AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ

ಕಾಶ್ಮೀರದಲ್ಲಿ ‘ರಾಕ್​ಸ್ಟಾರ್​’ ಸಾಂಗ್​ ಒಂದನ್ನು ಶೂಟ್​ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿ ಹಾಡನ್ನು ಹಾಕಲಾಯಿತು. ಹಾಡುಗಳು ಎಲ್ಲರಿಗೂ ಹಾಡು ಇಷ್ಟವಾಗಿತ್ತು. ಇಮ್ತಿಯಾಜ್​ ಕೂಡ ಹಾಡನ್ನು ಇಷ್ಟಪಟ್ಟಿದ್ದರು.

ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ
ರಣಬೀರ್​-ರಿಷಿ
TV9 Web
| Edited By: |

Updated on: Nov 12, 2021 | 9:52 PM

Share

ರಣಬೀರ್​ ಕಪೂರ್​ (Rishi Kapoor ) ನಟನೆಯ ‘ರಾಕ್​ಸ್ಟಾರ್​’ ಸಿನಿಮಾದ (Rockstar) ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ಎ.ಆರ್​. ರೆಹಮಾನ್ (AR Rahman)​ ಸಂಗೀತ ಸಂಯೋಜನೆ ಈ ಚಿತ್ರಕ್ಕಿತ್ತು. ಸಿನಿಮಾದ ಹಾಡುಗಳನ್ನು ಕೇಳಿ ಜನರು ಇಷ್ಟಪಟ್ಟಿದ್ದರು. ಸಿನಿಮಾ ರಿಲೀಸ್​ ಆಗಿ ನವೆಂಬರ್​ 11ಕ್ಕೆ 10 ವರ್ಷ ತುಂಬಿದೆ. ಸೋಶಿಯಲ್​ ಮೀಡಿಯಾದಲ್ಲಿ ಎಲ್ಲರೂ ರಣಬೀರ್​ ಅವರಿಗೆ ಶುಭಾಶಯ ತಿಳಿಸಿದ್ದರು. ಎ.ಆರ್.​ ರೆಹಮಾನ್​, ರಣಬೀರ್​ ಕಪೂರ್​, ಸಿನಿಮಾ ನಿರ್ದೇಶಕ ಇಮ್ತಿಯಾಜ್​ ಅಲಿ ಮತ್ತು ನಟಿ ಸಂಜನಾ ಸಂಘಿ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಖುಷಿ ದಿನವನ್ನು ನೆನಪಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ, ಈ ಸಿನಿಮಾದ ಹಾಡುಗಳು ರಣಬೀರ್​ ಕಪೂರ್​ ತಂದೆ ರಿಷಿ ಕಪೂರ್​ಗೆ ಕೊಂಚವೂ ಇಷ್ಟವಾಗಿರಲಿಲ್ಲ. ಈ ಮಾತನ್ನು ಸ್ವತಃ ಎ.ಆರ್​. ರೆಹಮಾನ್​​ ಬಾಯ್ಬಿಟ್ಟಿದ್ದಾರೆ.

‘ಕಾಶ್ಮೀರದಲ್ಲಿ ರಾಕ್​ಸ್ಟಾರ್​ ಸಾಂಗ್​ ಒಂದನ್ನು ಶೂಟ್​ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿ ಹಾಡನ್ನು ಹಾಕಲಾಯಿತು. ಹಾಡುಗಳು ಎಲ್ಲರಿಗೂ ಹಾಡು ಇಷ್ಟವಾಗಿತ್ತು. ಇಮ್ತಿಯಾಜ್​ ಕೂಡ ಹಾಡನ್ನು ಇಷ್ಟಪಟ್ಟಿದ್ದರು. ಅವರು ಈ ಹಾಡನ್ನು ರಿಷಿ ಕಪೂರ್​ಗೆ ಕೇಳಿಸಿದ್ದರು. ಆದರೆ, ಅವರಿಗೆ ಕೊಂಚವೂ ಇಷ್ಟವಾಗಲಿಲ್ಲ. ಒಂದಲ್ಲ ಇಡೀ ಆಲ್ಬಮ್​ ಅವರ ಮನಸ್ಸಿಗೆ ಹತ್ತಿರವಾಗಲೇ ಇಲ್ಲ ಎಂದಿದ್ದಾರೆ’ ರೆಹ್ಮಾನ್​.

‘ನನಗೆ ಏನು ಅರ್ಥವಾಗುತ್ತಿಲ್ಲ. ನನಗೆ ಈ ಹಾಡುಗಳು ಏನು ಎಂಬುದು ತಿಳಿಯುತ್ತಿಲ್ಲ ಎಂದು ರಿಷಿ ಹೇಳಿದ್ದರು. ಆಗ ನಾನು ಏನು ಕಂಪೋಸ್​ ಮಾಡಬೇಕು ಎಂದುಕೊಂಡಿದ್ದೆನೋ ಅದನ್ನು ಮಾಡಿಲ್ಲ. ಹೊಸದನ್ನು ಮಾಡೋಕೆ ಹೋದಾಗ ಹುಟ್ಟಿದ್ದು ‘ನಾದಾನ್​ ಪರಿಂದೆ..’ ಹಾಡು. ರಿಷಿ ಅವರಿಂದ ಹಾಡು ಉತ್ತಮವಾಗಿದೆ ಎನ್ನುವ ಕಮೆಂಟ್​ ಪಡೆಯಬೇಕಿತ್ತು’ ಎಂದಿದ್ದಾರೆ ರೆಹಮಾನ್​.

‘ರಾಕ್​ಸ್ಟಾರ್’​ ಸಿನಿಮಾ 2011ರಲ್ಲಿ ತೆರೆಗೆ ಬಂದಿತ್ತು. ಕಾಲೇಜ್​ಗೆ ತೆರಳುವ ಸಾಮಾನ್ಯ ವಿದ್ಯಾರ್ಥಿ ಜನಾರ್ಧನ್ (ರಣಬೀರ್​). ಆತನಲ್ಲಿ ಕೋಪ ಹುಟ್ಟಿಕೊಳ್ಳುತ್ತದೆ. ರಾಕ್​ಸ್ಟಾರ್​ ಆಗುತ್ತಾನೆ. ತುಂಬಾನೇ ಖ್ಯಾತಿ ಸಿಗುತ್ತದೆ. ಈ ಸಿನಿಮಾದಲ್ಲಿ ಬರೋಬ್ಬರಿ 14 ಹಾಡುಗಳಿವೆ. ​ ‘ನಾದಾನ್​ ಪರಿಂದೆ..’ ‘ಜೋ ಭಿ ಮೇ.. ’ ‘ಸದಾ ಹಕ್​.. ’ ಮೊದಲಾದ ಹಾಡುಗಳು ಕೇಳುಗರಿಗೆ ಇಷ್ಟವಾದವು.

ಇದನ್ನೂ ಓದಿ: ಪ್ರೀತಿ ಒಪ್ಪಿಕೊಂಡ ಆಲಿಯಾ ಭಟ್​-ರಣಬೀರ್​ ಕಪೂರ್​; ದೀಪಾವಳಿ ಹಬ್ಬದಂದು ಗುಡ್​ ನ್ಯೂಸ್​

ಮದುವೆ ದಿನಾಂಕ ಮುಂದೂಡಿದ ಆಲಿಯಾ ಭಟ್​-ರಣಬೀರ್​ ಕಪೂರ್​; ಈ ನಿರ್ಧಾರಕ್ಕಿದೆ ಮುಖ್ಯ ಕಾರಣ

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು