AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?

ಗಾಸಿಪ್​ ಮಂದಿಯ ಬಾಯಲ್ಲಿ ಈ ವಿಚಾರ ಚರ್ಚೆ ಆಗುತ್ತಿದೆ. ಹರಿದಾಡುತ್ತಿರುವ ಈ ಮಾಹಿತಿಯ ಬಗ್ಗೆ ಸೈಫ್​ ಅಲಿ ಖಾನ್ ಆಗಲಿ, ಯಶ್​ ಆಗಲಿ ಏನೂ ಹೇಳಿಕೆ ನೀಡಿಲ್ಲ.

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?
ಯಶ್, ಸೈಫ್ ಅಲಿ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 14, 2021 | 1:20 PM

ಸಿನಿಮಾಗಳ ಆಯ್ಕೆಯಲ್ಲಿ ನಟ ಯಶ್​ ಸಿಕ್ಕಾಪಟ್ಟೆ ಎಚ್ಚರಿಕೆ ವಹಿಸುತ್ತಾರೆ. ಒಳ್ಳೆಯ ಕಥೆ, ಪಾತ್ರ ಮತ್ತು ಟೀಮ್​ಗೆ ಅವರು ಮೊದಲ ಮಹತ್ವ ನೀಡುತ್ತಾರೆ. ಆ ಕಾರಣದಿಂದಲೇ ಯಶ್​ಗೆ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದಿಂದ ಭರ್ಜರಿ ಯಶಸ್ಸು ಸಿಕ್ಕಿತು. ಆ ಚಿತ್ರದ ಗೆಲುವಿನ ಬಳಿಕ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಹೊರಹೊಮ್ಮಿದರು. ಅಲ್ಲದೇ, ಯಶ್​ಗೆ ಎಲ್ಲ ಭಾಷೆಗಳಿಂದಲೂ ಆಫರ್​ ಬರಲು ಶುರುವಾಯಿತು. ಆದರೆ ಅವರು ಎಲ್ಲ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಹಾಗೆ ಯಶ್​ ರಿಜೆಕ್ಟ್​ ಮಾಡಿದ್ದ ಒಂದು ಸಿನಿಮಾದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋಲು ಕಂಡರು ಎಂಬ ಸುದ್ದಿ ಈಗ ಹರಿದಾಡುತ್ತಿದೆ.

2019ರ ಅಕ್ಟೋಬರ್​ನಲ್ಲಿ ಸೈಫ್​ ಅಲಿ ಖಾನ್​ ನಟನೆಯ ‘ಲಾಲ್​ ಕಪ್ತಾನ್​’ ಸಿನಿಮಾ ತೆರೆಕಂಡಿತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಆ ಚಿತ್ರ ಮುಗ್ಗರಿಸಿತು. ಸೈಫ್​ ಅಭಿಮಾನಿಗಳು ಆ ಸಿನಿಮಾದಿಂದ ನಿರಾಶರಾದರು. ಅಚ್ಚರಿ ಎಂದರೆ ಆ ಚಿತ್ರದಲ್ಲಿ ಹೀರೋ ಆಗಿ ನಟಿಸುವಂತೆ ಸೈಫ್​ಗಿಂತಲೂ ಮುನ್ನ ಯಶ್​ಗೆ ಆಫರ್​ ನೀಡಲಾಗಿತ್ತಂತೆ. ಆದರೆ ಕಥೆ ಮತ್ತು ಪಾತ್ರ ಇಷ್ಟವಾಗದ ಕಾರಣ ಯಶ್​ ಆ ಅವಕಾಶವನ್ನು ಸ್ವೀಕರಿಸಿರಲಿಲ್ಲ. ಅವರು ರಿಜೆಕ್ಟ್​ ಮಾಡಿದ ಬಳಿಕ ಆ ಸಿನಿಮಾ ಸೈಫ್​ ಮಡಿಲಿಗೆ ಹೋಯಿತು ಎನ್ನಲಾಗುತ್ತಿದೆ.

ಗಾಸಿಪ್​ ಮಂದಿಯ ಬಾಯಲ್ಲಿ ಈ ವಿಚಾರ ಚರ್ಚೆ ಆಗುತ್ತಿದೆ. ಹರಿದಾಡುತ್ತಿರುವ ಈ ಮಾಹಿತಿಯ ಬಗ್ಗೆ ಸೈಫ್​ ಆಗಲಿ, ಯಶ್​ ಆಗಲಿ ಏನೂ ಹೇಳಿಕೆ ನೀಡಿಲ್ಲ. ‘ಲಾಲ್​ ಕಪ್ತಾನ್​’ ಸಿನಿಮಾದಲ್ಲಿ ಸೈಫ್ ಅಲಿ ಖಾನ್​ಗೆ ವಿಭಿನ್ನ ಪಾತ್ರ ಇತ್ತು. ಅಘೋರಿಯ ರೂಪದಲ್ಲಿ ಅವರು ಕಾಣಿಸಿಕೊಂಡಿದ್ದರು. 1700ನೇ ಇಸವಿ ಸಂದರ್ಭದಲ್ಲಿ ನಡೆಯುವ ಕಥೆಯನ್ನು ಆ ಚಿತ್ರ ಒಳಗೊಂಡಿತ್ತು. ನವದೀಪ್​ ಸಿಂಗ್​ ನಿರ್ದೇಶನ ಮಾಡಿದ್ದರು.

ಸದ್ಯ ಯಶ್​ ಗಮನವೆಲ್ಲ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೇಲಿದೆ. ಕೊರೊನಾ ವೈರಸ್​ ಹಾವಳಿಯಿಂದಾಗಿ ಆ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. 2022ರ ಏಪ್ರಿಲ್​ 14ರಂದು ‘ಕೆಜಿಎಫ್​ 2’ ಬಿಡುಗಡೆ ಆಗಲಿದೆ. ಪ್ರಶಾಂತ್​ ನೀಲ್​-ಯಶ್​ ಕಾಂಬಿನೇಷನ್​ನ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಬಾಲಿವುಡ್​ ಕಲಾವಿದರಾದ ರವೀನಾ ಟಂಡನ್​, ಸಂಜಯ್​ ದತ್​ ಕಾಣಿಸಿಕೊಳ್ಳುವುದರಿಂದ ಉತ್ತರ ಭಾರತದ ಸಿನಿಪ್ರಿಯರಲ್ಲೂ ಕಾತರ ಹೆಚ್ಚಿದೆ.

ಇದನ್ನೂ ಓದಿ:

ಸೌತ್ ಹೀರೋಗಳಲ್ಲಿ ಅಲ್ಲು ಅರ್ಜುನ್​ ನಂ.1, ಯಶ್​ಗೆ 5ನೇ ಸ್ಥಾನ; ಇದು ಯಾವ​ ಹಣಾಹಣಿ?

ಯಶ್​-ರಾಧಿಕಾ ಪಂಡಿತ್​ ಚಿತ್ರರಂಗದ ಬೆಸ್ಟ್​ ಕಪಲ್​; ಮನಃಪೂರ್ವಕವಾಗಿ ಹೊಗಳಿದ ಪರಭಾಷಾ ನಟಿ

ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ