೋಟಿ ರೂ. ಕೊಡಿ: ‘ಧುರಂಧರ್ 2’ ತಂಡಕ್ಕೆ ಪಾಕಿಸ್ತಾನಿಗಳ ಮನವಿ

‘ಧುರಂಧರ್ 2’ ಸಿನಿಮಾ ಇಷ್ಟು ಅಬ್ಬರದ ಕಲೆಕ್ಷನ್ ಮಾಡಲು ಚಿತ್ರದ ಟಿಕೆಟ್ ಬೆಲೆ ಕೂಡ ಕಾರಣ. ಹೌದು, ಸಿನಿಮಾ ಟಿಕೆಟ್ ದರವನ್ನು ತಂಡದವರು ಬೇಕಾಬಿಟ್ಟಿ ಏರಿಕೆ ಮಾಡಿದ್ದಾರೆ. ಕರ್ನಾಟಕದಲ್ಲಂತೂ ಮಲ್ಟಿಪ್ಲೆಕ್ಸ್​​ಗಳಲ್ಲಿ 400 ರೂಪಾಯಿಯಿಂದ ಟಿಕೆಟ್ ದರ ಆರಂಭ ಆಗುತ್ತದೆ. ಇದು ಚಿತ್ರಕ್ಕೆ ಲಾಭ ತಂದಿದೆ. ಈ ಸಿನಿಮಾದಿಂದ ಜಿಯೋ ಪ್ರೊಡಕ್ಷನ್ಸ್ ದೊಡ್ಡ ಲಾಭ ಕಾಣುತ್ತಿದೆ. ಈ ಗಳಿಕೆ ಇನ್ನೂ ಕೆಲವು ವಾರ ಮುಂದುವರಿಯುವ ನಿರೀಕ್ಷೆ ಇದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 2000 ಸಾವಿರ ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕೊವಿಡ್ ರೀತಿ ಹೋರಾಟ: ಮೋದಿ ಸಭೆ ಬಳಕ ಸಚಿವ ಮುನಿಯಪ್ಪ ಶಾಕಿಂಗ್​ ಹೇಳಿಕೆ
ಕೊವಿಡ್ ರೀತಿ ಹೋರಾಟ: ಮೋದಿ ಸಭೆ ಬಳಕ ಸಚಿವ ಮುನಿಯಪ್ಪ ಶಾಕಿಂಗ್​ ಹೇಳಿಕೆ
50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು
50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು
ಯತ್ನಾಳ್​​ ನೋಡಲು ಕೋಲಾರದಲ್ಲಿ ಜನವೋ ಜನ
ಯತ್ನಾಳ್​​ ನೋಡಲು ಕೋಲಾರದಲ್ಲಿ ಜನವೋ ಜನ
ಭಾವನಿಂದಲೇ ಬಾಮೈದ ಕೊಲೆ ಕೇಸ್: ನನ್ನ ಮಗನನ್ನ ಅಳಿಯನೇ ಕೊಂದ; ರಂಜಿತ್ ತಾಯಿ
ಭಾವನಿಂದಲೇ ಬಾಮೈದ ಕೊಲೆ ಕೇಸ್: ನನ್ನ ಮಗನನ್ನ ಅಳಿಯನೇ ಕೊಂದ; ರಂಜಿತ್ ತಾಯಿ
ರಾಮನವಮಿ ಮೆರವಣಿಗೆ ವೇಳೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ
ರಾಮನವಮಿ ಮೆರವಣಿಗೆ ವೇಳೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ
ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದ ವಕೀಲನಿಗ ಥಳಿಸಿದ ಅಂಗಡಿ ವ್ಯಾಪಾರಿ
ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದ ವಕೀಲನಿಗ ಥಳಿಸಿದ ಅಂಗಡಿ ವ್ಯಾಪಾರಿ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಕಮಿಷನರ್​ ಹೇಳಿದ್ದಿಷ್ಟು
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಕಮಿಷನರ್​ ಹೇಳಿದ್ದಿಷ್ಟು
ಐಟಿ ಸೇವೆ, ಸ್ಟಾರ್ಟ್​​ ಅಪ್​​ ಹೂಡಿಕೆಯಲ್ಲಿ ದೇಶದ ಈ ನಗರವೇ ನಂ.1
ಐಟಿ ಸೇವೆ, ಸ್ಟಾರ್ಟ್​​ ಅಪ್​​ ಹೂಡಿಕೆಯಲ್ಲಿ ದೇಶದ ಈ ನಗರವೇ ನಂ.1
ಬೈ ಎಲೆಕ್ಷನ್​​: BJP ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರ್ತಾರಾ ಹೆಚ್​​ಡಿಕೆ?
ಬೈ ಎಲೆಕ್ಷನ್​​: BJP ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರ್ತಾರಾ ಹೆಚ್​​ಡಿಕೆ?
ಒಳ್ಳೆ ಹುಡ್ಗ ಪ್ರಥಮ್ ಬೆಂಗಳೂರು ಬಿಟ್ಟಿದ್ದೇಕೆ? ಅವರೇ ಕೊಟ್ಟರು ಕಾರಣ
ಒಳ್ಳೆ ಹುಡ್ಗ ಪ್ರಥಮ್ ಬೆಂಗಳೂರು ಬಿಟ್ಟಿದ್ದೇಕೆ? ಅವರೇ ಕೊಟ್ಟರು ಕಾರಣ