AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮನ್ನು ಸುಮ್ಮನೆ ಬಿಡಲ್ಲ’: ವರದಿಗಾರನಿಗೆ ನೇರವಾಗಿ ಎಚ್ಚರಿಕೆ ನೀಡಿದ ಜಾನ್​ ಅಬ್ರಾಹಂ

‘ವೇದಾ’ ಸಿನಿಮಾದಲ್ಲಿ ಜಾನ್​ ಅಬ್ರಾಹಂ, ಶಾರ್ವರಿ ವಾಘ್ ಮುಂತಾದ ನಟರು ಅಭಿನಯಿಸಿದ್ದಾರೆ. ಆ.15ರಂದು ತೆರೆಕಾಣಲಿರುವ ಈ ಸಿನಿಮಾ ಕೂಡ ಜಾನ್​ ಅಬ್ರಾಹಂ ಅವರ ಹಳೇ ಸಿನಿಮಾಗಳ ರೀತಿಯೇ ಇದೆ ಎಂದು ವರದಿಗಾರರೊಬ್ಬರು ಟೀಕಿಸಿದ್ದಾರೆ. ಸಿನಿಮಾ ನೋಡುವುದಕ್ಕೂ ಮುನ್ನವೇ ಈ ರೀತಿ ಟ್ರೋಲ್​ ಮಾಡಿದ್ದನ್ನು ಜಾನ್​ ಅಬ್ರಾಹಂ ಅವರು ಸಹಿಸಿಕೊಂಡಿಲ್ಲ. ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ.

‘ನಿಮ್ಮನ್ನು ಸುಮ್ಮನೆ ಬಿಡಲ್ಲ’: ವರದಿಗಾರನಿಗೆ ನೇರವಾಗಿ ಎಚ್ಚರಿಕೆ ನೀಡಿದ ಜಾನ್​ ಅಬ್ರಾಹಂ
ಜಾನ್ ಅಬ್ರಾಹಂ
ಮದನ್​ ಕುಮಾರ್​
|

Updated on: Aug 02, 2024 | 9:44 PM

Share

ಹಲವು ತಿಂಗಳ ಬಳಿಕ ನಟ ಜಾನ್​ ಅಬ್ರಹಾಂ ಅವರು ದೊಡ್ಡ ಪರದೆ ಮೇಲೆ ದರ್ಶನ ನೀಡಲು ಬರುತ್ತಿದ್ದಾರೆ. ಅವರು ನಟಿಸಿದ ‘ವೇದಾ’ ಸಿನಿಮಾ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಯಿತು. ನಿಖಿಲ್ ಅಡ್ವಾಣಿ ಅವರು ‘ವೇದಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ ರಿಲೀಸ್​ ವೇಳೆ ಜಾನ್​ ಅಬ್ರಹಾಂ ಅವರಿಗೆ ಕೆಲವು ನಿಷ್ಠುರವಾದ ಪ್ರಶ್ನೆಗಳು ಎದುರಾದವು. ಅವುಗಳಿಗೆ ಉತ್ತರಿಸುವಾಗ ಜಾನ್​ ಅಬ್ರಾಹಂ ಅವರು ಕೋಪಗೊಂಡರು. ಕಿರಿಕಿರಿ ಆಗುವಂತಹ ಪ್ರಶ್ನೆ ಕೇಳಿದ ವರದಿಗಾರನಿಗೆ ಜಾನ್ ಅಬ್ರಹಾಂ ಅವರು ಎಚ್ಚರಿಕೆ ನೀಡಿದರು. ಅಲ್ಲಿ ನಡೆದಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

ಜಾತಿ ಪಿಡುಗಿನ ಬಗ್ಗೆ ‘ವೇದಾ’ ಸಿನಿಮಾದಲ್ಲಿ ತೋರಿಸಲಾಗುವುದು. ಟ್ರೇಲರ್​ನಲ್ಲಿ ಕಥೆ ಬಗ್ಗೆ ಸುಳಿವು ನೀಡಲಾಗಿದೆ. ಆದರೆ ಈ ಸಿನಿಮಾದಲ್ಲಿ ಜಾನ್​ ಅಬ್ರಹಾಂ ಅವರು ಎಂದಿನಂತೆ ಆ್ಯಕ್ಷನ್​ ಮೆರೆಯಲಿದ್ದಾರೆ. ಭರ್ಜರಿಯಾದ ಫೈಟಿಂಗ್​ ಸೀನ್​ ಮೂಲಕ ಅವರು ಜನರನ್ನು ರಂಜಿಸಲು ಬರುತ್ತಿದ್ದಾರೆ. ಇದು ಕೂಡ ಅವರ ಹಳೇ ಸಿನಿಮಾಗಳ ರೀತಿಯೇ ಇದೆ ಎಂಬುದು ವರದಿಗಾರರೊಬ್ಬರ ಅಭಿಪ್ರಾಯವಾಗಿತ್ತು.

ಇದನ್ನೂ ಓದಿ: Vedaa Trailer: ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಜಾನ್​ ಅಬ್ರಾಹಂ, ಶಾರ್ವರಿ ವಾಘ್

‘ಮಾಡಿದ್ದನ್ನೇ ಮಾಡುತ್ತೀರಲ್ಲ.. ಹೊಸದಾಗಿ ಬೇರೆ ಏನಾದರೂ ಮಾಡಿ’ ಎಂದು ಬಹಳ ಉಡಾಫೆಯಿಂದ ವರದಿಗಾರ ಪ್ರಶ್ನೆ ಕೇಳಿದ್ದಾರೆ. ಅದರಿಂದ ಜಾನ್​ ಅಬ್ರಾಹಂ ಅವರಿಗೆ ಸಿಟ್ಟು ಬಂತು. ‘ನೀವು ಸಿನಿಮಾ ನೋಡಿದ್ದೀರಾ? ನಾನು ಮೂರ್ಖರನ್ನು ಮತ್ತು ಕೆಟ್ಟ ಪ್ರಶ್ನೆಗಳನ್ನು ಖಂಡಿಸಬಹುದಾ’ ಎಂದು ಜಾನ್​ ಅಬ್ರಾಹಂ ಅವರು ಗರಂ ಆದರು. ಅಲ್ಲದೇ ಈ ಸಿನಿಮಾ ಡಿಫರೆಂಟ್​ ಆಗಿದೆ ಎಂದು ಹೇಳಿದರು.

‘ಈ ಸಿನಿಮಾ ಭಿನ್ನವಾಗಿದೆ ಅಂತ ನಾನು ನೇರವಾಗಿ ಹೇಳುತ್ತೇನೆ. ನನ್ನ ಪ್ರಕಾರ ನಾನು ಈ ಚಿತ್ರದಲ್ಲಿ ಗಾಢವಾಗಿ ಅಭಿನಯಿಸಿದ್ದೇನೆ. ನೀವಂತೂ ಈ ಸಿನಿಮಾ ನೋಡಿಲ್ಲ. ಕೇವಲ ಟ್ರೇಲರ್​ ನೋಡಿದ್ದೀರಿ ಅಷ್ಟೇ. ಮೊದಲು ನೀವು ಸಿನಿಮಾ ನೋಡಿ. ಆಮೇಲೆ ಜಡ್ಜ್​ ಮಾಡಿ. ನಂತರ ನೀವು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ನಿಮ್ಮ ಅಭಿಪ್ರಾಯ ತಪ್ಪಾಗಿದ್ದರೆ ನಾನು ನಿಮ್ಮನ್ನು ಸುಮ್ಮನೆ ಬಿಡಲ್ಲ’ ಎಂದು ಜಾನ್​ ಅಬ್ರಾಹಂ ಅವರು ವರದಿಗಾರನಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್