AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿ ವಿಚಾರಕ್ಕೆ ಬಾಲಿವುಡ್​ ನಟನಿಗೆ ಥಳಿಸಲು ಬಂದಿದ್ದ 25 ಹುಡುಗರು; ಕೈಮುಗಿದ ಬೇಡಿಕೊಂಡಿದ್ದ ಹೀರೋ

Rajkummar Rao ಇಂದು ಶಿಸ್ತಿನ ನಟ ಆಗಿರುವ ರಾಜ್​ಕುಮಾರ್​ ರಾವ್​ ಅವರು ಶಾಲೆಯ ದಿನಗಳಲ್ಲಿ ರೌಡಿ ರೀತಿ ವರ್ತಿಸುತ್ತಿದ್ದರು. ಆದರೆ 11ನೇ ತರಗತಿಗೆ ಬಂದಾಗ ಅವರು ಬದಲಾದರು.

ಹುಡುಗಿ ವಿಚಾರಕ್ಕೆ ಬಾಲಿವುಡ್​ ನಟನಿಗೆ ಥಳಿಸಲು ಬಂದಿದ್ದ 25 ಹುಡುಗರು; ಕೈಮುಗಿದ ಬೇಡಿಕೊಂಡಿದ್ದ ಹೀರೋ
ರಾಜ್​ಕುಮಾರ್​ ರಾವ್
TV9 Web
| Edited By: |

Updated on: Aug 31, 2021 | 3:08 PM

Share

ಕಾಲೇಜು ದಿನಗಳಲ್ಲಿ ಎಲ್ಲರೂ ಇಂಥ ಘಟನೆಯನ್ನು ಹತ್ತಿರದಿಂದ ನೋಡಿರುತ್ತಾರೆ. ಒಂದು ಹುಡುಗಿಯ ಹಿಂದೆ ಹಲವು ಹುಡುಗರು ಬಿದ್ದರೆ ಅಲ್ಲಿ ಹೊಡೆದಾಟ ನಡೆಯುವುದು ಗ್ಯಾರಂಟಿ. ಬಾಲಿವುಡ್​ ನಟ ರಾಜ್​ಕುಮಾರ್​ ರಾವ್​ ಅವರ ಬದುಕಿನಲ್ಲೂ ಇಂಥದ್ದೊಂದು ಘಟನೆ ನಡೆದಿತ್ತು. ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಅವರು ಆ ಬಗ್ಗೆ ಮಾತನಾಡಿದ್ದರು. ಇಂದು (ಆ.31) ರಾಜ್​ಕುಮಾರ್​ ರಾವ್​ ಜನ್ಮದಿನ. ಈ ಪ್ರಯುಕ್ತ ಆ ಹಳೇ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ.

ಇಂದು ಶಿಸ್ತಿನ ನಟ ಆಗಿರುವ ರಾಜ್​ಕುಮಾರ್​ ರಾವ್​ ಅವರು ಶಾಲೆಯ ದಿನಗಳಲ್ಲಿ ರೌಡಿ ರೀತಿ ವರ್ತಿಸುತ್ತಿದ್ದರು. ಆದರೆ 11ನೇ ತರಗತಿಗೆ ಬಂದಾಗ ಅವರು ಬದಲಾದರು. ಅವರು ಅಪ್ಟಟ ಶಾರುಖ್​ ಖಾನ್ ಅಭಿಮಾನಿ ಆಗಿದ್ದರು. ‘ಕುಚ್​ ಕುಚ್ ಹೋತಾ ಹೈ’ ಸಿನಿಮಾ ಶೈಲಿಯಲ್ಲೇ ಕಾಲೇಜಿನ ಬಾಸ್ಕೆಟ್​ ಬಾಲ್​ ಮೈದಾನದಲ್ಲಿ ಅವರು ಹುಡುಗಿಯೊಬ್ಬಳನ್ನು ನೋಡಿ ಫಿದಾ ಆದರಂತೆ. ಮನದಲ್ಲಿ ಅವರಿಗೆ ಪ್ರೀತಿ ಕೂಡ ಚಿಗುರೊಡೆದಿತ್ತು. ಆಕೆಯ ಜೊತೆ ಅವರು ಡೇಟಿಂಗ್​ ಮಾಡಲು ಶುರುಮಾಡಿದರು. ಆಗಲೇ ಶುರುವಾಗಿದ್ದು ಕಿರಿಕ್​.

ದುರಂತ ಎಂದರೆ ಆ ಹುಡುಗಿಗೆ ಈಗಾಗಲೇ ಒಬ್ಬ ಬಾಯ್​ ಫ್ರೆಂಡ್​ ಇದ್ದ. ರಾಜ್​ಕುಮಾರ್​ ಜೊತೆ ಆಕೆ ಸುತ್ತುವುದನ್ನು ನೋಡಿದ ಆತ 25 ಹುಡುಗರನ್ನು ಕರೆದುಕೊಂಡು ಬಂದು ರಾಜ್​ಕುಮಾರ್​ಗೆ ಥಳಿಸಲು ಶುರುಮಾಡಿದ. ಹೀರೋ ಆಗಬೇಕು ಎಂದು ಕನಸು ಕಂಡಿದ್ದ ರಾಜ್​ಕುಮಾರ್​ಗೆ ಆಗ ಕಾಡುತ್ತಿದ್ದದ್ದು ಮುಖದ ಚಿಂತೆ. ‘ದಯವಿಟ್ಟು ಮುಖಕ್ಕೆ ಹೊಡೆಯಬೇಡಿ. ನಾನು ಸಿನಿಮಾ ನಟ ಆಗಬೇಕು’ ಎಂದು ಅವರು ಕೂಗಿದ್ದರು!

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಜ್​ಕುಮಾರ್​ ರಾವ್​ ಅವರಿಗೆ ಅಭಿಮಾನಿಗಳು, ಸೇಹ್ನಿತರು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ಬಾಲ್ಯದಲ್ಲಿ ಕಂಡ ಕನಸಿನಂತೆಯೇ ಅವರು ಬಾಲಿವುಡ್​ನಲ್ಲಿ ಸ್ಟಾರ್​ ನಟನಾಗಿದ್ದಾರೆ. ಸಿಟಿ ಲೈಟ್ಸ್​, ಬರೇಲಿ ಕಿ ಬರ್ಫಿ, ಶಾಹಿದ್​ ಮುಂತಾದ ಸಿನಿಮಾಗಳಲ್ಲಿನ ಅವರ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಸದ್ಯ ಹಲವು ಪ್ರಾಜೆಕ್ಟ್​ಗಳಲ್ಲಿ ರಾಜ್​ಕುಮಾರ್​ ರಾವ್​ ಬ್ಯುಸಿ ಆಗಿದ್ದಾರೆ. ಓಟಿಟಿಯಿಂದಲೂ ಅವರಿಗೆ ಅನೇಕ ಆಫರ್​ಗಳು ಬರುತ್ತಿವೆ. ಜನ್ಮದಿನದ ಅಂಗವಾಗಿ ಅವರಿಗೆ ಸೋಶಿಯಲ್​ ಮೀಡಿಯಾಗಳಲ್ಲಿ ಬರ್ತ್​ಡೇ ವಿಶ್​ಗಳು ಹರಿದು ಬರುತ್ತಿವೆ.

ಇದನ್ನೂ ಓದಿ:

ಶೂಟಿಂಗ್ ವೇಳೆಯೇ ಬಾಲಿವುಡ್​ ಖ್ಯಾತ ನಿರ್ದೇಶಕನಿಗೆ ತಾಲಿಬಾನಿಗಳಿಂದ ಬಂತು ಜೀವ ಬೆದರಿಕೆ

ಶೀಘ್ರವೇ ಹಾಲಿವುಡ್​ಗೆ ಹಾರಲಿದ್ದಾರೆ ಕಂಗನಾ? ಬಾಲಿವುಡ್​ ಅಂಗಳದಲ್ಲಿ ಹೊಸ ಸುದ್ದಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್