AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kareena Kapoor: ಕರೀನಾ- ಸೈಫ್ ಮಧ್ಯೆ ಬಿಸಿಬಿಸಿ ಚರ್ಚೆ; ಕಾರಣವಾದರೂ ಏನು?

Saif Ali Khan: ಬಾಲಿವುಡ್ ನಟಿ ಕರೀನಾ ಕಪೂರ್ ಚಿತ್ರರಂಗದಿಂದ ದೀರ್ಘ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ನಟಿ ಮತ್ತೆ ತೆರೆಯ ಮೇಲೆ ಬಂದಿದ್ದಾರೆ. ಅದೂ ಪತಿ ಸೈಫ್ ಜತೆಗೂಡಿ. ಆದರೆ ಬೆಳ್ಳಿತೆರೆಯ ಮೇಲಲ್ಲ! ಮತ್ತೆಲ್ಲಿ?

Kareena Kapoor: ಕರೀನಾ- ಸೈಫ್ ಮಧ್ಯೆ ಬಿಸಿಬಿಸಿ ಚರ್ಚೆ; ಕಾರಣವಾದರೂ ಏನು?
ಕರೀನಾ ಕಪೂರ್, ಸೈಫ್ ಅಲಿ ಖಾನ್
TV9 Web
| Edited By: |

Updated on:Jan 29, 2022 | 8:51 AM

Share

ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಕಳೆದ ಕೆಲವು ಸಮಯದಿಂದ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ಮೊದಲಿನಂತೆ ಸಕ್ರಿಯರಾಗುತ್ತಿದ್ದಾರೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ದ (Laal Singh Chaddha) ಕೆಲಸಗಳನ್ನು ಅವರು ಪೂರ್ತಿ ಮಾಡಿದ್ದಾರೆ. ಆದರೆ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಂಡು, ಅಧಿಕೃತವಾಗಿ ಘೋಷಿಸಿಲ್ಲ. ಇದರಿಂದಾಗಿ ಅಭಿಮಾನಿಗಳು ಕರೀನಾರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಬೇಕೆಂದರೆ ‘ಲಾಲ್ ಸಿಂಗ್ ಛಡ್ಡಾ’ ತೆರೆಕಾಣುವವರೆಗೆ ಕಾಯಬೇಕು. ಆದರೆ ಇದೀಗ ಬೆಬೊ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಅದೂ ಪತಿ ಸೈಫ್ ಅಲಿ ಖಾನ್ (Saif Ali Khan) ಜತೆ ತೆರೆ ಹಂಚಿಕೊಳ್ಳುವ ಮೂಲಕ. ಹೌದು. ಈ ತಾರಾ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದಲ್ಲದೇ, ತೆರೆಯ ಮೇಲೆ ತೀವ್ರ ಚರ್ಚೆಯನ್ನೂ ನಡೆಸಿದ್ದಾರೆ. ಆಮೇಲೇನಾಯ್ತು? ಏನಿದು ಸಮಾಚಾರ ಅಂತೀರಾ?

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್​ಗೆ ಜಾಹಿರಾತು ಕ್ಷೇತ್ರದಲ್ಲಿ ದೊಡ್ಡ ಬೇಡಿಕೆ ಇದೆ. ಕರೀನಾ ಚಿತ್ರಗಳಿಂದ ಬ್ರೇಕ್ ಪಡೆದಿದ್ದರೂ, ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರಸ್ತುತ ಅವರು ಜಾಹಿರಾತೊಂದರಲ್ಲಿ ಬಣ್ಣಹಚ್ಚಿದ್ದಾರೆ. ವಿಶೇಷವೆಂದರೆ ಕರೀನಾಗೆ ಅವರ ಪತಿ ಸೈಫ್ ಅಲಿ ಖಾನ್ ಸಾಥ್ ನೀಡಿದ್ದಾರೆ. ಈರ್ವರು ಜತೆಯಾಗಿ ತೆರೆಹಂಚಿಕೊಂಡಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಖಾಸಗಿ ಕಂಪನಿಯೊಂದು ಇತ್ತೀಚೆಗೆ ತನ್ನ ಬ್ರಾಂಡ್ ಹೆಸರನ್ನು ಬದಲಿಸಿತ್ತು. ಈ ಕುರಿತ ಜಾಹಿರಾತಿನಲ್ಲಿ ಕರೀನಾ ಹಾಗೂ ಸೈಫ್ ಕಾಣಿಸಿಕೊಂಡಿದ್ದಾರೆ. ಸೈಫ್ ವಸ್ತುಗಳನ್ನು ಗ್ರಾಹಕರಿಗೆ ನೀಡುವ ಮಳಿಗೆಯವನಾಗಿ ಕಾಣಿಸಿಕೊಂಡಿದ್ದು, ಕರೀನಾ ಗ್ರಾಹಕರಾಗಿ ಕಾಣಿಸಿಕೊಂಡಿದ್ದಾರೆ. ಮಜವಾಗಿ ಮೂಡಿಬಂದಿರುವ ಜಾಹಿರಾತಿನಲ್ಲಿ ಕರೀನಾ ಹಾಗೂ ಸೈಫ್ ನಡುವೆ ಬಿಸಿಬಿಸಿ ಚರ್ಚೆಯೂ ನಡೆದಿದೆ. ಕೊನೆಗೆ ಕರೀನಾರನ್ನು ಸೈಫ್ ಮನವೊಲಿಸಿ, ಕಂಪನಿಯ ಬ್ರಾಂಡ್ ಬದಲಾಗಿದ್ದನ್ನು ತಿಳಿಸಿಕೊಡುತ್ತಾರೆ. ಅಲ್ಲದೇ ಸೈಫ್, ನೀವು ಕೋಪಗೊಂಡಾಗ ಕರೀನಾ ಕಪೂರ್ ರೀತಿ ಕಾಣುತ್ತೀರಿ ಎಂದು ನುಡಿದಿದ್ದಾರೆ. ಅಲ್ಲಿಗೆ ಜಾಹಿರಾತು ಮುಕ್ತಾಯವಾಗಿದೆ. ಕೊನೆಯಲ್ಲಿರುವ ಈರ್ವರ ಸಂಭಾಷಣೆಯನ್ನು ಉಲ್ಲೇಖಿಸಿರುವ ಫ್ಯಾನ್ಸ್ ಕಾಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸೈಫ್ ಹಾಗೂ ಕರೀನಾ ಕಾಣಿಸಿಕೊಂಡ ಜಾಹಿರಾತು ಇಲ್ಲಿದೆ:

ಕರೀನಾ ಹಾಗೂ ಸೈಫ್​ ಕಾಣಿಸಿಕೊಂಡಿರುವ ಈ ಜಾಹಿರಾತು ಬಾಲಿವುಡ್ ತಾರೆಯರ ಮನವನ್ನೂ ಗೆದ್ದಿದೆ. ರಣವೀರ್ ಸಿಂಗ್ ಕಾಮೆಂಟ್ ಮಾಡಿ, ‘ಹಹ್ಹಾ, ಇಷ್ಟವಾಯಿತು’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕರೀನಾರ ಪಾತ್ರವನ್ನು ಅವರ ಸೂಪರ್ ಹಿಟ್ ಚಿತ್ರ ‘ಜಬ್ ವಿ ಮೆಟ್​​’ನ ಪಾತ್ರಕ್ಕೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕರೀನಾ- ಸೈಫ್ ಮತ್ತೆ ಫ್ಯಾನ್ಸ್ ಹೃದಯ ಕದ್ದಿದ್ದಾರೆ ಎಂದರೆ ತಪ್ಪಿಲ್ಲ.

ಚಿತ್ರಗಳ ವಿಷಯಕ್ಕೆ ಬಂದರೆ ಕರೀನಾ ಸದ್ಯ ಏಕ್ತಾ ಕಪೂರ್ ಜತೆಗೂಡಿ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಹನ್ಸಲ್ ಮೆಹ್ತಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೈಫ್ ಅಲಿ ಖಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಭೂತ್ ಪೊಲೀಸ್’ನಲ್ಲಿ. ಅವರ ಬತ್ತಳಿಕೆಯಲ್ಲಿ ‘ಆದಿ ಪುರುಷ್’, ‘ವಿಕ್ರಮ್ ವೇದ’ ಮೊದಲಾದ ಬಹುನಿರೀಕ್ಷಿತ ಚಿತ್ರಗಳಿವೆ.

ಇದನ್ನೂ ಓದಿ:

‘ನೀನೇ ನನ್ನ ಹೆಂಡ್ತಿ’ ಎಂದು ನಂಬಿಸಿ, ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪ; ಕನ್ನಡ ಸಿನಿಮಾ ನಿರ್ಮಾಪಕನ​ ಬಂಧನ

ನಟಿ ಪ್ರೇಮಾ ಲಾಯರ್​ ಪಾತ್ರ ಪ್ರೇಮಾ ಒಪ್ಕೊಂಡಿದ್ಯಾಕೆ? ಇಲ್ಲಿದೆ ಅವರ ಉತ್ತರ

Published On - 8:42 am, Sat, 29 January 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್