AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಶಾರುಖ್ ಖಾನ್-ಹಿರಾನಿ ಸಿನಿಮಾಗೆ ಆರಂಭದಲ್ಲೇ ಹಿನ್ನಡೆ; ಸಿನಿಮಾದಿಂದ ಹೊರ ನಡೆದ ಪ್ರಮುಖ ವ್ಯಕ್ತಿ

‘ಡಂಕಿ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಕಂಬ್ಯಾಕ್ ಮಾಡಿದ ನಂತರ ಶಾರುಖ್ ಖಾನ್ ಒಪ್ಪಿಕೊಂಡ ಮೂರನೇ ಚಿತ್ರ ಇದಾಗಿದೆ. ಇನ್ನು, ಸೋಲೇ ಕಾಣದೇ ಇರುವ ರಾಜ್​ಕುಮಾರ್ ಹಿರಾನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

 ಶಾರುಖ್ ಖಾನ್-ಹಿರಾನಿ ಸಿನಿಮಾಗೆ ಆರಂಭದಲ್ಲೇ ಹಿನ್ನಡೆ; ಸಿನಿಮಾದಿಂದ ಹೊರ ನಡೆದ ಪ್ರಮುಖ ವ್ಯಕ್ತಿ
ಹಿರಾನಿ-ಶಾರುಖ್
TV9 Web
| Edited By: |

Updated on: Jul 12, 2022 | 6:45 PM

Share

ಶಾರುಖ್ ಖಾನ್ (Shah Rukh Khan) ಅವರು ‘ಡಂಕಿ’ ಸಿನಿಮಾದ (Dunki Movie) ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸುಮಾರು 20 ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿತ್ತು. ಈಗ ಚಿತ್ರಕ್ಕೆ ಆಘಾತ ಎದುರಾಗಿದೆ. ಪ್ರಮುಖ ತಂತ್ರಜ್ಞರೊಬ್ಬರು ಚಿತ್ರದಿಂದ ಹೊರ ನಡೆದಿದ್ದಾರೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗಿದೆ. ಈ ಬಗ್ಗೆ ಶಾರುಖ್ ಖಾನ್ ಫ್ಯಾನ್ಸ್ ಕೊಂಚ ಬೇಸರಗೊಂಡಿದ್ದಾರೆ.

‘ಡಂಕಿ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದಕ್ಕೆ ಕಾರಣ ಹಲವು. ಕಂಬ್ಯಾಕ್ ಮಾಡಿದ ನಂತರ ಶಾರುಖ್ ಖಾನ್ ಒಪ್ಪಿಕೊಂಡ ಮೂರನೇ ಚಿತ್ರ ಇದಾಗಿದೆ. ಇನ್ನು, ಸೋಲೇ ಕಾಣದೇ ಇರುವ ರಾಜ್​ಕುಮಾರ್ ಹಿರಾನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಅಮಿತ್ ರಾಯ್ ಛಾಯಾಗ್ರಹಣ ಮಾಡಬೇಕಿತ್ತು. ಈಗ ಅವರು ಚಿತ್ರದಿಂದ ಹೊರ ನಡೆದಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಅಮಿತ್ ಅವರು 2003ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ‘ಇಷ್ಕ್​ ವಿಷ್ಕ್​’ (2003) ಅವರ ಮೊದಲ ಸಿನಿಮಾ. ನಂತರ, ‘ದಿಲ್ ಮಾಂಗೆ ಮೋರ್​’ (2004), ‘ರಾಮ್ ಗೋಪಾಲ್ ವರ್ಮಾ ಕಿ ಆಗ್​’ (2007), ‘ಸರ್ಕಾರ್​ ರಾಜ್​’ (2008), ‘ದೀವಾನಾ ಮೇ ದೀವಾನಾ’ (2013) ಮೊದಲಾದ ಚಿತ್ರಗಳಿಗೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಿಂದ ಹೊರ ನಡೆದ ಬಗ್ಗೆ ಅವರು ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾನು ಡಂಕಿ ಸಿನಿಮಾ ಮಾಡುತ್ತಿಲ್ಲ. 18-19 ದಿನಗಳ ಕಾಲ ಶೂಟಿಂಗ್ ಮಾಡಿದೆ. ನಂತರ ಹೊರಬಂದೆ. ರಾಜ್​ಕುಮಾರ್ ಹಿರಾನಿ ಹಾಗೂ ನನ್ನ ಆಲೋಚನೆಗಳು ಬೇರೆ ರೀತಿಯಲ್ಲಿವೆ. ಇಬ್ಬರೂ ಒಂದೇ ರೀತಿಯಲ್ಲಿ ಯೋಚಿಸಲು ಸಾಧ್ಯವಾಗಿಲ್ಲ. ನಾವಿಬ್ಬರೂ ಸೌಹಾರ್ದಯುತವಾಗಿಯೇ ಬೇರೆ ಆಗಿದ್ದೇವೆ’ ಎಂದು ಅಮಿತ್​ ಹೇಳಿಕೊಂಡಿದ್ದಾರೆ.

‘ನಾನು ‘ಸಂಜು’ ಚಿತ್ರಕ್ಕಾಗಿ ‘ಬಾಬಾ ಬೋಲ್ತಾ ಹೈ ಬಸ್ ಹೋ ಗಯಾ..’ ಹಾಡನ್ನು ಶೂಟ್ ಮಾಡಿಕೊಟ್ಟಿದ್ದೆ. ಆಗ ನಾವಿಬ್ಬರೂ ಖುಷಿಯಿಂದ ಸಮಯ ಕಳೆದಿದ್ದೇವೆ. ಅವರ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ‘ಡಂಕಿ’ ಚಿತ್ರದಲ್ಲಿ ನಾನು ತೆಗದ ಶಾಟ್​ಗಳನ್ನು ಹಾಗೆಯೇ ಇಟ್ಟುಕೊಳ್ಳಲಾಗಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಅಸಲಿ ವಯಸ್ಸೆಷ್ಟು? ಫ್ಯಾನ್ಸ್​ಗೆ ಹುಟ್ಟಿದೆ ದೊಡ್ಡ ಅನುಮಾನ

ಜಿಯೋ ಸ್ಟುಡಿಯೋ, ರೆಡ್​ ಚಿಲ್ಲೀಸ್ ಎಂಟರ್​​ಟೇನ್​ಮೆಂಟ್ ಹಾಗೂ ರಾಜ್​ಕುಮಾರ್ ಹಿರಾನಿ ಫಿಲ್ಮ್ಸ್​ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. 2023ರ ಡಿಸೆಂಬರ್ 22ರಂದು ಚಿತ್ರ ತೆರೆಗೆ ಬರುತ್ತಿದೆ. ಈಗ ಚಿತ್ರಕ್ಕೆ ಬರುವ ಹೊಸ ಕ್ಯಾಮೆರಾಮ್ಯಾನ್​ ಯಾರು ಎಂಬ ಕೌತುಕ ಮೂಡಿದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್