AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Janhvi Kapoor: ಅಮ್ಮನ ಕೈ ಬರಹವನ್ನು ಹಚ್ಚೆ ಹಾಕಿಸಿಕೊಂಡ ಜಾಹ್ನವಿ ಕಪೂರ್; ಖ್ಯಾತ ನಟಿ ಶ್ರೀದೇವಿ ಬರಹದಲ್ಲಿ ಏನಿತ್ತು?

Tattoo: ಬಾಲಿವುಡ್​​ನಲ್ಲಿ ಗುರುತಿಸಿಕೊಳ್ಳುತ್ತಿರುವ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇತ್ತೀಚೆಗೆ ತಾವು ಹಾಕಿಸಿಕೊಂಡ ಟ್ಯಾಟೂ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಿಗೆ ಸಂತಸವಾಗಿದೆ. ಅದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

Janhvi Kapoor: ಅಮ್ಮನ ಕೈ ಬರಹವನ್ನು ಹಚ್ಚೆ ಹಾಕಿಸಿಕೊಂಡ ಜಾಹ್ನವಿ ಕಪೂರ್; ಖ್ಯಾತ ನಟಿ ಶ್ರೀದೇವಿ ಬರಹದಲ್ಲಿ ಏನಿತ್ತು?
ಜಾಹ್ನವಿ ಕಪೂರ್ ಹಾಗೂ ಅವರು ಹಾಕಿಸಿಕೊಂಡಿರುವ ಟ್ಯಾಟೂ
TV9 Web
| Updated By: shivaprasad.hs|

Updated on:Oct 08, 2021 | 11:04 AM

Share

ಖ್ಯಾತ ನಟಿ ತಾಯಿ ಶ್ರೀದೇವಿಯ ಹಾದಿಯನ್ನೇ ತುಳಿದಿರುವ ಜಾಹ್ನವಿ ಕಪೂರ್ ಬಾಲಿವುಡ್​ನಲ್ಲಿ ನಿಧಾನವಾಗಿ ನೆಲೆಯೂರುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಅವರು, ತಮ್ಮ ತಾಯಿಯೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಅವರು ವಿಶೇಷ ಚಿತ್ರವನ್ನು ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದರು. ಇದು ಸದ್ಯ ಅವರ ಅಭಿಮಾನಿ ವಲಯದಲ್ಲಿ ಬಹಳಷ್ಟು ಮೆಚ್ಚುಗೆ ಗಳಿಸಿದೆ. ಅಷ್ಟಕ್ಕೂ ಜಾಹ್ನವಿ ಹಂಚಿಕೊಂಡಿದ್ದೇನು ಅಂತೀರಾ? ಇಲ್ಲಿದೆ ಮಾಹಿತಿ.

ಜಾಹ್ನವಿ ಕಪೂರ್ ತಮ್ಮ ತಾಯಿಯ ಹಸ್ತಾಕ್ಷರವನ್ನೇ ತಮ್ಮ ಕೈ ಮೇಲೂ ಹಚ್ಚೆ ಹಾಕಿಸಿಕೊಂಡಿದ್ದಾರೆ. ‘ಲಬ್ಬೂ’ ಎನ್ನುವುದು ಶ್ರೀದೇವಿ, ಜಾಹ್ನವಿಯನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು. ಒಮ್ಮೆ ಅವರು ಕಾಗದದಲ್ಲಿ ‘ಐ ಲವ ಯೂ ಲಬ್ಬೂ’ ಎಂದು ಬರೆದಿದ್ದರು. ಅದನ್ನೇ ಈಗ ಜಾಹ್ನವಿ ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಈ ವರ್ಷ ಶ್ರೀದೇವಿಯವರು ನಿಧನರಾಗಿ ಮೂರು ವರ್ಷ ಸಂದ ಸಂದರ್ಭದಲ್ಲಿ ತಾಯಿಯ ಕೈ ಬರಹದ ಚಿತ್ರವನ್ನು ಜಾಹ್ನವಿ ಹಂಚಿಕೊಂಡಿದ್ದರು. ಅದರಲ್ಲಿ ‘ಐ ಲವ್ ಯೂ ಲಬ್ಬೂ, ಯು ಆರ್ ಬೆಸ್ಟ್ ಬೇಬಿ ಇನ್ ದಿ ವರ್ಲ್ಡ್ (ಜಗತ್ತಿನಲ್ಲಿಯೇ ಉತ್ತಮ ಮಗು ನೀನು)’ ಎಂದು ಬರೆದಿದ್ದರು. ಇದೀಗ ಆ ಬರಹದಲ್ಲಿದ್ದ, ಮೊದಲ ಸಾಲನ್ನು ಜಾಹ್ನವಿ ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹಚ್ಚೆ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.

ಜಾಹ್ನವಿ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಶ್ರೀದೇವಿ ಕೈಬರಹದಲ್ಲಿದ್ದ ಬರಹ:

ಚಿತ್ರಗಳ ವಿಷಯಕ್ಕೆ ಬಂದರೆ ಜಾಹ್ನವಿ ‘ಗುಡ್ ಲಕ್ ಜೆರ್ರಿ’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಇದಲ್ಲದೇ ಅವರ ಬತ್ತಳಿಕೆಯಲ್ಲಿ ‘ದೋಸ್ತಾನಾ 2’ ಹಾಗೂ ‘ಮಿಲಿ’ ಚಿತ್ರಗಳಿವೆ.

ಇದನ್ನೂ ಓದಿ:

ಸೋನು ಸೂದ್ ಚಿತ್ರವನ್ನು ಸಿಮ್ ಕಾರ್ಡ್ ಮೇಲೆ ಚಿತ್ರಿಸಿದ ಅಭಿಮಾನಿ! ‘ಉಚಿತ 10G ನೆಟ್​ವರ್ಕ್’​ ಎಂದು ತಮಾಷೆ ಮಾಡಿದ ಬಾಲಿವುಡ್ ನಟ

‘ಇದು ಆಕಾಶವಾಣಿ ಬೆಂಗಳೂರು ನಿಲಯ’; ಡಿಫರೆಂಟ್​ ಶೀರ್ಷಿಕೆಯಲ್ಲಿ ಹೀಗೊಂದು ಕನ್ನಡ ಸಿನಿಮಾ

ಪ್ರಿಯತಮೆಗೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿ ಗಿಫ್ಟ್‌ ಕೊಡಿಸಲು ಕಳ್ಳತನ, ಕಿಲಾಡಿ ಜೋಡಿ ಅರೆಸ್ಟ್

Published On - 11:02 am, Fri, 8 October 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ