AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಪಡೆದು ಕೈಕೊಟ್ಟರೇ ತೃಪ್ತಿ ದಿಮ್ರಿ, ಸ್ಪಷ್ಟನೆ ಕೊಟ್ಟ ತಂಡ

‘ಅನಿಮಲ್’ ಸಿನಿಮಾದ ಬಳಿಕ ತೃಪ್ತಿ ದಿಮ್ರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ತೃಪ್ತಿಗೆ ಈ ಅಚಾನಕ್ ಜನಪ್ರಿಯತೆ ತಲೆಗೇರಿದೆಯೇ ಎಂಬ ಅನುಮಾನ ಮೂಡಿದೆ. ಹಣ ಪಡೆದು ಸಹ ತಮ್ಮದೇ ಸಿನಿಮಾದ ಪ್ರಚಾರಕ್ಕೆ ಗೈರಾಗಿದ್ದಾರಂತೆ ನಟಿ.

ಹಣ ಪಡೆದು ಕೈಕೊಟ್ಟರೇ ತೃಪ್ತಿ ದಿಮ್ರಿ, ಸ್ಪಷ್ಟನೆ ಕೊಟ್ಟ ತಂಡ
ತೃಪ್ತಿ ದಿಮ್ರಿ
Follow us
ಮಂಜುನಾಥ ಸಿ.
|

Updated on: Oct 02, 2024 | 5:11 PM

‘ಅಮಿಮಲ್’ ಸಿನಿಮಾದಲ್ಲಿ ಮಾಡಿದ ಸಣ್ಣ ಪಾತ್ರ ತೃಪ್ತಿ ದಿಮ್ರಿಗೆ ಸಖತ್ ಜನಪ್ರಿಯತೆ ಮತ್ತು ಅವಕಾಶಗಳನ್ನು ತಂದುಕೊಟ್ಟಿದೆ. ‘ಅನಿಮಲ್’ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ತೃಪ್ತಿ ದಿಮ್ರಿ ಕಾಣಿಸಿಕೊಂಡಿದ್ದರು. ಆ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣರನ್ನು ಸಹ ಮೀರಿಸಿ ಜನಪ್ರಿಯಗೊಂಡರು ತೃಪ್ತಿ. ‘ಅನಿಮಲ್’ ಬಳಿಕ ಸಾಲು-ಸಾಲು ಸಿನಿಮಾ ಅವಕಾಶಗಳು ತೃಪ್ತಿಯನ್ನು ಅರಸಿ ಬಂದಿವೆ. ಆದರೆ ಇದೀಗ ತೃಪ್ತಿಗೆ ಆಗಲೆ ಯಶಸ್ಸು ನೆತ್ತಿಗೇರಿತೆ ಎಂದು ಅಭಿಮಾನಿಗಳೇ ಮಾತನಾಡಿಕೊಳ್ಳುವಂಥಹಾ ಪರಿಸ್ಥಿತಿ ನಿರ್ಮಾಣವಾಗಿದೆ.

ನಟಿ ತೃಪ್ತಿ, ಇತ್ತೀಚೆಗಷ್ಟೆ ‘ವಿಕ್ಕಿ ವಿದ್ಯಾ ಕಾ ವೋ ವಾಲ ವೀಡಿಯೋ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ರಾಜ್​ಕುಮಾರ್ ರಾವ್ ನಾಯಕ. ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೃಪ್ತಿ ಮತ್ತು ರಾಜ್​ಕುಮಾರ್ ರಾವ್ ನಿರತರಾಗಿದ್ದಾರೆ. ಆದರೆ ಇತ್ತೀಚೆಗೆ ಹಠಾತ್ತನೇ ಪ್ರಚಾರ ಕಾರ್ಯಕ್ರಮದಿಂದ ತೃಪ್ತಿ ದಿಮ್ರಿ ಮರೆಯಾದರು. ಇದೇ ಕಾರಣಕ್ಕೆ ಸಿಟ್ಟಾಗಿದ್ದ ಚಿತ್ರತಂಡ ಜೈಪುರದಲ್ಲಿ ನಡೆದ ಸಿನಿಮಾ ಇವೆಂಟ್​ನಲ್ಲಿ ತೃಪ್ತಿಯ ಯಾವ ಚಿತ್ರಗಳನ್ನೂ ಸಹ ಪ್ರದರ್ಶಿಸಿರಲಿಲ್ಲ, ಸಿನಿಮಾದ ಪೋಸ್ಟರ್​ಗಳನ್ನೇ ಬದಲಾಯಿಸಿ ಕೇವಲ ರಾಜ್​ಕುಮಾರ್ ರಾವ್ ಚಿತ್ರಗಳನ್ನಷ್ಟೆ ಪ್ರದರ್ಶಿಸಿತ್ತು.

ಅಲ್ಲದೆ, ಚಿತ್ರತಂಡ ಹೇಳಿಕೊಂಡಿರುವಂತೆ ಸಿನಿಮಾದ ಪ್ರಚಾರಕ್ಕಾಗಿ 5.50 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾಗಿಯೂ ಸಹ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲವಂತೆ. ಚಿತ್ರತಂಡ ಮನವಿ ಮಾಡಿಕೊಂಡಿದ್ದರೂ ಸಹ ತೃಪ್ತಿ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲವಂತೆ. ಇದೇ ಕಾರಣಕ್ಕೆ ಸಿಟ್ಟಾಗಿರುವ ಚಿತ್ರತಂಡ, ಸಿನಿಮಾದ ಪೋಸ್ಟರ್​ಗಳಿಂದ ತೃಪ್ತಿ ದಿಮ್ರಿಯ ಹೆಸರು ಮತ್ತು ಚಿತ್ರವನ್ನು ತೆಗೆದು ಹಾಕಿದೆ.

ಇದನ್ನೂ ಓದಿ:ಮುಜುಗರ ಆಗುವಂತಹ ಡ್ಯಾನ್ಸ್ ಕಂಡು ತೃಪ್ತಿ ದಿಮ್ರಿ ಅಭಿಮಾನಿಗಳು ಗರಂ

ಆದರೆ ತೃಪ್ತಿ ದಿಮ್ರಿಯ ತಂಡ ಇದಕ್ಕೆ ಸ್ಪಷ್ಟನೆ ನೀಡಿದ್ದು, ‘ವಿಕ್ಕಿ, ವಿದ್ಯಾಕ ವೋ ವಾಲಾ ವಿಡಿಯೋ’ ಸಿನಿಮಾದ ಪ್ರಚಾರ ಕಾರ್ಯಕ್ಕೆ ತೃಪ್ತಿ ಹಾಜರಾಗಿದ್ದಾರೆ. ಅವರು ವೃತ್ತಿಪರಪತೆಯಿಂದಲೇ ನಡೆದುಕೊಂಡಿದ್ದಾರೆ. ಈ ವರೆಗೂ ನಡೆದಿರುವ ಎಲ್ಲ ಪ್ರಚಾರ ಕಾರ್ಯಕ್ರಮಗಳಿಗೂ ಅವರು ಹಾಜರಾಗಿದ್ದಾರೆ. ಆದರೆ ತೃಪ್ತಿ, ಪ್ರಚಾರ ಕಾರ್ಯಕ್ರಮದ ಹೊರತಾಗಿ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಅಥವಾ ಪ್ರಚಾರದ ಹೊರತಾಗಿ ಮಾಡಲಾಗುವ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಒಪ್ಪಿಕೊಂಡಿರಲಿಲ್ಲ. ಅಲ್ಲದೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಾವುದೇ ಹೆಚ್ಚುವರಿ ಶುಲ್ಕವನ್ನು ಸಹ ತೃಪ್ತಿ ತೆಗೆದುಕೊಂಡಿರಲಿಲ್ಲ’ ಎಂದಿದ್ದಾರೆ.

ತೃಪ್ತಿ ದಿಮ್ರಿ ಪ್ರಸ್ತುತ, ‘ವಿಕ್ಕಿ, ವಿದ್ಯಾಕ ವೋ ವಾಲಾ ವಿಡಿಯೋ’ ಸಿನಿಮಾದ ಹೊರತಾಗಿ ‘ಭೂಲ್ ಭುಲಯ್ಯ 3’ ಹಾಗೂ ‘ದಡಕ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ದಕ್ಷಿಣದ ಒಂದು ಸಿನಿಮಾವನ್ನು ಸಹ ತೃಪ್ತಿ ದಿಮ್ರಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ‘ಪುಷ್ಪ 2’ ಸಿನಿಮಾನಲ್ಲಿ ಐಟಂ ಹಾಡಿನಲ್ಲಿಯೂ ಸಹ ತೃಪ್ತಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಪ್ರಧಾನಿ ನರೇಂದ್ರ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
Video: ಪ್ರಧಾನಿ ನರೇಂದ್ರ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
Daily Devotional: ತೀರ್ಥ ತೆಗೆದುಕೊಳ್ಳುವ ವಿಧಾನ ಹೇಗೆ ತಿಳಿಯಿರಿ
Daily Devotional: ತೀರ್ಥ ತೆಗೆದುಕೊಳ್ಳುವ ವಿಧಾನ ಹೇಗೆ ತಿಳಿಯಿರಿ
Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ
Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ