Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿ ವಿಚಾರಕ್ಕೆ ಬಾಲಿವುಡ್​ ನಟನಿಗೆ ಥಳಿಸಲು ಬಂದಿದ್ದ 25 ಹುಡುಗರು; ಕೈಮುಗಿದ ಬೇಡಿಕೊಂಡಿದ್ದ ಹೀರೋ

Rajkummar Rao ಇಂದು ಶಿಸ್ತಿನ ನಟ ಆಗಿರುವ ರಾಜ್​ಕುಮಾರ್​ ರಾವ್​ ಅವರು ಶಾಲೆಯ ದಿನಗಳಲ್ಲಿ ರೌಡಿ ರೀತಿ ವರ್ತಿಸುತ್ತಿದ್ದರು. ಆದರೆ 11ನೇ ತರಗತಿಗೆ ಬಂದಾಗ ಅವರು ಬದಲಾದರು.

ಹುಡುಗಿ ವಿಚಾರಕ್ಕೆ ಬಾಲಿವುಡ್​ ನಟನಿಗೆ ಥಳಿಸಲು ಬಂದಿದ್ದ 25 ಹುಡುಗರು; ಕೈಮುಗಿದ ಬೇಡಿಕೊಂಡಿದ್ದ ಹೀರೋ
ರಾಜ್​ಕುಮಾರ್​ ರಾವ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 31, 2021 | 3:08 PM

ಕಾಲೇಜು ದಿನಗಳಲ್ಲಿ ಎಲ್ಲರೂ ಇಂಥ ಘಟನೆಯನ್ನು ಹತ್ತಿರದಿಂದ ನೋಡಿರುತ್ತಾರೆ. ಒಂದು ಹುಡುಗಿಯ ಹಿಂದೆ ಹಲವು ಹುಡುಗರು ಬಿದ್ದರೆ ಅಲ್ಲಿ ಹೊಡೆದಾಟ ನಡೆಯುವುದು ಗ್ಯಾರಂಟಿ. ಬಾಲಿವುಡ್​ ನಟ ರಾಜ್​ಕುಮಾರ್​ ರಾವ್​ ಅವರ ಬದುಕಿನಲ್ಲೂ ಇಂಥದ್ದೊಂದು ಘಟನೆ ನಡೆದಿತ್ತು. ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಅವರು ಆ ಬಗ್ಗೆ ಮಾತನಾಡಿದ್ದರು. ಇಂದು (ಆ.31) ರಾಜ್​ಕುಮಾರ್​ ರಾವ್​ ಜನ್ಮದಿನ. ಈ ಪ್ರಯುಕ್ತ ಆ ಹಳೇ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ.

ಇಂದು ಶಿಸ್ತಿನ ನಟ ಆಗಿರುವ ರಾಜ್​ಕುಮಾರ್​ ರಾವ್​ ಅವರು ಶಾಲೆಯ ದಿನಗಳಲ್ಲಿ ರೌಡಿ ರೀತಿ ವರ್ತಿಸುತ್ತಿದ್ದರು. ಆದರೆ 11ನೇ ತರಗತಿಗೆ ಬಂದಾಗ ಅವರು ಬದಲಾದರು. ಅವರು ಅಪ್ಟಟ ಶಾರುಖ್​ ಖಾನ್ ಅಭಿಮಾನಿ ಆಗಿದ್ದರು. ‘ಕುಚ್​ ಕುಚ್ ಹೋತಾ ಹೈ’ ಸಿನಿಮಾ ಶೈಲಿಯಲ್ಲೇ ಕಾಲೇಜಿನ ಬಾಸ್ಕೆಟ್​ ಬಾಲ್​ ಮೈದಾನದಲ್ಲಿ ಅವರು ಹುಡುಗಿಯೊಬ್ಬಳನ್ನು ನೋಡಿ ಫಿದಾ ಆದರಂತೆ. ಮನದಲ್ಲಿ ಅವರಿಗೆ ಪ್ರೀತಿ ಕೂಡ ಚಿಗುರೊಡೆದಿತ್ತು. ಆಕೆಯ ಜೊತೆ ಅವರು ಡೇಟಿಂಗ್​ ಮಾಡಲು ಶುರುಮಾಡಿದರು. ಆಗಲೇ ಶುರುವಾಗಿದ್ದು ಕಿರಿಕ್​.

ದುರಂತ ಎಂದರೆ ಆ ಹುಡುಗಿಗೆ ಈಗಾಗಲೇ ಒಬ್ಬ ಬಾಯ್​ ಫ್ರೆಂಡ್​ ಇದ್ದ. ರಾಜ್​ಕುಮಾರ್​ ಜೊತೆ ಆಕೆ ಸುತ್ತುವುದನ್ನು ನೋಡಿದ ಆತ 25 ಹುಡುಗರನ್ನು ಕರೆದುಕೊಂಡು ಬಂದು ರಾಜ್​ಕುಮಾರ್​ಗೆ ಥಳಿಸಲು ಶುರುಮಾಡಿದ. ಹೀರೋ ಆಗಬೇಕು ಎಂದು ಕನಸು ಕಂಡಿದ್ದ ರಾಜ್​ಕುಮಾರ್​ಗೆ ಆಗ ಕಾಡುತ್ತಿದ್ದದ್ದು ಮುಖದ ಚಿಂತೆ. ‘ದಯವಿಟ್ಟು ಮುಖಕ್ಕೆ ಹೊಡೆಯಬೇಡಿ. ನಾನು ಸಿನಿಮಾ ನಟ ಆಗಬೇಕು’ ಎಂದು ಅವರು ಕೂಗಿದ್ದರು!

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಜ್​ಕುಮಾರ್​ ರಾವ್​ ಅವರಿಗೆ ಅಭಿಮಾನಿಗಳು, ಸೇಹ್ನಿತರು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ಬಾಲ್ಯದಲ್ಲಿ ಕಂಡ ಕನಸಿನಂತೆಯೇ ಅವರು ಬಾಲಿವುಡ್​ನಲ್ಲಿ ಸ್ಟಾರ್​ ನಟನಾಗಿದ್ದಾರೆ. ಸಿಟಿ ಲೈಟ್ಸ್​, ಬರೇಲಿ ಕಿ ಬರ್ಫಿ, ಶಾಹಿದ್​ ಮುಂತಾದ ಸಿನಿಮಾಗಳಲ್ಲಿನ ಅವರ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಸದ್ಯ ಹಲವು ಪ್ರಾಜೆಕ್ಟ್​ಗಳಲ್ಲಿ ರಾಜ್​ಕುಮಾರ್​ ರಾವ್​ ಬ್ಯುಸಿ ಆಗಿದ್ದಾರೆ. ಓಟಿಟಿಯಿಂದಲೂ ಅವರಿಗೆ ಅನೇಕ ಆಫರ್​ಗಳು ಬರುತ್ತಿವೆ. ಜನ್ಮದಿನದ ಅಂಗವಾಗಿ ಅವರಿಗೆ ಸೋಶಿಯಲ್​ ಮೀಡಿಯಾಗಳಲ್ಲಿ ಬರ್ತ್​ಡೇ ವಿಶ್​ಗಳು ಹರಿದು ಬರುತ್ತಿವೆ.

ಇದನ್ನೂ ಓದಿ:

ಶೂಟಿಂಗ್ ವೇಳೆಯೇ ಬಾಲಿವುಡ್​ ಖ್ಯಾತ ನಿರ್ದೇಶಕನಿಗೆ ತಾಲಿಬಾನಿಗಳಿಂದ ಬಂತು ಜೀವ ಬೆದರಿಕೆ

ಶೀಘ್ರವೇ ಹಾಲಿವುಡ್​ಗೆ ಹಾರಲಿದ್ದಾರೆ ಕಂಗನಾ? ಬಾಲಿವುಡ್​ ಅಂಗಳದಲ್ಲಿ ಹೊಸ ಸುದ್ದಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !