AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಅಸಭ್ಯ ಆಂಟಿ ತುಂಬಾನೇ ಓವರ್​ ಆ್ಯಕ್ಟಿಂಗ್​ ಎಂದ ಫ್ಯಾನ್​ಗೆ ಜೆನಿಲಿಯಾ ಡಿಸೋಜಾ ಕೊಟ್ರು ಸೈಲೆಂಟ್​ ಉತ್ತರ

ಜೆನಿಲಿಯಾಗೆ ಕೆಲವರು ಓವರ್​ ಆ್ಯಕ್ಟಿಂಗ್​ ಆಂಟಿ, ನಾಚಿಕೆ ಆಗಬೆಕು ನಿಮಗೆ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ. ಅಷ್ಟೇ ಅಲ್ಲ ನಿಮಗೆ ವಯಸ್ಸಾಗಿದೆ ಎಂದು ಅವರಿಗೆ ಹೇಳಲಾಗಿತ್ತು.

ಈ ಅಸಭ್ಯ ಆಂಟಿ ತುಂಬಾನೇ ಓವರ್​ ಆ್ಯಕ್ಟಿಂಗ್​ ಎಂದ ಫ್ಯಾನ್​ಗೆ ಜೆನಿಲಿಯಾ ಡಿಸೋಜಾ ಕೊಟ್ರು ಸೈಲೆಂಟ್​ ಉತ್ತರ
ಜೆನಿಲಿಯಾ-ರಿತೇಶ್​
TV9 Web
| Edited By: |

Updated on: Sep 29, 2021 | 6:00 PM

Share

ನಟಿ ಜೆನೆಲಿಯಾ ಡಿಸೋಜಾ ಬಾಲಿವುಡ್​ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ನಟಿಸಿದ್ದಾರೆ. ಅವರು ಸದ್ಯ, ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪತಿ ರಿತೇಶ್​​ ದೇಶ್​ಮುಖ್​ ಜತೆ ಫನ್ನಿ ವಿಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುತ್ತಾ ಇರುತ್ತಾರೆ. ಇದು ಅನೇಕರಿಗೆ ಇಷ್ಟವಾಗಿದೆ. ಆದರೆ, ಕೆಲವರಿಗೆ ಇದು ಓವರ್ ಆ್ಯಕ್ಟಿಂಗ್​ ಅನಿಸಿದೆ. ಈ ಬಗ್ಗೆ ಕೆಲವರು ಜೆನಿಲಿಯಾ ಸೋಶಿಯಲ್​ ಮೀಡಿಯಾ ಖಾತೆಯಲ್ಲೇ ಕಮೆಂಟ್​ ಹಾಕಿದ್ದಾರೆ. ಇದಕ್ಕೆ ಜೆನಿಲಿಯಾ ಉತ್ತರ ನೀಡಿದ್ದಾರೆ.

ಜೆನಿಲಿಯಾಗೆ ಕೆಲವರು ಓವರ್​ ಆ್ಯಕ್ಟಿಂಗ್​ ಆಂಟಿ, ನಾಚಿಕೆ ಆಗಬೆಕು ನಿಮಗೆ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ. ಅಷ್ಟೇ ಅಲ್ಲ ನಿಮಗೆ ವಯಸ್ಸಾಗಿದೆ. ಇಬ್ಬರು ಮಕ್ಕಳಿದ್ದಾರೆ. ನಿಮ್ಮ ಅವತಾರ ನೋಡಿ ಮಕ್ಕಳು ಕೂಡ ಶಾಕ್​ ಆಗಬಹುದು. ನಾವು ಕೂಡ ಈ ರೀತಿ ಮಾಡಲ್ಲ’ ಎಂದು ಜೆನಿಲಿಯಾಗೆ ಅಭಿಮಾನಿಯೋರ್ವ ಕಮೆಂಟ್​ ಮಾಡಿದ್ದ.

ಜೆನಿಲಿಯಾ ಸಾಕಷ್ಟು ರಿಯಾಲಿಟಿ ಶೋಗಳಿಗೆ ಜಡ್ಜ್​ ಆಗಿ ತೆರಳುತ್ತಿದ್ದಾರೆ. ಇತ್ತೀಚೆಗೆ ಅವರು ಶೋ ಒಂದಕ್ಕೆ ತೆರಳಿದ್ದರು. ಈ ವೇಳೆ ಅಭಿಮಾನಿಗಳಿಂದ ಬಂದ ಕಮೆಂಟ್​ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಎಲ್ಲರೂ ಜೆನಿಲಿಯಾ ಸಿಟ್ಟಾಗುತ್ತಾರೆ, ಖಡಕ್​ ಆಗಿ ಉತ್ತರಿಸುತ್ತಾರೆ ಎಂದೇ ಭಾವಿಸಿದ್ದರು. ಆದರೆ, ಅವರು ಹೇಳಿದ ರೀತಿಯೇ ಬೇರೆ ರೀತಿಯಲ್ಲಿ ಇತ್ತು.

‘ಬಹುಶಃ ಕಮೆಂಟ್​ ಮಾಡಿದ ವ್ಯಕ್ತಿಯ ದಿನ ಕೆಟ್ಟದಾಗಿತ್ತು ಅನಿಸುತ್ತದೆ. ಮನೆಯಲ್ಲಿ ಏನೋ ಜಗಳವಾಗಿತ್ತು. ಈ ಕಾರಣಕ್ಕೆ ಅವರು ಆ ರೀತಿ ಕಮೆಂಟ್​ ಹಾಕಿರಬಹುದು. ಅವರ ಮನೆಯಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ನಾನು ಭಾವಿಸಿದ್ದೇನೆ’ ಎಂದು ಸೈಲೆಂಟ್​ ಆಗಿ ಉತ್ತರಿಸಿದ್ದಾರೆ ಜೆನಿಲಿಯಾ.

ರಾಜ್​ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಂತರದಲ್ಲಿ ಶಿಲ್ಪಾ ಶೆಟ್ಟಿ ಅಪ್ಸೆಟ್​ ಆಗಿದ್ದರು. ಅವರು ಜಡ್ಜ್​ ಆಗಿದ್ದ ಡ್ಯಾನ್ಸ್​ ಶೋಗೆ ಗೈರಾಗಿದ್ದರು. ಈ ವೇಳೆ ಜೆನಿಲಿಯಾ ಹಾಗೂ ರಿತೇಶ್​​ ಜಡ್ಜ್​ ಆಗಿ ಶೋಗೆ ಆಗಮಿಸಿದ್ದರು.

ಇದನ್ನೂ ಓದಿ: ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಈಗ ಎಲ್ಲಿದ್ದಾರೆಂದು ವಿವರಿಸುತ್ತದೆ ಈ ಫೊಟೊ ಗ್ಯಾಲರಿ!

KBC 13: ಕೆಬಿಸಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ‘ಐ ಲವ್ ಯೂ ಟೂ’ ಎಂದ ಜೆನಿಲಿಯಾ; ಏನಿದು ಸಮಾಚಾರ?

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!