AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಪ್ರಾರಂಭವಾಗುವುದಿಲ್ಲ ಕಾಫಿ ವಿತ್ ಕರಣ್​; ಭಾವನಾತ್ಮಕ ಸಾಲುಗಳ ಮೂಲಕ ವಿಷಯ ತಿಳಿಸಿದ ಕರಣ್​ ಜೋಹರ್​ !

ಕಾಫಿ ವಿತ್​ ಕರಣ್​ದ ಕೊನೇ ಶೋ 2019ರಲ್ಲಿ ನಡೆದಿದೆ. ಅಲ್ಲಿಂದ ಇಲ್ಲಿಯವರೆಗೆ ಹೊಸ ಸೀಸನ್​ ಶುರುವಾಗಿರಲಿಲ್ಲ. ಆದರೆ ಈ ಬಾರಿ ಪಕ್ಕಾ ಪ್ರಾರಂಭವಾಗಲಿದೆ. ಮೇ ತಿಂಗಳಿಂದ ಕರಣ್​ ಶೂಟಿಂಗ್​​ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಲವೇ ದಿನಗಳ ಹಿಂದೆ ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. 

ಮತ್ತೆ ಪ್ರಾರಂಭವಾಗುವುದಿಲ್ಲ ಕಾಫಿ ವಿತ್ ಕರಣ್​; ಭಾವನಾತ್ಮಕ ಸಾಲುಗಳ ಮೂಲಕ ವಿಷಯ ತಿಳಿಸಿದ ಕರಣ್​ ಜೋಹರ್​ !
ಕಾಫಿ ವಿತ್​ ಕರಣ್​
TV9 Web
| Updated By: Lakshmi Hegde|

Updated on:May 04, 2022 | 6:38 PM

Share

ಹಿಂದಿಯ ಖ್ಯಾತ ಶೋ ಕಾಫಿ ವಿತ್​ ಕರಣ್ (Koffee With Karan)​ ಮತ್ತೆ ಶುರುವಾಗೋದಿಲ್ಲ. ಕರಣ್​ ಜೋಹರ್​ ನಿರೂಪಣೆ ಮಾಡುತ್ತಿದ್ದ ಈ ಕಾರ್ಯಕ್ರಮದ ಪಾಸಿಟಿವ್​ ಆಗಿ ಎಷ್ಟು ಜನಪ್ರಿಯವಾಗಿತ್ತೋ, ಅಷ್ಟೇ ವಿವಾದಗಳಿಂದಲೂ ಪ್ರಸಿದ್ಧಿ ಪಡೆದಿತ್ತು. ಕಳೆದ ಸೀಸನ್​​ನಲ್ಲಿ ಕೂಡ ಸಾಕಷ್ಟು ವಿವಾದ ಉಂಟು ಮಾಡಿದ್ದ ಕಾಫಿ ವಿತ್​ ಕರಣ್​, ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಆರಂಭವಾಗಲಿದೆ. ಹೊಸ ಸೀಸನ್ (7ನೇ ಸೀಸನ್​)​ ಶುರುಮಾಡಲು ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಅಭಿಮಾನಿಗಳಿಗೆ ಕರಣ್ ಜೋಹರ್ ಒಂದು ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ.  ‘ಕಾಫಿ ವಿತ್​ ಕರಣ್​’ ಹೊಸ ಸೀಸನ್​ ನಡೆಯೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ, ಈ ಬಗ್ಗೆ ಒಂದು ಭಾವನಾತ್ಮಕ ಬರಹವನ್ನು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕಾಫಿ ವಿತ್​ ಕರಣ್​ ಎಂಬುದು ಅತ್ಯಂತ ಹಳೇ ಶೋ. 2004ರಲ್ಲಿ ಮೊದಲು ಪ್ರಾರಂಭವಾದ ಈ ಕಾರ್ಯಕ್ರಮ ಮುಂದೆ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿತು. ಬರಬರುತ್ತ ಈ ಶೋ ನೋಡುವವರ ಸಂಖ್ಯೆಯೂ ಏರಿತು. ಶೋದಲ್ಲಿ ದೊಡ್ಡದೊಡ್ಡ ಸ್ಟಾರ್​ಗಳೆಲ್ಲ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು. ಅದರೊಂದಿಗೆ ಈ ಶೋದಲ್ಲಿ ಕರಣ್​ ಕೇಳುವ ಕೆಲವು ಪ್ರಶ್ನೆಗಳು, ಉತ್ತರಕ್ಕಾಗಿ ನೀಡುವ  ಆಯ್ಕೆಗಳೆಲ್ಲ ವಿವಾದ ಸೃಷ್ಟಿಸಿದ್ದವು. ಒಂದಷ್ಟು ಸ್ಟಾರ್ ನಟ/ನಟಿಯರು ಬೇಸರ ಮಾಡಿಕೊಂಡಿದ್ದೂ ಇದೆ. ಇಷ್ಟೆಲ್ಲ ಆದರೂ ಅದೊಂದು ಭರ್ಜರಿ ಟಿಆರ್​ಪಿ ಇರುವ ಶೋ ಆಗಿತ್ತು.

ಕಾಫಿ ವಿತ್​ ಕರಣ್​ದ ಕೊನೇ ಶೋ 2019ರಲ್ಲಿ ನಡೆದಿದೆ. ಅಲ್ಲಿಂದ ಇಲ್ಲಿಯವರೆಗೆ ಹೊಸ ಸೀಸನ್​ ಶುರುವಾಗಿರಲಿಲ್ಲ. ಆದರೆ ಈ ಬಾರಿ ಪಕ್ಕಾ ಪ್ರಾರಂಭವಾಗಲಿದೆ. ಮೇ ತಿಂಗಳಿಂದ ಕರಣ್​ ಶೂಟಿಂಗ್​​ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಲವೇ ದಿನಗಳ ಹಿಂದೆ ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿದ್ದವು.  ಆದರೆ ಕರಣ್​ ಜೋಹರ್​ ಈಗ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದಾರೆ. ‘ ಕಾಫಿ ವಿತ್​ ಕರಣ್​ ಎಂಬುದು ನನ್ನ ಮತ್ತು ನಿಮ್ಮೆಲ್ಲರ (ವೀಕ್ಷಕರ) ಜೀವನದ ಒಂದು ಭಾಗವೇ ಆಗಿಹೋಗಿತ್ತು. ಈ ಶೋ ಆರು ಸೀಸನ್​​ಗಳನ್ನು ಪೂರ್ಣಗೊಳಿಸಿದೆ. ಹಾಗೇ ನಾವು ವೀಕ್ಷಕರ ಮೇಲೆ ಪ್ರಭಾವ ಬೀರಿದ್ದೇವೆ ಮತ್ತು ಪಾಪ್​ ಸಂಸ್ಕೃತಿಯ (ಇಂದಿನ ಯುವಜನರು ಇಷ್ಟಪಡುವ ಆಧುನಿಕ ಸಂಸ್ಕೃತಿ) ಇತಿಹಾಸದಲ್ಲಿ ಸ್ಥಾನ ಪಡೆದಿದ್ದೇವೆ ಎಂಬ ನಂಬಿಕೆ ನನಗೆ ಇದೆ. ಆದರೆ ಇನ್ನು ಮುಂದೆ ಕಾಫಿ ವಿತ್​ ಕರಣ್ ಎಂಬ ಶೋ ಇರುವುದಿಲ್ಲ. ಹೊಸ ಸೀಸನ್​ ಶುರುವಾಗುವುದಿಲ್ಲ ಎಂಬುದನ್ನು ಅತ್ಯಂತ ಭಾರವಾದ ಹೃದಯದಿಂದ ನಾನು ನಿಮಗೆ ತಿಳಿಸುತ್ತಿದ್ದೇನೆ’ ಎಂದು ಕರಣ್​ ಜೋಹರ್​ ಬರೆದಿದ್ದಾರೆ.

ಅಭಿಮಾನಿಗಳಿಗಿತ್ತು ಕುತೂಹಲ ಕಾಫಿ ವಿತ್​ ಕರಣ್​ ಶೋ ಮತ್ತೆ ಬರಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಅದರ ವೀಕ್ಷಕರು, ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಅದೂ ಕೂಡ ಪ್ರೀ ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿಬಿಟ್ಟಿವೆ. ಕರಣ್​ ಜೋಹರ್​ ಅವರು ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಶೂಟಿಂಗ್​ನಲ್ಲಿದ್ದು, ಅದು ಕೊನೇ ಹಂತದಲ್ಲಿ. ಮೇ ತಿಂಗಳಲ್ಲಿ ಕಾಫಿ ವಿತ್​ ಕರಣ್​ ಶೂಟಿಂಗ್​ ನಡೆಯಲಿದೆ ಎಂದು ಹೇಳಲಾಗಿತ್ತು. ಈ ಬಾರಿ ಯಾರೆಲ್ಲ ಅತಿಥಿಗಳು ಬರಬಹುದು ಎಂಬ ಚರ್ಚೆ ಅದಾಗಲೇ ಶುರುವಾಗಿತ್ತು. ರಷ್ಮಿಕಾ ಮಂದಣ್ಣ ಕೂಡ ಕಾಫಿ ವಿತ್​ ಕರಣ್​ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ವರದಿಯಾಗಿತ್ತು.

ನೆಟ್ಟಿಗರಿಗೆ ನಂಬಿಕೆಯಿಲ್ಲ

ಇನ್ನು ಕರಣ್ ಜೋಹರ್ ಸೋಷಿಯಲ್​ ಮೀಡಿಯಾ ಪೋಸ್ಟ್ ಹಾಕಿದ್ದರೂ ಕೂಡ ನೆಟ್ಟಿಗರು ಅದನ್ನು ನಂಬುತ್ತಿಲ್ಲ. ಕಾಫಿ ವಿತ್​ ಕರಣ್​ ಶೋ ಇರುವುದಿಲ್ಲ ಎಂದು ನೀವು ತಮಾಷೆ ಮಾಡುತ್ತಿದ್ದೀರಿ. ಖಂಡಿತ ಶುರುವಾಗುತ್ತದೆ ಎಂದು ಅನೇಕರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸೀಸನ್​ 7 ಮತ್ತೆ ಶುರುವಾಗುತ್ತದೆ ಎಂದು ಅನೇಕರು ಭರವಸೆ ವ್ಯಕ್ತಪಡಿಸಿದ್ದಾರೆ. ನಾವು ಕಾಯುತ್ತಿರುತ್ತೇವೆ, ಮತ್ತೊಂದು ಸೀಸನ್​​ ಮೂಲಕ ಬನ್ನಿ ಎಂದು ಒಂದಷ್ಟು ಜನರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Siddaramaiah Press Meet: ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕೂಡಲೇ ವಜಾಗೊಳಿಸಬೇಕು; ಸಿದ್ದರಾಮಯ್ಯ ಒತ್ತಾಯ

Published On - 12:52 pm, Wed, 4 May 22

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ