AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿಲ್​ ಕಪೂರ್​ ಮಗಳ ಮದುವೆಗೆ ಕೇವಲ 30 ಅತಿಥಿಗಳು; ಸ್ಟಾರ್​ಗಳಿಗಾಗಿ ನಡೆಯಲಿದೆ ವಿಶೇಷ ಆರತಕ್ಷತೆ

ಸೋಮವಾರ ರಾತ್ರಿ ಕರಣ್​ ಅವರು ರಿಯಾಗೆ ತಾಳಿ ಕಟ್ಟಲಿದ್ದಾರೆ. ಕಪೂರ್​ ಕುಟುಂಬ ತುಂಬಾನೇ ದೊಡ್ಡದಿದೆ. ಹೀಗಾಗಿ, ಕಪೂರ್​ ಫ್ಯಾಮಿಲಿ ಹಾಗೂ ಕರಣ್​ ಕಡೆಯವರು ಒಂದಷ್ಟು ಮಂದಿ ಮದುವೆಗೆ ಆಗಮಿಸುತ್ತಿದ್ದಾರೆ.

ಅನಿಲ್​ ಕಪೂರ್​ ಮಗಳ ಮದುವೆಗೆ ಕೇವಲ 30 ಅತಿಥಿಗಳು; ಸ್ಟಾರ್​ಗಳಿಗಾಗಿ ನಡೆಯಲಿದೆ ವಿಶೇಷ ಆರತಕ್ಷತೆ
ಅನಿಲ್​ ಕಪೂರ್​ ಮಗಳ ಮದುವೆಗೆ ಕೇವಲ 30 ಅತಿಥಿಗಳು; ಸ್ಟಾರ್​ಗಳಿಗಾಗಿ ನಡೆಯಲಿದೆ ವಿಶೇಷ ಆರತಕ್ಷತೆ
TV9 Web
| Edited By: |

Updated on: Aug 16, 2021 | 7:14 PM

Share

ಸ್ಟಾರ್​ ನಟರ ಮಕ್ಕಳ ಮದುವೆ ಎಂದರೆ ಅಲ್ಲೊಂದು ಅದ್ದೂರಿತನ ಇರುತ್ತದೆ. ಚಿತ್ರರಂಗದ ಕಲಾವಿದರ ದಂಡೇ ಅಲ್ಲಿ ನೆರೆದಿರುತ್ತದೆ. ಆದರೆ, ಈಗ ಕೊರೊನಾ ವೈರಸ್​ ಕಾಟ. ಹೀಗಾಗಿ, ಆಪ್ತರ ಸಮ್ಮುಖದಲ್ಲಿ ಮದುವೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅನಿಲ್​ ಕಪೂರ್​ ಮಗಳು ರಿಯಾ ಕಪೂರ್​ ಕೂಡ ಮದುವೆ ಆಗಿದ್ದಾರೆ. 13 ವರ್ಷಗಳ ಕಾಲ ಕರಣ್​ ಬೂಲಾನಿ ಅವರನ್ನು ಪ್ರೀತಿಸಿ, ಈಗ ಮದುವೆ ಆಗುತ್ತಿದ್ದಾರೆ. ಈ ಮದುವೆಗೆ ಕೇವಲ 30 ಅತಿಥಿಗಳು ಮಾತ್ರ ಆಗಮಿಸಿದ್ದರು.

ಕಪೂರ್​ ಕುಟುಂಬ ತುಂಬಾನೇ ದೊಡ್ಡದಿದೆ. ಹೀಗಾಗಿ, ಕಪೂರ್​ ಫ್ಯಾಮಿಲಿ ಹಾಗೂ ಕರಣ್​ ಕಡೆಯವರು ಒಂದಷ್ಟು ಮಂದಿ ಮದುವೆಗೆ ಆಗಮಿಸಿದ್ದರು. 2018ರಲ್ಲಿ ಸೋನಮ್​ ಕಪೂರ್​ ಮದುವೆ ನೆರವೇರಿತ್ತು. ಆ ಮದುವೆಯಲ್ಲಿ ಸ್ಟಾರ್​ ನಟರ ದಂಡೇ ನೆರೆದಿತ್ತು. ಆದರೆ, ಕೊವಿಡ್​ನಿಂದ ರಿಯಾ ಮದುವೆಗೆ ಆ ಅದ್ದೂರಿತನಕ್ಕೆ ಆಸ್ಪದ ಸಿಗುತ್ತಿಲ್ಲ. ಇದು ಅನೀಲ್​ ಕಪೂರ್​ಗೆ ಬೇಸರ ತರಿಸಿದೆ. ಹೀಗಾಗಿ, ದೊಡ್ಡಮಟ್ಟದಲ್ಲಿ ರಿಸೆಪ್ಷನ್​ ನಡೆಸುವ ಆಲೋಚನೆ ಅನಿಲ್​ ಕಪೂರ್​ ಹೊಂದಿದ್ದಾರೆ.

ಇನ್ನು, ರಿಯಾ ಮದುವೆಯನ್ನು ಕುಟುಂಬ ಸಂಭ್ರಮಿಸುತ್ತಿದೆ. ರಿಯಾ ಅಕ್ಕ ಸೋನಮ್​ ಕಪೂರ್​ ಅಹೂಜಾ, ರಿಯಾ ಭಾವ ಆನಂದ್​ ಅಹೂಜಾ, ಶ್ರೀದೇವಿ ಮಗಳು ಜಾಹ್ನವಿ ಕಪೂರ್​, ಅರ್ಜುನ್​ ಕಪೂರ್​ ಸೇರಿ ಸಾಕಷ್ಟು ಮಂದಿ ಮದುವೆಯಲ್ಲಿ ಹಾಜರಿ ಹಾಕಿದ್ದಾರೆ. ಖುಷಿ, ಶಯಾನಾ ಸೇರಿ ಸಾಕಷ್ಟು ಮಂದಿ ಮದುವೆ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಕೊವಿಡ್​ ಎರಡನೇ ಅಲೆ ಈಗ ತಾನೇ ತಣ್ಣಗಾಗುತ್ತಿದೆ. ಇನ್ನು, ಮೂರನೇ ಅಲೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಎಲ್ಲವನ್ನೂ ನೋಡಿಕೊಂಡು ರಿಸೆಪ್ಷನ್​ ನಿರ್ಧರಿಸೋಕೆ ಅನಿಲ್​ ಕಪೂರ್​ ಆಲೋಚಿಸಿದ್ದಾರೆ. ಈ ಆರತಕ್ಷತೆಗೆ ಬಾಲಿವುಡ್​ನ ಸೆಲೆಬ್ರಿಟಿಗಳು, ರಾಜಕಾರಣಿಗಳು, ದೊಡ್ಡದೊಡ್ಡ ಅಧಿಕಾರಿಗಳು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: 64ರ ಪ್ರಾಯದ ಅನಿಲ್​ ಕಪೂರ್​ ಈಗಲೂ ಬಾಡಿ ಫಿಟ್​ ಆಗಿ ಇಟ್ಟುಕೊಂಡಿರುವುದು ಹೇಗೆ? ಇಲ್ಲಿದೆ ಉತ್ತರ

Follow Us
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ