AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಗಾಯಕ ದಿಲ್ಜಿತ್ ದೊಸ್ಸಾಂಜ್​ಗೆ ನೊಟೀಸ್ ನೀಡಿದ ತೆಲಂಗಾಣ ಸರ್ಕಾರ

ಜನಪ್ರಿಯ ಪಂಜಾಬಿ ಸಂಗೀತಗಾರ ಮತ್ತು ನಟ ದಿಲ್ಜೀತ್ ದೊಸ್ಸಾಂಜ್​ಗೆ ತೆಲಂಗಾಣ ಸರ್ಕಾರ ನೋಟೀಸ್ ನೀಡಿದೆ. ದಿಲ್ಜೀತ್​ ಲೈವ್ ಕಾನ್ಸರ್ಟ್​ ಇಂದು ಹೈದರಾಬಾದ್​ನಲ್ಲಿದ್ದು, ದಿಲ್ಜೀತ್ ಕೆಲವು ಹಾಡುಗಳನ್ನು ಹಾಡಬಾರದೆಂದು ಸರ್ಕಾರ ಸೂಚನೆ ನೀಡಿದೆ.

ಖ್ಯಾತ ಗಾಯಕ ದಿಲ್ಜಿತ್ ದೊಸ್ಸಾಂಜ್​ಗೆ ನೊಟೀಸ್ ನೀಡಿದ ತೆಲಂಗಾಣ ಸರ್ಕಾರ
ಮಂಜುನಾಥ ಸಿ.
|

Updated on: Nov 15, 2024 | 10:49 AM

Share

ದಿಲ್ಜೀತ್ ದೊಸ್ಸಾಂಜ್, ಭಾರತ ಮಾತ್ರವಲ್ಲ ವಿಶ್ವ ಸಂಗೀತ ಕ್ಷೇತ್ರದಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು ಇದು. ಹಾಲಿವುಡ್ ಪಾಪ್ ತಾರೆಯರ ರೀತಿಯಲ್ಲಿ ದಿಲ್ಜೀತ್ ದೊಸ್ಸಾಂಜ್ ಅವರ ಲೈವ್ ಕಾನ್ಸರ್ಟ್​ಗಳು ನಡೆಯುತ್ತಿವೆ. ಆಸ್ಟ್ರೇಲಿಯಾ, ಲಂಡನ್, ನ್ಯೂಯಾರ್ಕ್​ ಇನ್ನಿತರೆ ಮಹಾನಗರಗಳಲ್ಲಿ ಸಹ ದಿಲ್ಜಿತ್​ರ ಲೈವ್ ಕಾನ್ಸರ್ಟ್ ನೋಡಲು ಲಕ್ಷಾಂತರ ಮಂದಿ ಬರುತ್ತಿದ್ದಾರೆ. ಭಾರತದಲ್ಲಂತೂ ದಿಲ್ಜೀತ್​ರ ಕಾನ್ಸರ್ಟ್​ ಟಿಕೆಟ್​ಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿವೆ. ಇದೀಗ ದಿಲ್ಜೀತ್​ ದೊಸ್ಸಾಂಜ್​ಗೆ ತೆಲಂಗಾಣ ಸರ್ಕಾರ ನೊಟೀಸ್ ನೀಡಿದೆ.

ದಿಲ್ಜಿತ್ ದೊಸ್ಸಾಂಜ್, ‘ದಿಲ್ಲುಮಿನಾಟಿ’ ಹೆಸರಿ ಲೈವ್ ಕಾನ್ಸರ್ಟ್ ಟೂರ್ ಮಾಡುತ್ತಿದ್ದಾರೆ. ಭಾರತದ ಹಲವು ನಗರಗಳಲ್ಲಿ ತಮ್ಮ ಶೋ ನಡೆಸಿಕೊಡಲಿದ್ದಾರೆ. ಇದೀಗ ತೆಲಂಗಾಣದ ಹೈದರಾಬಾದ್​ನಲ್ಲಿ ದಿಲ್ಜಿತ್ ದೊಸ್ಸಾಂಗ್ ಶೋ ನಡೆಸಿಕೊಡಲಿದ್ದು, ಶೋಗೆ ಮುನ್ನ, ತೆಲಂಗಾಣ ಸರ್ಕಾರ ದಿಲ್ಜಿತ್​ಗೆ ನೊಟೀಸ್ ನೀಡಿದ್ದು, ಕೆಲವು ಹಾಡುಗಳನ್ನು ಹಾಡದಂತೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಹಾಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ.

ನವೆಂಬರ್ 15 ಅಂದರೆ ಇಂದು ರಾತ್ರಿ ದಿಲ್ಜೀತ್​ರ ಶೋ ಹೈದರಾಬಾದ್​ನಲ್ಲಿ ನಡೆಯಲಿದ್ದು, ಶೋಗೆ ಮುನ್ನ ಸರ್ಕಾರ ನೊಟೀಸ್ ನೀಡಿದ್ದು, ಡ್ರಗ್ಸ್, ಮದ್ಯ, ಹಿಂಸೆಯ ಕುರಿತಾದ ಹಾಡುಗಳನ್ನು ವೇದಿಕೆಯಲ್ಲಿ ಹಾಡುವಂತಿಲ್ಲ ಎಂದು ದಿಲ್ಜಿತ್ ದೊಸ್ಸಾಂಗ್​ಗೆ ತೆಲಂಗಾಣ ಸರ್ಕಾರ ಹೇಳಿದೆ. ಅಲ್ಲದೆ, ವೇದಿಕೆ ಮೇಲೆ ಮಕ್ಕಳನ್ನು ಕರೆತರುವಂತಿಲ್ಲ, ಇದು ಡಬ್ಲುಎಚ್​ಓ ನಿಯಮಕ್ಕೆ ವಿರುದ್ಧ ಆಗಿರಲಿದೆ ಎಂದು ಸಹ ಸರ್ಕಾರ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:ಪುಟ್ಟ ಬಾಲಕಿಗೆ ಫ್ರೀ ಟಿಕೆಟ್ ನೀಡಿದ ಗಾಯಕ ದಿಲ್ಜಿತ್ ದೊಸಾಂಜ್; ವಿಡಿಯೋ ವೈರಲ್

ಈ ಹಿಂದೆ ದಿಲ್ಜಿತ್ ದೊಸ್ಸಾಂಗ್, ದೆಹಲಿ, ಜೈಪುರ ಹಾಗೂ ಚಂಡೀಘಡಗಳಲ್ಲಿ ಶೋ ಮಾಡಿದ್ದು, ಆ ಶೋಗಳಲ್ಲಿ ಡ್ರಗ್ಸ್, ಮದ್ಯ, ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು ಹಾಡಿದ್ದರು. ಈ ಬಗ್ಗೆ ಟ್ವಿಟ್ಟರ್ ಬಳಕೆದಾರರೊಬ್ಬರು ವಿಡಿಯೋ ಮಾಡಿ ಅಪ್​ಲೋಡ್ ಮಾಡಿದ್ದರು. ಇದು ವೈರಲ್ ಆಗಿದ್ದು, ಟ್ವಿಟ್ಟರ್​ನಲ್ಲಿ ವಿರೋಧಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಮುಂಚಿತವಾಗಿ ಎಚ್ಚೆತ್ತುಕೊಂಡಿರುವ ತೆಲಂಗಾಣ ಸರ್ಕಾರ, ಮಾದಕ ವಸ್ತು, ಮದ್ಯ ಸೇವನೆ ಮತ್ತು ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು ಹಾಡಬಾರದೆಂದು ಎಚ್ಚರಿಕೆ ನೀಡಿದೆ. ಒಂದೊಮ್ಮೆ ಹಾಡು ಹಾಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ.

ಅಕ್ಟೋಬರ್ 26 ರಿಂದ ದಿಲ್ಜೀತ್​ರ ಇಂಡಿಯಾ ಟೂರ್ ಪ್ರಾರಂಭ ಆಗಿದೆ. ಹೈದರಾಬಾದ್​ನಲ್ಲಿ ಇಂದು ಶೋ ನಡೆಯುತ್ತಿದ್ದು, ಮುಂದಿನ ಶೋ ಬೆಂಗಳೂರಿನಲ್ಲಿ ನಡೆಯಲಿದೆ. ಹೈದರಾಬಾದ್​ನ ಶೋ ಟಿಕೆಟ್​ಗಳು ಮುಂಚಿತವಾಗಿಯೇ ಪೂರ್ಣವಾಗಿ ಮಾರಾಟಗೊಂಡಿದ್ದವು. ಇಂದು ಸಹ ಸಾವಿರಾರು ಮಂದಿ ಅಭಿಮಾನಿಗಳು ದಿಲ್ಜೀತ್​ರ ಶೋಗೆ ಹಾಜರಾಗುವ ನಿರೀಕ್ಷೆ ಇದೆ. ದಿಲ್ಜಿತ್, ಸ್ಥಳೀಯ ಗಾಯಕರೊಬ್ಬರೊಟ್ಟಿಗೆ ಸೇರಿಕೊಂಡು ಈ ಶೋಗಳನ್ನು ನಡೆಸಿಕೊಡುತ್ತಾರೆ. ಇಂದು ಯಾರು ದಿಲ್ಜೀತ್ ಶೋಗೆ ಜೊತೆ ಆಗುತ್ತಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ