ಹಿಂದಿ ಬಿಗ್ ಬಾಸ್​ನಿಂದ ಕೊನೆಗೂ ಹೊರಬಂತು ಕತ್ತೆ

ಈ ಮೊದಲು ಪ್ರಾಣಿ ದಯಾ ಸಂಘದವರಾದ ಪೆಟಾದವರು ಸಲ್ಮಾನ್ ಖಾನ್ ಶೋಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಲ್ಮಾನ್ ಖಾನ್ ಬಳಿ ತಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತರಲು ಕೋರಲಾಗಿತ್ತು. ಕೊನೆಗೂ ಈಗ ಕತ್ತೆಯನ್ನು ಹೊರಕ್ಕೆ ತರಲಾಗಿದೆ.

ಹಿಂದಿ ಬಿಗ್ ಬಾಸ್​ನಿಂದ ಕೊನೆಗೂ ಹೊರಬಂತು ಕತ್ತೆ
ಬಿಗ್ ಬಾಸ್​ಗೆ ಬಂದ ಕತ್ತೆ
Follow us
| Updated By: ರಾಜೇಶ್ ದುಗ್ಗುಮನೆ

Updated on: Oct 15, 2024 | 8:33 AM

‘ಬಿಗ್ ಬಾಸ್ ಹಿಂದಿ ಸೀಸನ್ 18’ ಇತ್ತೀಚೆಗೆ ಆರಂಭ ಆಯಿತು. ಈ ಸೀಸನ್​ಗೆ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಮಹೇಶ್ ಬಾಬು ಅವರ ಅತ್ತಿಗೆ ಶಿಲ್ಪಾ ಶಿರೋಡ್ಕರ್ ಅವರು ದೊಡ್ಮನೆಗೆ ಬಂದಿದ್ದಾರೆ. ಅದೇ ರೀತಿ ಅನಿರುದ್ಧ್ ಆಚಾರ್ಯ ಕೂಡ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಈ ಮಧ್ಯೆ ಬಿಗ್ ಬಾಸ್​ನ ಮನೆಗೆ ಕತ್ತೆ ಕೂಡ ಅತಿಥಿ ಆಗಿ ಬಂದಿತ್ತು. ಈಗ ಈ ಶೋನಿಂದ ಕತ್ತೆಯನ್ನು ಹೊರಕ್ಕೆ ತರಲಾಗಿದೆ.

ಕತ್ತೆಯನ್ನು ಬಿಗ್ ಬಾಸ್​ಗೆ ಏಕೆ ತರಲಾಗಿತ್ತು? ಇದೊಂದು ಪ್ರಯೋಗವೇ ಎನ್ನುವ ಪ್ರಶ್ನೆಯೂ ಮೂಡಿತ್ತು. ಈ ಬಗ್ಗೆ ಯಾವುದೇ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಅನೇಕರು ಈ ವಿಚಾರವಾಗಿ ಧ್ವನಿ ಎತ್ತಿದ್ದರು. ಹೀಗಾಗಿ, ಮ್ಯಾಕ್ಸ್ ಹೆಸರಿನ ಕತ್ತೆಯನ್ನು ಹೊರಕ್ಕೆ ತರಲಾಗಿದೆ. ಇದು ಪ್ರಾಣಿ ಪ್ರಿಯರಿಗೆ ಖುಷಿ ನೀಡಿದೆ.

ಈ ಮೊದಲು ಪ್ರಾಣಿ ದಯಾ ಸಂಘದವರಾದ ಪೆಟಾದವರು ಸಲ್ಮಾನ್ ಖಾನ್ ಶೋಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಲ್ಮಾನ್ ಖಾನ್ ಬಳಿ ತಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತರಲು ಕೋರಲಾಗಿತ್ತು. ಕೊನೆಗೂ ಈಗ ಕತ್ತೆಯನ್ನು ಹೊರಕ್ಕೆ ತರಲಾಗಿದೆ. ಈ ಬಾರಿ ಬಿಗ್ ಬಾಸ್​ನಿಂದ ಹೊರಕ್ಕೆ ಹೋದ ಸ್ಪರ್ಧಿ ಕತ್ತೆಯೇ ಆಗಿದೆ ಅನ್ನೋದು ವಿಶೇಷ.

ಇತ್ತೀಚೆಗೆ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಖಚಿತಪಡಿಸಲಾಯಿತು. ‘ಧನ್ಯವಾದಗಳು ಮೇನಕಾ ಸಂಜಯ್ ಗಾಂಧಿ ಅವರೇ. ಪ್ರಾಣಿಗಳ ಪರವಾಗಿ ಇರುವ ಪಿಎಫ್​ಎನ ಮುಖ್ಯಸ್ಥರಾಗಿ ನೀವು ಕತ್ತೆಯನ್ನು ಹೊರತರುವಲ್ಲಿ ಹೋರಾಡಿದ್ದೀರಿ’ ಎಂದು ಬರೆದುಕೊಳ್ಳಲಾಗಿದೆ.

ಈ ಮೊದಲು ವಾಹಿನಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ‘ಕತ್ತೆಯೂ ಒಂದು ಪ್ರಾಣಿ. ಅದು ಮನರಂಜನೆಗೆ  ಬಳಕೆ ಆಗಬಾರದು. ಅವುಗಳು ಶಬ್ದವನ್ನು ಕಂಡರೆ ಭಯಪಡುತ್ತವೆ. ಹೀಗಾಗಿ, ಇದು ಸರಿ ಅಲ್ಲ. ಸಲ್ಮಾನ್ ಖಾನ್ ಅವರೇ ನಿಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತನ್ನಿ’ ಎಂದು ಆಗ್ರಹಿಸಲಾಗಿತ್ತು.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ ಬಾಬಾ ಸಿದ್ಧಿಕಿ ಹಂತಕರು

ಸಲ್ಮಾನ್ ಖಾನ್ ಅವರ ವಿಚಾರಕ್ಕೆ ಬರೋದಾದರೆ ಅವರ ಆಪ್ತರು ಎನಿಸಿಕೊಂಡಿರುವ ಬಾಬಾ ಸಿದ್ಧಿಕಿ ಅವರನ್ನು ಇತ್ತೀಚೆಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಇದು ಶಾಕಿಂಗ್ ಎನಿಸಿದೆ. ಈ ಘಟನೆಯಿಂದ ಹೊರಕ್ಕೆ ಬರೋಕೆ ಅವರಿಗೆ ಸಾಕಷ್ಟು ಸಮಯ ಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ
ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ