AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಕಿ ಶ್ರಾಫ್​ ಕೊಟ್ಟ ಬನಿಯನ್​ ಧರಿಸಿ ಡ್ಯಾನ್ಸ್​ ಮಾಡಿದ್ದ ಉರ್ಮಿಳಾ; ‘ರಂಗೀಲಾ’ ಹಾಡಿನ ಫನ್ನಿ ಕಥೆ

ಹಾಡುಗಳಲ್ಲಿ ನಟ-ನಟಿಯರ ಕಾಸ್ಟ್ಯೂಮ್​ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗುತ್ತದೆ. ಆದರೆ ‘ರಂಗೀಲಾ’ ಸಿನಿಮಾದ ‘ತನ್ಹಾ.. ತನ್ಹಾ..’ ಹಾಡಿನಲ್ಲಿ ಊರ್ಮಿಳಾ ಆಯ್ಕೆ ಮಾಡಿಕೊಂಡ ಕಾಸ್ಟ್ಯೂಮ್​ ಫನ್ನಿಯಾಗಿತ್ತು.

ಜಾಕಿ ಶ್ರಾಫ್​ ಕೊಟ್ಟ ಬನಿಯನ್​ ಧರಿಸಿ ಡ್ಯಾನ್ಸ್​ ಮಾಡಿದ್ದ ಉರ್ಮಿಳಾ; ‘ರಂಗೀಲಾ’ ಹಾಡಿನ ಫನ್ನಿ ಕಥೆ
ಊರ್ಮಿಳಾ ಮಾತೋಂಡ್ಕರ್
TV9 Web
| Edited By: |

Updated on: Oct 03, 2021 | 9:58 AM

Share

ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿ ಆಗಿದ್ದರು ಊರ್ಮಿಳಾ ಮಾತೋಂಡ್ಕರ್​. 1995ರಲ್ಲಿ ತೆರೆಕಂಡ ‘ರಂಗೀಲಾ’ ಸಿನಿಮಾದಿಂದ ಅವರಿಗೆ ಸಿಕ್ಕ ಖ್ಯಾತ ಅಷ್ಟಿಷ್ಟಲ್ಲ. ಆ ಸಿನಿಮಾದ ಹಾಡುಗಳೆಲ್ಲ ಸೂಪರ್​ ಹಿಟ್​ ಆಗಿದ್ದವು. ಆ ಗೀತೆಗಳಲ್ಲಿ ಊರ್ಮಿಳಾ ಕಾಣಿಸಿಕೊಂಡ ಪರಿಗೆ ಸಿನಿಪ್ರಿಯರು ಫಿದಾ ಆಗಿದ್ದರು. ಆ ಎಲ್ಲ ಕಾರಣಗಳಿಂದಾಗಿ ಈಗಲೂ ಅವರನ್ನು ರಂಗೀಲಾ ಹುಡುಗಿ ಅಂತಲೇ ಜನರು ಗುರುತಿಸುತ್ತಾರೆ. ಆ ಸಿನಿಮಾದಲ್ಲಿ ‘ತನ್ಹಾ.. ತನ್ಹಾ..’ ಹಾಡಿನ ಶೂಟಿಂಗ್​ ವೇಳೆ ನಡೆದ ಒಂದು ಘಟನೆಯನ್ನು ಈಗ ಊರ್ಮಿಳಾ ವಿವರಿಸಿದ್ದಾರೆ.

ಸಾಮಾನ್ಯವಾಗಿ ಹಾಡುಗಳಲ್ಲಿ ನಟ-ನಟಿಯರ ಕಾಸ್ಟ್ಯೂಮ್​ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗುತ್ತದೆ. ಆದರೆ ‘ರಂಗೀಲಾ’ ಸಿನಿಮಾದ ‘ತನ್ಹಾ.. ತನ್ಹಾ..’ ಹಾಡಿನಲ್ಲಿ ಊರ್ಮಿಳಾ ಅವರು ಸಹನಟನ ಬನಿಯನ್​ ಧರಿಸಿ ಡ್ಯಾನ್ಸ್​ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿರದ ವಿಚಾರ.

ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಊರ್ಮಿಳಾ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ‘ರಂಗೀಲಾ’ ಸಿನಿಮಾದಲ್ಲಿ ಆಮೀರ್​ ಖಾನ್​ ಮತ್ತು ಜಾಕಿ ಶ್ರಾಫ್​ ಪ್ರಮುಖ ಪಾತ್ರ ಮಾಡಿದ್ದರು. ಜಾಕಿ ಶ್ರಾಫ್​ ಅವರ ಬನಿಯನ್​ ಧರಿಸಿ ಊರ್ಮಿಳಾ ‘ತನ್ಹಾ.. ತನ್ಹಾ..’ ಹಾಡಿನಲ್ಲಿ ಹೆಜ್ಜೆ ಹಾಕಿದರು. ಸಮುದ್ರ ತೀರದಲ್ಲಿ ಅವರು ಸ್ಲೋ ಮೋಷನ್​ನಲ್ಲಿ ಓಡಿಬರುವ ಆ ದೃಶ್ಯವನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ. ಅದರ ಕಾಸ್ಟ್ಯೂಮ್​ ಕಹಾನಿ ಮಾತ್ರ ಫನ್ನಿಯಾಗಿದೆ.

‘ಈ ವಿಚಾರ ಯಾರಿಗೂ ಗೊತ್ತಿಲ್ಲ. ಆ ಹಾಡಿನಲ್ಲಿ ನಾನು ಜಾಕಿ ಶ್ರಾಫ್​ ಅವರ ಬನಿಯನ್​ ಧರಿಸಿದ್ದೆ. ಆ ದೃಶ್ಯ ತುಂಬ ಹೊಸದಾಗಿ ಕಾಣಿಸಬೇಕಿತ್ತು. ತುಂಬ ಸಹಜವಾಗಿ ದೃಶ್ಯ ಮೂಡಿಬರಬೇಕು ಎಂಬುದು ಉದ್ದೇಶ ಆಗಿತ್ತು. ಆಗ ತಮ್ಮ ಬನಿಯನ್​ ಧರಿಸುವಂತೆ ಜಾಕಿ ಶ್ರಾಫ್​ ನನಗೆ ಹೇಳಿದರು. ಅದೇಕೋ ನನಗೆ ಸರಿ ಎನಿಸಲಿಲ್ಲ. ಆದರೂ ದೇವರ ಮೇಲೆ ಭಾರ ಹಾಕಿ ಒಪ್ಪಿಕೊಂಡೆ. ಆದರೆ ಆ ದೃಶ್ಯ ಚೆನ್ನಾಗಿ ಮೂಡಿಬಂತು. ಪ್ರೇಕ್ಷಕರಿಗೂ ಇಷ್ಟವಾಯಿತು’ ಎಂದು ಊರ್ಮಿಳಾ ಹೇಳಿದ್ದಾರೆ.

‘ರಂಗೀಲಾ’ ಚಿತ್ರಕ್ಕೆ ರಾಮ್​ ಗೋಪಾಲ್​ ವರ್ಮಾ ನಿರ್ದೇಶನ ಮಾಡಿದ್ದರು. ಎ.ಆರ್​. ರೆಹಮಾನ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ಇಂದಿಗೂ ಅವು ಕೇಳುಗರ ಫೇವರಿಟ್​ ಆಗಿ ಉಳಿದುಕೊಂಡಿವೆ.

ಇದನ್ನೂ ಓದಿ:

ಡ್ರಗ್ಸ್​ ಪಾರ್ಟಿ: ಎನ್​ಸಿಬಿ ಬಲೆಗೆ ಬಿದ್ದ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​?

Salman Khan: ಟೈಗರ್​ ಶ್ರಾಫ್​ ಪ್ರೇಯಸಿ ದಿಶಾಗೆ ಸಲ್ಮಾನ್​ ಕಿಸ್​ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್​

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್