AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿಯ ಫ್ಯಾನ್ಸ್​ಗೆ 25 ಕಾರು, 200 ಐಫೋನ್ ಗಿಫ್ಟ್ ಕೊಡುವೆ ಎಂದ ಸುಕೇಶ್ ಚಂದ್ರಶೇಖರ್

ನೂರಾರು ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್​, ಜೈಲಿನಿಂದಲೇ ಸುದ್ದಿ ಆಗುತ್ತಿದ್ದಾನೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಜೊತೆ ಆತನಿಗೆ ಆಪ್ತತೆ ಇತ್ತು ಎಂಬುದಕ್ಕೆ ಫೋಟೋಗಳು ಸಾಕ್ಷಿ ಇವೆ. ಈಗ ನಟಿಯ ಅಭಿಮಾನಿಗಳಿಗೆ ಸುಕೇಶ್​ ಭರ್ಜರಿ ಆಫರ್​ ನೀಡಿದ್ದಾನೆ. 25 ಕಾರು, 200 ಐಫೋನ್ ಕೊಡುವುದಾಗಿ ಆತ ಹೇಳಿದ್ದಾನೆ.

ಪ್ರೇಯಸಿಯ ಫ್ಯಾನ್ಸ್​ಗೆ 25 ಕಾರು, 200 ಐಫೋನ್ ಗಿಫ್ಟ್ ಕೊಡುವೆ ಎಂದ ಸುಕೇಶ್ ಚಂದ್ರಶೇಖರ್
ಜಾಕ್ವೆಲಿನ್ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​
ಮದನ್​ ಕುಮಾರ್​
|

Updated on: Oct 31, 2024 | 8:51 PM

Share

ಸುಕೇಶ್​ ಚಂದ್ರಶೇಖರ್ ಸಹವಾಸ ಮಾಡಿದ್ದಕ್ಕಾಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಕೊರಳಿಗೆ ವಿವಾದ ಸುತ್ತಿಕೊಂಡಿತು. ಈಗ ಸುಕೇಶ್ ಚಂದ್ರಶೇಖರ್​ ಜೈಲಿನಲ್ಲಿ ಇದ್ದಾನೆ. ಆದರೆ ಆತನ ಹಾವಳಿ ಕಡಿಮೆ ಆಗಿಲ್ಲ. ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆತ ಪ್ರೇಯಸಿ ಎಂದು ಕರೆಯುತ್ತಾನೆ. ಜೈಲಿನಿಂದಲೇ ಆಗಾಗ ಪತ್ರ ಬರೆಯುತ್ತಾನೆ. ದೀಪಾವಳಿ ಹಬ್ಬದ ಪ್ರಯುಕ್ತ ಆತ ಹೊಸ ಪತ್ರ ಬರೆದಿದ್ದಾನೆ. ಅಚ್ಚರಿ ಏನೆಂದರೆ, ಈ ಬಾರಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಅಭಿಮಾನಿಗಳಿಗೆ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡುವುದಾಗಿ ಸುಕೇಶ್ ಚಂದ್ರಶೇಖರ್​ ಘೋಷಿಸಿದ್ದಾನೆ.

ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡಿಸ್​ ಅವರ ಹೊಸ ಹಾಡು ಬಿಡುಗಡೆ ಆಯಿತು. ಯೂಟ್ಯೂಬ್​ನಲ್ಲಿ ಆ ಹಾಡಿಗೆ ಕಮೆಂಟ್​ ಮಾಡಿ ಪ್ರೋತ್ಸಾಹಿಸುವ ಅದೃಷ್ಟವಂತ ಅಭಿಮಾನಿಗಳಿಗೆ ತಾನು 25 ಮಹೀಂದ್ರ ಥಾರ್, 200 ಐಫೋನ್​ 16 ಪ್ರೋ ಉಡುಗೊರೆಯಾಗಿ ನೀಡುವುದಾಗ ಸುಕೇಶ್ ಚಂದ್ರಶೇಖರ್​ ತಿಳಿಸಿದ್ದಾನೆ ಎಂದು ಸುದ್ದಿ ಆಗಿದೆ. ಆತನ ಹುಚ್ಚುತನಕ್ಕೆ ಜನರು ನಗುತ್ತಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್​ ಚಂದ್ರಶೇಖರ್​ ಜೊತೆ ತಬ್ಬಿಕೊಂಡು ಮುದ್ದಾಡುತ್ತಾ ಇರುವ ಫೋಟೋಗಳು ವೈರಲ್ ಆಗಿದ್ದವು. ಆ ಬಳಿಕ ಜೈಲಿನಿಂದ ಅನೇಕ ಬಾರಿ ಆತ ಪತ್ರ ಬರೆದಿದ್ದಾನೆ. ಈಗಿನ ಪತ್ರದಲ್ಲಿ ಜಾಕ್ವೆಲಿನ್ ಅವರ ಬಗ್ಗೆ ಆತ ಪ್ರೀತಿಯ ಮಾತುಗಳನ್ನು ಆಡಿದ್ದಾನೆ. ತನ್ನನ್ನು ತಾನು ರಾಮ ಎಂದುಕೊಂಡು, ಜಾಕ್ವೆಲಿನ್ ಅವರನ್ನು ಸೀತೆ ಎಂದು ಸುಕೇಶ್​ ಚಂದ್ರಶೇಖರ್​ ಬಣ್ಣಿಸಿದ್ದಾನೆ.

ಇದನ್ನೂ ಓದಿ: ಹೇಗಿದೆ ನೋಡಿ ಜಾಕ್ವೆಲಿನ್ ಫರ್ನಾಂಡಿಸ್ ವೆಕೇಶನ್ ಫೋಟೋಸ್

ಶೀಘ್ರದಲ್ಲೇ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಸುಕೇಶ್​ ಚಂದ್ರಶೇಖರ್​ಗೆ ಇದೆ. ಹಾಗಾಗಿ ರಾಮ ವನವಾಸ ಮುಗಿಸಿ ಬಂದ ರೀತಿಯಲ್ಲೇ ತಾನು ಜೈಲುವಾಸ ಮುಗಿಸಿ ಬರುತ್ತೇನೆ ಎಂದು ಆತ ಪತ್ರದಲ್ಲಿ ಬರೆದಿದ್ದಾರೆ. ‘ನನ್ನನ್ನು ಜನರು ಹುಚ್ಚ ಎನ್ನುತ್ತಾರೆ. ಆದರೆ ನನ್ನ-ನಿನ್ನ ನಡುವೆ ಇರುವುದು ಈ ಜಗತ್ತಿಗೆ ಏನು ತಿಳಿಯುತ್ತದೆ? ನಮ್ಮ ಪ್ರೀತಿ ಇಡೀ ಜಗತ್ತಿಗೆ ಮಾದರಿ ಆಗಲಿದೆ’ ಎಂದು ಪತ್ರ ಬರೆದಿದ್ದಾನೆ ಸುಕೇಶ್ ಚಂದ್ರಶೇಖರ್​. ಈತನ ಈ ಹುಚ್ಚಾಟಗಳಿಂದ ಜಾಕ್ವೆಲಿನ್ ಫರ್ನಾಂಡಿಸ್​ ಅವರಿಗೆ ದಿನದಿನವೂ ತಲೆಬಿಸಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ