AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿಯ ಫ್ಯಾನ್ಸ್​ಗೆ 25 ಕಾರು, 200 ಐಫೋನ್ ಗಿಫ್ಟ್ ಕೊಡುವೆ ಎಂದ ಸುಕೇಶ್ ಚಂದ್ರಶೇಖರ್

ನೂರಾರು ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್​, ಜೈಲಿನಿಂದಲೇ ಸುದ್ದಿ ಆಗುತ್ತಿದ್ದಾನೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಜೊತೆ ಆತನಿಗೆ ಆಪ್ತತೆ ಇತ್ತು ಎಂಬುದಕ್ಕೆ ಫೋಟೋಗಳು ಸಾಕ್ಷಿ ಇವೆ. ಈಗ ನಟಿಯ ಅಭಿಮಾನಿಗಳಿಗೆ ಸುಕೇಶ್​ ಭರ್ಜರಿ ಆಫರ್​ ನೀಡಿದ್ದಾನೆ. 25 ಕಾರು, 200 ಐಫೋನ್ ಕೊಡುವುದಾಗಿ ಆತ ಹೇಳಿದ್ದಾನೆ.

ಪ್ರೇಯಸಿಯ ಫ್ಯಾನ್ಸ್​ಗೆ 25 ಕಾರು, 200 ಐಫೋನ್ ಗಿಫ್ಟ್ ಕೊಡುವೆ ಎಂದ ಸುಕೇಶ್ ಚಂದ್ರಶೇಖರ್
ಜಾಕ್ವೆಲಿನ್ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​
ಮದನ್​ ಕುಮಾರ್​
|

Updated on: Oct 31, 2024 | 8:51 PM

Share

ಸುಕೇಶ್​ ಚಂದ್ರಶೇಖರ್ ಸಹವಾಸ ಮಾಡಿದ್ದಕ್ಕಾಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಕೊರಳಿಗೆ ವಿವಾದ ಸುತ್ತಿಕೊಂಡಿತು. ಈಗ ಸುಕೇಶ್ ಚಂದ್ರಶೇಖರ್​ ಜೈಲಿನಲ್ಲಿ ಇದ್ದಾನೆ. ಆದರೆ ಆತನ ಹಾವಳಿ ಕಡಿಮೆ ಆಗಿಲ್ಲ. ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆತ ಪ್ರೇಯಸಿ ಎಂದು ಕರೆಯುತ್ತಾನೆ. ಜೈಲಿನಿಂದಲೇ ಆಗಾಗ ಪತ್ರ ಬರೆಯುತ್ತಾನೆ. ದೀಪಾವಳಿ ಹಬ್ಬದ ಪ್ರಯುಕ್ತ ಆತ ಹೊಸ ಪತ್ರ ಬರೆದಿದ್ದಾನೆ. ಅಚ್ಚರಿ ಏನೆಂದರೆ, ಈ ಬಾರಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಅಭಿಮಾನಿಗಳಿಗೆ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡುವುದಾಗಿ ಸುಕೇಶ್ ಚಂದ್ರಶೇಖರ್​ ಘೋಷಿಸಿದ್ದಾನೆ.

ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡಿಸ್​ ಅವರ ಹೊಸ ಹಾಡು ಬಿಡುಗಡೆ ಆಯಿತು. ಯೂಟ್ಯೂಬ್​ನಲ್ಲಿ ಆ ಹಾಡಿಗೆ ಕಮೆಂಟ್​ ಮಾಡಿ ಪ್ರೋತ್ಸಾಹಿಸುವ ಅದೃಷ್ಟವಂತ ಅಭಿಮಾನಿಗಳಿಗೆ ತಾನು 25 ಮಹೀಂದ್ರ ಥಾರ್, 200 ಐಫೋನ್​ 16 ಪ್ರೋ ಉಡುಗೊರೆಯಾಗಿ ನೀಡುವುದಾಗ ಸುಕೇಶ್ ಚಂದ್ರಶೇಖರ್​ ತಿಳಿಸಿದ್ದಾನೆ ಎಂದು ಸುದ್ದಿ ಆಗಿದೆ. ಆತನ ಹುಚ್ಚುತನಕ್ಕೆ ಜನರು ನಗುತ್ತಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್​ ಚಂದ್ರಶೇಖರ್​ ಜೊತೆ ತಬ್ಬಿಕೊಂಡು ಮುದ್ದಾಡುತ್ತಾ ಇರುವ ಫೋಟೋಗಳು ವೈರಲ್ ಆಗಿದ್ದವು. ಆ ಬಳಿಕ ಜೈಲಿನಿಂದ ಅನೇಕ ಬಾರಿ ಆತ ಪತ್ರ ಬರೆದಿದ್ದಾನೆ. ಈಗಿನ ಪತ್ರದಲ್ಲಿ ಜಾಕ್ವೆಲಿನ್ ಅವರ ಬಗ್ಗೆ ಆತ ಪ್ರೀತಿಯ ಮಾತುಗಳನ್ನು ಆಡಿದ್ದಾನೆ. ತನ್ನನ್ನು ತಾನು ರಾಮ ಎಂದುಕೊಂಡು, ಜಾಕ್ವೆಲಿನ್ ಅವರನ್ನು ಸೀತೆ ಎಂದು ಸುಕೇಶ್​ ಚಂದ್ರಶೇಖರ್​ ಬಣ್ಣಿಸಿದ್ದಾನೆ.

ಇದನ್ನೂ ಓದಿ: ಹೇಗಿದೆ ನೋಡಿ ಜಾಕ್ವೆಲಿನ್ ಫರ್ನಾಂಡಿಸ್ ವೆಕೇಶನ್ ಫೋಟೋಸ್

ಶೀಘ್ರದಲ್ಲೇ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಸುಕೇಶ್​ ಚಂದ್ರಶೇಖರ್​ಗೆ ಇದೆ. ಹಾಗಾಗಿ ರಾಮ ವನವಾಸ ಮುಗಿಸಿ ಬಂದ ರೀತಿಯಲ್ಲೇ ತಾನು ಜೈಲುವಾಸ ಮುಗಿಸಿ ಬರುತ್ತೇನೆ ಎಂದು ಆತ ಪತ್ರದಲ್ಲಿ ಬರೆದಿದ್ದಾರೆ. ‘ನನ್ನನ್ನು ಜನರು ಹುಚ್ಚ ಎನ್ನುತ್ತಾರೆ. ಆದರೆ ನನ್ನ-ನಿನ್ನ ನಡುವೆ ಇರುವುದು ಈ ಜಗತ್ತಿಗೆ ಏನು ತಿಳಿಯುತ್ತದೆ? ನಮ್ಮ ಪ್ರೀತಿ ಇಡೀ ಜಗತ್ತಿಗೆ ಮಾದರಿ ಆಗಲಿದೆ’ ಎಂದು ಪತ್ರ ಬರೆದಿದ್ದಾನೆ ಸುಕೇಶ್ ಚಂದ್ರಶೇಖರ್​. ಈತನ ಈ ಹುಚ್ಚಾಟಗಳಿಂದ ಜಾಕ್ವೆಲಿನ್ ಫರ್ನಾಂಡಿಸ್​ ಅವರಿಗೆ ದಿನದಿನವೂ ತಲೆಬಿಸಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ
ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು
ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು
ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿ ಮೇಲೆ ನಡೆದ ಕಲಿಯುಗದ ಪ್ರಹ್ಲಾದ
ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿ ಮೇಲೆ ನಡೆದ ಕಲಿಯುಗದ ಪ್ರಹ್ಲಾದ
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?