AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಊರ್ವಶಿ ರೌಟೇಲಾಗಾಗಿ 17 ಗಂಟೆ ಕಾದಿದ್ದ ಟೀಂ ಇಂಡಿಯಾ ಕ್ರಿಕೆಟಿಗ; ರಿಲೇಶನ್​ಶಿಪ್​ ವಿಚಾರ ನಿಜವೇ?

2013ರಲ್ಲಿ ತೆರೆಗೆ ಬಂದ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಊರ್ವಶಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2015ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ‘ಮಿಸ್ಟರ್​ ಐರಾವತ’ ಸಿನಿಮಾದಲ್ಲೂ ಊರ್ವಶಿ ನಟಿಸಿದ್ದರು.

ನಟಿ ಊರ್ವಶಿ ರೌಟೇಲಾಗಾಗಿ 17 ಗಂಟೆ ಕಾದಿದ್ದ ಟೀಂ ಇಂಡಿಯಾ ಕ್ರಿಕೆಟಿಗ; ರಿಲೇಶನ್​ಶಿಪ್​ ವಿಚಾರ ನಿಜವೇ?
ಊರ್ಚಶಿ-ರಿಷಭ್ ಪಂತ್
TV9 Web
| Edited By: |

Updated on: Mar 21, 2022 | 6:00 AM

Share

ಬಾಲಿವುಡ್​ಗೂ (Bollywood) ಕ್ರಿಕೆಟ್​ ಲೋಕಕ್ಕೂ ಮೊದಲಿನಿಂದಲೂ ನಂಟಿದೆ. ಅನೇಕ ಕ್ರಿಕೆಟಿಗರು ಬಾಲಿವುಡ್​ ನಟಿಯರ ಜತೆ ಡೇಟಿಂಗ್ ಮಾಡಿದ್ದಾರೆ. ಇನ್ನೂ ಕೆಲ ಕ್ರಿಕೆಟಿಗರು (Cricket) ಬಾಲಿವುಡ್​ ಬೆಡಗಿಯರನ್ನು ಮದುವೆ ಕೂಡ ಆಗಿದ್ದಾರೆ. ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ (Urvashi Rautela) ಭೇಟಿಗಾಗಿ ಖ್ಯಾತ ಕ್ರಿಕೆಟಿಗ ರಿಷಭ್​ ಪಂತ್ ಬರೋಬ್ಬರಿ 17 ಗಂಟೆ ಕಾದಿದ್ದರು. ಆ ಬಳಿಕ ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದರು ಎನ್ನುವ ವಿಚಾರ ಹರಿದಾಡಿತ್ತು. ಕೆಲವರು ಇದು ನಿಜ ಎಂದರೆ, ಇನ್ನೂ ಕೆಲವರು ವದಂತಿ ಎಂದು ಈ ಸುದ್ದಿಯನ್ನು ಅಲ್ಲಗಳೆಯುತ್ತಾರೆ.

2013ರಲ್ಲಿ ತೆರೆಗೆ ಬಂದ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಊರ್ವಶಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2015ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ‘ಮಿಸ್ಟರ್​ ಐರಾವತ’ ಸಿನಿಮಾದಲ್ಲೂ ಊರ್ವಶಿ ನಟಿಸಿದ್ದರು. ನಂತರ ಹಿಂದಿ ಚಿತ್ರರಂಗದಲ್ಲಿ ಊರ್ವಶಿ ಬ್ಯುಸಿ ಆದರು. ಕೆಲ ವರ್ಷಗಳ ಹಿಂದೆ ಈ ನಟಿಯ ಹೆಸರು ರಿಷಭ್ ಜತೆ ತಳುಕು ಹಾಕಿಕೊಂಡಿತ್ತು. ರಿಷಭ್​ ಅವರನ್ನು 17 ಗಂಟೆ ಕಾಯಿಸಿದ ಬಗ್ಗೆಯೂ ವರದಿ ಆಗಿತ್ತು.

ಊರ್ವಶಿ ಅವರು ಶೂಟಿಂಗ್​ಗಾಗಿ ವಾರಾಣಸಿಗೆ ಬಂದಿದ್ದರು. ಅವರಿಗೆ ಬ್ಯುಸಿ ಶ್ಯೆಡ್ಯೂಲ್​ ಇದ್ದ ಕಾರಣ ಯಾರಿಗೂ ಭೇಟಿ ಮಾಡೋಕೆ ಅವಕಾಶ ನೀಡಬೇಡಿ ಎಂದು ಸಹಾಯಕರಿಗೆ ಹೇಳಿದ್ದರು. ಈ ಸಂದರ್ಭದಲ್ಲಿ ರಿಷಭ್ ಕೂಡ ವಾರಾಣಸಿಯಲ್ಲೇ ಇದ್ದರು. ಹೀಗಾಗಿ, ಊರ್ವಶಿ ಅವರನ್ನು ಭೇಟಿ ಮಾಡೋಕೆ ಅವರು ತೆರಳಿದ್ದರು. ಆದರೆ, ಇದಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ, ನಟಿಯನ್ನು ಭೇಟಿ ಮಾಡೋಕೆ 16-17 ಗಂಟೆಗಳ ಕಾಲ ಕಾದು ನಂತರ ಊರ್ವಶಿ ಅವರನ್ನು ಭೇಟಿ ಮಾಡಿದ್ದಾರೆ ರಿಷಭ್.

2019ರಲ್ಲಿ ರಿಷಭ್ ಹಾಗೂ ಊರ್ವಶಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಅಚ್ಚರಿಯ ವಿಚಾರ ಎಂದರೆ, ರಿಷಭ್​ಗಿಂತಲೂ ಊರ್ವಶಿ ಸುಮಾರು ಮೂರು ವರ್ಷ ದೊಡ್ಡವರು. ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇಬ್ಬರೂ ಒಟ್ಟಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ನಿಜ, ಆದರೆ, ಇವರ ನಡುವೆ ಯಾವುದೇ ರಿಲೇಶನ್​ಶಿಪ್ ಇರಲಿಲ್ಲ ಎಂದು ಮೂಲಗಳು ಸ್ಪಷ್ಟಡಿಸಿದ್ದವು.

2021ರ ಮಿಸ್ ಯೂನಿವರ್ಸ್​​ನಲ್ಲಿ ಊರ್ವಶಿ ಜಡ್ಜ್​ ಆಗಿದ್ದರು. ಭಾರತದ ಹರ್ನಾಜ್​ ಸಂಧು ಮಿಸ್ ಯೂನಿವರ್ಸ್ 2021 ಪ್ರಶಸ್ತಿ ಗೆದ್ದು ಬೀಗಿದ್ದಕ್ಕೆ ಊರ್ವಶಿ ಸಂತಸ ವ್ಯಕ್ತಪಡಿಸಿದ್ದರು. ‘ಇನ್​ಸ್ಪೆಕ್ಟರ್​ ಕವಿನಾಶ್​’ ವೆಬ್​ ಸರಣಿಯಲ್ಲಿ ರಣದೀಪ್​ ಹೂಡಾ ಜತೆ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಪೆದ್ರೂ’ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಇಲ್ಲ ಮನ್ನಣೆ; ಬಹಿರಂಗ ಪತ್ರದಲ್ಲಿ ರಿಷಬ್​ ಶೆಟ್ಟಿ ಅಸಮಾಧಾನ 

ಊರ್ವಶಿ ಫೋಟೋ ಕಂಡು ಮರುಳಾಗದವರುಂಟೆ?

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್