‘ಸುಶಾಂತ್​ ಸಾವಿನಲ್ಲಿ ಅನೇಕ ವಿಚಾರ ಹೊಂದಿಕೆ ಆಗುತ್ತಿಲ್ಲ’: ಸಹೋದರಿ ಶಾಕಿಂಗ್​ ಹೇಳಿಕೆ

|

Updated on: Mar 06, 2024 | 5:21 PM

ನಟ ಸುಶಾಂತ್​ ಸಿಂಗ್ ರಜಪೂತ್​ ಅವರನ್ನು ಅಭಿಮಾನಿಗಳು ಈಗಲೂ ಮಿಸ್​ ಮಾಡಿಕೊಳ್ಳುತ್ತಾರೆ. ಅವರ ಸಾವಿಗೆ ಕಾರಣವಾದ ಸಂಗತಿ ಏನು ಎಂಬ ಸತ್ಯ ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಅಭಿಮಾನಿಗಳು ಮಾತ್ರವಲ್ಲದೇ ಕುಟುಂಬದವರಿಗೂ ಸುಶಾಂತ್​ ಸಾವಿನ ಹಿಂದಿರುವ ರಹಸ್ಯ ಏನು ಎಂಬುದು ತಿಳಿದಿಲ್ಲ. ಹಾಗಾಗಿ ಅವರ ಸಹೋದರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸುಶಾಂತ್​ ಸಾವಿನಲ್ಲಿ ಅನೇಕ ವಿಚಾರ ಹೊಂದಿಕೆ ಆಗುತ್ತಿಲ್ಲ’: ಸಹೋದರಿ ಶಾಕಿಂಗ್​ ಹೇಳಿಕೆ
ಸುಶಾಂತ್​ ಸಿಂಗ್ ರಜಪೂತ್​
Follow us on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರು ನಿಧನರಾಗಿ ಮೂರೂವರೆ ವರ್ಷ ಕಳೆದಿದೆ. ಇಂದಿಗೂ ಕೂಡ ಅವರ ಸಾವಿನ ರಹಸ್ಯ ಬಯಲಾಗಿಲ್ಲ. ಸುಶಾಂತ್​ ಸಾವಿನ ಹಿಂದೆ ಕೆಲವರ ಕೈವಾಡ ಇದೆ ಎಂಬ ಆರೋಪ ಇದೆ. ಅದು ಕೇವಲ ಆತ್ಮಹತ್ಯೆ ಎಂದು ಕೂಡ ಕೆಲವರು ಹೇಳುತ್ತಾರೆ. ಸುಶಾಂತ್​ ನಿಧನಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಹಾಗಾಗಿ ಅವರ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ (Shweta Singh Kirti) ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಹೋದರನ ಸಾವಿನ ಹಿಂದಿರುವ ಸತ್ಯವನ್ನು ಬಹಿರಂಗ ಮಾಡಿ ಎಂದು ಸಿಬಿಐಗೆ (CBI) ಶ್ವೇತಾ ಒತ್ತಾಯಿಸಿದ್ದಾರೆ.

2020ರ ಜೂನ್​ 14ರಂದು ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ಸುಶಾಂತ್​ ಸಿಂಗ್ ರಜಪೂತ್​ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು. ಆ ಸುದ್ದಿ ತಿಳಿದ ಬಳಿಕ ಅಭಿಮಾನಿಗಳಿಗೆ ಆಘಾತ ಆಯಿತು. ಯಾವಾಗಲೂ ಪಾಸಿಟಿವ್​ ಆಗಿ ಮಾತನಾಡುತ್ತಿದ್ದ ಸುಶಾಂತ್​ ಸಿಂಗ್ ರಜಪೂತ್​ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂಬುದು ಎಲ್ಲರ ಪ್ರಶ್ನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನೂ ನಡೆಯುತ್ತಿದೆ.

ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಶ್ವೇತಾ ಸಿಂಗ್ ಕೀರ್ತಿ ಅವರು ಕೆಲವು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ‘ನಾನು ತನಿಖೆ ಮಾಡುವ ವ್ಯಕ್ತಿ ಅಲ್ಲ. ಅಣ್ಣನ ಫ್ಲಾಟ್​ಗೆ ಹೋಗಲು ನನಗೆ ಅನುಮತಿ ನೀಡಿರಲಿಲ್ಲ. ಘಟನೆ ನಡೆದ ಫ್ಲಾಟ್​ ನಾನು ನೋಡಿಲ್ಲ. ಆಗಿದ್ದು ಏನು ಎಂಬುದನ್ನು ಸಿಬಿಐ ಹೇಳಬೇಕು. ಸಾಕ್ಷಿ ನೀಡಿ, ನಮಗೂ ಸತ್ಯ ತಿಳಿಯಲು ಬಿಡಿ’ ಎಂದು ಶ್ವೇತಾ ಸಿಂಗ್ ಕೀರ್ತಿ ಹೇಳಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಅಂತಿಮ ದರ್ಶನಕ್ಕೆ ಹೋಗಲಿಲ್ಲವೇಕೆ? ಮಾಜಿ ಗರ್ಲ್​ಫ್ರೆಂಡ್ ಅಂಕಿತಾ ಕೊಟ್ಟರು ಕಾರಣ

‘ಬೆಡ್​ ಮತ್ತು ಫ್ಯಾನ್​ ನಡುವೆ ಹೆಚ್ಚು ಅಂತರ ಇರಲಿಲ್ಲ. ರೂಮ್​ನ ಕೀ ಮಿಸ್ ಆಗಿದೆ ಅಂತ ಅಪಾರ್ಟ್​ಮೆಂಟ್​ನವರು ಹೇಳಿದರು. ಯಾಕೆ ಆ ರೀತಿ ಆಯ್ತ? ಆ ಕೀ ಎಲ್ಲಿಗೆ ಹೋಯ್ತು? ಸುಶಾಂತ್​ ಎಂದಿಗೂ ತನ್ನ ರೂಮ್​ ಬಾಗಿಲು ಹಾಕಿಕೊಳ್ಳುತ್ತಿರಲಿಲ್ಲ. ಅದೇ ದಿನ ಸುತ್ತಮುತ್ತಲಿನ ಎಲ್ಲ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿರಲ್ಲ. ಈ ರೀತಿ ಅನೇಕ ಸಂಗತಿಗಳಿಗೆ ಅರ್ಥವೇ ಇಲ್ಲ’ ಎಂದು ಶ್ವೇತಾ ಸಿಂಗ್​ ಕೀರ್ತಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಂಕಿತಾಗೆ ಸುಶಾಂತ್​ ಉಡುಗೊರೆಯಾಗಿ ನೀಡಿದ್ದ ಮುದ್ದಿನ ಶ್ವಾನ ಸ್ಕಾಚ್​ ನಿಧನ

ಸುಶಾಂತ್​ ಸಿಂಗ್ ರಜಪೂತ್​ ಅವರು ಬಾಲಿವುಡ್​ನಲ್ಲಿ ಭದ್ರವಾದ ಭವಿಷ್ಯ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ನಿಧನಕ್ಕೂ ಮುನ್ನ ನಟಿ ರಿಯಾ ಚಕ್ರವರ್ತಿ ಜೊತೆ ಅವರು ರಿಲೇಷನ್​ಶಿಪ್​ನಲ್ಲಿ ಇದ್ದರು. ಸುಶಾಂತ್ ನಿಧನದ ಬಳಿಕ ರಿಯಾ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನು ಪಡೆದು ಹೊರಬಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.