ಜಾಕ್ವೆಲಿನ್​ಗೆ ಬಿಟ್ಟು ಬಿಡದೇ ಕಾಡುತ್ತಿರುವ ಸುಕೇಶ್; ಜೈಲಿನಿಂದ ಮತ್ತೊಂದು ಪ್ರೇಮಪತ್ರ

ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ತಮ್ಮ ಭಾವನೆಯನ್ನು ವಿವರವಾಗಿ ಬರೆದುಕೊಂಡಿದ್ದಾನೆ. ‘ಬೇಬಿ ಓ ನನ್ನ ಬೇಬಿ.. ನಿನ್ನ ಹೊಸ ಫೋಟೋಗಳನ್ನು ನೋಡಿದೆ. ಯಾರು ಇಷ್ಟು ಸುಂದರವಾಗಿ ಇರಲು ಸಾಧ್ಯ’ ಎಂದಿರುವ ಆತ ‘ಸಜ್ನಿ..’ ಹಾಡನ್ನು ಬರೆದಿದ್ದಾನೆ.

ಜಾಕ್ವೆಲಿನ್​ಗೆ ಬಿಟ್ಟು ಬಿಡದೇ ಕಾಡುತ್ತಿರುವ ಸುಕೇಶ್; ಜೈಲಿನಿಂದ ಮತ್ತೊಂದು ಪ್ರೇಮಪತ್ರ
ಸುಕೇಶ್-ಜಾಕ್ವೆಲಿನ್
Follow us
|

Updated on: Sep 21, 2024 | 7:00 AM

ನಟಿ ಜಾಕ್ವೆಲಿನ್ ಫರ್ನಾಂಡಿಸ್​ಗೆ ಸುಕೇಶ್ ಚಂದ್ರಶೇಖರ್ ನಿರಂತರವಾಗಿ ಕಾಡುತ್ತಿದ್ದಾನೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್, ಜಾಕ್ವೆಲಿನ್ ಅವರನ್ನು ಪ್ರೇಯಸಿ ಎಂದು ಕರೆದಿದ್ದಾನೆ. ಈ ಕಾರಣದಿಂದಲೇ ಒಂದಾದಮೇಲೆ ಒಂದರಂತೆ ಪತ್ರಗಳನ್ನು ಬರೆಯುತ್ತಿದ್ದಾನೆ. ಜಾಕ್ವೆಲಿನ್ ಅವರು ಆಗಸ್ಟ್ 11ರಂದು ಬರ್ತ್​ಡೇ ಆಚರಿಸಿಕೊಂಡರು. ಆಗ ಸುಕೇಶ್ ಪತ್ರ ಬರೆದಿದ್ದ ವಿಚಾರ ಈಗ ರಿವೀಲ್ ಆಗಿದೆ. ‘ಲಾಪತಾ ಲೇಡಿಸ್’ ಚಿತ್ರದ ‘ಸಜ್ನಿ..’ ಹಾಡನ್ನು ಸುಕೇಶ್ ಬರೆದಿದ್ದ.

ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ತಮ್ಮ ಭಾವನೆಯನ್ನು ವಿವರವಾಗಿ ಬರೆದುಕೊಂಡಿದ್ದಾನೆ. ‘ಬೇಬಿ ಓ ನನ್ನ ಬೇಬಿ.. ನಿನ್ನ ಹೊಸ ಫೋಟೋಗಳನ್ನು ನೋಡಿದೆ. ಯಾರು ಇಷ್ಟು ಸುಂದರವಾಗಿ ಇರಲು ಸಾಧ್ಯ. ನೀನು ಸಾಕಷ್ಟು ಸುಂದರವಾಗಿ ಇದ್ದೀಯಾ. ನಿನಗೆ ಅರ್ಪಿಸಲು ಎರಡು ವಿಷಯ ಇದೆ’ ಎಂದಿದ್ದಾನೆ ಆತ.

‘ಸಜ್ನಿ.. ಹಾಡನ್ನು ಹಾಡಬೇಕು. ಈ ಹಾಡಿನ ಪ್ರತಿ ಸಾಲು ನಿನಗಾಗಿ. ನಿನ್ನ ಜೊತೆ ಮಾತನಾಡದೆ, ನೀನು ನನ್ನ ಬಳಿ ಇರದೆ ರಾತ್ರಿ ಹಗಲು ಹೇಗೆ ಸಾಗುತ್ತಿದೆ ತಿಳಿಯುತ್ತಿಲ್ಲ. ನಿನಗಾಗಿ ಬರೆದ ಆರ್ಟ್​ವರ್ಕ್ ಮತ್ತೊಂದು ಡೆಡಿಕೇಷನ್. ನಿನಗೆ ಇದು ಇಷ್ಟ ಆಗುತ್ತದೆ ಎಂದುಕೊಂಡಿದ್ದೇನೆ’ ಎಂದಿದ್ದಾನೆ ಆತ. ‘ನಾನು ಪ್ರತಿ ಕ್ಷಣ ನಿನ್ನ ಬಗ್ಗೆ ಯೋಚಿಸುತ್ತೇನೆ. ಸಜ್ನಿ ಐ ಲವ್​ಯೂ. ನನ್ನ ಬೊಟ್ಟ ಬೊಮ್ಮ ಲವ್ ಯೂ. ನೀನು ನಿಜಕ್ಕೂ ಅಮೇಜಿಂಗ್’ ಎಂದು ಬರೆದಿದ್ದಾನೆ ಆತ.

ಇದನ್ನೂ ಓದಿ: ವಯನಾಡು ಸಂತ್ರಸ್ತರಿಗೆ 15 ಕೋಟಿ ರೂ., 300 ಮನೆ ನೀಡಲು ಮುಂದಾದ ನಟಿ ಜಾಕ್ವೆಲಿನ್ ಗೆಳೆಯ ಸುಕೇಶ್ 

ಸುಕೇಶ್ ಹಾಗೂ ಜಾಕ್ವೆಲಿನ್ ಪ್ರೀತಿಯಲ್ಲಿ ಇದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋ ವೈರಲ್ ಆಗಿತ್ತು. ಜಾಕ್ವೆಲಿನ್ ಜೊತೆ ಆಪ್ತವಾಗಿದ್ದ ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ ಎನ್ನಲಾಗಿದೆ. ಈ ಪ್ರಕರಣದಿಂದ ಜಾಕ್ವೆಲಿನ್ ಸಾಕಷ್ಟು ತೊಂದರೆ ಅನುಭವಿಸಿದ್ದರು. ಸುಕೇಶ್​ನಿಂದ ಗಿಫ್ಟ್ ಪಡೆದ ಆರೋಪದಲ್ಲಿ ವಿಚಾರಣೆ ಕೂಡ ಎದುರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ