AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್-ರಶ್ಮಿಕಾ ಸಿನಿಮಾದಿಂದ 91 ಕೋಟಿ ನಷ್ಟ, ತನಿಖೆಯಿಂದ ಗೊತ್ತಾಯ್ತು ಹಲವು ವಿಷಯ

Salman Khan: ಸಲ್ಮಾನ್ ಖಾನ್ ಸಿನಿಮಾ ಸೋಲುವುದೇ ಇಲ್ಲ ಎಂಬ ಮಾತು ಬಾಲಿವುಡ್​ನಲ್ಲಿದೆ. ಆದರೆ ಸಲ್ಮಾನ್ ಹಾಗೂ ರಶ್ಮಿಕಾ ನಟಿಸಿದ್ದ ‘ಸಿಖಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸೋಲು ಕಂಡಿದ್ದು, ನಿರ್ಮಾಪಕರಿಗೆ 91 ಕೋಟಿ ನಷ್ಟವಾಗಿದೆಯಂತೆ. ಇದೀಗ ಸಿನಿಮಾದ ನಿರ್ಮಾಪಕ ತನಿಖೆಗೆ ಇಳಿದಿದ್ದು, ಸಾಕಷ್ಟು ವಿಷಯಗಳು ಅವರ ಅರಿವಿಗೆ ಬಂದಿವೆ.

ಸಲ್ಮಾನ್-ರಶ್ಮಿಕಾ ಸಿನಿಮಾದಿಂದ 91 ಕೋಟಿ ನಷ್ಟ, ತನಿಖೆಯಿಂದ ಗೊತ್ತಾಯ್ತು ಹಲವು ವಿಷಯ
Sikandar
ಮಂಜುನಾಥ ಸಿ.
|

Updated on: Jun 17, 2025 | 3:28 PM

Share

ಸಲ್ಮಾನ್ ಖಾನ್ (Salman Khan) ಅನ್ನು ಬಾಕ್ಸ್ ಆಫೀಸ್​ಕಾ ಸುಲ್ತಾನ್ ಎಂದು ಕರೆಯಲಾಗುತ್ತದೆ. ಕೆಟ್ಟ ಸಿನಿಮಾ ಮಾಡಿದರೂ ಸಲ್ಮಾನ್ ಖಾನ್ ಇದ್ದರೆ ಸಾಕು ಹಾಕಿದ ಹಣಕ್ಕೆ ಮೋಸವಿಲ್ಲ ಎಂಬ ಮಾತಿದೆ. ಇದೇ ಕಾರಣಕ್ಕೆ ನಿರ್ಮಾಪಕರು ಮೊದಲು ಸಲ್ಮಾನ್ ಖಾನ್ ಡೇಟ್ಸ್ ಪಡೆದುಕೊಂಡು ಆ ಬಳಿಕ ಕತೆ, ಚಿತ್ರಕತೆ, ನಿರ್ದೇಶಕರನ್ನು ಹುಡುಕುತ್ತಾರೆ. ಆದರೆ ಇತ್ತೀಚೆಗೆ ಟ್ರೆಂಡ್ ಬದಲಾಗಿದೆ. ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿದ್ದ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ನಟಿಸಿದ್ದ ‘ಸಿಖಂಧರ್’ ಸಿನಿಮಾ ಭಾರಿ ನಷ್ಟ ಅನುಭವಿಸಿದೆ. ಕಂಗಾಲಾಗಿರುವ ನಿರ್ಮಾಪಕ, ವಿಮೆಗೆ ಅರ್ಜಿ ಹಾಕಿದ್ದಾರೆ.

ಸಲ್ಮಾನ್ ಖಾನ್​ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ ಅವರು ‘ಸಿಖಂಧರ್’ ಸಿನಿಮಾ ನಿರ್ಮಾಣ ಮಾಡಿದ್ದರು. ತಮಿಳಿನ ಮುರುಗದಾಸ್ ಅವರು ಸಿನಿಮಾ ನಿರ್ದೇಶನ ಮಾಡಿದ್ದರು. ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾ ಬಿಡುಗಡೆ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ. ಸಲ್ಮಾನ್ ಖಾನ್ ಸಿನಿಮಾ ಇದಾಗಿದ್ದರೂ ಸಹ ಬಾಕ್ಸ್ ಆಫೀಸ್​​ನಲ್ಲಿ ಗಳಿಸಿದ್ದು ಕೇವಲ 175 ಕೋಟಿ ರೂಪಾಯಿಗಳು. ಸಲ್ಮಾನ್ ಖಾನ್​ರ ಈ ಹಿಂದಿನ ಫ್ಲಾಪ್ ಸಿನಿಮಾಗಳು ಇದಕ್ಕಿಂತಲೂ ಹೆಚ್ಚಿನ ಹಣ ಗಳಿಸಿದ್ದವು.

ಇದೀಗ ನಿರ್ಮಾಪಕ ಸಾಜಿದ್ ನಾಡಿಯಾವಾಲ ‘ಸಿಖಂಧರ್’ ಸಿನಿಮಾದ ಕಲೆಕ್ಷನ್ ಬಗ್ಗೆ ಆಡಿಟ್ ಮಾಡಿಸಿದ್ದು, ಬರೋಬ್ಬರಿ 91 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ವರದಿ ಬಂದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಿನಿಮಾ ಬಿಡುಗಡೆ ಆಗುವ ಹಿಂದಿನ ದಿನವೇ ಆನ್​ಲೈನ್​​ನಲ್ಲಿ ಲೀಕ್ ಆಗಿದ್ದೇ ಭಾರಿ ನಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ. ಸಿನಿಮಾ ಮಾರ್ಚ್ 30ರಂದು ಬಿಡುಗಡೆ ಆಗಿತ್ತು. ಅದರ ಹಿಂದಿನ ದಿನ ಸಿನಿಮಾದ ಹೈಡೆಫನಿಷನ್ ಪ್ರಿಂಟ್ ತಮಿಳ್ ರಾಕರ್ಸ್, ಮೂವಿ ರೂಲ್ಸ್, ಫಿಲಂಜಿಲ್ಲಾ ಇನ್ನೂ ಕೆಲವು ವೆಬ್​​ಸೈಟ್​ಗಳಲ್ಲಿ ಬಿಡುಗಡೆ ಆಗಿತ್ತು. ಇದರಿಂದಾಗಿ ಕೆಲವು ಪ್ರಮುಖ ಏರಿಯಾಗಳಲ್ಲಿಯೇ ಜನ ಸಿನಿಮಾ ನೋಡಲು ಬರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಅಶ್ಲೀಲ ಸಂಭಾಷಣೆ, ಹದ್ದು ಮೀರಿದ ಗ್ಲಾಮರ್ ಆದರೂ ‘ಯು/ಎ’

ಇದೀಗ ಸಾಜಿದ್ ನಾಡಿಯಾವಾಲ ತಂತ್ರಜ್ಞಾನದ ನೆರವು ಪಡೆದುಕೊಂಡು ‘ಸಿಖಂಧರ್’ ಸಿನಿಮಾ ಆನ್​ಲೈನ್ ಮೂಲಕ ಎಷ್ಟು ಬಾರಿ ಡೌನ್​ಲೋಡ್ ಆಗಿದೆ ಎಂಬುದನ್ನು ಲೆಕ್ಕ ಹಾಕಿಸುತ್ತಿದ್ದಾರೆ. ಆನ್​ಲೈನ್​​ನಲ್ಲಿ ಲೀಕ್ ಆಗಿರುವ ‘ಸಿಖಂಧರ್’ ಸಿನಿಮಾನಲ್ಲಿ ವಿಎಫ್​ಎಕ್ಸ್ ಪಾಲಿಶ್ ಆಗಿಲ್ಲವಂತೆ. ಅಲ್ಲದೆ ಬಿಡುಗಡೆಗೆ ಮುಂಚೆ ಕತ್ತರಿಸಿ ತೆಗೆದಿರುವ ದೃಶ್ಯಗಳು ಸಹ ಇವೆಯಂತೆ. ಅಂದರೆ ಸಿನಿಮಾ ಸಿಬಿಎಫ್​ಸಿಗೆ ಹೋಗುವ ಮುಂಚೆಯೇ ಲೀಕ್ ಆಗಿದೆ. ಆದರೆ ಸಿನಿಮಾ ಬಿಡುಗಡೆ ಹಿಂದಿನ ದಿನ ಆನ್​ಲೈನ್​​ಗೆ ಅಪ್​ಲೋಡ್ ಮಾಡಲಾಗಿದೆ.

ಇದೀಗ ಸಾಜಿದ್ ನಾಡಿಯಾವಾಲ ವಿಮೆಗೆ ಅರ್ಜಿ ಹಾಕಿದ್ದು, ಆನ್​ಲೈನ್ ಲೀಕ್​​ನಿಂದ ಆಗಿರುವ ಒಟ್ಟು ನಷ್ಟವನ್ನು ಲೆಕ್ಕ ಹಾಕಿ ಅದರ ಆಧಾರದಲ್ಲಿ ನಷ್ಟಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ತಮ್ಮ ಕಡೆಯಿಂದ ತಾವೇ ಒಟ್ಟು ನಷ್ಟದ ಲೆಕ್ಕಾಚಾರ ಮಾಡಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಬಾಲಿವುಡ್​ ಆಸಕ್ತಿಯಿಂದ ಗಮನಿಸುತ್ತಿದ್ದು, ಪೈರಸಿ ವಿಮೆ ಕ್ಲೇಮಿಗೆ ಅರ್ಜಿ ಇದೇ ಮೊದಲು ಎನ್ನಲಾಗುತ್ತಿದೆ. ಒಂದೊಮ್ಮೆ ವಿಮೆ ದೊರೆತರೆ ಎಷ್ಟು ದೊರೆಯುತ್ತದೆ ಎಂಬುದು ಸಹ ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ