‘ನನಗೆ ಈ ಟಾಯ್ಲೆಟ್​ನ ಗೀಳು ಹತ್ತಿದೆ ಎಂದ ಸೋನಮ್​ ಕಪೂರ್’​; ವಿಡಿಯೋ ವೈರಲ್

ಸೆಲೆಬ್ರಿಟಿಗಳು ತಮ್ಮ ಮನೆ ಡಿಸೈನ್​ಗೆ ಹೆಚ್ಚು ಒತ್ತು ನೀಡುತ್ತಾರೆ. ದೊಡ್ಡ ಮನೆ ಖರೀದಿಸಿ ಅದಕ್ಕೆ ಐಷಾರಾಮಿ ಲುಕ್​ ನೀಡುತ್ತಾರೆ. ಆದರೆ, ಅಭಿಮಾನಿಗಳಿಗೆ ಮನೆ ತೋರಿಸೋಕೆ ಯಾರೂ ಅಷ್ಟಾಗಿ ಇಷ್ಟಪಡುವುದಿಲ್ಲ.

‘ನನಗೆ ಈ ಟಾಯ್ಲೆಟ್​ನ ಗೀಳು ಹತ್ತಿದೆ ಎಂದ ಸೋನಮ್​ ಕಪೂರ್’​; ವಿಡಿಯೋ ವೈರಲ್
‘ನನಗೆ ಈ ಟಾಯ್ಲೆಟ್​ನ ಗೀಳು ಹತ್ತಿದೆ ಎಂದ ಸೋನಮ್​ ಕಪೂರ್’​; ವಿಡಿಯೋ ವೈರಲ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 13, 2021 | 5:56 PM

ನಟಿ ಸೋನಮ್ ಕಪೂರ್​ ಅವರು ಉದ್ಯಮಿ ಆನಂದ್​ ಅಹೂಜಾ ಅವರನ್ನು ಮದುವೆ ಆದ ನಂತರದಲ್ಲಿ ನಟನೆಯಲ್ಲಿ ಅಷ್ಟು ಆ್ಯಕ್ಟಿವ್​ ಆಗಿಲ್ಲ. ಸದ್ಯ ಅವರ ಕೈಯಲ್ಲಿ ಒಂದು ಸಿನಿಮಾ ಮಾತ್ರವಿದೆ. ಅದರ ಕೆಲಸಗಳು ಕೂಡ ಪೂರ್ಣಗೊಂಡಿದೆ. ಆದರೆ, ಇದನ್ನು ಬಿಟ್ಟು ಅವರು ಮತ್ತೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಈಗ ಸೋನಮ್​ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಐಷಾರಾಮಿ ಮನೆ.

ಸೆಲೆಬ್ರಿಟಿಗಳು ತಮ್ಮ ಮನೆ ಡಿಸೈನ್​ಗೆ ಹೆಚ್ಚು ಒತ್ತು ನೀಡುತ್ತಾರೆ. ದೊಡ್ಡ ಮನೆ ಖರೀದಿಸಿ ಅದಕ್ಕೆ ಐಷಾರಾಮಿ ಲುಕ್​ ನೀಡುತ್ತಾರೆ. ಆದರೆ, ಅಭಿಮಾನಿಗಳಿಗೆ ಮನೆ ತೋರಿಸೋಕೆ ಯಾರೂ ಅಷ್ಟಾಗಿ ಇಷ್ಟಪಡುವುದಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಮನೆಯ ವಿಡಿಯೋ ಮಾಡಿ ಪೋಸ್ಟ್​ ಮಾಡಿದ್ದು ಇದೆ. ಅದನ್ನು ಹೊರತುಪಡಿಸಿ ಮತ್ಯಾರೂ ಈ ರೀತಿ ಮನೆಯ ಪರಿಚಯ ಮಾಡಿಲ್ಲ. ಆದರೆ, ಸೋನಮ್​ ಕಪೂರ್​ ಅಭಿಮಾನಿಗಳಿಗೆ ತಮ್ಮ ಮನೆ ತೋರಿಸಿದ್ದಾರೆ.

ಸೋನಮ್​ ಹಾಗೂ ಅವರ ಪತಿ ಆನಂದ್​ ಲಂಡನ್​ನಲ್ಲಿ ಮನೆ ಹೊಂದಿದ್ದಾರೆ.  ಈ ಮನೆಯನ್ನು ಅಭಿಮಾನಿಗಳಿಗೆ ಅವರು ಪರಿಚಯಿಸಿದ್ದಾರೆ. ಈ ಮನೆ ತುಂಬಾನೇ ಐಷಾರಾಮಿ ಆಗಿದೆ. ಲಿವಿಂಗ್ ಏರಿಯಾ, ಕಿಚನ್​, ಪೌಡರ್​ ರೂಮ್​, ವಾಶ್​ರೂಮ್​ ಎಲ್ಲವನ್ನೂ ಸೋನಮ್​ ವಿಡಿಯೋದಲ್ಲಿ ತೋರಿಸಿದ್ದಾರೆ. ಇದರ ಜತೆಗೆ ಅವರು ಹೈಲೈಟ್​ ಆಗಿದ್ದು ಟಾಯ್ಲೆಟ್​ ವಿಚಾರದಲ್ಲಿ.

‘ನನ್ನ ಬಾತ್​ರೂಮ್​ನಲ್ಲಿ ಸ್ಪೆಷಲ್​ ಏನು ಗೊತ್ತಾ? ಇದೇ ಟೊಟೊ ಪಾಟ್ಸ್​. ಈ ಟಾಯ್ಲೆಟ್​ ಮೇಲೆ ನನಗೆ ಗೀಳು ಹತ್ತಿದೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನು ನೋಡಿದ ಅನೇಕರು ಸೋನಮ್​ ಅವರನ್ನು ಟೀಕೆ ಮಾಡಿದ್ದಾರೆ. ಟಾಯ್ಲೆಟ್​ನಲ್ಲಿ ಗೀಳು ಹತ್ತುವ ವಿಚಾರ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಅವರ ಸಂಪೂರ್ಣ ಮನೆಯನ್ನು ಇಷ್ಟಪಟ್ಟಿದ್ದಾರೆ. ಇನ್ನು, ಮನೆಯಲ್ಲಿ ಕೆಲಸ ಮಾಡೋಕೂ ಜಾಗವಿದೆ. ಸೋನಮ್​ ಹಾಗೂ ಆನಂದ್​ ಒಂದೇ ಕಡೆ ಕೂತು ಕೆಲಸ ಮಾಡುತ್ತಾರೆ. ಈ ಬಗ್ಗೆಯೂ ಸೋನಮ್​ ಹೇಳಿಕೊಂಡಿದ್ದಾರೆ.

ಸೋನಮ್​ ಹಾಗೂ ಆನಂದ್​ 2018ರ ಮೇ ತಿಂಗಳಲ್ಲಿ ಮದುವೆ ಆಗಿದ್ದರು. ಮದುವೆ ಆದ ನಂತರದಲ್ಲಿ ಅವರ ನಟನೆಯ ಮೂರು ಸಿನಿಮಾಗಳು ಮಾತ್ರ ತೆರೆಗೆ ಬಂದಿವೆ. ‘ಬ್ಲೈಂಡ್​’ ಸಿನಿಮಾದಲ್ಲಿ ಸೋನಮ್​ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: Bhoot Police: ಗೆಳೆಯ ಅರ್ಜುನ್ ಕಪೂರ್ ನಟನೆಯ ‘ಭೂತ್ ಪೊಲೀಸ್’ ಚಿತ್ರಕ್ಕೆ ಮಲೈಕಾ ರಿಯಾಕ್ಷನ್ ಏನು?

ಅನಿಲ್​ ಕಪೂರ್​ ಮಗಳ ಮದುವೆಗೆ ಕೇವಲ 30 ಅತಿಥಿಗಳು; ಸ್ಟಾರ್​ಗಳಿಗಾಗಿ ನಡೆಯಲಿದೆ ವಿಶೇಷ ಆರತಕ್ಷತೆ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ