AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೂಮಪಾನ ಮತ್ತು ಮದ್ಯಪಾನವನ್ನು ಒಮ್ಮೆಲೆ ತ್ಯಜಿಸಲು ನಿರ್ಧರಿಸಿದ್ದ ನಟ ಅಮಿತಾಭ್ ಬಚ್ಚನ್​

Amitabh Bachchan: ಕಾಲೇಜು ವಿದ್ಯಾಭ್ಯಾಸ ಮುಗಿಸಿಕೊಂಡು ಕೆಲಸದ ಸಲುವಾಗಿ ಕೊಲ್ಕತ್ತಾಗೆ ಬಂದಾಗಲೂ ಅಮಿತಾಭ್​ ಬಚ್ಚನ್​ ಮದ್ಯಪಾನದ ಸಹವಾಸದಲ್ಲಿದ್ದರು. ಆ ದಿನಗಳ ಬಗ್ಗೆ ಅವರೀಗ ನೆನಪು ಮಾಡಿಕೊಂಡಿದ್ದಾರೆ.

ಧೂಮಪಾನ ಮತ್ತು ಮದ್ಯಪಾನವನ್ನು ಒಮ್ಮೆಲೆ ತ್ಯಜಿಸಲು ನಿರ್ಧರಿಸಿದ್ದ ನಟ ಅಮಿತಾಭ್ ಬಚ್ಚನ್​
ಅಮಿತಾಭ್ ಬಚ್ಚನ್
ಮದನ್​ ಕುಮಾರ್​
|

Updated on:Apr 10, 2023 | 10:53 PM

Share

ಮುಖ್ಯಾಂಶಗಳು

  • ಆ ದಿನಗಳ ನೆನಪು ಹಂಚಿಕೊಂಡ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​
  • ಹಲವು ವರ್ಷಗಳಿಂದ ಮದ್ಯಪಾನ ಮತ್ತು ಧೂಮಪಾನ ತೊರೆದಿರುವ ಬಿಗ್​ ಬಿ
  • ಬ್ಲಾಗ್​ ಮೂಲಕ ಅನೇಕ ವಿಚಾರಗಳನ್ನು ಅಭಿಮಾನಿಗಳಿಗೆ ತಿಳಿಸಿದ ಹಿರಿಯ ನಟ

ನಟ ಅಮಿತಾಭ್​ ಬಚ್ಚನ್​ (Amitabh Bachchan) ಅವರು ಕೋಟ್ಯಂತರ ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಜೀವನದ ಅನುಭವ ಕೂಡ ಅಪಾರ. ಸಾಕಷ್ಟು ಏಳು-ಬೀಳುಗಳನ್ನು ಕಂಡು ಅವರು ಈ ಹಂತಕ್ಕೆ ಬಂದಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ಆಗಿ ಮೆರೆದಿದ್ದಾರೆ. ಅವರು ಕೂಡ ಸಾಮಾನ್ಯ ಜನರಂತೆ ಮದ್ಯಪಾನ ಮತ್ತು ಧೂಮಪಾನ (Smoking) ಮಾಡುತ್ತಿದ್ದರು. ಆದರೆ ಒಂದು ಘಳಿಗೆಯಲ್ಲಿ ಅದನ್ನೆಲ್ಲ ತೊರೆಯಬೇಕು ಅಂತ ಅವರಿಗೆ ಅನಿಸಿತು. ಏಕಕಾಲಕ್ಕೆ ಅವರು ಮದ್ಯಪಾನ ಮತ್ತು ಧೂಮಪಾನ ಸೇವನೆಯನ್ನು ತ್ಯಜಿಸಿದರು. ಆ ಕುರಿತು ಅವರು ತಮ್ಮ ಬ್ಲಾಗ್​ನಲ್ಲಿ (Amitabh Bachchan Blog) ಬರೆದುಕೊಂಡಿದ್ದಾರೆ. ಅಮಿತಾಭ್​ ಬಚ್ಚನ್​ ಅವರಿಗೆ ಈಗ 80 ವರ್ಷ ವಯಸ್ಸು. ಈ ಪ್ರಾಯದಲ್ಲೂ ಕೂಡ ಅವರು ಆ್ಯಕ್ಟೀವ್​ ಆಗಿದ್ದಾರೆ.

ಕಾಲೇಜು ದಿನಗಳಲ್ಲೇ ಅಮಿತಾಭ್​ ಬಚ್ಚನ್​ ಅವರು ಆಲ್ಕೋಹಾಲ್​ ರುಚಿ ಕಂಡಿದ್ದು. ಆದರೆ ಅದೊಂದು ವಿಚಿತ್ರ ಘಟನೆ. ವಿಜ್ಞಾನದ ಪ್ರಯೋಗಾಲಯದಲ್ಲಿ ಇರಿಸಿದ್ದ ಶುದ್ಧ ಆಲ್ಕೋಹಾಲ್​ ಅನ್ನು ಸ್ನೇಹಿತರ ಜೊತೆ ಸೇರಿ ಕುಡಿದಿದ್ದ ಅಮಿತಾಭ್​ ಬಚ್ಚನ್​ ಅವರು ಅನಾರೋಗ್ಯಕ್ಕೆ ಒಳಗಾಗಬೇಕಾಯಿತು. ಹುಡುಗಾಟದ ಆ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಅತಿಯಾಗಿ ಕುಡಿದು ಹಾನಿ ಉಂಟು ಮಾಡಿದ ಸಂದರ್ಭಕ್ಕೂ ಅವರು ಸಾಕ್ಷಿ ಆಗಿದ್ದರು.

ಇದನ್ನೂ ಓದಿ: ‘ಗಾಯ ಬೇಗ ಗುಣವಾಗುತ್ತದೆ’; ‘ಪ್ರಾಜೆಕ್ಟ್​ ಕೆ’ ಸೆಟ್​ನಲ್ಲಿ ಗಾಯಗೊಂಡ ಅಮಿತಾಭ್​ ಬಚ್ಚನ್ ಪೋಸ್ಟ್​

ಇದನ್ನೂ ಓದಿ
Image
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
Image
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
Image
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
Image
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಕಾಲೇಜು ವಿದ್ಯಾಭ್ಯಾಸ ಮುಗಿಸಿಕೊಂಡು ಕೆಲಸದ ಸಲುವಾಗಿ ಕೊಲ್ಕತ್ತಾಗೆ ಬಂದಾಗಲೂ ಅಮಿತಾಭ್​ ಬಚ್ಚನ್​ ಮದ್ಯಪಾನದ ಸಹವಾಸದಲ್ಲಿದ್ದರು. ನಂತರ ಅವರು ಸಿಗರೇಟ್​ ಮತ್ತು ಮದ್ಯಪಾನವನ್ನು ಏಕಕಾಲಕ್ಕೆ ತ್ಯಜಿಸಲು ನಿರ್ಧರಿಸಿದರು. ಅದು ಅವರ ವೈಯಕ್ತಿಕ ನಿರ್ಧಾರ ಆಗಿತ್ತು. ಆನಂತರ ಅವರು ಮದ್ಯಪಾನ ಮತ್ತು ಸಿಗರೇಟ್​ ಸೇವನೆ ಮಾಡಲಿಲ್ಲ. ತಮ್ಮ ಬ್ಲಾಗ್​ ಮೂಲಕ ಅವರು ಈ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಹಲವು ಸಿನಿಮಾಗಳಲ್ಲಿ ಅಮಿತಾಭ್​ ಬಚ್ಚನ್​ ಅವರು ನಟಿಸುತ್ತಿದ್ದಾರೆ. ಬಹುನಿರೀಕ್ಷಿತ ‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲಿ ಅವರು ಪ್ರಭಾಸ್​, ದೀಪಿಕಾ ಪಡುಕೋಣೆ ಮುಂತಾದವರ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಶೂಟಿಂಗ್​ ವೇಳೆ ಅವರಿಗೆ ಗಾಯ ಆಗಿತ್ತು. ಅದರಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಮಿತಾಭ್​ ಬಚ್ಚನ್​ ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ.

ಇದನ್ನೂ ಓದಿ: Bomb Threat Call: ಅಮಿತಾಭ್​, ಅಂಬಾನಿ, ಧರ್ಮೇಂದ್ರ ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ ಕಿಡಿಗೇಡಿ

‘ಪ್ರಾಜೆಕ್ಟ್​ ಕೆ’ ಮಾತ್ರವಲ್ಲದೇ ‘ಸೆಕ್ಷನ್​ 84’ ಚಿತ್ರವನ್ನೂ ಅಮಿತಾಭ್​ ಬಚ್ಚನ್​ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ರಿಬು ದಾಸ್​ಗುಪ್ತಾ ನಿರ್ದೇಶನ ಮಾಡಲಿದ್ದಾರೆ. ಕೋರ್ಟ್​ ರೂಮ್​ ಡ್ರಾಮಾ ಶೈಲಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ನಿಮ್ರತ್​ ಕೌರ್​, ಅಭಿಷೇಕ್​ ಬ್ಯಾನರ್ಜಿ, ಡೈನಾ ಪೆಂಟಿ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:18 pm, Mon, 10 April 23

Follow Us
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬರ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ತರಾಟೆ
ಬರ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ತರಾಟೆ
ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಐಎನ್ಎಸ್ ಮಾಲ್ವನ್
ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಐಎನ್ಎಸ್ ಮಾಲ್ವನ್
ಅವನನ್ನು ಯಾವಾಗ ಕರ್ಕೊಂಡು ಬರ್ತೀಯಾ ಎಂದು ಕೇಳಿದ್ದರು ಚೆನ್ನಮ್ಮ: ಹೆಚ್​ಡಿಕೆ
ಅವನನ್ನು ಯಾವಾಗ ಕರ್ಕೊಂಡು ಬರ್ತೀಯಾ ಎಂದು ಕೇಳಿದ್ದರು ಚೆನ್ನಮ್ಮ: ಹೆಚ್​ಡಿಕೆ