AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಕ್ವೆಲಿನ್​ಗೆ ಬಿಟ್ಟು ಬಿಡದೇ ಕಾಡುತ್ತಿರುವ ಸುಕೇಶ್; ಜೈಲಿನಿಂದ ಮತ್ತೊಂದು ಪ್ರೇಮಪತ್ರ

ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ತಮ್ಮ ಭಾವನೆಯನ್ನು ವಿವರವಾಗಿ ಬರೆದುಕೊಂಡಿದ್ದಾನೆ. ‘ಬೇಬಿ ಓ ನನ್ನ ಬೇಬಿ.. ನಿನ್ನ ಹೊಸ ಫೋಟೋಗಳನ್ನು ನೋಡಿದೆ. ಯಾರು ಇಷ್ಟು ಸುಂದರವಾಗಿ ಇರಲು ಸಾಧ್ಯ’ ಎಂದಿರುವ ಆತ ‘ಸಜ್ನಿ..’ ಹಾಡನ್ನು ಬರೆದಿದ್ದಾನೆ.

ಜಾಕ್ವೆಲಿನ್​ಗೆ ಬಿಟ್ಟು ಬಿಡದೇ ಕಾಡುತ್ತಿರುವ ಸುಕೇಶ್; ಜೈಲಿನಿಂದ ಮತ್ತೊಂದು ಪ್ರೇಮಪತ್ರ
ಸುಕೇಶ್-ಜಾಕ್ವೆಲಿನ್
ರಾಜೇಶ್ ದುಗ್ಗುಮನೆ
|

Updated on: Sep 21, 2024 | 7:00 AM

Share

ನಟಿ ಜಾಕ್ವೆಲಿನ್ ಫರ್ನಾಂಡಿಸ್​ಗೆ ಸುಕೇಶ್ ಚಂದ್ರಶೇಖರ್ ನಿರಂತರವಾಗಿ ಕಾಡುತ್ತಿದ್ದಾನೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್, ಜಾಕ್ವೆಲಿನ್ ಅವರನ್ನು ಪ್ರೇಯಸಿ ಎಂದು ಕರೆದಿದ್ದಾನೆ. ಈ ಕಾರಣದಿಂದಲೇ ಒಂದಾದಮೇಲೆ ಒಂದರಂತೆ ಪತ್ರಗಳನ್ನು ಬರೆಯುತ್ತಿದ್ದಾನೆ. ಜಾಕ್ವೆಲಿನ್ ಅವರು ಆಗಸ್ಟ್ 11ರಂದು ಬರ್ತ್​ಡೇ ಆಚರಿಸಿಕೊಂಡರು. ಆಗ ಸುಕೇಶ್ ಪತ್ರ ಬರೆದಿದ್ದ ವಿಚಾರ ಈಗ ರಿವೀಲ್ ಆಗಿದೆ. ‘ಲಾಪತಾ ಲೇಡಿಸ್’ ಚಿತ್ರದ ‘ಸಜ್ನಿ..’ ಹಾಡನ್ನು ಸುಕೇಶ್ ಬರೆದಿದ್ದ.

ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ತಮ್ಮ ಭಾವನೆಯನ್ನು ವಿವರವಾಗಿ ಬರೆದುಕೊಂಡಿದ್ದಾನೆ. ‘ಬೇಬಿ ಓ ನನ್ನ ಬೇಬಿ.. ನಿನ್ನ ಹೊಸ ಫೋಟೋಗಳನ್ನು ನೋಡಿದೆ. ಯಾರು ಇಷ್ಟು ಸುಂದರವಾಗಿ ಇರಲು ಸಾಧ್ಯ. ನೀನು ಸಾಕಷ್ಟು ಸುಂದರವಾಗಿ ಇದ್ದೀಯಾ. ನಿನಗೆ ಅರ್ಪಿಸಲು ಎರಡು ವಿಷಯ ಇದೆ’ ಎಂದಿದ್ದಾನೆ ಆತ.

‘ಸಜ್ನಿ.. ಹಾಡನ್ನು ಹಾಡಬೇಕು. ಈ ಹಾಡಿನ ಪ್ರತಿ ಸಾಲು ನಿನಗಾಗಿ. ನಿನ್ನ ಜೊತೆ ಮಾತನಾಡದೆ, ನೀನು ನನ್ನ ಬಳಿ ಇರದೆ ರಾತ್ರಿ ಹಗಲು ಹೇಗೆ ಸಾಗುತ್ತಿದೆ ತಿಳಿಯುತ್ತಿಲ್ಲ. ನಿನಗಾಗಿ ಬರೆದ ಆರ್ಟ್​ವರ್ಕ್ ಮತ್ತೊಂದು ಡೆಡಿಕೇಷನ್. ನಿನಗೆ ಇದು ಇಷ್ಟ ಆಗುತ್ತದೆ ಎಂದುಕೊಂಡಿದ್ದೇನೆ’ ಎಂದಿದ್ದಾನೆ ಆತ. ‘ನಾನು ಪ್ರತಿ ಕ್ಷಣ ನಿನ್ನ ಬಗ್ಗೆ ಯೋಚಿಸುತ್ತೇನೆ. ಸಜ್ನಿ ಐ ಲವ್​ಯೂ. ನನ್ನ ಬೊಟ್ಟ ಬೊಮ್ಮ ಲವ್ ಯೂ. ನೀನು ನಿಜಕ್ಕೂ ಅಮೇಜಿಂಗ್’ ಎಂದು ಬರೆದಿದ್ದಾನೆ ಆತ.

ಇದನ್ನೂ ಓದಿ: ವಯನಾಡು ಸಂತ್ರಸ್ತರಿಗೆ 15 ಕೋಟಿ ರೂ., 300 ಮನೆ ನೀಡಲು ಮುಂದಾದ ನಟಿ ಜಾಕ್ವೆಲಿನ್ ಗೆಳೆಯ ಸುಕೇಶ್ 

ಸುಕೇಶ್ ಹಾಗೂ ಜಾಕ್ವೆಲಿನ್ ಪ್ರೀತಿಯಲ್ಲಿ ಇದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋ ವೈರಲ್ ಆಗಿತ್ತು. ಜಾಕ್ವೆಲಿನ್ ಜೊತೆ ಆಪ್ತವಾಗಿದ್ದ ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ ಎನ್ನಲಾಗಿದೆ. ಈ ಪ್ರಕರಣದಿಂದ ಜಾಕ್ವೆಲಿನ್ ಸಾಕಷ್ಟು ತೊಂದರೆ ಅನುಭವಿಸಿದ್ದರು. ಸುಕೇಶ್​ನಿಂದ ಗಿಫ್ಟ್ ಪಡೆದ ಆರೋಪದಲ್ಲಿ ವಿಚಾರಣೆ ಕೂಡ ಎದುರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ