AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​

ಅಮಿತಾಭ್​ ಬಚ್ಚನ್​ ನಟನೆಯ ‘ಝಂಡ್​’ ಸಿನಿಮಾ ಮಾರ್ಚ್​ 4ರಂದು ರಿಲೀಸ್​ ಆಗಿದೆ. ಅಮಿತಾಭ್​ ಬಚ್ಚನ್​ ಈ ಚಿತ್ರದಲ್ಲಿ ವಿಜಯ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತಡೆ ನೀಡಬೇಕು ಎಂದು ನಂದಿ ಚಿನ್ನಿ ಕುಮಾರ್ ಕೋರಿದ್ದರು.

ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
ಅಮಿತಾಭ್​
TV9 Web
| Edited By: |

Updated on: Mar 07, 2022 | 1:51 PM

Share

ಬಯೋಪಿಕ್ (Biopic)​ ಹಾಗೂ ದೊಡ್ಡ ಬಜೆಟ್​ ಸಿನಿಮಾಗಳು ತೆರೆಗೆ ಬರೋದನ್ನೇ ಕೆಲವರು ಕಾಯುತ್ತಿರುತ್ತಾರೆ. ಚಿತ್ರತಂಡಕ್ಕೆ ತೊಂದರೆ ಕೊಡಲು ಅಥವಾ ನಿರ್ಮಾಪಕರಿಂದ ದುಡ್ಡು ಕೀಳಲು ಸಿನಿಮಾ ವಿರುದ್ಧ ಕೇಸ್​ ದಾಖಲು ಮಾಡುತ್ತಾರೆ. ಸಿನಿಮಾಗೆ ತಡೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತಾರೆ. ಈ ಮೂಲಕ ನಿರ್ಮಾಪಕರಿಗೆ, ಚಿತ್ರತಂಡಕ್ಕೆ ಕಿರಿಕಿರಿ ಉಂಟು ಮಾಡುತ್ತಾರೆ. ಇದೇ ರೀತಿ ಮಾಡಲು ಹೋದ ವ್ಯಕ್ತಿಗೆ ತೆಲಂಗಾಣ ಹೈಕೋರ್ಟ್ (Telangana High-court)​ ಸರಿಯಾದ ರೀತಿಯಲ್ಲಿ ಪಾಠ ಕಲಿಸಿದೆ. ಅರ್ಜಿದಾರರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಈ ರೀತಿ ತಪ್ಪು ಮಾಡಲು ಮುಂದಾಗುವವರಿಗೆ ಎಚ್ಚರಿಕೆ ನೀಡಿದೆ.

ಅಮಿತಾಭ್​ ಬಚ್ಚನ್​ ನಟನೆಯ ‘ಝಂಡ್​’ ಸಿನಿಮಾ ಮಾರ್ಚ್​ 4ರಂದು ರಿಲೀಸ್​ ಆಗಿದೆ. ವಿಜಯ್​ ಬರ್ಸೆ ಅವರ ಬಯೋಪಿಕ್​ ಇದಾಗಿದೆ. ವಿಜಯ್​ ಬರ್ಸೆ ಅವರು ‘ಸ್ಲಮ್ ಸಾಕರ್​’ ಹೆಸರಿನ ಎನ್​ಜಿಒ ಆರಂಭಿಸಿದ್ದರು. ಈ ಮೂಲಕ ಬಡ ಮಕ್ಕಳಿಗೆ ಫುಟ್​ಬಾಲ್​ ಹೇಳಿಕೊಡುವ ಕೆಲಸ ಮಾಡಿದ್ದರು. ಅಮಿತಾಭ್​ ಬಚ್ಚನ್​ ಈ ಚಿತ್ರದಲ್ಲಿ ವಿಜಯ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತಡೆ ನೀಡಬೇಕು ಎಂದು ನಂದಿ ಚಿನ್ನಿ ಕುಮಾರ್ ಕೋರಿದ್ದರು.

‘ಫುಟ್​ಬಾಲರ್​ ಅಖಿಲೇಶ್​​ ಪೌಲ್​ ಅವರ ಜೀವನ ಆಧರಿಸಿ ‘ಝಂಡ್​’ ಸಿದ್ಧವಾಗಿದೆ. ನಾನು ಅಖಿಲೇಶ್ ಕುರಿತು ಸಿನಿಮಾ ಮಾಡೋಕೆ 2017-18ರಲ್ಲಿ ಹಕ್ಕನ್ನು ಪಡೆದಿದ್ದೆ. ಅಮಿತಾಭ್​ ಬಚ್ಚನ್ ನಟನೆಯ ‘ಝಂಡ್​’ ಚಿತ್ರ ಕೂಡ ಅದೇ ಕಥೆಯನ್ನು ಹೊಂದಿದೆ ಎಂಬುದು ಆ ಬಳಿಕ ಗೊತ್ತಾಯಿತು. ಈ ಚಿತ್ರಕ್ಕೆ ತಡೆನೀಡಬೇಕು’ ಎಂದು ನಂದಿ ತೆಲಂಗಾಣ ಹೈಕೋರ್ಟ್​ನಲ್ಲಿ ಕೋರಿದ್ದರು.

ಸುಳ್ಳು ಮಾಹಿತಿ ಇಟ್ಟುಕೊಂಡು ನಂದಿ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಈ ಅರ್ಜಿಯನ್ನು ಹಿಂಪಡೆಯೋಕೆ ಅವರು 5 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಅಭಿನಂದ್ ಕುಮಾರ್ ಶಿವಾಲಿ ಅವರನ್ನು ಒಳಗೊಂಡ ಪೀಠ ಅಸಮಾಧಾನ ಹೊರಹಾಕಿದೆ.

ಈ ಅರ್ಜಿಯನ್ನು ವಜಾ ಮಾಡಿದೆ. ‘ಅರ್ಜಿದಾರ 30 ದಿನಗಳ ಒಳಗೆ 10 ಲಕ್ಷ ರೂಪಾಯಿ ಹಣವನ್ನು ಪ್ರಧಾನ ಮಂತ್ರಿ ಕೊವಿಡ್ ಪರಿಹಾರ ನಿಧಿಗೆ ನೀಡಬೇಕು. ಒಂದೊಮ್ಮೆ ಅರ್ಜಿದಾರ ಈ ಹಣವನ್ನು ನೀಡಲು ವಿಫಲನಾದರೆ  ಹೈದರಾಬಾದ್ ಕಲೆಕ್ಟರ್ ಈ ಹಣವನ್ನು ವಸೂಲಿ ಮಾಡಿ ಪ್ರಧಾನಮಂತ್ರಿ ಕೊವಿಡ್ ಪರಿಹಾರ ನಿಧಿಗೆ ನೀಡಬೇಕು’ ಎಂದು ಸೂಚನೆ ನೀಡಿದೆ. ‘ನನ್ನನ್ನು ಕೆಲವರು ದಾರಿ ತಪ್ಪಿಸಿದ್ದಾರೆ. ನಾನು ಯಾರಿಂದಲೂ ಹಣ ಪಡೆದಿಲ್ಲ. ಕೋರ್ಟ್​ ಆದೇಶವನ್ನು ನಾನು ಪ್ರಶ್ನಿಸುತ್ತೇನೆ’ ಎಂದು ನಂದಿ ಹೇಳಿದ್ದಾರೆ.

ಇದನ್ನೂ ಓದಿ: 79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ

ರಾಧಿಕಾ ಪಂಡಿತ್​ಗೆ ಜನ್ಮದಿನದ ಸಂಭ್ರಮ; ವಿಶೇಷ ದಿನದಂದು ನಟಿ ಎದುರು ಹೊಸ ಬೇಡಿಕೆ ಇಟ್ಟ ಫ್ಯಾನ್ಸ್

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!