ಅವಾರ್ಡ್ ಫಂಕ್ಷನ್​ನಲ್ಲಿ ಕರಣ್​ ಜೋಹರ್ ವಿರುದ್ಧ ಕೂಗಾಡಿದ ರಣಬೀರ್ ಕಪೂರ್; ವಿಡಿಯೋ ವೈರಲ್

| Updated By: ರಾಜೇಶ್ ದುಗ್ಗುಮನೆ

Updated on: Feb 20, 2024 | 7:37 AM

ರಣಬೀರ್ ವೇದಿಕೆಯ ಕೆಳಭಾಗದಲ್ಲಿ ಕುಳಿತಿದ್ದರು. ಮೇಲಿನಿಂದ ಕರಣ್ ಹಾಗೂ ಆಯುಷ್ಮಾನ್ ಇಳಿದು ಬಂದರು. ರಣಬೀರ್ ಕಪೂರ್ ಬಳಿ ಕರಣ್ ಸಹಾಯ ಕೇಳಿದರು. ಈ ಸಹಾಯವನ್ನು ರಣಬೀರ್ ಕಪೂರ್ ಮಾತ್ರ ಮಾಡಲು ಸಾಧ್ಯ ಎಂದರು ಕರಣ್. ಪದೇ ಪದೇ ಇದನ್ನು ಹೇಳಿದ್ದರಿಂದ ರಣಬೀರ್ ಕಪೂರ್ ಅವರು ಇರಿಟೇಷನ್​ಗೆ ಒಳಗಾಗಿದ್ದಾರೆ.

ಅವಾರ್ಡ್ ಫಂಕ್ಷನ್​ನಲ್ಲಿ ಕರಣ್​ ಜೋಹರ್ ವಿರುದ್ಧ ಕೂಗಾಡಿದ ರಣಬೀರ್ ಕಪೂರ್; ವಿಡಿಯೋ ವೈರಲ್
ಕರಣ್-ರಣಬೀರ್
Follow us on

ರಣಬೀರ್ ಕಪೂರ್ (Ranbir Kapoor) ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಕೆಲವೊಮ್ಮೆ ಅಸಮಾಧಾನಗೊಂಡು ಕೂಗಾಡಿದ್ದಿದೆ. ಈ ರೀತಿ ಅವರು ಮಾಡುತ್ತಿರುವುದು ಹಲವು ಬಾರಿ ರಿಪೀಟ್ ಆಗಿದೆ. ಈ ಬಾರಿ ಅವರು ಅವಾರ್ಡ್ ಫಂಕ್ಷನ್​ನಲ್ಲೇ ಕೂಗಾಡಿದ್ದಾರೆ. ಇದನ್ನು ನೋಡಿ ನಿರೂಪಕರ ಸ್ಥಾನದಲ್ಲಿದ್ದ ಕರಣ್ ಜೋಹರ್ ಹಾಗೂ ಆಯುಷ್ಮಾನ್ ಖುರಾನಾ ಶಾಕ್​ಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಅಲ್ಲಿ ನೆರೆದಿದ್ದ ಅನೇಕ ಸೆಲೆಬ್ರಿಟಿಗಳಿಗೂ ರಣಬೀರ್ ಕಪೂರ್ ಅವರ ನಡೆ ಅಚ್ಚರಿ ತರಿಸಿದೆ.

ರಣಬೀರ್ ಕಪೂರ್ ಅವರು ದೊಡ್ಡ ಸ್ಟಾರ್ ಹೀರೋ. ಅನೇಕ ಅವಾರ್ಡ್ ಫಂಕ್ಷನ್​ಗಳಿಗೆ ಅವರು ಹಾಜರಿ ಹಾಕುತ್ತಾರೆ. ಅದೇ ರೀತಿ ಅವರು ಇತ್ತೀಚೆಗೆ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಈ ಅವಾರ್ಡ್ ಫಂಕ್ಷನ್​ಗೆ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ದೊಡ್ಡ ವೇದಿಕೆಯನ್ನು ಸಿದ್ಧ ಮಾಡಲಾಗಿತ್ತು. ಎಲ್ಲಾ ಸೆಲೆಬ್ರಿಟಿಗಳು ಬಹಳ ಸುಂದರವಾಗಿ ರೆಡಿ ಆಗಿ ಬಂದಿದ್ದರು. ಈ ಮಧ್ಯೆ ರಣಬೀರ್ ಕಪೂರ್ ನಡೆದುಕೊಂಡ ರೀತಿ ಅನೇಕರಿಗೆ ಇಷ್ಟ ಆಗಿಲ್ಲ.

ರಣಬೀರ್ ಕಪೂರ್ ಅವರು ವೇದಿಕೆ ಕೆಳಭಾಗದಲ್ಲಿ ಕುಳಿತಿದ್ದರು. ಮೇಲಿನಿಂದ ಕರಣ್ ಜೋಹರ್ ಹಾಗೂ ಆಯುಷ್ಮಾನ್ ಖುರಾನಾ ಇಳಿದು ಬಂದರು. ರಣಬೀರ್ ಕಪೂರ್ ಬಳಿ ಕರಣ್ ಸಹಾಯ ಕೇಳಿದರು. ಈ ಸಹಾಯವನ್ನು ರಣಬೀರ್ ಕಪೂರ್ ಮಾತ್ರ ಮಾಡಲು ಸಾಧ್ಯ ಎಂದರು ಕರಣ್. ಪದೇ ಪದೇ ಇದನ್ನು ಹೇಳಿದ್ದರಿಂದ ರಣಬೀರ್ ಕಪೂರ್ ಅವರು ಇರಿಟೇಷನ್ ಆಗಿದ್ದಾರೆ. ‘ನನಗೆ ಕೇಳುತ್ತಿದೆ ನಾನು ಕಿವುಡನಲ್ಲ’ ಎಂದು ಕೂಗಿದ್ದಾರೆ.

ರಣಬೀರ್ ಕಪೂರ್ ಅವರು ಹೇಳಿದ್ದು ‘ಅನಿಮಲ್’ ಸಿನಿಮಾ ಡೈಲಾಗ್​. ಹೀಗಾಗಿ ಫನ್​ಗಾಗಿಯೇ ಈ ವಿಡಿಯೋ ಮಾಡಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಅವಾರ್ಡ್ ಫಂಕ್ಷನ್​ನಲ್ಲಿ ಪ್ರತಿ ಬಾರಿ ಈ ರೀತಿಯ ಗಿಮಿಕ್ ಇದ್ದೇ ಇರುತ್ತದೆ. ರಣಬೀರ್ ಕಪೂರ್ ಹಾಗೂ ಕರಣ್ ಜೋಹರ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಆದರೆ, ಕಾಫಿ ವಿತ್ ಕರಣ್ ಜೋಹರ್ ಶೋ ವಿಚಾರದಲ್ಲಿ ರಣಬೀರ್ ಕಪೂರ್​ಗೆ ಅಸಮಾಧಾನ ಇದೆ. ಈ ಮೊದಲು ಆ ಬಗ್ಗೆ ರಣಬೀರ್ ಕಪೂರ್ ಅವರು ಮಾತನಾಡಿದ್ದರು.

ಇದನ್ನೂ ಓದಿ: ಸಲ್ಮಾನ್ ಹುಟ್ಟುಹಬ್ಬ: 25 ವರ್ಷ ಹಿಂದಿನ ಘಟನೆ ನೆನಪಿಸಿಕೊಂಡ ಕರಣ್ ಜೋಹರ್

ಕರಣ್ ಜೋಹರ್ ನಡೆಸಿಕೊಡೋ ‘ಕಾಫಿ ವಿತ್ ಕರಣ್’ ಶೋನಲ್ಲಿ ಸಾಕಷ್ಟು ವಿವಾದಗಳು ಆಗುತ್ತವೆ. ಇದರಿಂದ ಅನೇಕ ಸೆಲೆಬ್ರಿಟಿಗಳ ಕರಿಯರ್ ಮೇಲೆ ಪ್ರಭಾವ ಉಂಟಾಗಿದೆ. ಈ ವಿಚಾರದಲ್ಲಿ ರಣಬೀರ್ ಕಪೂರ್ ಅವರಿಗೆ ಬೇಸರ ಇದೆ. ಈ ಬಗ್ಗೆ ಅವರು ಮಾತನಾಡಿದ್ದರು. ‘ಅವರ ಶೋನಲ್ಲಿ ಕೊಡೋ ಗಿಫ್ಟ್ ಹ್ಯಾಂಪರ್​ನಲ್ಲಿ ಏನೂ ಇರಲ್ಲ. ನಮ್ಮಿಂದ ಅವರಿಗೆ ಟಿಆರ್​ಪಿ ಸಿಗುತ್ತದೆ’ ಎಂದು ಕರಣ್ ವಿರುದ್ಧ ರಣಬೀರ್ ಕಪೂರ್ ಅವರು ಅಸಮಾಧಾನ ಹೊರ ಹಾಕಿದ್ದರು.

ಸಿನಿಮಾ ಗೆಲುವು

ರಣಬೀರ್ ಕಪೂರ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಗುತ್ತಿದೆ. ‘ಬ್ರಹ್ಮಾಸ್ತ್ರ’ ಸಿನಿಮಾ ದೊಡ್ಡ ಗೆಲುವು ಕಂಡಿತು. ಆ ಬಳಿಕ ‘ತೂ ಜೂಟಿ ಮೇ ಮಕ್ಕರ್’ ಸಿನಿಮಾದಿಂದ ಅವರು ಮತ್ತೆ ಗೆದ್ದರು. ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ‘ಅನಿಮಲ್’ ಸಿನಿಮಾದಿಂದ ಡೊಡ್ಡ ಗೆಲುವು ಅವರದ್ದಾಯಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗ ಅವರು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ