AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ದಿನದಲ್ಲಿ ಟೊಮೆಟೊ ಬೆಳೆಯಿರಿ: ರಾಖಿ ಸಾವಂತ್ ಕೊಟ್ಟರು ಐಡಿಯಾ

Rakhi Sawanth: ಟೊಮೆಟೊ ಬೆಲೆ ಗಗನಕ್ಕೇರಿದೆ. ಆದರೆ ನಟಿ ರಾಖಿ ಸಾವಂತ್, ಹದಿನೈದು ದಿನಗಳಲ್ಲಿ ಟೊಮೆಟೊ ಬೆಳೆಯುವುದು ಹೇಗೆಂದು ಹೇಳಿಕೊಡುತ್ತಿದ್ದಾರೆ.

15 ದಿನದಲ್ಲಿ ಟೊಮೆಟೊ ಬೆಳೆಯಿರಿ: ರಾಖಿ ಸಾವಂತ್ ಕೊಟ್ಟರು ಐಡಿಯಾ
ರಾಖಿ ಸಾವಂತ್
ಮಂಜುನಾಥ ಸಿ.
|

Updated on: Jul 11, 2023 | 11:39 PM

Share

ಟೊಮೆಟೊ (Tomato) ಬೆಲೆ ಗಗನಕ್ಕೇರಿದೆ, ಪೆಟ್ರೋಲ್ (Petrol) ದರವನ್ನೂ ಮೀರಿ ಟೊಮೆಟೊ ಮೇಲೆ ಹೋಗಿದ್ದು ಸಾಮಾನ್ಯ ನಾಗರೀಕ ಪರದಾಡುವಂತಾಗಿದೆ. ಇನ್ನು ಟೊಮೆಟೊ ಬೆಳೆದಿರುವ ರೈತರು, ಮಧ್ಯವರ್ತಿಗಳಂತೂ ಬಹು ಖುಷಿಯಲ್ಲಿದ್ದಾರೆ. ಟೊಮೆಟೊ ಇಲ್ಲದ ಸಾಂಬಾರು, ಟೊಮೆಟೊ ಇಲ್ಲದ ರೈಸ್ ಬಾತಿಗೆ ನಾಲಗೆಯನ್ನು ಒಗ್ಗಿಸಿಕೊಳ್ಳುತ್ತಿದ್ದಾರೆ ಜನ. ಟೊಮೆಟೊ ಬೆಲೆ ಯಾವಾಗ ಕೆಳಗಿಳಿಯುತ್ತದೆ ಎಂದು ಸಾಮಾನ್ಯ ಜನ ಯೋಚಿಸುತ್ತಿರುವಾಗಲೆ ನಟಿ ರಾಖಿ ಸಾವಂತ್ (Rakhi Sawanth) ಹೊಸ ಐಡಿಯಾ ತೆಗೆದುಕೊಂಡು ಬಂದಿದ್ದಾರೆ.

ಸದಾ ತಮ್ಮ ಚಿತ್ರ, ವಿಚಿತ್ರ ಹೇಳಿಕೆ, ಫ್ಯಾಷನ್​ಗಳಿಂದ ಸುದ್ದಿಯಲ್ಲಿರುವ ರಾಖಿ ಸಾವಂತ್ ಈಗ ಟೊಮೆಟೊ ಬೆಲೆ ಗಗನಕ್ಕೇರಿರುವ ಬೆನ್ನಲ್ಲೆ ಸಮಸ್ಯೆಗೆ ತಮ್ಮದೇ ರೀತಿಯ ಪರಿಹಾರವೊಂದನ್ನು ತಂದಿದ್ದಾರೆ. ಟೊಮೆಟೊ ಹಣ್ಣುಗಳನ್ನು ಮಣ್ಣಿನ ಕುಂಡದೊಳಗೆ ಹಾಕಿ ಅದರ ಮೇಲೆ ಟೊಮೆಟೊ ಗಿಡ ನೆಟ್ಟಿರುವ ರಾಖಿ ಸಾವಂತ್ ನೋಡುತ್ತಿರಿ ಇನ್ನು ಹದಿನೈದು ದಿನದಲ್ಲಿ ಈ ಗಿಡ ಟೊಮೆಟೊ ಹಣ್ಣುಗಳನ್ನು ಬಿಡುತ್ತದೆ ಎಂದಿದ್ದಾರೆ. ರಾಖಿ ಸಾವಂತ್ ಟೊಮೆಟೊ ಗಿಡವನ್ನು ನೆಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ವಿಡಿಯೋಕ್ಕೆ ಪ್ರತಿಕ್ರಿಯಿಸಿರುವ ಹಲವರು ರಾಖಿಗೆ ಪೂರ್ತಿ ಹುಚ್ಚು ಹಿಡಿದಿದೆ ಎಂದಿದ್ದಾರೆ. ಇನ್ನು ಕೆಲವರು ಮಣ್ಣಿನ ಕುಂಡದೊಳಗೆ ಒಳ್ಳೆಯ ಟೊಮೆಟೊಗಳನ್ನು ಹಾಕಿದ್ದಕ್ಕೆ ರಾಖಿಯನ್ನು ನಿಂದಿಸಿದ್ದಾರೆ. ಕಾಲು ಕೆಜಿ ಟೊಮೆಟೊ ರಾಖಿ ಹಾಳು ಮಾಡಿದಳು ಎಂದಿದ್ದಾರೆ. ರಾಖಿಗೆ ಇವೆಲ್ಲ ಹೊಸದಲ್ಲ. ಸದಾ ಸುದ್ದಿಯಲ್ಲಿರುವ ಇಂಥಹಾ ಚಿತ್ರ ವಿಚಿತ್ರ ಸ್ಟಂಟ್​ಗಳನ್ನು ರಾಖಿ ಸಾವಂತ್ ಆಗಾಗ್ಗೆ ಮಾಡುತ್ತಲೇ ಇರುತ್ತಾರೆ.

ಇದನ್ನೂ ಓದಿ:ಕೊಲೆ ಬೆದರಿಕೆ ಬಂದಿದೆ ಎಂದು ಹೆಲ್ಮೆಟ್ ಧರಿಸಿ ಓಡಾಡಿದ ರಾಖಿ ಸಾವಂತ್​; ನಾಟಕ ನಿಲ್ಲಿಸಿ ಎಂದ ಫ್ಯಾನ್ಸ್

ಕಳೆದ ವರ್ಷ ಮೈಸೂರಿನ ಆದಿಲ್ ಅನ್ನು ವಿವಾಹವಾಗಿದ್ದ ರಾಖಿ ಸಾವಂತ್ ಆ ಬಳಿಕ ಅವರಿಂದ ದೂರಾಗಿದ್ದಾರೆ. ಮೈಸೂರಿನ ತನ್ನ ಪತಿಯ ಮನೆಯ ಬಳಿಯೂ ಬಂದು ಡ್ರಾಮಾ ಮಾಡಿ ಹೋಗಿದ್ದ ರಾಖಿ ಆ ಬಳಿಕ ಪತಿಯ ವಿರುದ್ಧ ದೂರು ನೀಡಿದ್ದರು. ರಾಖಿ ದೂರಿನ ಆಧಾರದಲ್ಲಿ ಆದಿಲ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತನ್ನ ತಾಯಿಯ ಸಾವಿಗೆ ಆದಿಲ್ ಕಾರಣ ಎಂದು ರಾಖಿ ಆರೋಪಿಸಿದ್ದರು.

1997 ರಿಂದಲೂ ಚಿತ್ರರಂಗದಲ್ಲಿರುವ ರಾಖಿ ಸಾವಂತ್ ಪೋಷಕ ನಟಿ, ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿಯೂ ಮಿಂಚಿದರು. ಬಳಿಕ ಹಲವು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿಯೂ ರಾಖಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ನಟಿಸಿರುವ ಮೈ ಹೂನಾ ಸಿನಿಮಾದಲ್ಲಿಯೂ ರಾಖಿ ನಟಿಸಿದ್ದಾರೆ. ಆದರೆ ಬರ ಬರುತ್ತಾ ಪ್ರಚಾರದ ಹುಚ್ಚು ಹೆಚ್ಚಾಗಿ ಪ್ರಚಾರಕ್ಕಾಗಿ ವಿವಿಧ ವೇಷಗಳನ್ನು, ಚಿತ್ರ ವಿಚಿತ್ರ ಹೇಳಿಕೆಗಳನ್ನು ನೀಡಲು ಆರಂಭಿಸಿದರು ರಾಖಿ ಆ ಬಳಿಕ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಯಿತು. ಆದರೆ ಬಿಗ್​ಬಾಸ್ ಸೇರಿದಂತೆ ಇತರೆ ರಿಯಾಲಿಟಿ ಶೋಗಳಲ್ಲಿ ಈಗಲೂ ರಾಖಿ ಸಾವಂತ್ ಚಾಲ್ತಿಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ