AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರ್ಮ್​ಹೌಸ್ ಖರಿದಿಸೋಕೆ ಮುಂದಾದ ರಣವೀರ್​ ಸಿಂಗ್; ಕಾರಣ ಏನು ಗೊತ್ತಾ?

ಕಲರ್ಸ್​ನಲ್ಲಿ ಪ್ರಸಾರವಾಗುವ ‘ದಿ ಬಿಗ್​ ಪಿಕ್ಚರ್ಸ್​’ ಕ್ವಿಜ್​ ಶೋಅನ್ನು ರಣವೀರ್​ ಸಿಂಗ್​ ನಡೆಸಿಕೊಡಲಿದ್ದಾರೆ. ರಣವೀರ್​ ಸಿಂಗ್​ ಈ ಶೋನ ನಿರೂಪಣೆ ಮಾಡಲಿದ್ದಾರೆ.

ಫಾರ್ಮ್​ಹೌಸ್ ಖರಿದಿಸೋಕೆ ಮುಂದಾದ ರಣವೀರ್​ ಸಿಂಗ್; ಕಾರಣ ಏನು ಗೊತ್ತಾ?
ರಣವೀರ್​ ಸಿಂಗ್​-ಸಲ್ಮಾನ್​ ಖಾನ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 07, 2021 | 9:44 PM

Share

ಬೆಳ್ಳಿ ಪರದೆಯಲ್ಲಿ ಉತ್ತುಂಗಕ್ಕೆ ತೆರಳಿದ ನಟ-ನಟಿಯರಿಗೆ ಕಿರುತೆರೆ ಶೋ ನಡೆಸಿಕೊಡೋಕೆ ಬೇಡಿಕೆ ಬರುತ್ತದೆ. ಕಿಚ್ಚ ಸುದೀಪ್​, ಪುನೀತ್ ರಾಜ್​ಕುಮಾರ್​, ಸಲ್ಮಾನ್​ ಖಾನ್, ಅಮಿತಾಭ್​ ಬಚ್ಚನ್​,​ ಕಮಲ್​ ಹಾಸನ್​ ಸೇರಿ ಸಾಕಷ್ಟು ನಟರು ಈಗಾಗಲೇ ಕಿರುತೆರೆಗೆ ಕಾಲಿಟ್ಟಿದ್ದಾರೆ. ಈಗ ನಟ ರಣವೀರ್​ ಸಿಂಗ್​ ಸರದಿ. ​ ಚಿತ್ರರಂಗದಲ್ಲಿ ರಣವೀರ್ ಬಹುಬೇಡಿಕೆಯ ನಟ. ಅವರ ಕೈಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಹೀಗಿರುವಾಗಲೇ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಇದು ಯಶಸ್ಸು ಪಡೆದರೆ ಅವರು ಸಲ್ಮಾನ್​ ಖಾನ್​ ರೀತಿಯಲ್ಲೇ ಫಾರ್ಮ್​ಹೌಸ್​ ಹೊಂದುತ್ತೇನೆ ಎಂದಿದ್ದಾರೆ.

ಕಲರ್ಸ್​ನಲ್ಲಿ ಪ್ರಸಾರವಾಗುವ ‘ದಿ ಬಿಗ್​ ಪಿಕ್ಚರ್ಸ್​’ ಕ್ವಿಜ್​ ಶೋಅನ್ನು ರಣವೀರ್​ ಸಿಂಗ್​ ನಡೆಸಿಕೊಡಲಿದ್ದಾರೆ. ರಣವೀರ್​ ಸಿಂಗ್​ ಈ ಶೋನ ನಿರೂಪಣೆ ಮಾಡಲಿದ್ದಾರೆ. ಈ ಕ್ವಿಜ್​ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಬುದ್ಧಿಮಟ್ಟ ಮತ್ತು ವಿಶ್ಯುವಲ್​ ಮೆಮೋರಿಯನ್ನು ಪರೀಕ್ಷೆ ಮಾಡಲಾಗುತ್ತದೆ. ಈ ಶೋನ ಬಗ್ಗೆ ಮಾತನಾಡೋಕೆ ಕರೆದ ಪ್ರೆಸ್​ಮೀಟ್​ನಲ್ಲಿ ರಣವೀರ್​ ಮಾತನಾಡಿದ್ದಾರೆ.

ಭವಿಷ್ಯದ ‘ಬಿಗ್​ ಪಿಕ್ಚರ್ಸ್​’ ಏನು ಎಂದು ರಣವೀರ್​ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ನನಗೆ ಒಂದು ಸುಂದರ ಮನೆ ಬೇಕು. ಅಲ್ಲಿ ನನ್ನ ಹೆಂಡತಿ ದೀಪಿಕಾ, ನನ್ನ ಮಕ್ಕಳು ಹಾಗೂ ಕುಟುಂಬದವರು ಇರಬೇಕು. ಕೊನೆಯ ದಿನದವರೆಗೂ ನಾನು ಮನರಂಜನೆ ನೀಡಬೇಕು. ಒಂದೊಮ್ಮೆ ಈ ಶೋ ಹಿಟ್​ ಆದರೆ ನಾನು ಪಾನ್​ವೆಲ್​ನಲ್ಲಿ ಫಾರ್ಮ್​​ಹೌಸ್​ ಖರೀದಿಸುತ್ತೇನೆ’ ಎಂದಿದ್ದಾರೆ.

ಸಲ್ಮಾನ್​ ಖಾನ್​ ಈ ಭಾಗದಲ್ಲಿ ಫಾರ್ಮ್​ಹೌಸ್​ ಹೊಂದಿದ್ದಾರೆ. ಈ ಫಾರ್ಮ್​ಹೌಸ್​ಗೆ ಅರ್ಪಿತಾ ಫಾರ್ಮ್ಸ್​​ (ಸಲ್ಮಾನ್​ ಸಹೋದರಿ) ಎಂದು ಹೆಸರು ಇಡಲಾಗಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ಇಲ್ಲಿಯೇ ಸಮಯ ಕಳೆದಿದ್ದರು.

ರಣವೀರ್​ ಸಿಂಗ್​ ನಟನೆಯ ‘83’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಕಬೀರ್​ ಖಾನ್​ ನಿರ್ದೇಶನದ ಈ ಸಿನಿಮಾ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದ ಕಥೆಯನ್ನು ಹೇಳಲಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸುತ್ತಿದ್ದಾರೆ. ಈ ಮೊದಲು ರಿಲೀಸ್​ ಆದ ಪೋಸ್ಟರ್​ಗಳನ್ನು ನೋಡಿ ಅಭಿಮಾನಿಗಳು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಪಿಲ್​ ದೇವ್​ ಪಾತ್ರಕ್ಕೆ ರಣವೀರ್​ ಸಿಂಗ್​ ಲುಕ್​ ಸರಿಯಾಗಿ ಹೊಂದುತ್ತಿದೆ. ಇದಲ್ಲದೆ, ‘ಸೂರ್ಯವಂಶಿ’ ಸಿನಿಮಾದಲ್ಲಿ ರಣವೀರ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸರ್ಕಸ್’​ ಹಾಗೂ ‘ತಖ್ತ್’​ ಸಿನಿಮಾಗಳಲ್ಲೂ ರಣವೀರ್ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ 15ಕ್ಕೆ ಸಲ್ಮಾನ್​-ರಣವೀರ್​ ಕೊಟ್ರು ಅದ್ದೂರಿ ಚಾಲನೆ; ಇಲ್ಲಿದೆ ಸ್ಪರ್ಧಿಗಳ ಪಟ್ಟಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ