AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಿಗ್ರಾ’ ಚಿತ್ರದಿಂದ ನಷ್ಟ ಅನುಭವಿಸಿದ ಕರಣ್ ಜೋಹರ್, ಆಲಿಯಾ?

ಆಲಿಯಾ ಭಟ್ ನಟಿಸಿ, ಕರಣ್ ಜೋಹರ್ ನಿರ್ಮಾಣ ಮಾಡಿದ್ದ ‘ಜಿಗ್ರಾ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋತಿದೆ ಎನ್ನಲಾಗುತ್ತಿದ್ದು, ಈ ಸಿನಿಮಾಕ್ಕೆ ಆಲಿಯಾ ಸಹ ನಿರ್ಮಾಪಕಿ ಆಗಿದ್ದರು. ಆದರೆ ಸಿನಿಮಾ ಸೋತರೂ ಸಹ ಆಲಿಯಾ ಹಾಗೂ ಕರಣ್ ಹಣ ಮಾಡಿದ್ದಾರೆ ಎನ್ನಲಾಗುತ್ತಿದೆ.

‘ಜಿಗ್ರಾ’ ಚಿತ್ರದಿಂದ ನಷ್ಟ ಅನುಭವಿಸಿದ ಕರಣ್ ಜೋಹರ್, ಆಲಿಯಾ?
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 16, 2024 | 2:13 PM

ಆಲಿಯಾ ಭಟ್ ನಟಿಸಿರೋ ‘ಜಿಗ್ರಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದ ಗಳಿಕೆ ಸುಮಾರು 20 ಕೋಟಿ ರೂಪಾಯಿ ಅಂದಿಟ್ಟುಕೊಳ್ಳಿ. ಆದರೆ, ಚಿತ್ರದ ಬಜೆಟ್ಗೂ ಸಿನಿಮಾದ ಗಳಿಕೆಗೂ ಸಾಕಷ್ಟು ವ್ಯತ್ಯಾಸ ಇದ್ದು, ಇದರಿಂದ ನಿರ್ಮಾಪಕರಾದ ಆಲಿಯಾ ಬಟ್ ಹಾಗೂ ಕರಣ್ ಜೋಹರ್ ನಷ್ಟ ಅನುಭವಿಸಿದರು ಎಂದು ವರದಿಗಳು ಆಗುತ್ತಿವೆ. ಈ ಸಿನಿಮಾ ಕೆಲವು ವಿವಾದಗಳನ್ನು ಕೂಡ ಹುಟ್ಟುಹಾಕಿದೆ ಎಂಬುದು ಇಲ್ಲಿ ಗಮನಿಸಲೇಬೇಕಾದ ವಿಚಾರ ಆಗಿದೆ.

ಆಲಿಯಾ ಭಟ್ ಅವರು ತಾವೇ ನಟಿಸಿದ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಇದೇ ಮೊದಲು. ತಮ್ಮ ಗುರು ಎನಿಸಿಕೊಂಡಿರುವ ಕರಣ್ ಜೋಹರ್ ಜೊತೆ ಸೇರಿ ಅವರು ‘ಜಿಗ್ರಾ’ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದ ಬಜೆಟ್ 80 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾ ಪ್ರಚಾರಕ್ಕಾಗಿ 10 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಈ ಚಿತ್ರ ಗಳಿಸಿರೋದು 20 ಕೋಟಿ ರೂಪಾಯಿ. ಹಾಗಾದರೆ ಸಿನಿಮಾಗೆ ಲಾಭ ಆಗೋದು ಹೇಗೆ?

ಕರಣ್ ಜೋಹರ್ ಅವರು ಮೊದಲಿನಿಂದಲೂ ಉದ್ಯಮದಲ್ಲಿ ಇದ್ದವರು. ಅವರು ಸಿನಿಮಾ ಸಿದ್ಧವಾದ ಬಳಿಕ ಒಟಿಟಿ ಹಕ್ಕು, ಟಿವಿ ಹಕ್ಕುಗಳ ಮಾರಾಟವನ್ನು ಮಾಡಿದ್ದಾರೆ. ಮ್ಯೂಸಿಕ್ ರೈಟ್ಸ್ ಕೂಡ ಮಾರಾಟ ಮಾಡಿದ್ದಾರೆ. ಇದರಿಂದ ಸಿನಿಮಾಗೆ ಹಾಕಿದ 90 ಕೋಟಿ ರೂಪಾಯಿನ ಕರಣ್ ಹಾಗೂ ಆಲಿಯಾ ಭಟ್ ವಸೂಲಿ ಮಾಡಿ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ:ನಷ್ಟದಲ್ಲಿ ಕರಣ್ ಜೋಹರ್? ಧರ್ಮ ಪ್ರೊಡಕ್ಷನ್ ಮಾರಲು ಮುಂದಾದ ನಿರ್ಮಾಪಕ

ಆಲಿಯಾ ಭಟ್ ಅವರು 10-15 ಕೋಟಿ ರೂಪಾಯಿನ ಈ ಚಿತ್ರಕ್ಕಾಗಿ ಪಡೆದಿದ್ದರು. ಅವರ ಸಂಭಾವನೆ ಸ್ಟಾರ್ ಹೀರೋಗಳಿಗೆ ಸಮವಾಗಿದೆ. ಆದರೆ, ಚಿತ್ರದ ಗಳಿಕೆ ಅಂದುಕೊಂಡ ಮಟ್ಟದಲ್ಲಿ ಆಗುತ್ತಿಲ್ಲ. ‘ಜಿಗ್ರಾ’ ಚಿತ್ರವು ಮೊದಲ ದಿನ 4.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ದಿನ ಕಳೆದಂತೆ ಸಿನಿಮಾದ ಗಳಿಕೆ ಕಡಿಮೆ ಆಗುತ್ತಾ ಹೋಗಿದೆ. ಸದ್ಯ 20 ಕೋಟಿ ರೂಪಾಯಿ ಆಸುಪಾಲ್ಲಿ ಕಲೆಕ್ಷನ್ ಇದೆ.

‘ಜಿಗ್ರಾ’ ಚಿತ್ರದ ಕಥೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ‘ಸವಿ’ ಚಿತ್ರದ ಕತೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಹೈ ಸೆಕ್ಯುರಿಟಿ ಜೈಲುನಿಂದ ತಮ್ಮ ಗಂಡನ ರಕ್ಷಿಸುವ ಕೆಲಸವನ್ನು ಪತ್ನಿ ಮಾಡುತ್ತಾರೆ. ‘ಜಿಗ್ರಾ’ದಲ್ಲೂ ಇದೆ ಸಾಮ್ಯತೆ ಇದೆ. ಸಹೋದರಿಯು ತನ್ನ ಸಹೋದರನ ರಕ್ಷಿಸೋ ಕಥೆಯನ್ನು ಇದು ಹೊಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ