AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಊರ್ವಶಿ ರೌಟೇಲಾಗಾಗಿ 17 ಗಂಟೆ ಕಾದಿದ್ದ ಟೀಂ ಇಂಡಿಯಾ ಕ್ರಿಕೆಟಿಗ; ರಿಲೇಶನ್​ಶಿಪ್​ ವಿಚಾರ ನಿಜವೇ?

2013ರಲ್ಲಿ ತೆರೆಗೆ ಬಂದ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಊರ್ವಶಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2015ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ‘ಮಿಸ್ಟರ್​ ಐರಾವತ’ ಸಿನಿಮಾದಲ್ಲೂ ಊರ್ವಶಿ ನಟಿಸಿದ್ದರು.

ನಟಿ ಊರ್ವಶಿ ರೌಟೇಲಾಗಾಗಿ 17 ಗಂಟೆ ಕಾದಿದ್ದ ಟೀಂ ಇಂಡಿಯಾ ಕ್ರಿಕೆಟಿಗ; ರಿಲೇಶನ್​ಶಿಪ್​ ವಿಚಾರ ನಿಜವೇ?
ಊರ್ಚಶಿ-ರಿಷಭ್ ಪಂತ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Mar 21, 2022 | 6:00 AM

Share

ಬಾಲಿವುಡ್​ಗೂ (Bollywood) ಕ್ರಿಕೆಟ್​ ಲೋಕಕ್ಕೂ ಮೊದಲಿನಿಂದಲೂ ನಂಟಿದೆ. ಅನೇಕ ಕ್ರಿಕೆಟಿಗರು ಬಾಲಿವುಡ್​ ನಟಿಯರ ಜತೆ ಡೇಟಿಂಗ್ ಮಾಡಿದ್ದಾರೆ. ಇನ್ನೂ ಕೆಲ ಕ್ರಿಕೆಟಿಗರು (Cricket) ಬಾಲಿವುಡ್​ ಬೆಡಗಿಯರನ್ನು ಮದುವೆ ಕೂಡ ಆಗಿದ್ದಾರೆ. ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ (Urvashi Rautela) ಭೇಟಿಗಾಗಿ ಖ್ಯಾತ ಕ್ರಿಕೆಟಿಗ ರಿಷಭ್​ ಪಂತ್ ಬರೋಬ್ಬರಿ 17 ಗಂಟೆ ಕಾದಿದ್ದರು. ಆ ಬಳಿಕ ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದರು ಎನ್ನುವ ವಿಚಾರ ಹರಿದಾಡಿತ್ತು. ಕೆಲವರು ಇದು ನಿಜ ಎಂದರೆ, ಇನ್ನೂ ಕೆಲವರು ವದಂತಿ ಎಂದು ಈ ಸುದ್ದಿಯನ್ನು ಅಲ್ಲಗಳೆಯುತ್ತಾರೆ.

2013ರಲ್ಲಿ ತೆರೆಗೆ ಬಂದ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಊರ್ವಶಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2015ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ‘ಮಿಸ್ಟರ್​ ಐರಾವತ’ ಸಿನಿಮಾದಲ್ಲೂ ಊರ್ವಶಿ ನಟಿಸಿದ್ದರು. ನಂತರ ಹಿಂದಿ ಚಿತ್ರರಂಗದಲ್ಲಿ ಊರ್ವಶಿ ಬ್ಯುಸಿ ಆದರು. ಕೆಲ ವರ್ಷಗಳ ಹಿಂದೆ ಈ ನಟಿಯ ಹೆಸರು ರಿಷಭ್ ಜತೆ ತಳುಕು ಹಾಕಿಕೊಂಡಿತ್ತು. ರಿಷಭ್​ ಅವರನ್ನು 17 ಗಂಟೆ ಕಾಯಿಸಿದ ಬಗ್ಗೆಯೂ ವರದಿ ಆಗಿತ್ತು.

ಊರ್ವಶಿ ಅವರು ಶೂಟಿಂಗ್​ಗಾಗಿ ವಾರಾಣಸಿಗೆ ಬಂದಿದ್ದರು. ಅವರಿಗೆ ಬ್ಯುಸಿ ಶ್ಯೆಡ್ಯೂಲ್​ ಇದ್ದ ಕಾರಣ ಯಾರಿಗೂ ಭೇಟಿ ಮಾಡೋಕೆ ಅವಕಾಶ ನೀಡಬೇಡಿ ಎಂದು ಸಹಾಯಕರಿಗೆ ಹೇಳಿದ್ದರು. ಈ ಸಂದರ್ಭದಲ್ಲಿ ರಿಷಭ್ ಕೂಡ ವಾರಾಣಸಿಯಲ್ಲೇ ಇದ್ದರು. ಹೀಗಾಗಿ, ಊರ್ವಶಿ ಅವರನ್ನು ಭೇಟಿ ಮಾಡೋಕೆ ಅವರು ತೆರಳಿದ್ದರು. ಆದರೆ, ಇದಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ, ನಟಿಯನ್ನು ಭೇಟಿ ಮಾಡೋಕೆ 16-17 ಗಂಟೆಗಳ ಕಾಲ ಕಾದು ನಂತರ ಊರ್ವಶಿ ಅವರನ್ನು ಭೇಟಿ ಮಾಡಿದ್ದಾರೆ ರಿಷಭ್.

2019ರಲ್ಲಿ ರಿಷಭ್ ಹಾಗೂ ಊರ್ವಶಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಅಚ್ಚರಿಯ ವಿಚಾರ ಎಂದರೆ, ರಿಷಭ್​ಗಿಂತಲೂ ಊರ್ವಶಿ ಸುಮಾರು ಮೂರು ವರ್ಷ ದೊಡ್ಡವರು. ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇಬ್ಬರೂ ಒಟ್ಟಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ನಿಜ, ಆದರೆ, ಇವರ ನಡುವೆ ಯಾವುದೇ ರಿಲೇಶನ್​ಶಿಪ್ ಇರಲಿಲ್ಲ ಎಂದು ಮೂಲಗಳು ಸ್ಪಷ್ಟಡಿಸಿದ್ದವು.

2021ರ ಮಿಸ್ ಯೂನಿವರ್ಸ್​​ನಲ್ಲಿ ಊರ್ವಶಿ ಜಡ್ಜ್​ ಆಗಿದ್ದರು. ಭಾರತದ ಹರ್ನಾಜ್​ ಸಂಧು ಮಿಸ್ ಯೂನಿವರ್ಸ್ 2021 ಪ್ರಶಸ್ತಿ ಗೆದ್ದು ಬೀಗಿದ್ದಕ್ಕೆ ಊರ್ವಶಿ ಸಂತಸ ವ್ಯಕ್ತಪಡಿಸಿದ್ದರು. ‘ಇನ್​ಸ್ಪೆಕ್ಟರ್​ ಕವಿನಾಶ್​’ ವೆಬ್​ ಸರಣಿಯಲ್ಲಿ ರಣದೀಪ್​ ಹೂಡಾ ಜತೆ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಪೆದ್ರೂ’ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಇಲ್ಲ ಮನ್ನಣೆ; ಬಹಿರಂಗ ಪತ್ರದಲ್ಲಿ ರಿಷಬ್​ ಶೆಟ್ಟಿ ಅಸಮಾಧಾನ 

ಊರ್ವಶಿ ಫೋಟೋ ಕಂಡು ಮರುಳಾಗದವರುಂಟೆ?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ