ಹಣ ಪಡೆದು ಕೈಕೊಟ್ಟರೇ ತೃಪ್ತಿ ದಿಮ್ರಿ, ಸ್ಪಷ್ಟನೆ ಕೊಟ್ಟ ತಂಡ

‘ಅನಿಮಲ್’ ಸಿನಿಮಾದ ಬಳಿಕ ತೃಪ್ತಿ ದಿಮ್ರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ತೃಪ್ತಿಗೆ ಈ ಅಚಾನಕ್ ಜನಪ್ರಿಯತೆ ತಲೆಗೇರಿದೆಯೇ ಎಂಬ ಅನುಮಾನ ಮೂಡಿದೆ. ಹಣ ಪಡೆದು ಸಹ ತಮ್ಮದೇ ಸಿನಿಮಾದ ಪ್ರಚಾರಕ್ಕೆ ಗೈರಾಗಿದ್ದಾರಂತೆ ನಟಿ.

ಹಣ ಪಡೆದು ಕೈಕೊಟ್ಟರೇ ತೃಪ್ತಿ ದಿಮ್ರಿ, ಸ್ಪಷ್ಟನೆ ಕೊಟ್ಟ ತಂಡ
ತೃಪ್ತಿ ದಿಮ್ರಿ
Follow us
|

Updated on: Oct 02, 2024 | 5:11 PM

‘ಅಮಿಮಲ್’ ಸಿನಿಮಾದಲ್ಲಿ ಮಾಡಿದ ಸಣ್ಣ ಪಾತ್ರ ತೃಪ್ತಿ ದಿಮ್ರಿಗೆ ಸಖತ್ ಜನಪ್ರಿಯತೆ ಮತ್ತು ಅವಕಾಶಗಳನ್ನು ತಂದುಕೊಟ್ಟಿದೆ. ‘ಅನಿಮಲ್’ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ತೃಪ್ತಿ ದಿಮ್ರಿ ಕಾಣಿಸಿಕೊಂಡಿದ್ದರು. ಆ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣರನ್ನು ಸಹ ಮೀರಿಸಿ ಜನಪ್ರಿಯಗೊಂಡರು ತೃಪ್ತಿ. ‘ಅನಿಮಲ್’ ಬಳಿಕ ಸಾಲು-ಸಾಲು ಸಿನಿಮಾ ಅವಕಾಶಗಳು ತೃಪ್ತಿಯನ್ನು ಅರಸಿ ಬಂದಿವೆ. ಆದರೆ ಇದೀಗ ತೃಪ್ತಿಗೆ ಆಗಲೆ ಯಶಸ್ಸು ನೆತ್ತಿಗೇರಿತೆ ಎಂದು ಅಭಿಮಾನಿಗಳೇ ಮಾತನಾಡಿಕೊಳ್ಳುವಂಥಹಾ ಪರಿಸ್ಥಿತಿ ನಿರ್ಮಾಣವಾಗಿದೆ.

ನಟಿ ತೃಪ್ತಿ, ಇತ್ತೀಚೆಗಷ್ಟೆ ‘ವಿಕ್ಕಿ ವಿದ್ಯಾ ಕಾ ವೋ ವಾಲ ವೀಡಿಯೋ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ರಾಜ್​ಕುಮಾರ್ ರಾವ್ ನಾಯಕ. ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೃಪ್ತಿ ಮತ್ತು ರಾಜ್​ಕುಮಾರ್ ರಾವ್ ನಿರತರಾಗಿದ್ದಾರೆ. ಆದರೆ ಇತ್ತೀಚೆಗೆ ಹಠಾತ್ತನೇ ಪ್ರಚಾರ ಕಾರ್ಯಕ್ರಮದಿಂದ ತೃಪ್ತಿ ದಿಮ್ರಿ ಮರೆಯಾದರು. ಇದೇ ಕಾರಣಕ್ಕೆ ಸಿಟ್ಟಾಗಿದ್ದ ಚಿತ್ರತಂಡ ಜೈಪುರದಲ್ಲಿ ನಡೆದ ಸಿನಿಮಾ ಇವೆಂಟ್​ನಲ್ಲಿ ತೃಪ್ತಿಯ ಯಾವ ಚಿತ್ರಗಳನ್ನೂ ಸಹ ಪ್ರದರ್ಶಿಸಿರಲಿಲ್ಲ, ಸಿನಿಮಾದ ಪೋಸ್ಟರ್​ಗಳನ್ನೇ ಬದಲಾಯಿಸಿ ಕೇವಲ ರಾಜ್​ಕುಮಾರ್ ರಾವ್ ಚಿತ್ರಗಳನ್ನಷ್ಟೆ ಪ್ರದರ್ಶಿಸಿತ್ತು.

ಅಲ್ಲದೆ, ಚಿತ್ರತಂಡ ಹೇಳಿಕೊಂಡಿರುವಂತೆ ಸಿನಿಮಾದ ಪ್ರಚಾರಕ್ಕಾಗಿ 5.50 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾಗಿಯೂ ಸಹ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲವಂತೆ. ಚಿತ್ರತಂಡ ಮನವಿ ಮಾಡಿಕೊಂಡಿದ್ದರೂ ಸಹ ತೃಪ್ತಿ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲವಂತೆ. ಇದೇ ಕಾರಣಕ್ಕೆ ಸಿಟ್ಟಾಗಿರುವ ಚಿತ್ರತಂಡ, ಸಿನಿಮಾದ ಪೋಸ್ಟರ್​ಗಳಿಂದ ತೃಪ್ತಿ ದಿಮ್ರಿಯ ಹೆಸರು ಮತ್ತು ಚಿತ್ರವನ್ನು ತೆಗೆದು ಹಾಕಿದೆ.

ಇದನ್ನೂ ಓದಿ:ಮುಜುಗರ ಆಗುವಂತಹ ಡ್ಯಾನ್ಸ್ ಕಂಡು ತೃಪ್ತಿ ದಿಮ್ರಿ ಅಭಿಮಾನಿಗಳು ಗರಂ

ಆದರೆ ತೃಪ್ತಿ ದಿಮ್ರಿಯ ತಂಡ ಇದಕ್ಕೆ ಸ್ಪಷ್ಟನೆ ನೀಡಿದ್ದು, ‘ವಿಕ್ಕಿ, ವಿದ್ಯಾಕ ವೋ ವಾಲಾ ವಿಡಿಯೋ’ ಸಿನಿಮಾದ ಪ್ರಚಾರ ಕಾರ್ಯಕ್ಕೆ ತೃಪ್ತಿ ಹಾಜರಾಗಿದ್ದಾರೆ. ಅವರು ವೃತ್ತಿಪರಪತೆಯಿಂದಲೇ ನಡೆದುಕೊಂಡಿದ್ದಾರೆ. ಈ ವರೆಗೂ ನಡೆದಿರುವ ಎಲ್ಲ ಪ್ರಚಾರ ಕಾರ್ಯಕ್ರಮಗಳಿಗೂ ಅವರು ಹಾಜರಾಗಿದ್ದಾರೆ. ಆದರೆ ತೃಪ್ತಿ, ಪ್ರಚಾರ ಕಾರ್ಯಕ್ರಮದ ಹೊರತಾಗಿ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಅಥವಾ ಪ್ರಚಾರದ ಹೊರತಾಗಿ ಮಾಡಲಾಗುವ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಒಪ್ಪಿಕೊಂಡಿರಲಿಲ್ಲ. ಅಲ್ಲದೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಾವುದೇ ಹೆಚ್ಚುವರಿ ಶುಲ್ಕವನ್ನು ಸಹ ತೃಪ್ತಿ ತೆಗೆದುಕೊಂಡಿರಲಿಲ್ಲ’ ಎಂದಿದ್ದಾರೆ.

ತೃಪ್ತಿ ದಿಮ್ರಿ ಪ್ರಸ್ತುತ, ‘ವಿಕ್ಕಿ, ವಿದ್ಯಾಕ ವೋ ವಾಲಾ ವಿಡಿಯೋ’ ಸಿನಿಮಾದ ಹೊರತಾಗಿ ‘ಭೂಲ್ ಭುಲಯ್ಯ 3’ ಹಾಗೂ ‘ದಡಕ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ದಕ್ಷಿಣದ ಒಂದು ಸಿನಿಮಾವನ್ನು ಸಹ ತೃಪ್ತಿ ದಿಮ್ರಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ‘ಪುಷ್ಪ 2’ ಸಿನಿಮಾನಲ್ಲಿ ಐಟಂ ಹಾಡಿನಲ್ಲಿಯೂ ಸಹ ತೃಪ್ತಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ