ಆಲ್​ಟೈಮ್ ಸೂಪರ್ ಹಿಟ್ ‘ಗದರ್’ ಸಿನಿಮಾಕ್ಕೆ ಸ್ಪೂರ್ತಿ ಈ ಸೈನಿಕ: ಪ್ರೇಮಕ್ಕಾಗಿ ಮಾಡಿದ್ದ ಅದ್ವಿತೀಯ ಸಾಹಸ

Gadar: ಬಾಲಿವುಡ್​ನ ಎವರ್​ಗ್ರೀನ್ ಪ್ರೇಮಕತೆಗಳಲ್ಲಿ ಒಂದಾದ 'ಗದರ್' ಸಿನಿಮಾಕ್ಕೆ ಪ್ರೇರಣೆ ಈ ಸೈನಿಕ, ಪ್ರೀತಿಗಾಗಿ ಈತ ಮಾಡಿದ ಸಾಹಸ ಸಾಮಾನ್ಯದ್ದಲ್ಲ.

ಆಲ್​ಟೈಮ್ ಸೂಪರ್ ಹಿಟ್ 'ಗದರ್' ಸಿನಿಮಾಕ್ಕೆ ಸ್ಪೂರ್ತಿ ಈ ಸೈನಿಕ: ಪ್ರೇಮಕ್ಕಾಗಿ ಮಾಡಿದ್ದ ಅದ್ವಿತೀಯ ಸಾಹಸ
ಗದರ್
Follow us
|

Updated on:Aug 11, 2023 | 3:35 PM

ಬಾಲಿವುಡ್ (Bollywood) ಸಿನಿಮಾ ಇತಿಹಾಸದಲ್ಲಿ ‘ಲಗಾನ್‘ (Lagaan) ಸಿನಿಮಾಕ್ಕೆ ಪ್ರತ್ಯೇಕ ಸ್ಥಾನವಿದೆ. ಆಸ್ಕರ್ ಮೆಟ್ಟಿಲೇರಿದ್ದ ‘ಲಗಾನ್’ ಭಾರತೀಯರ ಹೆಮ್ಮೆ ಎನಿಸಿಕೊಂಡಿದೆ. ವಿಶೇಷವೆಂದರೆ ‘ಲಗಾನ್’ ಸಿನಿಮಾ ಬಿಡುಗಡೆ ಆದ ಅದೇ ದಿನ ಬಿಡುಗಡೆ ಆಗಿದ್ದ ಮತ್ತೊಂದು ಸಿನಿಮಾ ‘ಲಗಾನ್​’ಗಿಂತಲೂ ದೊಡ್ಡ ಮೊತ್ತದ ಕಲೆಕ್ಷನ್ ಮಾಡಿತ್ತು, ಮಾತ್ರವಲ್ಲ ಬಾಲಿವುಡ್​ನ ಕ್ಲಾಸಿಕ್ ಪ್ರೇಮಕತೆಗಳಲ್ಲಿ ಒಂದು ಎನಿಸಿಕೊಂಡಿತು. ಅದುವೇ ಸನ್ನಿ ಡಿಯೋಲ್ ನಟನೆಯ ‘ಗದರ್’. ಇದೀಗ ಈ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಿದೆ. ಭಾರತ-ಪಾಕಿಸ್ತಾನದ ಕತೆ ಒಳಗೊಂಡಿದ್ದ ಈ ಸಿನಿಮಾ ನಿಜ ವ್ಯಕ್ತಿಯೊಬ್ಬನ ಪ್ರೇಮಕತೆಯನ್ನು ಆಧರಿಸಿದೆ.

‘ಗದರ್’ ಸಿನಿಮಾವು ಬೂಟಾ ಸಿಂಗ್ ಹೆಸರಿನ ಸಿಖ್ ಸೈನಿಕನ ನಿಜ ಜೀವನ ಆಧರಿಸಿದ ಕತೆಯಾಗಿದೆ. ಈ ಬೂಟಾ ಸಿಂಗ್ ಭಾರತದಲ್ಲಿ ಮಾತ್ರವಲ್ಲ ಪಾಕಿಸ್ತಾನದಲ್ಲಿಯೂ ಬಹಳ ಜನಪ್ರಿಯ. ಆತನ ಪ್ರೇಮಕತೆಯೇ ಅಂಥಹದ್ದು, ಬೂಟಾ ಸಿಂಗ್​ನ ಪ್ರೇಮಕತೆಯನ್ನು ಮೂಲವಾಗಿರಿಸಿಕೊಂಡು ‘ಗದರ್’ ಸಿನಿಮಾ ಮಾಡಲಾಗಿದೆ.

ಸಿಖ್ ಸೈನಿಕನಾಗಿದ್ದ ಬೂಟಾ ಸಿಂಗ್ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಬ್ರಿಟೀಷರಿಗಾಗಿ ಕೆಲಸ ಮಾಡುತ್ತಿದ್ದ. ಬರ್ಮಾ ಫ್ರಂಟ್​ನಲ್ಲಿ ಲಾರ್ಡ್ ಮೌಂಟ್​ಬ್ಯಾಟನ್ ಅಡಿಯಲ್ಲ ಬೂಟಾ ಸಿಂಗ್ ಕೆಲಸ ಮಾಡಿದ್ದ. ಭಾರತ-ಪಾಕಿಸ್ತಾನ ಪ್ರತ್ಯೇಕವಾದ ಸಮಯದಲ್ಲಿ ಪೂರ್ವ ಪಂಜಾಬಿನಲ್ಲಿ ನೆಲೆಸಿದ್ದ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ತೆರಳುವಂತೆ ಬಲವಂತ ಮಾಡಲಾಗಿತ್ತು, ಆ ಸಮಯದಲ್ಲಿ ಹಲವಾರು ಮುಸ್ಲಿಂ ಕುಟುಂಬಗಳು ಇದ್ದ ಎಲ್ಲವನ್ನೂ ತೊರೆದು ಪಾಕಿಸ್ತಾನಕ್ಕೆ ತೆರಳಿದ್ದವು, ಹೀಗೆ ತೆರಳುತ್ತಿದ್ದ ಗುಂಪುಗಳ ಮೇಲೆ ಅಲ್ಲಲ್ಲಿ ಹಿಂಸಾಚಾರವೂ ಆಗುತ್ತಿತ್ತು. ಆ ರೀತಿಯ ಗುಂಪಿನಲ್ಲಿದ್ದ ಜುಬೈನ್ ಹೆಸರಿನ ಮಹಿಳೆಯರನ್ನು ಬೂಟಾ ಸಿಂಗ್ ರಕ್ಷಿಸಿದ್ದ. ಹೀಗೆ ತಾನು ರಕ್ಷಿಸಿದ್ದ ಮಹಿಳೆಯ ಮೇಲೆ ಬೂಟಾ ಸಿಂಗ್​ಗೆ ಪ್ರೀತಿಯಾಗಿ ಆಕೆಯನ್ನೇ ವರಿಸಿದ ಅವರಿಗೆ ತನ್ವೀರ್ ಹಾಗೂ ದಿಲ್ವೀರ್ ಹೆಸರಿನ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು.

ಇದನ್ನೂ ಓದಿ:ಗದರ್ 2: ಮತ್ತೆ ಲಾಹೋರ್​ಗೆ ನುಗ್ಗಿದ ತಾರಾ ಸಿಂಗ್, ಈ ಬಾರಿ ಏನು ಕಿತ್ತೊಗೆಯುತ್ತಾನೆ?

ಬಳಿಕ 1957ರಲ್ಲಿ ಸರ್ಕಾರವು ಹೊಸ ಯೋಜನೆಯೊಂದನ್ನು ಆರಂಭಿಸಿ, ತಮ್ಮ ಕುಟುಂಬದಿಂದ ದೂರಾದ ಮುಸ್ಲಿಂ ಮಹಿಳೆಯರು ಪಾಕಿಸ್ತಾನದಲ್ಲಿನ ತಮ್ಮ ಕುಟುಂಬವನ್ನು ಭೇಟಿ ಮಾಡಲು, ಸೇರಲು ಅವಕಾಶ ಮಾಡಿಕೊಟ್ಟಿತು. ಇದೇ ಕಾರಣಕ್ಕೆ ಜುಬೈನ್ ಒಬ್ಬ ಮಗಳೊಟ್ಟಿಗೆ ಪಾಕಿಸ್ತಾನದ ನುರ್​ಪುರ ಹೆಸರಿನ ಹಳ್ಳಿಗೆ ತಮ್ಮ ಕುಟುಂಬವನ್ನು ಭೇಟಿಯಾಗಲು ತೆರಳಿದ್ದರು. ಆದರೆ ಅಲ್ಲಿ ಅವರ ಕುಟುಂಬದವರು ಜುಬೈನ್ ಅನ್ನು ಮತ್ತೆ ಭಾರತಕ್ಕೆ ಬರಲು ಬಿಡಲಿಲ್ಲ. ಜುನೈದ್​ಗೆ ಎರಡನೇ ಮದುವೆ ಆಗಲಿದೆ ಎಂಬ ಸುದ್ದಿ ಇದೇ ಸಂದರ್ಭದಲ್ಲ ಬೂಟಾ ಸಿಂಗ್​ಗೆ ಆಘಾತ ತಂದಿತ್ತು.

ಬೂಟಾ ಸಿಂಗ್, ಪಾಕಿಸ್ತಾನಕ್ಕೆ ತೆರಳಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಮರಳಿ ಪಡೆಯಲು ಹಲವು ಯತ್ನಗಳನ್ನು ಮಾಡಿದರು ಆದರೆ ಯಾವುದೂ ಫಲಿಸಲಿಲ್ಲ, ಕೊನೆಗೆ ಇಸ್ಲಾಂ ಧರ್ಮ ಸ್ವೀಕರಿಸಿ ಕಾನೂನು ಬಾಹಿರವಾಗಿ ಪಾಕಿಸ್ತಾನ ಪ್ರವೇಶಿಸಿದ್ದು ಮಾತ್ರವಲ್ಲದೆ ಪಾಕಿಸ್ತಾನದಲ್ಲಿ ಜುನೈದ್ ಕುಟುಂಬವನ್ನು ಭೇಟಿ ಮಾಡಿ ಪತ್ನಿಯನ್ನು ಕಳಿಸಿಕೊಡುವಂತೆ ಮನವಿ ಮಾಡಿದ. ಆದರೆ ಜುನೈದ್ ಕುಟುಂಬದವರು ಬೂಟಾ ಸಿಂಗ್ ಮೇಲೆ ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿದರು. ನ್ಯಾಯಾಲಯದಲ್ಲಿ ಜುನೈದ್ ಕುಟುಂಬದ ಒತ್ತಡದಿಂದ ಬೂಟಾ ಸಿಂಗ್ ಅನ್ನು ಗುರುತು ಹಿಡಿಯಲು ನಿರಾಕರಿಸಿದರು.

ಇದರಿಂದ ತೀವ್ರವಾಗಿ ಮನನೊಂದ ಬೂಟಾ ಸಿಂಗ್ ಪಾಕಿಸ್ತಾನದ ಶನಾದ್ ರೈಲ್ವೆ ಸ್ಟೇಷನ್​ನಲ್ಲಿ ತನ್ನ ಕಿರಿಯ ಪುತ್ರಿಯೊಡನೆ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ, ಆ ಅಪಘಾತದಲ್ಲಿ ಬೂಟಾ ಸಿಂಗ್ ಮಗಳು ಬದುಕುಳಿದಳು. ಬೂಟಾ ಸಿಂಗ್​ ನ ಈ ಪ್ರೇಮಕತೆ ‘ಗದರ್’ ಮಾತ್ರವೇ ಅಲ್ಲದೆ ‘ವೀರ್ ಜಾರಾ’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಿಗೆ ಪ್ರೇರಣೆ ಒದಗಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Fri, 11 August 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ