ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳು ಇಂದು ನಟಿಯರು, ಒಬ್ಬರಂತೂ ಸ್ಟಾರ್ ನಟಿ: ಗುರುತಿಸಿಬಲ್ಲಿರಾ?

ಈ ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳಲ್ಲಿ ಒಬ್ಬರು ಸ್ಟಾರ್ ನಟಿಯಾಗಿದ್ದರೆ, ಮತ್ತೊಬ್ಬರು ಈಗ ನಟನೆ ಆರಂಭಿಸಿದ್ದಾರೆ. ಈ ಇಬ್ಬರೂ ನಟನೆ ಆರಂಭಿಸಿರುವುದು ತೆಲುಗು ಚಿತ್ರರಂಗದಿಂದ. ಯಾರು ಈ ನಟಿಯರು ಗುರುತಿಸಬಲ್ಲಿರಾ?

ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳು ಇಂದು ನಟಿಯರು, ಒಬ್ಬರಂತೂ ಸ್ಟಾರ್ ನಟಿ: ಗುರುತಿಸಿಬಲ್ಲಿರಾ?
ನಟಿ ಯಾರು ಗುರುತಿಸಿ
Follow us
|

Updated on: Feb 27, 2023 | 4:42 PM

ಚಿತ್ರದಲ್ಲಿ ಕಾಣಿಸುತ್ತಿರುವ ಹೆಣ್ಣು ಮಕ್ಕಳು ಅಕ್ಕ-ತಂಗಿಯರು. ಈ ಇಬ್ಬರಲ್ಲಿ ಒಬ್ಬರು ಸ್ಟಾರ್ ನಟಿಯಾದರೆ ಮತ್ತೊಬ್ಬರು ಈಗಿನ್ನು ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಟಿಸಿರುವ ಎರಡೂ ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ. ಇಬ್ಬರೂ ದೆಹಲಿ ಮೂಲದವರಾದರೂ ನಟನೆ ಪದಾರ್ಪಣೆ ಮಾಡಲು ಮೊದಲು ಆಯ್ದುಕೊಂಡಿದ್ದು ತೆಲುಗು ಚಿತ್ರರಂಗವನ್ನು.

ಸ್ಟಾರ್ ನಟಿ ಕೃತಿ ಸನೋನ್(Kriti Sanon) ಹಾಗೂ ಅವರ ಸಹೋದರಿ ನೂಪುರ್ ಸೆನನ್ (Nupur Sanon) ಅವರ ಚಿತ್ರವಿದು. ಇಬ್ಬರೂ ದೆಹಲಿಯ ನಿವಾಸದಲ್ಲಿದ್ದಾಗ ತೆಗೆದ ಚಿತ್ರವಿದು. ಮಧ್ಯಮ ಕುಟುಂಬಕ್ಕೆ ಸೇರಿದ ಈ ಚೆಲುವೆಯರು, ಶಿಕ್ಷಣ ಮುಗಿಸಿ ಮಾಡೆಲಿಂಗ್ ಮಾಡಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

ಅಕ್ಕ ಕೃತಿ ಸನೋನ್ ತೆಲುಗಿನಲ್ಲಿ ಮಹೇಶ್ ಬಾಬು ನಟಿಸಿರುವ ‘ನೇನೊಕ್ಕಡಿನೆ’ ಸಿನಿಮಾದ ಮೂಲಕ ನಟನೆಗೆ ಪದಾರ್ಪಣೆ ಮಾಡಿ ಆ ಬಳಿಕ ಸ್ಟಾರ್ ನಟಿಯಾಗಿ ಬೆಳೆದರು. ಇದೀಗ ಕೃತಿಯ ಸಹೋದರಿ ನೂಪುರ್ ಸನೋನ್ ಸಹ ಚಿತ್ರರಂಗಕ್ಕೆ ತೆಲುಗು ಸಿನಿಮಾದ ಮೂಲಕವೇ ಪದಾರ್ಪಣೆ ಮಾಡುತ್ತಿದ್ದಾರೆ.

ನೂಪುರ್ ಸನೋನ್, ತೆಲುಗಿನ ಸ್ಟಾರ್ ಹೀರೋ ಮಾಸ್ ಮಹಾರಾಜ ರವಿತೇಜ ನಟಿಸುತ್ತಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವಾಗಲೇ ಹಿಂದಿ ಸಿನಿಮಾದಿಂದಲೂ ನೂಪುರ್​ಗೆ ಅವಕಾಶ ಬಂದಿದ್ದು, ನವಾಜುದ್ದೀನ್ ಸಿದ್ಧಿಕಿ ನಟನೆಯ ನೂರಾನಿ ಚೆಹ್ರ ಸಿನಿಮಾದಲ್ಲಿ ನೂಪುರ್ ನಟಿಸುತ್ತಿದ್ದಾರೆ.

ಇನ್ನು ಕೃತಿ ಸನೋನ್, ಬಾಲಿವುಡ್​ ಮಾತ್ರವೇ ಅಲ್ಲದೆ ದಕ್ಷಿಣ ಚಿತ್ರರಂಗದಲ್ಲಿಯೂ ಜನಪ್ರಿಯ ನಟಿಯಾಗಿದ್ದು, ಇತ್ತೀಚೆಗಷ್ಟೆ ಅವರ ನಟನೆಯ ಶೆಹಜಾದಾ ಹಿಂದಿ ಸಿನಿಮಾ ಬಿಡುಗಡೆ ಆಗಿದೆ. ಪ್ರಭಾಸ್ ಜೊತೆಗೆ ಆದಿಪುರುಷ್ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸಿದ್ದಾರೆ. ಟೈಗರ್ ಶ್ರಾಫ್ ಜೊತೆಗೆ ಗಣ್​ಪತ್ ಸಿನಿಮಾಕ್ಕೂ ಬಣ್ಣ ಹಚ್ಚಿದ್ದಾರೆ. ಹಿಂದಿಯ ಇನ್ನೊಂದು ರೊಮ್ಯಾಂಟಿಕ್ ಸಿನಿಮಾವನ್ನೂ ಕೃತಿ ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ