AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಟ್​ ಕ್ಲಬ್​ನಲ್ಲೂ ಸೈಫ್ ಮೇಲೆ ನಡೆದಿತ್ತು ದಾಳಿ; ತಲೆಯಿಂದ ಸುರಿದಿತ್ತು ರಕ್ತ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಚಾಕುವಿನಿಂದ ಹಲ್ಲೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ 6 ಬಾರಿ ಇರಿದಿದ್ದಾನೆ. ಸೈಫ್ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಅವರ ಮೇಲೆ ನಡೆದ ಎರಡನೇ ದಾಳಿ ಎಂದು ವರದಿಯಾಗಿದೆ. ಹಿಂದೆ ದೆಹಲಿಯ ನೈಟ್ ಕ್ಲಬ್ ನಲ್ಲಿಯೂ ಅವರ ಮೇಲೆ ಹಲ್ಲೆ ನಡೆದಿತ್ತು ಎಂದು ಸ್ವತಃ ಸೈಫ್ ಹೇಳಿಕೊಂಡಿದ್ದರು.

ನೈಟ್​ ಕ್ಲಬ್​ನಲ್ಲೂ ಸೈಫ್ ಮೇಲೆ ನಡೆದಿತ್ತು ದಾಳಿ; ತಲೆಯಿಂದ ಸುರಿದಿತ್ತು ರಕ್ತ
ಸೈಫ್ ಅಲಿ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 16, 2025 | 11:41 AM

Share

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ಇಂದು (ಜನವರಿ 16) ಬೆಳಗಿನ ಜಾವ 2.30ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಸೈಫ್ ಅಲಿ ಖಾನ್​ಗೆ 6 ಬಾರಿ ಇರಿದಿದ್ದಾನೆ. ಸದ್ಯ ಸೈಫ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಪೂರ್ಣಗೊಂಡಿದೆ. ಈ ಹಿಂದೆ ಒಂದೇ ಕಡೆ ಎರಡು ಬಾರಿ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಬಗ್ಗೆ ಸ್ವತಃ ಸೈಫ್ ಹೇಳಿದ್ದರು.

ಸೈಫ್ ಅಲಿ ಖಾನ್ ಅವರ ಗಾಯಗಳು ಗಂಭೀರವಾಗಿದೆ ಎಂದು ಹೇಳಲಾಗಿದೆ. ದಾಳಿಯಲ್ಲಿ ಅವರ ಕುತ್ತಿಗೆ, ಎಡ ಮಣಿಕಟ್ಟು, ಎದೆಗೆ ಗಾಯಗಳಾಗಿದ್ದು, ಬೆನ್ನಿನಿಂದ ಚಾಕುವಿನ ಸಣ್ಣ ಭಾಗವನ್ನು ತೆಗೆಯಲಾಗಿದೆ. ಬೆನ್ನುಹುರಿಗೆ ಪೆಟ್ಟಾದ ಕಾರಣ ತುರ್ತು ಆಪರೇಷನ್ ಮಾಡಬೇಕಾಯಿತು ಎಂಬ ಮಾಹಿತಿ ಇದೆ. ಸೈಫ್ ಮೇಲೆ ಚಾಕುವಿನ ಇರಿತ ಪ್ರಕರಣ ಅವರ ಹಳೆಯ ಕಥೆಯನ್ನು ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಸೈಫ್ ಮೇಲೆ ನೈಟ್ ಕ್ಲಬ್ ನಲ್ಲಿಯೂ ದಾಳಿ ನಡೆಸಲಾಗಿತ್ತು. ದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಈ ಘಟನೆ ನಡೆದಿತ್ತು.

ದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಸೈಫ್ ಮೇಲೆ ದಾಳಿ ನಡೆದಿತ್ತು. ನೇಹಾ ಧೂಪಿಯಾ ಅವರ ಪಾಡ್‌ಕಾಸ್ಟ್ ಶೋ ‘ನೋ ಫಿಲ್ಟರ್ ನೇಹಾ’ದಲ್ಲಿ ಸೈಫ್ ಸ್ವತಃ ವಿಚಾರ ಹಂಚಿಕೊಂಡಿದ್ದರು. ‘ನಾನು ದೆಹಲಿಯ ನೈಟ್ ಕ್ಲಬ್‌ನಲ್ಲಿ ಕುಳಿತಿದ್ದೆ ಮತ್ತು ನಂತರ ಒಬ್ಬ ಹುಡುಗ ನನ್ನ ಬಳಿಗೆ ಬಂದನು. ದಯವಿಟ್ಟು ನನ್ನ ಗೆಳತಿಯೊಂದಿಗೆ ನೃತ್ಯ ಮಾಡಿ ಎಂದು ಕೋರಿದ. ನಾನು ನಿರಾಕರಿಸಿದೆ. ನಾನು ಇದೆಲ್ಲವನ್ನೂ ಮಾಡುತ್ತಿಲ್ಲ ಎಂದು ಆತನಿಗೆ ಹೇಳಿದೆ’ ಎಂದಿದ್ದರು ಸೈಫ್ ಅಲಿ ಖಾನ್.

ಇದನ್ನೂ ಓದಿ:  ಸೈಫ್ ಅಲಿ ಖಾನ್​ಗೆ ಹಲವು ಗಂಟೆ ಸರ್ಜರಿ; ಆಪರಷೇನ್ ವೇಳೆ ನಟನ ದೇಹದಲ್ಲಿ ಸಿಕ್ಕಿದ್ದೇನು?

‘ಆ ಬಳಿಕ ಆತ ನನ್ನನ್ನು ನಿಂದಿಸಲು ಆರಂಭಿಸಿದ. ಅಷ್ಟೇ ಅಲ್ಲ ವಿಸ್ಕಿ ಬಾಟಲಿಯಿಂದ ನನ್ನ ತಲೆಗೆ ಹೊಡೆದ. ನನ್ನ ತಲೆಯಿಂದ ರಕ್ತ ಬರಲಾರಂಭಿಸಿತು. ಹಾಗಾಗಿ ನಾನು ವಾಶ್ ರೂಂಗೆ ಹೋದೆ. ಅವನು ನನ್ನನ್ನು ವಾಶ್ ರೂಮಿಗೆ ಹಿಂಬಾಲಿಸಿದನು. ನನ್ನ ತಲೆಯಲ್ಲಿ ವಿಪರೀತ ರಕ್ತಸ್ರಾವವಾಗುತ್ತಿತ್ತು. ಆದ್ದರಿಂದ ನಾನು ನನ್ನ ತಲೆಯ ಮೇಲೆ ನೀರನ್ನು ಸುರಿಯಲು ಪ್ರಾರಂಭಿಸಿದೆ ಮತ್ತು ನೀರು ಸುರಿಯುವಾಗ ನಾನು ಆ ವ್ಯಕ್ತಿಗೆ ಹೇಳಿದೆ, ನೀವು ಏನು ಮಾಡಿದ್ದೀರಿ ಎಂದು ನೋಡಿ. ಅವರು ತುಂಬಾ ಕೋಪಗೊಂಡರು. ಆತ ಮತ್ತೆ ನನ್ನ ಮೇಲೆ ಹಲ್ಲೆ ಮಾಡಿದ. ಅವನು ಹುಚ್ಚನಾಗಿದ್ದನು. ಅವನು ನನ್ನನ್ನು ಕೊಲ್ಲುತ್ತಿದ್ದನು’ ಎಂದು ಘಟನೆ ವಿವರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ