AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳು ಇಂದು ನಟಿಯರು, ಒಬ್ಬರಂತೂ ಸ್ಟಾರ್ ನಟಿ: ಗುರುತಿಸಿಬಲ್ಲಿರಾ?

ಈ ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳಲ್ಲಿ ಒಬ್ಬರು ಸ್ಟಾರ್ ನಟಿಯಾಗಿದ್ದರೆ, ಮತ್ತೊಬ್ಬರು ಈಗ ನಟನೆ ಆರಂಭಿಸಿದ್ದಾರೆ. ಈ ಇಬ್ಬರೂ ನಟನೆ ಆರಂಭಿಸಿರುವುದು ತೆಲುಗು ಚಿತ್ರರಂಗದಿಂದ. ಯಾರು ಈ ನಟಿಯರು ಗುರುತಿಸಬಲ್ಲಿರಾ?

ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳು ಇಂದು ನಟಿಯರು, ಒಬ್ಬರಂತೂ ಸ್ಟಾರ್ ನಟಿ: ಗುರುತಿಸಿಬಲ್ಲಿರಾ?
ನಟಿ ಯಾರು ಗುರುತಿಸಿ
ಮಂಜುನಾಥ ಸಿ.
|

Updated on: Feb 27, 2023 | 4:42 PM

Share

ಚಿತ್ರದಲ್ಲಿ ಕಾಣಿಸುತ್ತಿರುವ ಹೆಣ್ಣು ಮಕ್ಕಳು ಅಕ್ಕ-ತಂಗಿಯರು. ಈ ಇಬ್ಬರಲ್ಲಿ ಒಬ್ಬರು ಸ್ಟಾರ್ ನಟಿಯಾದರೆ ಮತ್ತೊಬ್ಬರು ಈಗಿನ್ನು ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಟಿಸಿರುವ ಎರಡೂ ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ. ಇಬ್ಬರೂ ದೆಹಲಿ ಮೂಲದವರಾದರೂ ನಟನೆ ಪದಾರ್ಪಣೆ ಮಾಡಲು ಮೊದಲು ಆಯ್ದುಕೊಂಡಿದ್ದು ತೆಲುಗು ಚಿತ್ರರಂಗವನ್ನು.

ಸ್ಟಾರ್ ನಟಿ ಕೃತಿ ಸನೋನ್(Kriti Sanon) ಹಾಗೂ ಅವರ ಸಹೋದರಿ ನೂಪುರ್ ಸೆನನ್ (Nupur Sanon) ಅವರ ಚಿತ್ರವಿದು. ಇಬ್ಬರೂ ದೆಹಲಿಯ ನಿವಾಸದಲ್ಲಿದ್ದಾಗ ತೆಗೆದ ಚಿತ್ರವಿದು. ಮಧ್ಯಮ ಕುಟುಂಬಕ್ಕೆ ಸೇರಿದ ಈ ಚೆಲುವೆಯರು, ಶಿಕ್ಷಣ ಮುಗಿಸಿ ಮಾಡೆಲಿಂಗ್ ಮಾಡಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

ಅಕ್ಕ ಕೃತಿ ಸನೋನ್ ತೆಲುಗಿನಲ್ಲಿ ಮಹೇಶ್ ಬಾಬು ನಟಿಸಿರುವ ‘ನೇನೊಕ್ಕಡಿನೆ’ ಸಿನಿಮಾದ ಮೂಲಕ ನಟನೆಗೆ ಪದಾರ್ಪಣೆ ಮಾಡಿ ಆ ಬಳಿಕ ಸ್ಟಾರ್ ನಟಿಯಾಗಿ ಬೆಳೆದರು. ಇದೀಗ ಕೃತಿಯ ಸಹೋದರಿ ನೂಪುರ್ ಸನೋನ್ ಸಹ ಚಿತ್ರರಂಗಕ್ಕೆ ತೆಲುಗು ಸಿನಿಮಾದ ಮೂಲಕವೇ ಪದಾರ್ಪಣೆ ಮಾಡುತ್ತಿದ್ದಾರೆ.

ನೂಪುರ್ ಸನೋನ್, ತೆಲುಗಿನ ಸ್ಟಾರ್ ಹೀರೋ ಮಾಸ್ ಮಹಾರಾಜ ರವಿತೇಜ ನಟಿಸುತ್ತಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವಾಗಲೇ ಹಿಂದಿ ಸಿನಿಮಾದಿಂದಲೂ ನೂಪುರ್​ಗೆ ಅವಕಾಶ ಬಂದಿದ್ದು, ನವಾಜುದ್ದೀನ್ ಸಿದ್ಧಿಕಿ ನಟನೆಯ ನೂರಾನಿ ಚೆಹ್ರ ಸಿನಿಮಾದಲ್ಲಿ ನೂಪುರ್ ನಟಿಸುತ್ತಿದ್ದಾರೆ.

ಇನ್ನು ಕೃತಿ ಸನೋನ್, ಬಾಲಿವುಡ್​ ಮಾತ್ರವೇ ಅಲ್ಲದೆ ದಕ್ಷಿಣ ಚಿತ್ರರಂಗದಲ್ಲಿಯೂ ಜನಪ್ರಿಯ ನಟಿಯಾಗಿದ್ದು, ಇತ್ತೀಚೆಗಷ್ಟೆ ಅವರ ನಟನೆಯ ಶೆಹಜಾದಾ ಹಿಂದಿ ಸಿನಿಮಾ ಬಿಡುಗಡೆ ಆಗಿದೆ. ಪ್ರಭಾಸ್ ಜೊತೆಗೆ ಆದಿಪುರುಷ್ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸಿದ್ದಾರೆ. ಟೈಗರ್ ಶ್ರಾಫ್ ಜೊತೆಗೆ ಗಣ್​ಪತ್ ಸಿನಿಮಾಕ್ಕೂ ಬಣ್ಣ ಹಚ್ಚಿದ್ದಾರೆ. ಹಿಂದಿಯ ಇನ್ನೊಂದು ರೊಮ್ಯಾಂಟಿಕ್ ಸಿನಿಮಾವನ್ನೂ ಕೃತಿ ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ