AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಲು ಸಹೋದರ ಸೋಹೈಲ್-ಸೀಮಾ ವಿಚ್ಛೇದನದಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ

ಸೊಹೈಲ್ ಖಾನ್ ಮತ್ತು ಸೀಮಾ ಸಜ್ದೇಹ್ ಅವರ 24 ವರ್ಷಗಳ ವಿವಾಹ ಜೀವನಕ್ಕೆ ತೆರೆ ಬಿದ್ದಿದೆ. ವಿಚ್ಛೇದನದ ಬಳಿಕ ಮಕ್ಕಳ ಮೇಲಾದ ಪರಿಣಾಮದ ಬಗ್ಗೆ ಸೀಮಾ ಮಾತನಾಡಿದ್ದಾರೆ. ಮಕ್ಕಳ ಮೇಲೆ ಈ ಬಿಕ್ಕಟ್ಟು ದುಷ್ಪರಿಣಾಮ ಬೀರಿದರೂ, ಅವರ ಪ್ರೀತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಲ್ಲು ಸಹೋದರ ಸೋಹೈಲ್-ಸೀಮಾ ವಿಚ್ಛೇದನದಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ
Sohail Khan
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 04, 2025 | 7:51 AM

Share

ನಟ ಸಲ್ಮಾನ್ ಖಾನ್ ಅವರ ಸಹೋದರ ಸೋಹೈಲ್ ಖಾನ್ ಮತ್ತು ಅವರ ಪತ್ನಿ ಸೀಮಾ ಸಜ್ದೇಹ್ ವಿವಾಹವಾದ 24 ವರ್ಷಗಳ ನಂತರ ವಿಚ್ಛೇದನ ಪಡೆದರು. 2022ರಲ್ಲಿ ಇಬ್ಬರೂ ಬೇರ್ಪಟ್ಟರು. ಇತ್ತೀಚಿನ ಸಂದರ್ಶನವೊಂದರಲ್ಲಿ ಸೀಮಾ ಈ ಬಗ್ಗೆ ಮಾತನಾಡಿದ್ದಾರೆ. ವಿಚ್ಛೇದನಕ್ಕೆ ನಿರ್ಧರಿಸಿದಾಗ ಅದು ಅವರ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಭಾವನೆಯನ್ನು ಸೀಮಾ ವ್ಯಕ್ತಪಡಿಸಿದ್ದಾರೆ. ಸೀಮಾ ಮತ್ತು ಸೊಹೈಲ್‌ಗೆ ನಿರ್ವಾಣ ಮತ್ತು ಯೋಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನದಿಂದ ಇಬ್ಬರ ಮೇಲೂ ಆದ ಪರಿಣಾಮದ ಬಗ್ಗೆ ಸೀಮಾ ಮುಕ್ತವಾಗಿ ಮಾತನಾಡಿದ್ದಾರೆ.

‘ಜೂಮ್’ ಗೆ ನೀಡಿದ ಸಂದರ್ಶನದಲ್ಲಿ ಸೀಮಾ ಮಾತನಾಡಿದ್ದಾರೆ. ‘ಗಂಡ ಹೆಂಡತಿ ಬೇರೆಯಾದಾಗ, ಅದು ಮಕ್ಕಳ ಮೇಲೆ ಅನಿರೀಕ್ಷಿತ ಹೊಡೆತವನ್ನು ಬೀರುತ್ತದೆ. ಖಂಡಿತ, ಮಕ್ಕಳದ್ದು ಏನೂ ತಪ್ಪಿಲ್ಲ. ಯಾರೂ ತಮ್ಮ ಹೆತ್ತವರು ವಿಚ್ಛೇದನವನ್ನು ಬಯಸುವುದಿಲ್ಲ. ಅದೇ ಸಮಯದಲ್ಲಿ, ಜನರು ಮಕ್ಕಳನ್ನು ಬಲಿಪಶುಗಳಾಗಿ ಪರಿಗಣಿಸುತ್ತಾರೆ. ಅವು ದುರಂತಗಳಿದ್ದಂತೆ. ಆದರೆ ಸತ್ಯವೇನೆಂದರೆ, ಪೋಷಕರಾಗಿ, ನಿಮ್ಮ ಮಕ್ಕಳು ಬೆಳೆದಂತೆ ಪ್ರೀತಿಯನ್ನು ತಿಳಿದುಕೊಳ್ಳಬೇಕು ಮತ್ತು ಅನುಭವಿಸಬೇಕು ಎಂದು ನೀವು ಬಯಸುತ್ತೀರಿ. ಆಘಾತಕಾರಿ ವಿಚ್ಛೇದನ ಯಾವುದೇ ಮಗುವಿಗೆ ಒಳ್ಳೆಯದಲ್ಲ. ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದೆ. ಅದಕ್ಕಾಗಿ ಅವರ ಮಾನಸಿಕ ಸ್ಥಿತಿಯೂ ಉತ್ತಮವಾಗಿರಬೇಕು’ ಎಂದರು ಅವರು.

ಇದನ್ನೂ ಓದಿ:ಮನಮೋಹನ್ ಸಿಂಗ್ ನಿಧನದ ಬಳಿಕ ಪ್ರಮುಖ ನಿರ್ಧಾರ ತೆಗೆದುಕೊಂಡ ಸಲ್ಮಾನ್ ಖಾನ್

‘ನೀವು ಸಂತೋಷವಾಗಿರದಿದ್ದರೆ, ನಿಮ್ಮ ಮಕ್ಕಳನ್ನು ಸಂತೋಷವಾಗಿರಿಸಲು ನಿಮಗೆ ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಮೂಡ್ ಚೆನ್ನಾಗಿಲ್ಲದಿದ್ದರೆ, ನಾನು ಯಾವಾಗಲೂ ಕಿರಿಕಿರಿಗೊಳ್ಳುತ್ತೇನೆ. ಅದೇ ಕಿರಿಕಿರಿ, ಅದೇ ಕೋಪ ಪರೋಕ್ಷವಾಗಿ ನನ್ನ ಮಕ್ಕಳ ಮೇಲೆ ಬೀಳುತ್ತದೆ. ಆದರೆ ನನ್ನ ಮನಸ್ಸು ಶಾಂತವಾಗಿದ್ದರೆ ಅವರನ್ನೂ ಖುಷಿಯಾಗಿಡಬಲ್ಲೆ. ಜಗತ್ತನ್ನು ಕೊನೆಗೊಳಿಸಲು ಯಾರೂ ಮದುವೆಯಾಗುವುದಿಲ್ಲ. ಆ ಸಂಬಂಧದಲ್ಲಿ ನೀವು ಎಂದೆಂದಿಗೂ ಸಂತೋಷದಿಂದ ಬದುಕಲು ಬಯಸುತ್ತೀರಿ. ಆದರೆ ಸನ್ನಿವೇಶಗಳು ಮತ್ತು ಜನರು ಯಾವಾಗಲೂ ಒಂದೇ ಆಗಿರುವುದಿಲ್ಲ. ಮನುಷ್ಯ ಕಾಲಕ್ಕೆ ತಕ್ಕಂತೆ ಬದಲಾಗುತ್ತಾನೆ. ನಮ್ಮ ಪ್ರೀತಿಯಿಂದ ನೀನು ಹುಟ್ಟಿದ್ದು ಎಂದು ನನ್ನ ಮಗ ನಿರ್ವಾಣನಿಗೆ ನಾನು ಯಾವಾಗಲೂ ಹೇಳುತ್ತೇನೆ. ಜೀವನದಲ್ಲಿ ಏನಾದರೂ ತಪ್ಪಾಗುತ್ತದೆ, ಆದರೆ ನಾವು ಇನ್ನೂ ಕುಟುಂಬವಾಗಿ ಒಟ್ಟಿಗೆ ಇದ್ದೇವೆ. ಇಂದಿಗೂ ನಮ್ಮಲ್ಲಿ ಅದೇ ಪ್ರೀತಿ ಇದೆ’ ಎಂದು ಸೀಮಾ ಅಭಿಪ್ರಾಯಪಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Fri, 3 January 25

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್