AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ

ಕಾಶ್ಮೀರದಲ್ಲಿ ‘ರಾಕ್​ಸ್ಟಾರ್​’ ಸಾಂಗ್​ ಒಂದನ್ನು ಶೂಟ್​ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿ ಹಾಡನ್ನು ಹಾಕಲಾಯಿತು. ಹಾಡುಗಳು ಎಲ್ಲರಿಗೂ ಹಾಡು ಇಷ್ಟವಾಗಿತ್ತು. ಇಮ್ತಿಯಾಜ್​ ಕೂಡ ಹಾಡನ್ನು ಇಷ್ಟಪಟ್ಟಿದ್ದರು.

ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ
ರಣಬೀರ್​-ರಿಷಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 12, 2021 | 9:52 PM

Share

ರಣಬೀರ್​ ಕಪೂರ್​ (Rishi Kapoor ) ನಟನೆಯ ‘ರಾಕ್​ಸ್ಟಾರ್​’ ಸಿನಿಮಾದ (Rockstar) ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ಎ.ಆರ್​. ರೆಹಮಾನ್ (AR Rahman)​ ಸಂಗೀತ ಸಂಯೋಜನೆ ಈ ಚಿತ್ರಕ್ಕಿತ್ತು. ಸಿನಿಮಾದ ಹಾಡುಗಳನ್ನು ಕೇಳಿ ಜನರು ಇಷ್ಟಪಟ್ಟಿದ್ದರು. ಸಿನಿಮಾ ರಿಲೀಸ್​ ಆಗಿ ನವೆಂಬರ್​ 11ಕ್ಕೆ 10 ವರ್ಷ ತುಂಬಿದೆ. ಸೋಶಿಯಲ್​ ಮೀಡಿಯಾದಲ್ಲಿ ಎಲ್ಲರೂ ರಣಬೀರ್​ ಅವರಿಗೆ ಶುಭಾಶಯ ತಿಳಿಸಿದ್ದರು. ಎ.ಆರ್.​ ರೆಹಮಾನ್​, ರಣಬೀರ್​ ಕಪೂರ್​, ಸಿನಿಮಾ ನಿರ್ದೇಶಕ ಇಮ್ತಿಯಾಜ್​ ಅಲಿ ಮತ್ತು ನಟಿ ಸಂಜನಾ ಸಂಘಿ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಖುಷಿ ದಿನವನ್ನು ನೆನಪಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ, ಈ ಸಿನಿಮಾದ ಹಾಡುಗಳು ರಣಬೀರ್​ ಕಪೂರ್​ ತಂದೆ ರಿಷಿ ಕಪೂರ್​ಗೆ ಕೊಂಚವೂ ಇಷ್ಟವಾಗಿರಲಿಲ್ಲ. ಈ ಮಾತನ್ನು ಸ್ವತಃ ಎ.ಆರ್​. ರೆಹಮಾನ್​​ ಬಾಯ್ಬಿಟ್ಟಿದ್ದಾರೆ.

‘ಕಾಶ್ಮೀರದಲ್ಲಿ ರಾಕ್​ಸ್ಟಾರ್​ ಸಾಂಗ್​ ಒಂದನ್ನು ಶೂಟ್​ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿ ಹಾಡನ್ನು ಹಾಕಲಾಯಿತು. ಹಾಡುಗಳು ಎಲ್ಲರಿಗೂ ಹಾಡು ಇಷ್ಟವಾಗಿತ್ತು. ಇಮ್ತಿಯಾಜ್​ ಕೂಡ ಹಾಡನ್ನು ಇಷ್ಟಪಟ್ಟಿದ್ದರು. ಅವರು ಈ ಹಾಡನ್ನು ರಿಷಿ ಕಪೂರ್​ಗೆ ಕೇಳಿಸಿದ್ದರು. ಆದರೆ, ಅವರಿಗೆ ಕೊಂಚವೂ ಇಷ್ಟವಾಗಲಿಲ್ಲ. ಒಂದಲ್ಲ ಇಡೀ ಆಲ್ಬಮ್​ ಅವರ ಮನಸ್ಸಿಗೆ ಹತ್ತಿರವಾಗಲೇ ಇಲ್ಲ ಎಂದಿದ್ದಾರೆ’ ರೆಹ್ಮಾನ್​.

‘ನನಗೆ ಏನು ಅರ್ಥವಾಗುತ್ತಿಲ್ಲ. ನನಗೆ ಈ ಹಾಡುಗಳು ಏನು ಎಂಬುದು ತಿಳಿಯುತ್ತಿಲ್ಲ ಎಂದು ರಿಷಿ ಹೇಳಿದ್ದರು. ಆಗ ನಾನು ಏನು ಕಂಪೋಸ್​ ಮಾಡಬೇಕು ಎಂದುಕೊಂಡಿದ್ದೆನೋ ಅದನ್ನು ಮಾಡಿಲ್ಲ. ಹೊಸದನ್ನು ಮಾಡೋಕೆ ಹೋದಾಗ ಹುಟ್ಟಿದ್ದು ‘ನಾದಾನ್​ ಪರಿಂದೆ..’ ಹಾಡು. ರಿಷಿ ಅವರಿಂದ ಹಾಡು ಉತ್ತಮವಾಗಿದೆ ಎನ್ನುವ ಕಮೆಂಟ್​ ಪಡೆಯಬೇಕಿತ್ತು’ ಎಂದಿದ್ದಾರೆ ರೆಹಮಾನ್​.

‘ರಾಕ್​ಸ್ಟಾರ್’​ ಸಿನಿಮಾ 2011ರಲ್ಲಿ ತೆರೆಗೆ ಬಂದಿತ್ತು. ಕಾಲೇಜ್​ಗೆ ತೆರಳುವ ಸಾಮಾನ್ಯ ವಿದ್ಯಾರ್ಥಿ ಜನಾರ್ಧನ್ (ರಣಬೀರ್​). ಆತನಲ್ಲಿ ಕೋಪ ಹುಟ್ಟಿಕೊಳ್ಳುತ್ತದೆ. ರಾಕ್​ಸ್ಟಾರ್​ ಆಗುತ್ತಾನೆ. ತುಂಬಾನೇ ಖ್ಯಾತಿ ಸಿಗುತ್ತದೆ. ಈ ಸಿನಿಮಾದಲ್ಲಿ ಬರೋಬ್ಬರಿ 14 ಹಾಡುಗಳಿವೆ. ​ ‘ನಾದಾನ್​ ಪರಿಂದೆ..’ ‘ಜೋ ಭಿ ಮೇ.. ’ ‘ಸದಾ ಹಕ್​.. ’ ಮೊದಲಾದ ಹಾಡುಗಳು ಕೇಳುಗರಿಗೆ ಇಷ್ಟವಾದವು.

ಇದನ್ನೂ ಓದಿ: ಪ್ರೀತಿ ಒಪ್ಪಿಕೊಂಡ ಆಲಿಯಾ ಭಟ್​-ರಣಬೀರ್​ ಕಪೂರ್​; ದೀಪಾವಳಿ ಹಬ್ಬದಂದು ಗುಡ್​ ನ್ಯೂಸ್​

ಮದುವೆ ದಿನಾಂಕ ಮುಂದೂಡಿದ ಆಲಿಯಾ ಭಟ್​-ರಣಬೀರ್​ ಕಪೂರ್​; ಈ ನಿರ್ಧಾರಕ್ಕಿದೆ ಮುಖ್ಯ ಕಾರಣ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು