AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul Marriage: ಕೆಎಲ್​ ರಾಹುಲ್-ಆಥಿಯಾ ಶೆಟ್ಟಿ ಮದುವೆ ತಯಾರಿ ನಿಜವೇ? ಸುನೀಲ್​ ಶೆಟ್ಟಿ ನೀಡಿದ ನೇರ ಉತ್ತರ ಇಲ್ಲಿದೆ..

KL Rahul Athiya Shetty Marriage: ಸುನೀಲ್​ ಶೆಟ್ಟಿ ಅವರು ಹೋದಲ್ಲಿ ಬಂದಲ್ಲಿ ಕೆಎಲ್​ ರಾಹುಲ್-ಆಥಿಯಾ ಶೆಟ್ಟಿ ಮದುವೆ ಬಗ್ಗೆಯೇ ಪ್ರಶ್ನೆ ಎದುರಾಗುತ್ತಿದೆ. ಅದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

KL Rahul Marriage: ಕೆಎಲ್​ ರಾಹುಲ್-ಆಥಿಯಾ ಶೆಟ್ಟಿ ಮದುವೆ ತಯಾರಿ ನಿಜವೇ? ಸುನೀಲ್​ ಶೆಟ್ಟಿ ನೀಡಿದ ನೇರ ಉತ್ತರ ಇಲ್ಲಿದೆ..
ಕೆಎಲ್ ರಾಹುಲ್, ಆಥಿಯಾ ಶೆಟ್ಟಿ, ಸುನೀಲ್ ಶೆಟ್ಟಿ
TV9 Web
| Edited By: |

Updated on: Jul 13, 2022 | 7:18 AM

Share

ಸಿನಿಮಾ ಕ್ಷೇತ್ರದವರು ಕ್ರಿಕೆಟ್​ ಆಟಗಾರರನ್ನು ಮದುವೆ ಆದ ಹಲವು ಉದಾಹರಣೆಗಳಿವೆ. ಅದೇ ಹಾದಿಯಲ್ಲಿ ಕೆಎಲ್​ ರಾಹುಲ್​ (KL Rahul) ಹಾಗೂ ಆಥಿಯಾ ಶೆಟ್ಟಿ ಸಾಗುತ್ತಿದ್ದಾರೆ ಎಂಬ ಮಾತು ಬಹಳ ದಿನಗಳಿಂದಲೂ ಕೇಳಿಬರುತ್ತಲೇ ಇದೆ. ಸ್ಟಾರ್​ ಕ್ರಿಕೆಟಿಗ ಕೆಎಲ್​ ರಾಹುಲ್​ ಅವರು ಸುನೀಲ್​ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ (Athiya Shetty) ಜೊತೆ ಹಲವು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇಬ್ಬರೂ ಶೀಘ್ರದಲ್ಲೇ ಹಸೆ ಮಣೆ ಏರುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿ ಕೇಳಿಬರುತ್ತಿದೆ. ಅದಕ್ಕೆ ಆಥಿಯಾ ಶೆಟ್ಟಿ ತಂದೆ ಸುನೀಲ್​ ಶೆಟ್ಟಿ (Suniel Shetty) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆ ಮೂಲಕ ಹರಿದಾಡುತ್ತಿರುವ ಅಂತೆ-ಕಂತೆಗಳಿಗೆ ಅವರು ಪೂರ್ಣವಿರಾಮ ಇಟ್ಟಿದ್ದಾರೆ.

ಯಾವಾಗ ಆಥಿಯಾ ಶೆಟ್ಟಿ ಹಾಗೂ ಕೆಎಲ್​ ರಾಹುಲ್​ ಅವರು ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದರೋ ಆಗಿನಿಂದಲೇ ಇಬ್ಬರ ಮದುವೆ ಬಗ್ಗೆ ಕುಟುಂಬದವರಿಗೆ ಪ್ರಶ್ನೆ ಎದುರಾಗಲು ಶುರುವಾಯಿತು. ಈ ಕುರಿತು ಸುನೀಲ್​ ಶೆಟ್ಟಿ ಅನೇಕ ಸಲ ಪ್ರತಿಕ್ರಿಯೆ ನೀಡಿದ್ದುಂಟು. ಇತ್ತೀಚಿನ ದಿನಗಳಲ್ಲಿ ಮದುವೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸುನೀಲ್​ ಶೆಟ್ಟಿ ಅವರು ಹೋದಲ್ಲಿ ಬಂದಲ್ಲಿ ಈ ಬಗ್ಗೆಯೇ ಪ್ರಶ್ನೆ ಎದುರಾಗುತ್ತಿದೆ. ಇತ್ತೀಚೆಗೆ ಅವರು ‘ರೇಡಿಯೋ ಮಿರ್ಚಿ’ಗೆ ಪ್ರತಿಕ್ರಿಯೆ ನೀಡಿದ್ದು, ‘ಇಲ್ಲ.. ಸದ್ಯಕ್ಕೆ ಮದುವೆ ಬಗ್ಗೆ ಏನೂ ಪ್ಲ್ಯಾನ್​ ಆಗಿಲ್ಲ’ ಎಂದು ಹೇಳಿದ್ದಾರೆ.

‘ಯಾವಾಗ ಮದುವೆ ಆಗಬೇಕು ಎಂಬುದು ಆಥಿಯಾ ಆಯ್ಕೆಗೆ ಬಿಟ್ಟ ವಿಚಾರ’ ಎಂದು ಈ ಹಿಂದೆ ಕೂಡ ಸುನೀಲ್​ ಶೆಟ್ಟಿ ಹೇಳಿದ್ದರು. ಆಥಿಯಾ ಶೆಟ್ಟಿ ಸಹೋದರ ಅಹಾನ್​ ಶೆಟ್ಟಿ ಅವರಿಗೂ ಈ ಮೊದಲು ಇಂಥದ್ದೇ ಪ್ರಶ್ನೆ ಕೇಳಲಾಗಿತ್ತು. ‘ಮದುವೆ ತಯಾರಿ ನಡೆದಿಲ್ಲ. ವಿವಾಹ ಸಮಾರಂಭವೇ ನಡೆಯುತ್ತಿಲ್ಲ ಎಂದಮೇಲೆ ನಾವು ದಿನಾಂಕದ ಬಗ್ಗೆ ಏನು ಹೇಳಲು ಸಾಧ್ಯ. ಇದೆಲ್ಲ ಬರೀ ಗಾಸಿಪ್ ಅಷ್ಟೇ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ
Image
ಸುನೀಲ್​ ಶೆಟ್ಟಿ ಮಕ್ಕಳ ಮದುವೆ ಬಗ್ಗೆ ಸುಳ್ಳು ಸುದ್ದಿ; ಗಾಸಿಪ್ ಹಬ್ಬಿಸಿದವರಿಗೆ ಕ್ಲಾಸ್​ ತೆಗೆದುಕೊಂಡ ಸ್ಟಾರ್​ ನಟ
Image
ಹೋಟೆಲ್​ ಕ್ಲೀನರ್​ ಆಗಿದ್ದ ಸುನೀಲ್​ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ; ‘ಅಪ್ಪನೇ ನನ್ನ ಹೀರೋ’ ಎಂದ ಕನ್ನಡಿಗ
Image
ಆರ್ಯನ್​ ಖಾನ್​ ಇನ್ನೂ ಮಗು ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ ನಟ ಸುನೀಲ್​ ಶೆಟ್ಟಿ
Image
ಕೆ.ಎಲ್​. ರಾಹುಲ್​ ಹಾಗೂ ಅಥಿಯಾ ಜೋಡಿ ನೋಡಿ ಸುನೀಲ್​ ಶೆಟ್ಟಿ ಹೇಳಿದ್ದೇನು?

ಕೆಎಲ್ ರಾಹುಲ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು. ಅವರ ಜೊತೆ ಆಥಿಯಾ ಶೆಟ್ಟಿ ಕೂಡ ಪ್ರಯಾಣ ಬೆಳೆಸಿದ್ದರು. ಇಬ್ಬರ ನಡುವೆ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದಷ್ಟು ಬೇಗ ಈ ಜೋಡಿ ಹಸೆಮಣೆ ಏರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ