AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮನ ಪಾತ್ರಕ್ಕೆ ರಣಬೀರ್ ಸೂಕ್ತ ಅಲ್ಲ’; ಲಕ್ಷ್ಮಣ ಪಾತ್ರಧಾರಿಯ ನೇರ ಹೇಳಿಕೆ

ಹೊಸ 'ರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರಕ್ಕೆ ಸೂಕ್ತವಲ್ಲ ಎಂದು ಹಿರಿಯ ನಟ ಸುನೀಲ್ ಲಹರಿ ಅಭಿಪ್ರಾಯಪಟ್ಟಿದ್ದಾರೆ. ರಣಬೀರ್‌ರಲ್ಲಿ ರಾಮನಿಗೆ ಇರಬೇಕಾದ ಮುಗ್ಧತೆ ಮತ್ತು ಶಾಂತ ಸ್ವಭಾವ ಕಾಣುತ್ತಿಲ್ಲ. ಬದಲಿಗೆ ಅವರ ನೋಟ 'ಹಾರ್ಶ್' ಆಗಿದ್ದು, ಲಕ್ಷ್ಮಣ ಅಥವಾ ಭರತನ ಪಾತ್ರಕ್ಕೆ ಹೆಚ್ಚು ಸೂಕ್ತ.

‘ರಾಮನ ಪಾತ್ರಕ್ಕೆ ರಣಬೀರ್ ಸೂಕ್ತ ಅಲ್ಲ’; ಲಕ್ಷ್ಮಣ ಪಾತ್ರಧಾರಿಯ ನೇರ ಹೇಳಿಕೆ
ರಣಬೀರ್​-ಸುನೀಲ್
ರಾಜೇಶ್ ದುಗ್ಗುಮನೆ
|

Updated on: Apr 04, 2026 | 3:06 PM

Share

ಒಂದು ಸಿನಿಮಾ ಅಥವಾ ಸೀರಿಸ್ ಮಾಡಿ ಅದು ಗಮನಸೆಳೆದರೆ ಅದು ಬ್ರ್ಯಾಂಡ್ ಆಗಿ ಬಿಡುತ್ತದೆ. ನಂತರ ಅದೇ ರೀತಿಯ ಪ್ರಾಜೆಕ್ಟ್ ಮಾಡಿದರೆ ಜನರು ಬೇಡ ಬೇಡ ಎಂದರೂ ಅದನ್ನು ಮೂಲ ಸೃಷ್ಟಿಗೆ ಹೋಲಿಕೆ ಮಾಡಿಯೇ ಮಾಡುತ್ತಾರೆ. ಈಗ ‘ರಾಮಾಯಣ’ ಸಿನಿಮಾದ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಈ ಮೊದಲು ದೂರದರ್ಶನದಲ್ಲಿ ‘ರಾಮಾಯಣ’ ಸೀರಿಯಲ್ ಪ್ರಸಾರ ಕಂಡಿತ್ತು. ಈಗ ನಿತೇಶ್ ತಿವಾರಿದ ನಿರ್ದೇಶನದ ಹೊಸ ರಾಮಾಯಣವನ್ನು ಅನೇಕರು ಆ ಧಾರಾವಾಹಿಗೆ ಹೋಲಿಕೆ ಮಾಡುತ್ತಿದ್ದಾರೆ. ವಿಎಫ್​​ಎಕ್ಸ್ ಬಗ್ಗೆಯೂ ಕೆಲವರು ಅಪಸ್ವರ ತೆಗೆದಿದ್ದಾರೆ.

ರಮಾನಂದ್ ಸಾಗರ್ ಅವರ ‘ರಾಮಾಯಣ’ ಐಕಾನಿಕ್ ಎನಿಸಿಕೊಂಡಿದೆ. ಈ ಸೀರಿಸ್​​ನಲ್ಲಿ ಸುನೀಲ್ ಲಹರಿ ಅವರು ಲಕ್ಷ್ಮಣನ ಪಾತ್ರ ಮಾಡಿದ್ದರು. ಅವರು ಟೀಸರ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರಿಗೆ ರಾಮನ ಪಾತ್ರ ರಣಬೀರ್ ಸೂಕ್ತ ಅಲ್ಲ ಎನಿಸಿದೆ. ತಮ್ಮ ಅಭಿಪ್ರಾಯವನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದಾರೆ.

‘ರಣಬೀರ್ ರಾಮನಾಗಿ ಚೆನ್ನಾಗಿ ಕಾಣುತ್ತಾರೆ ನಿಜ, ಆದರೆ ಮುಗ್ಧತೆ ಸ್ವಲ್ಪ ಕಡಿಮೆ ಕಾಣುತ್ತದೆ. ಅರುಣ್ ಗೋವಿಲ್ (ರಾಮಾಯಣ ಸರಣಿಯಲ್ಲಿ ರಾಮನ ಪಾತ್ರಧಾರಿ) ಅವರ ತಾಳ್ಮೆ, ಶಾಂತತೆ ಮತ್ತು ಮುಗ್ಧತೆ ಇಲ್ಲಿ ಕಾಣುತ್ತಿಲ್ಲ. ಆದರೆ, ರಣಬೀರ್ ತಮ್ಮ ನಟನೆಯ ಮೂಲಕ ಪಾತ್ರ ಸಮರ್ಥಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ’ ಎಂದಿದ್ದಾರೆ ಸುನೀಲ್. ರಾಮನ ಪಾತ್ರದಲ್ಲಿ ನಟಿಸಿದ ಅರುಣ್ ಗೋವಿಲ್ ಅವರನ್ನು ಅನೇಕರು ಈಗಲೂ ಪೂಜ್ಯ ಭಾವನೆಯಲ್ಲೇ ಕಾಣುತ್ತಾರೆ.

‘ರಣಬೀರ್ ಕಪೂರ್ ಲುಕ್ ಹಾರ್ಷ ಆಗಿ ಕಾಣುತ್ತದೆ. ಅವರು ಭರತ ಅಥವಾ ಲಕ್ಷ್ಮಣನ ಪಾತ್ರಕ್ಕೆ ಹೆಚ್ಚು ಸೂಕ್ತರಾಗುತ್ತಿದ್ದರು. ಈ ರೀತಿಯ ಪಾತ್ರಗಳಿಗೆ ಯಾವಾಗಲೂ ಹೊಸ ಮುಖವನ್ನು ತರಬೇಕು. ಯಾವುದೇ ವಿವಾದ ಇಲ್ಲದವರಾದರೆ ಇನ್ನೂ ಉತ್ತಮ. ಆಗ ಎಲ್ಲರೂ ಪಾತ್ರ ಒಪ್ಪುತ್ತಾರೆ’ ಎಂದು ಸುನೀಲ್ ಹೇಳಿದ್ದಾರೆ. ರಣಬೀರ್ ಕಪೂರ್ ಅನೇಕ ನಟಿಯರ ಜೊತೆ ಸುತ್ತಾಡಿದ್ದಾರೆ, ಮದ್ಯ ಸೇವನೆ ಮಾಡುತ್ತಾರೆ ಎಂಬ ಆರೋಪ ಇದ್ದು, ಒಂದು ವರ್ಗದ ಜನರು ಅವರನ್ನು ರಾಮನಾಗಿ ಸ್ವೀಕರಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ರಾವಣನ ಪಾತ್ರ ಮಾಡಿದ ಯಶ್​ನ ಹಾಡಿ ಹೊಗಳಿದ ರಣಬೀರ್ ಕಪೂರ್

ಹಳೆಯ ಮಹಭಾರತದಲ್ಲಿ ಕೃಷ್ಣನ ಪಾತ್ರ ಮಾಡಿದ್ದ ನಿತೀಶ್ ಭಾರದ್ವಾಜ್ ಅವರಿಗೆ ‘ರಾಮಾಯಣ’ ಟೀಸರ್ ಇಷ್ಟ ಆಗಿದೆ. ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ್ದ ದೀಪಿಕಾ ಚಿಖಲಿಯಾ ಕೂಡ ಧಾರಾವಾಹಿ ಇಷ್ಟಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us