ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ

ಕಾಶ್ಮೀರದಲ್ಲಿ ‘ರಾಕ್​ಸ್ಟಾರ್​’ ಸಾಂಗ್​ ಒಂದನ್ನು ಶೂಟ್​ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿ ಹಾಡನ್ನು ಹಾಕಲಾಯಿತು. ಹಾಡುಗಳು ಎಲ್ಲರಿಗೂ ಹಾಡು ಇಷ್ಟವಾಗಿತ್ತು. ಇಮ್ತಿಯಾಜ್​ ಕೂಡ ಹಾಡನ್ನು ಇಷ್ಟಪಟ್ಟಿದ್ದರು.

ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ
ರಣಬೀರ್​-ರಿಷಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Nov 12, 2021 | 9:52 PM

ರಣಬೀರ್​ ಕಪೂರ್​ (Rishi Kapoor ) ನಟನೆಯ ‘ರಾಕ್​ಸ್ಟಾರ್​’ ಸಿನಿಮಾದ (Rockstar) ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ಎ.ಆರ್​. ರೆಹಮಾನ್ (AR Rahman)​ ಸಂಗೀತ ಸಂಯೋಜನೆ ಈ ಚಿತ್ರಕ್ಕಿತ್ತು. ಸಿನಿಮಾದ ಹಾಡುಗಳನ್ನು ಕೇಳಿ ಜನರು ಇಷ್ಟಪಟ್ಟಿದ್ದರು. ಸಿನಿಮಾ ರಿಲೀಸ್​ ಆಗಿ ನವೆಂಬರ್​ 11ಕ್ಕೆ 10 ವರ್ಷ ತುಂಬಿದೆ. ಸೋಶಿಯಲ್​ ಮೀಡಿಯಾದಲ್ಲಿ ಎಲ್ಲರೂ ರಣಬೀರ್​ ಅವರಿಗೆ ಶುಭಾಶಯ ತಿಳಿಸಿದ್ದರು. ಎ.ಆರ್.​ ರೆಹಮಾನ್​, ರಣಬೀರ್​ ಕಪೂರ್​, ಸಿನಿಮಾ ನಿರ್ದೇಶಕ ಇಮ್ತಿಯಾಜ್​ ಅಲಿ ಮತ್ತು ನಟಿ ಸಂಜನಾ ಸಂಘಿ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಖುಷಿ ದಿನವನ್ನು ನೆನಪಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ, ಈ ಸಿನಿಮಾದ ಹಾಡುಗಳು ರಣಬೀರ್​ ಕಪೂರ್​ ತಂದೆ ರಿಷಿ ಕಪೂರ್​ಗೆ ಕೊಂಚವೂ ಇಷ್ಟವಾಗಿರಲಿಲ್ಲ. ಈ ಮಾತನ್ನು ಸ್ವತಃ ಎ.ಆರ್​. ರೆಹಮಾನ್​​ ಬಾಯ್ಬಿಟ್ಟಿದ್ದಾರೆ.

‘ಕಾಶ್ಮೀರದಲ್ಲಿ ರಾಕ್​ಸ್ಟಾರ್​ ಸಾಂಗ್​ ಒಂದನ್ನು ಶೂಟ್​ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿ ಹಾಡನ್ನು ಹಾಕಲಾಯಿತು. ಹಾಡುಗಳು ಎಲ್ಲರಿಗೂ ಹಾಡು ಇಷ್ಟವಾಗಿತ್ತು. ಇಮ್ತಿಯಾಜ್​ ಕೂಡ ಹಾಡನ್ನು ಇಷ್ಟಪಟ್ಟಿದ್ದರು. ಅವರು ಈ ಹಾಡನ್ನು ರಿಷಿ ಕಪೂರ್​ಗೆ ಕೇಳಿಸಿದ್ದರು. ಆದರೆ, ಅವರಿಗೆ ಕೊಂಚವೂ ಇಷ್ಟವಾಗಲಿಲ್ಲ. ಒಂದಲ್ಲ ಇಡೀ ಆಲ್ಬಮ್​ ಅವರ ಮನಸ್ಸಿಗೆ ಹತ್ತಿರವಾಗಲೇ ಇಲ್ಲ ಎಂದಿದ್ದಾರೆ’ ರೆಹ್ಮಾನ್​.

‘ನನಗೆ ಏನು ಅರ್ಥವಾಗುತ್ತಿಲ್ಲ. ನನಗೆ ಈ ಹಾಡುಗಳು ಏನು ಎಂಬುದು ತಿಳಿಯುತ್ತಿಲ್ಲ ಎಂದು ರಿಷಿ ಹೇಳಿದ್ದರು. ಆಗ ನಾನು ಏನು ಕಂಪೋಸ್​ ಮಾಡಬೇಕು ಎಂದುಕೊಂಡಿದ್ದೆನೋ ಅದನ್ನು ಮಾಡಿಲ್ಲ. ಹೊಸದನ್ನು ಮಾಡೋಕೆ ಹೋದಾಗ ಹುಟ್ಟಿದ್ದು ‘ನಾದಾನ್​ ಪರಿಂದೆ..’ ಹಾಡು. ರಿಷಿ ಅವರಿಂದ ಹಾಡು ಉತ್ತಮವಾಗಿದೆ ಎನ್ನುವ ಕಮೆಂಟ್​ ಪಡೆಯಬೇಕಿತ್ತು’ ಎಂದಿದ್ದಾರೆ ರೆಹಮಾನ್​.

‘ರಾಕ್​ಸ್ಟಾರ್’​ ಸಿನಿಮಾ 2011ರಲ್ಲಿ ತೆರೆಗೆ ಬಂದಿತ್ತು. ಕಾಲೇಜ್​ಗೆ ತೆರಳುವ ಸಾಮಾನ್ಯ ವಿದ್ಯಾರ್ಥಿ ಜನಾರ್ಧನ್ (ರಣಬೀರ್​). ಆತನಲ್ಲಿ ಕೋಪ ಹುಟ್ಟಿಕೊಳ್ಳುತ್ತದೆ. ರಾಕ್​ಸ್ಟಾರ್​ ಆಗುತ್ತಾನೆ. ತುಂಬಾನೇ ಖ್ಯಾತಿ ಸಿಗುತ್ತದೆ. ಈ ಸಿನಿಮಾದಲ್ಲಿ ಬರೋಬ್ಬರಿ 14 ಹಾಡುಗಳಿವೆ. ​ ‘ನಾದಾನ್​ ಪರಿಂದೆ..’ ‘ಜೋ ಭಿ ಮೇ.. ’ ‘ಸದಾ ಹಕ್​.. ’ ಮೊದಲಾದ ಹಾಡುಗಳು ಕೇಳುಗರಿಗೆ ಇಷ್ಟವಾದವು.

ಇದನ್ನೂ ಓದಿ: ಪ್ರೀತಿ ಒಪ್ಪಿಕೊಂಡ ಆಲಿಯಾ ಭಟ್​-ರಣಬೀರ್​ ಕಪೂರ್​; ದೀಪಾವಳಿ ಹಬ್ಬದಂದು ಗುಡ್​ ನ್ಯೂಸ್​

ಮದುವೆ ದಿನಾಂಕ ಮುಂದೂಡಿದ ಆಲಿಯಾ ಭಟ್​-ರಣಬೀರ್​ ಕಪೂರ್​; ಈ ನಿರ್ಧಾರಕ್ಕಿದೆ ಮುಖ್ಯ ಕಾರಣ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ