AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧುರಂಧರ್: ಅಕ್ಷಯ್ ಖನ್ನಾ ಕೆನ್ನೆಗೆ 7 ಬಾರಿ ಹೊಡೆದ ನಟಿ ಸೌಮ್ಯ ಟಂಡನ್

‘ಧುರಂಧರ್’ ಸಿನಿಮಾದ ಪ್ರತಿಯೊಂದು ಪಾತ್ರ ಕೂಡ ಹೈಲೈಟ್ ಆಗಿದೆ. ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ರೆಹಮಾನ್ ಡಕಾಯಿತ್ ಎಂಬ ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಅವರು ಅಭಿನಯಿಸಿದ್ದಾರೆ. ಆ ಪಾತ್ರಕ್ಕೆ ಅಕ್ಷಯ್ ಖನ್ನಾ ಅವರು ಬಹಳ ಕಷ್ಟಪಟ್ಟಿದ್ದರು. ರಿಯಲ್ ಆಗಿ ಕೆನ್ನೆಗೆ ಹೊಡೆಸಿಕೊಂಡಿದ್ದರು!

ಧುರಂಧರ್: ಅಕ್ಷಯ್ ಖನ್ನಾ ಕೆನ್ನೆಗೆ 7 ಬಾರಿ ಹೊಡೆದ ನಟಿ ಸೌಮ್ಯ ಟಂಡನ್
Akshaye Khanna, Saumya Tandon
ಮದನ್​ ಕುಮಾರ್​
|

Updated on: Dec 15, 2025 | 9:03 PM

Share

ದೇಶದೆಲ್ಲೆಡೆ ‘ಧುರಂಧರ್’ ಸಿನಿಮಾ (Dhurandhar Movie) ಬಗ್ಗೆಯೇ ಚರ್ಚೆ ನಡೆಯುತ್ತಿದೆ. ರಿಯಲ್ ಘಟನೆಗಳನ್ನು ಆಧರಿಸಿ ತಯಾರಾದ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರದ ವಿಲನ್ ಪಾತ್ರಗಳು ಸಖತ್ ಹೈಲೈಟ್ ಆಗಿವೆ. ನಟರಾದ ಅಕ್ಷಯ್ ಖನ್ನಾ (Akshaye Khanna) ಮತ್ತು ಅರ್ಜುನ್ ರಾಮ್​ಪಾಲ್ ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅಕ್ಷಯ್ ಖನ್ನಾ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ಅಚ್ಚರಿ ಎಂದರೆ, ಶೂಟಿಂಗ್ ಸಂದರ್ಭದಲ್ಲಿ ಅಕ್ಷಯ್ ಖನ್ನಾ ಅವರ ಕೆನ್ನೆಗೆ ನಟಿ ಸೌಮ್ಯ ಟಂಡನ್ (Saumya Tandon) 7 ಬಾರಿ ಹೊಡೆದಿದ್ದರು!

‘ಧುರಂಧರ್’ ಸಿನಿಮಾದಲ್ಲಿ ಆ ರೀತಿಯ ಒಂದು ದೃಶ್ಯ ಇದೆ. ಅಕ್ಷಯ್ ಖನ್ನಾ ಮತ್ತು ಸೌಮ್ಯ ಟಂಡನ್ ಅವರು ಪತಿ-ಪತ್ನಿಯಾಗಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಗಂಡನ ಕೆನ್ನೆಗೆ ಹೊಡೆಯುವ ದೃಶ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಸೌಮ್ಯ ಟಂಡನ್ ಅವರು ಹೇಳಿಕೊಂಡಿದ್ದಾರೆ. ಮೊದಲಿಗೆ ಈ ದೃಶ್ಯದ ಶೂಟಿಂಗ್ ಮಾಡುವಾಗ ಸೌಮ್ಯ ಅವರು ಹೊಡೆದಂತೆ ನಟಿಸಿದರು. ಆದರೆ ನೈಜವಾಗಿ ಮೂಡಿಬರಲಿ ಎಂಬ ಕಾರಣಕ್ಕೆ ರಿಯಲ್ ಆಗಿ ಹೊಡೆಯುವಂತೆ ನಿರ್ದೇಶಕ ಆದಿತ್ಯ ಧಾರ್ ಸೂಚಿಸಿದರು.

ಅಕ್ಷಯ್ ಖನ್ನಾ ಅವರು ಕೂಡ ಹೊಡೆಯಲು ಅನುಮತಿ ನೀಡಿದರು. ಹಾಗಾಗಿ ಅಕ್ಷಯ್ ಖನ್ನಾ ಕೆನ್ನೆಗೆ ಸೌಮ್ಯ ಟಂಡನ್ ಬಾರಿಸಿದರು. ಮಾಹಿತಿಗಳ ಪ್ರಕಾರ, ಆ ದೃಶ್ಯವನ್ನು ಚಿತ್ರೀಕರಿಸುವಾಗ ಸುಮಾರಿ 7 ಟೇಕ್ ತೆಗೆದುಕೊಳ್ಳಲಾಯಿತು. ಅಂದರೆ, 7 ಬಾರಿ ಕೂಡ ಅಕ್ಷಯ್ ಖನ್ನಾ ಅವರ ಕೆನ್ನೆಗೆ ಸೌಮ್ಯ ಖಂಡನ್ ಹೊಡೆದರು. ಈ ರೀತಿ ಕಷ್ಟಪಟ್ಟು ಶೂಟಿಂಗ್ ಮಾಡಿದ್ದರಿಂದಲೇ ಇಂದು ಅಕ್ಷಯ್ ಖನ್ನಾ ಹಾಗೂ ಎಲ್ಲ ಕಲಾವಿದರ ನಟನೆಗೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಪಾಕಿಸ್ತಾನದ ರಿಯಲ್ ಗ್ಯಾಂಗ್​ಸ್ಟರ್ ರೆಹಮಾನ್ ಡಕಾಯಿತ್ ಎಂಬ ಪಾತ್ರವನ್ನು ಅಕ್ಷಯ್ ಖನ್ನಾ ಅವರು ಮಾಡಿದ್ದಾರೆ. ಬಹಳ ನೈಜವಾಗಿ ಅವರು ಅಭಿನಯಿಸಿದ್ದಾರೆ. ಅವರ ಹಾವ-ಭಾವ, ಗೆಟಪ್ ಕಂಡು ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ. ಅಚ್ಚರಿ ಎಂದರೆ, ರಣವೀರ್ ಸಿಂಗ್ ಅವರಿಗಿಂತಲೂ ಹೆಚ್ಚಾಗಿ ಅಕ್ಷಯ್ ಖಾನ್ನ ಅವರಿಗೆ ಪ್ರಶಂಸೆ ಸಿಗುತ್ತಿದೆ.

ಇದನ್ನೂ ಓದಿ: ಧುರಂಧರ್ ಚಿತ್ರದಿಂದ ಅಕ್ಷಯ್ ಖನ್ನಾ ಸಿಕ್ಕಾಪಟ್ಟೆ ಫೇಮಸ್

ಡಿಸೆಂಬರ್ 5ರಂದು ‘ಧುರಂಧರ್’ ಸಿನಿಮಾ ಬಿಡುಗಡೆ ಆಯಿತು. ‘ಉರಿ’ ಸಿನಿಮಾ ಖ್ಯಾತಿಯ ಆದಿತ್ಯ ಧಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. 10 ದಿನಗಳಲ್ಲಿ ಈ ಸಿನಿಮಾಗೆ 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಆಸುಪಾಸಿನಲ್ಲಿ ಬಿಡುಗಡೆ ಆದ ‘ದಿ ಡೆವಿಲ್’, ‘ಅಖಂಡ 2’ ಸಿನಿಮಾಗಳಿಗೆ ‘ಧುರಂಧರ್’ ಚಿತ್ರ ಸಖತ್ ಪೈಪೋಟಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ