AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa Trailer: ಕಬ್ಜ ಟ್ರೈಲರ್ ಬಿಡುಗಡೆ, ಕತ್ತರಿಸುವ ಕೈಗಳು ಬರೆದ ಇತಿಹಾಸವಿದು, ಎರಡು ಶೇಡ್​ನಲ್ಲಿ ಉಪ್ಪಿ

ಉಪೇಂದ್ರ ನಟಿಸಿ, ಆರ್ ಚಂದ್ರು ನಿರ್ದೇಶಿಸಿರುವ ಕಬ್ಜ ಸಿನಿಮಾದ ಹಿಂದಿ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಅನ್ನು ಅಮಿತಾಬ್ ಬಚ್ಚನ್ ಬಿಡುಗಡೆ ಮಾಡಿದ್ದಾರೆ.

Kabzaa Trailer: ಕಬ್ಜ ಟ್ರೈಲರ್ ಬಿಡುಗಡೆ, ಕತ್ತರಿಸುವ ಕೈಗಳು ಬರೆದ ಇತಿಹಾಸವಿದು, ಎರಡು ಶೇಡ್​ನಲ್ಲಿ ಉಪ್ಪಿ
ಕಬ್ಜ ಟ್ರೈಲರ್​ನಲ್ಲಿ ಉಪ್ಪಿ
Follow us
ಮಂಜುನಾಥ ಸಿ.
|

Updated on:Mar 04, 2023 | 8:39 PM

ಉಪೇಂದ್ರ ನಟಿಸಿ, ಆರ್ ಚಂದ್ರು ನಿರ್ದೇಶನ ಮಾಡಿರುವ ‘ಕಬ್ಜ‘ (Kabzaa) ಸಿನಿಮಾದ ಹಿಂದಿ ಟ್ರೈಲರ್ (Trailer) ಬಿಡುಗಡೆ ಆಗಿದೆ. ಟ್ರೈಲರ್ ಅನ್ನು ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ (Amitabh Bachchan) ಬಿಡುಗಡೆ ಮಾಡಿರುವುದು ವಿಶೇಷ. ಕನ್ನಡ ಸೇರಿದಂತೆ ಇನ್ನಿತರೆ ಭಾಷೆಗಳಲ್ಲಿ ಸಿನಿಮಾದ ಟ್ರೈಲರ್ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ಪ್ರಸ್ತುತ ಬಿಡುಗಡೆ ಆಗಿರುವ ಹಿಂದಿ ಟ್ರೈಲರ್ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಮೂರು ನಿಮಿಷಕ್ಕೆ ಆರು ಸೆಕೆಂಡ್ ಕಡಿಮೆ ಇರುವ ಟ್ರೈಲರ್​ನಲ್ಲಿ ನಾಯಕ ನಟ ಉಪೇಂದ್ರ ಜೊತೆಗೆ ಹಲವು ಪಾತ್ರಗಳು ಗಮನ ಸೆಳೆಯುತ್ತವೆ. ಕತೆಯ ಬಗ್ಗೆ ಕುತೂಹಲವನ್ನು ಉಂಟು ಮಾಡುವಂತೆ ಟ್ರೈಲರ್ ಅನ್ನು ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕ ಆರ್.ಚಂದ್ರು.

ಸಿನಿಮಾದಲ್ಲಿ ಬ್ರಿಟೀಷ್ ಕಾಲದ ಕತೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯಾ ನಂತರದ ಕತೆ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ದೇಶ ಪ್ರೇಮ, ವ್ಯವಸ್ಥೆಯ ವಿರುದ್ಧ ಹೋರಾಟ, ಪಾತಕ ಲೋಕ, ತಾಯಿ ಸೆಂಟಿಮೆಂಟ್, ಬ್ರದರ್ ಸೆಂಟಿಮೆಂಟ್ ಎಲ್ಲವನ್ನೂ ‘ಕಬ್ಜ’ನಲ್ಲಿ ಆರ್ ಚಂದ್ರು ಟಚ್ ಮಾಡಿದ್ದಾರೆಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ.

ಟ್ರೈಲರ್​ನಲ್ಲಿ ಕುತೂಹಲ ಹುಟ್ಟಿಸಿರುವ ಸಂಗತಿಯೆಂದರೆ ಉಪೇಂದ್ರ ಪೊಲೀಸ್ ಧಿರಿಸಿನಲ್ಲಿ (ಏರ್​ಫೋರ್ಸ್ ಅಧಿಕಾರಿ) ಕಾಣಿಸಿಕೊಂಡಿರುವುದು. ಈ ವರೆಗೆ ಬಿಡುಗಡೆ ಆಗಿರುವ ಕಬ್ಜ ಸಿನಿಮಾದ ಪೋಸ್ಟರ್, ಟೀಸರ್​ಗಳಲ್ಲಿ ಗ್ಯಾಂಗ್​ಸ್ಟರ್ ಅವತಾರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ಆದರೆ ಟ್ರೈಲರ್​ನಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮಚ್ಚು ಹಿಡಿದು ವೈರಿಗಳ ರುಂಡವನ್ನೂ ಚೆಂಡಾಡುತ್ತಿದ್ದಾರೆ. ಈ ವೈರುಧ್ಯ ಕತೆಯ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಇನ್ನು ನಟ ಸುದೀಪ್ ಸಹ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಟ್ರೈಲರ್​ನ ಆರಂಭದಲ್ಲಿಯೇ ವ್ಯಕ್ತಿಯೊಬ್ಬ ಗನ್ ಹಿಡಿದು ನಡೆಯುವ ದೃಶ್ಯವಿದೆ. ಆ ನಡಿಗೆಯೆಂದಲೇ ಗೊತ್ತಾಗುತ್ತದೆ ಅದು ಶಿವಣ್ಣನೆಂದು. ಆದರೆ ಟ್ರೈಲರ್​ನಲ್ಲಿ ಅವರ ಮುಖ ತೋರಿಸಿಲ್ಲ.

ಉಪೇಂದ್ರ, ಸುದೀಪ್ ಮಾತ್ರವೇ ಅಲ್ಲದೆ, ಇತರೆ ಪಾತ್ರಗಳಿಗಳಿಗೂ ಟ್ರೈಲರ್​ನಲ್ಲಿ ಸ್ಪೇಸ್ ನೀಡಲಾಗಿದೆ. ಜನಪ್ರಿಯ ನಟ ಮುರಳಿ ಶರ್ಮಾ, ತೆಲುಗಿನ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ಇನ್ನೂ ಕೆಲವು ವಿಲನ್​ಗಳನ್ನು ಭಯಾನಕವಾಗಿ ತೋರಿಸಿದ್ದಾರೆ.  ರಕ್ತ ಹರಿಯುತ್ತಿರುವ, ಬಂದೂಕುಗಳು ಅಬ್ಬರಿಸುವ, ಬಾಂಬ್​ಗಳು ಸಿಡಿಯುವ ದೃಶ್ಯಗಳು ಸಾಕಷ್ಟಿವೆ. ನಾಯಕಿ ಶ್ರಿಯಾ ಶ್ರೀನಿವಾಸ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಹಿಂದಿ ಟ್ರೈಲರ್ ಅನ್ನು ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿರುವ ನಟ ಅಮಿತಾಬ್ ಬಚ್ಚನ್, ‘ಕಬ್ಜ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಶವಾಗಿದೆ. ಸಿನಿಮಾವನ್ನು ನನ್ನ ಮಿತ್ರ ಆನಂದ್ ಪಂಡಿತ್ ನಿರ್ಮಾಣ ಮಾಡಿದ್ದು, ಆರ್ ಚಂದ್ರು ನಿರ್ದೇಶಿಸಿದ್ದಾರೆ. ಉಪೇಂದ್ರ, ಶೀವರಾಜ್ ಕುಮಾರ್, ಸುದೀಪ್ ಅವರಿಗೆ ಶುಭ ಹಾರೈಕೆಗಳು ಎಂದಿದ್ದಾರೆ. ಸಿನಿಮಾವು ಮಾರ್ಚ್ 13 ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Sat, 4 March 23

VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ