AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paresh Rawal: ಬೆಂಗಾಲಿಗಳನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳಿಗೆ ಹೋಲಿಸಿ ಮಾತಾಡಿದ ನಟ ಪರೇಶ್​ ರಾವಲ್​

Paresh Rawal ‘ಸಿಲಿಂಡರ್​ ಇಟ್ಟುಕೊಂಡು ನೀವೇನು ಮಾಡುತ್ತೀರಿ? ಬೆಂಗಾಲಿಗಳಿಗಾಗಿ ಮೀನು ಬೇಯಿಸಿಕೊಡ್ತೀರಾ’ ಎಂದು ಪರೇಶ್​ ರಾವಲ್​ ಹೇಳಿರುವುದು ವಿವಾದಕ್ಕೆ ಕಾರಣ ಆಗಿದೆ.

Paresh Rawal: ಬೆಂಗಾಲಿಗಳನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳಿಗೆ ಹೋಲಿಸಿ ಮಾತಾಡಿದ ನಟ ಪರೇಶ್​ ರಾವಲ್​
ಪರೇಶ್ ರಾವಲ್
TV9 Web
| Edited By: |

Updated on: Dec 02, 2022 | 1:05 PM

Share

ನಟ ಪರೇಶ್​ ರಾವಲ್​ (Paresh Rawal) ಅವರು ಬಾಲಿವುಡ್​ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸಿನಿಮಾಗಳಲ್ಲಿ ಅವರ ಹಾಸ್ಯ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಸಖತ್​ ಎಂಜಾಯ್​ ಮಾಡುತ್ತಾರೆ. ಆದರೆ ರಿಯಲ್​ ಲೈಫ್​ನಲ್ಲಿ ಪರೇಶ್​ ರಾವಲ್​ ಅವರು ಆಡಿದ ಕೆಲವು ಮಾತುಗಳು ವಿವಾದ ಸೃಷ್ಟಿ ಮಾಡಿವೆ. ಬೆಂಗಾಲಿ (Bengali) ಜನರನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗರಿಗೆ ಸಮೀಕರಿಸಿ ಮಾತನಾಡಿದ್ದಾರೆ ಪರೇಶ್​ ರಾವಲ್​. ಗುಜರಾತ್​ನಲ್ಲಿ ಬಿಜೆಪಿ ಪರವಾಗಿ ಚುನಾವಣಾ (Gujarat Election) ಪ್ರಚಾರ ಮಾಡುವಾಗ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ.

ಪರೇಶ್​ ರಾವಲ್​ ಹೇಳಿದ್ದೇನು?

ಇದನ್ನೂ ಓದಿ
Image
Gujarat Election 2022: ಅಹಮದಾಬಾದ್​ನಲ್ಲಿ ಇಂದು ಬೃಹತ್ ರೋಡ್​ಶೋ ನಡೆಸಲಿರುವ ಪ್ರಧಾನಿ ಮೋದಿ
Image
Gujarat Polls 2022: ಮೋದಿಯನ್ನು ಯಾರು ಹೆಚ್ಚು ನಿಂದಿಸಬಹುದು ಎಂಬುದಕ್ಕೆ ಕಾಂಗ್ರೆಸ್‌ನಲ್ಲಿ ಸ್ಪರ್ಧೆ ನಡೆಯುತ್ತಿದೆ: ಪ್ರಧಾನಿ ಮೋದಿ
Image
Gujarat Election 2022: ಗುಜರಾತ್​ನ 89 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಚುನಾವಣೆ
Image
Gujarat 1st Phase Election 2022: ಕೋಟ್ಯಾಧಿಪತಿ, ಆಸ್ತಿಯೇ ಇಲ್ಲದವರು, ಸಾಲಗಾರ ಅಭ್ಯರ್ಥಿಗಳೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

‘ಗ್ಯಾಸ್​ ಸಿಲಿಂಡರ್​ ಬೆಲೆ ದುಬಾರಿ ಆಗಿದೆ. ಬೆಲೆ ಇಳಿಯುತ್ತದೆ. ಜನರಿಗೆ ಉದ್ಯೋಗವೂ ಸಿಗುತ್ತದೆ. ಆದರೆ ರೊಹಿಂಗ್ಯಾ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದೆಹಲಿಯ ರೀತಿ ನಿಮ್ಮ ಅಕ್ಕ-ಪಕ್ಕ ವಾಸಿಸಲು ಆರಂಭಿಸಿದರೆ ಏನಾಗುತ್ತದೆ? ಸಿಲಿಂಡರ್​ ಇಟ್ಟುಕೊಂಡು ನೀವೇನು ಮಾಡುತ್ತೀರಿ? ಬೆಂಗಾಲಿಗಳಿಗಾಗಿ ಮೀನು ಬೇಯಿಸಿಕೊಡ್ತೀರಾ’ ಎಂದು ಪರೇಶ್​ ರಾವಲ್​ ಅವರು ಗುರುವಾರ (ಡಿ.1) ಹೇಳಿಕೆ ನೀಡಿದ್ದಾರೆ.

ಅರವಿಂದ್​ ಕೇಜ್ರಿವಾಲ್​ ಅವರನ್ನು ಟೀಕಿಸುವ ಭರದಲ್ಲಿ ಪರೇಶ್​ ರಾವಲ್​ ಅವರು ದೆಹಲಿ ಕುರಿತು ಈ ರೀತಿ ಹೇಳಿದ್ದಾರೆ. ಬೆಂಗಾಲಿ ಜನರನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗರ ಜೊತೆ ಸಮೀಕರಿಸಿ ಮಾತನಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅವರ ಮಾತುಗಳು ಜನರ ನಡುವೆ ದ್ವೇಷ ಭಾವನೆ ಬಿತ್ತುವಂತಿವೆ ಎಂದು ಹಲವರು ಕಿಡಿಕಾರಿದ್ದಾರೆ. ಬಳಿಕ ಪರೇಶ್​ ರಾವಲ್ ಅವರು ಟ್ವಿಟರ್​ ಮೂಲಕ ಕ್ಷಮೆ ಕೇಳಿದ್ದಾರೆ.

‘ಖಂಡಿತವಾಗಿ ಮೀನು ಇಲ್ಲಿನ ಸಮಸ್ಯೆ ಅಲ್ಲ. ಯಾಕೆಂದರೆ ಗುಜರಾತಿಗಳು ಕೂಡ ಮೀನು ತಿನ್ನುತ್ತಾರೆ. ನಾನು ಬೆಂಗಾಲಿ ಅಂತ ಹೇಳಿದ್ದು ಬಾಂಗ್ಲಾದೇಶಿಗರು ಮತ್ತು ರೊಂಹಿಗ್ಯಾ ಜನರಿಗೆ. ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಪರೇಶ್​ ರಾವಲ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Gujarat Election 2022: ಅಹಮದಾಬಾದ್​ನಲ್ಲಿ ಇಂದು ಬೃಹತ್ ರೋಡ್​ಶೋ ನಡೆಸಲಿರುವ ಪ್ರಧಾನಿ ಮೋದಿ

ಅರವಿಂದ್​ ಕೇಜ್ರಿವಾಲ್​ ಬಗ್ಗೆ ಪರೇಶ್​ ರಾವಲ್​ ಟೀಕೆ:

‘ಅವರು ಖಾಸಗಿ ವಿಮಾನದಲ್ಲಿ ಬರುತ್ತಾರೆ. ಇಲ್ಲಿ ಬಂದು ತೋರಿಕೆಗೆ ಆಟೋ ರಿಕ್ಷಾದಲ್ಲಿ ಕೂರುತ್ತಾರೆ. ನಾನು ನಟನೆಯಲ್ಲಿ ಜೀವಮಾನ ಕಳೆದಿದ್ದೇನೆ. ಆದರೆ ಹೀಗೆ ನಾಟಕ ಮಾಡುವವರನ್ನು ನಾನು ನೋಡಿಲ್ಲ’ ಎಂದು ಅರವಿಂದ್​ ಕೇಜ್ರಿವಾಲ್​ ಅವರನ್ನು ಪರೇಶ್​ ರಾವಲ್​ ಟೀಸಿದ್ದಾರೆ. ಅವರ ಹೇಳಿಕೆ ಕುರಿತು ಪರ-ವಿರೋಧ ಚರ್ಚೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ