ಶಾರುಖ್ ಖಾನ್-ಹಿರಾನಿ ಸಿನಿಮಾಗೆ ಆರಂಭದಲ್ಲೇ ಹಿನ್ನಡೆ; ಸಿನಿಮಾದಿಂದ ಹೊರ ನಡೆದ ಪ್ರಮುಖ ವ್ಯಕ್ತಿ

‘ಡಂಕಿ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಕಂಬ್ಯಾಕ್ ಮಾಡಿದ ನಂತರ ಶಾರುಖ್ ಖಾನ್ ಒಪ್ಪಿಕೊಂಡ ಮೂರನೇ ಚಿತ್ರ ಇದಾಗಿದೆ. ಇನ್ನು, ಸೋಲೇ ಕಾಣದೇ ಇರುವ ರಾಜ್​ಕುಮಾರ್ ಹಿರಾನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

 ಶಾರುಖ್ ಖಾನ್-ಹಿರಾನಿ ಸಿನಿಮಾಗೆ ಆರಂಭದಲ್ಲೇ ಹಿನ್ನಡೆ; ಸಿನಿಮಾದಿಂದ ಹೊರ ನಡೆದ ಪ್ರಮುಖ ವ್ಯಕ್ತಿ
ಹಿರಾನಿ-ಶಾರುಖ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 12, 2022 | 6:45 PM

ಶಾರುಖ್ ಖಾನ್ (Shah Rukh Khan) ಅವರು ‘ಡಂಕಿ’ ಸಿನಿಮಾದ (Dunki Movie) ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸುಮಾರು 20 ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿತ್ತು. ಈಗ ಚಿತ್ರಕ್ಕೆ ಆಘಾತ ಎದುರಾಗಿದೆ. ಪ್ರಮುಖ ತಂತ್ರಜ್ಞರೊಬ್ಬರು ಚಿತ್ರದಿಂದ ಹೊರ ನಡೆದಿದ್ದಾರೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗಿದೆ. ಈ ಬಗ್ಗೆ ಶಾರುಖ್ ಖಾನ್ ಫ್ಯಾನ್ಸ್ ಕೊಂಚ ಬೇಸರಗೊಂಡಿದ್ದಾರೆ.

‘ಡಂಕಿ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದಕ್ಕೆ ಕಾರಣ ಹಲವು. ಕಂಬ್ಯಾಕ್ ಮಾಡಿದ ನಂತರ ಶಾರುಖ್ ಖಾನ್ ಒಪ್ಪಿಕೊಂಡ ಮೂರನೇ ಚಿತ್ರ ಇದಾಗಿದೆ. ಇನ್ನು, ಸೋಲೇ ಕಾಣದೇ ಇರುವ ರಾಜ್​ಕುಮಾರ್ ಹಿರಾನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಅಮಿತ್ ರಾಯ್ ಛಾಯಾಗ್ರಹಣ ಮಾಡಬೇಕಿತ್ತು. ಈಗ ಅವರು ಚಿತ್ರದಿಂದ ಹೊರ ನಡೆದಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಅಮಿತ್ ಅವರು 2003ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ‘ಇಷ್ಕ್​ ವಿಷ್ಕ್​’ (2003) ಅವರ ಮೊದಲ ಸಿನಿಮಾ. ನಂತರ, ‘ದಿಲ್ ಮಾಂಗೆ ಮೋರ್​’ (2004), ‘ರಾಮ್ ಗೋಪಾಲ್ ವರ್ಮಾ ಕಿ ಆಗ್​’ (2007), ‘ಸರ್ಕಾರ್​ ರಾಜ್​’ (2008), ‘ದೀವಾನಾ ಮೇ ದೀವಾನಾ’ (2013) ಮೊದಲಾದ ಚಿತ್ರಗಳಿಗೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಿಂದ ಹೊರ ನಡೆದ ಬಗ್ಗೆ ಅವರು ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾನು ಡಂಕಿ ಸಿನಿಮಾ ಮಾಡುತ್ತಿಲ್ಲ. 18-19 ದಿನಗಳ ಕಾಲ ಶೂಟಿಂಗ್ ಮಾಡಿದೆ. ನಂತರ ಹೊರಬಂದೆ. ರಾಜ್​ಕುಮಾರ್ ಹಿರಾನಿ ಹಾಗೂ ನನ್ನ ಆಲೋಚನೆಗಳು ಬೇರೆ ರೀತಿಯಲ್ಲಿವೆ. ಇಬ್ಬರೂ ಒಂದೇ ರೀತಿಯಲ್ಲಿ ಯೋಚಿಸಲು ಸಾಧ್ಯವಾಗಿಲ್ಲ. ನಾವಿಬ್ಬರೂ ಸೌಹಾರ್ದಯುತವಾಗಿಯೇ ಬೇರೆ ಆಗಿದ್ದೇವೆ’ ಎಂದು ಅಮಿತ್​ ಹೇಳಿಕೊಂಡಿದ್ದಾರೆ.

‘ನಾನು ‘ಸಂಜು’ ಚಿತ್ರಕ್ಕಾಗಿ ‘ಬಾಬಾ ಬೋಲ್ತಾ ಹೈ ಬಸ್ ಹೋ ಗಯಾ..’ ಹಾಡನ್ನು ಶೂಟ್ ಮಾಡಿಕೊಟ್ಟಿದ್ದೆ. ಆಗ ನಾವಿಬ್ಬರೂ ಖುಷಿಯಿಂದ ಸಮಯ ಕಳೆದಿದ್ದೇವೆ. ಅವರ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ‘ಡಂಕಿ’ ಚಿತ್ರದಲ್ಲಿ ನಾನು ತೆಗದ ಶಾಟ್​ಗಳನ್ನು ಹಾಗೆಯೇ ಇಟ್ಟುಕೊಳ್ಳಲಾಗಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಅಸಲಿ ವಯಸ್ಸೆಷ್ಟು? ಫ್ಯಾನ್ಸ್​ಗೆ ಹುಟ್ಟಿದೆ ದೊಡ್ಡ ಅನುಮಾನ

ಜಿಯೋ ಸ್ಟುಡಿಯೋ, ರೆಡ್​ ಚಿಲ್ಲೀಸ್ ಎಂಟರ್​​ಟೇನ್​ಮೆಂಟ್ ಹಾಗೂ ರಾಜ್​ಕುಮಾರ್ ಹಿರಾನಿ ಫಿಲ್ಮ್ಸ್​ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. 2023ರ ಡಿಸೆಂಬರ್ 22ರಂದು ಚಿತ್ರ ತೆರೆಗೆ ಬರುತ್ತಿದೆ. ಈಗ ಚಿತ್ರಕ್ಕೆ ಬರುವ ಹೊಸ ಕ್ಯಾಮೆರಾಮ್ಯಾನ್​ ಯಾರು ಎಂಬ ಕೌತುಕ ಮೂಡಿದೆ.

ತಾಜಾ ಸುದ್ದಿ
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ