CCL 2024: ಸಿಸಿಎಲ್​ನಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲು; ಗೆದ್ದು ಬೀಗಿದ ಬೆಂಗಾಲ್ ಟೈಗರ್ಸ್

ಫೆಬ್ರವರಿ 23ರಿಂದ ​ ಸಿಸಿಎಲ್​ ಪಂದ್ಯಗಳು ನಡೆದವು. ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮವಾಗಿ ಪ್ರದರ್ಶನ ನೀಡಿತು. ಕ್ವಾಟರ್​ ಫೈನಲ್​ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದಿದ್ದ ಕರ್ನಾಟಕದ ತಂಡ ಫಿನಾಲೆಯಲ್ಲಿ ಅದೇ ತಂಡದ ವಿರುದ್ಧ ಸೋಲು ಕಂಡಿದೆ. ಬೆಂಗಾಲ್ ಟೈಗರ್ಸ್ ಚಾಂಪಿಯನ್ ಆಗಿದೆ.

CCL 2024: ಸಿಸಿಎಲ್​ನಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲು; ಗೆದ್ದು ಬೀಗಿದ ಬೆಂಗಾಲ್ ಟೈಗರ್ಸ್
ಜಿಶ್ಶು-ಸುದೀಪ್
Follow us
|

Updated on: Mar 18, 2024 | 7:04 AM

ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ (CCL) ಫೈನಲ್ ಪಂದ್ಯ ಮಾರ್ಚ್ 18ರಂದು ನಡೆದಿದೆ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ನಡುವಿನ ಪಂದ್ಯದಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲಾಗಿದೆ. ಈ ಮೂಲಕ ಕಪ್ ಮಿಸ್ ಆಗಿದೆ. ಈ ನೋವಿನಲ್ಲೂ ಕಿಚ್ಚ ಸುದೀಪ್ ಅವರು ಮೊದಲ ಬಾರಿ ಕಪ್ ಗೆದ್ದ ಆರ್​ಸಿಬಿ ಮಹಿಳಾ ತಂಡಕ್ಕೆ ಶುಭಾಶಯ ಹೇಳಿದ್ದಾರೆ. ಬೆಂಗಾಲ್ ಟೈಗರ್ಸ್ ತಂಡದ ಕ್ಯಾಪ್ಟನ್ ಜಿಶ್ಶು ಸೇನ್​ಗುಪ್ತಾಗೆ ಎಲ್ಲ ಕಡೆಗಳಿಂದ ವಿಶ್​ಗಳು ಬರುತ್ತಿವೆ.

ಫೆಬ್ರವರಿ 23ರಿಂದ ಪ್ರತಿ ವೀಕೆಂಡ್​​ ಸಿಸಿಎಲ್​ ಪಂದ್ಯಗಳು ನಡೆದವು. ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮವಾಗಿ ಪ್ರದರ್ಶನ ನೀಡಿತು. ಕ್ವಾಟರ್​ ಫೈನಲ್​ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದಿದ್ದ ಕರ್ನಾಟಕದ ತಂಡ ಫಿನಾಲೆಯಲ್ಲಿ ಅದೇ ತಂಡದ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಬೆಂಗಾಲ್ ಟೈಗರ್ಸ್ ಸಿಸಿಎಲ್​ ಕಪ್​ನ ಮನೆಗೆ ಕೊಂಡೊಯ್ದಿದೆ.

ಸಿಸಿಎಲ್​ನಲ್ಲಿ ಹೊಸ ಫಾರ್ಮ್ಯಾಟ್ ಬಳಕೆ ಮಾಡಲಾಗಿದೆ. 10 ಓವರ್​ಗಳ ನಾಲ್ಕು ಇನ್ನಿಂಗ್ಸ್ ಇರುತ್ತದೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದವರು 10 ಓವರ್ ಆಡಬೇಕು. ನಂತರ ಎದುರಾಳಿ ತಂಡದವರು 10 ಓವರ್ ಆಡಬೇಕು. ಆ ಬಳಿಕ ಎರಡನೇ ಇನ್ನಿಂಗ್ಸ್ ಕೂಡ ಹೀಗೆಯೇ ಇರುತ್ತದೆ. ಮೊದಲು ಬ್ಯಾಟ್ ಮಾಡಿದ ಬೆಂಗಾಲ್​ ಟೈಗರ್ಸ್ 118 ರನ್​ಗಳನ್ನು ಪೇರಿಸಿತ್ತು. ಏಳು ವಿಕೆಟ್ ನಷ್ಟಕ್ಕೆ ಕರ್ನಾಟಕ ಬುಲ್ಡೋಜರ್ಸ್ 86 ರನ್​ಗಳನ್ನು ಕಲೆ ಹಾಕಿತು.

ಇದನ್ನೂ ಓದಿ: CCL 2023: ಕರ್ನಾಟಕ ಬುಲ್ಡೋಝರ್ಸ್ ಮುಂದೆ ಮಂಡಿಯೂರಿದ ಬೆಂಗಾಲ್ ಟೈಗರ್ಸ್

32 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಬೆಂಗಾಲ್​ ಟೈಗರ್ಸ್ 4 ವಿಕೆಟ್ ನಷ್ಟಕ್ಕೆ 105 ರನ್​ ಕಲೆ ಹಾಕಿತು. ಈ ಮೂಲಕ 138 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ಕರ್ನಾಟಕ ತಂಡ 10 ಒವರ್​ನಲ್ಲಿ 125 ರನ್​ ಕಲೆ ಹಾಕಿತು. ಈ ಮೂಲಕ ಬೆಂಗಾಲ್ ಟೈಗರ್ಸ್ ತಂಡ 12 ರನ್​ಗಳ ಗೆಲುವು ಕಂಡಿತು. ಒಳ್ಳೆಯ ಫೈಟ್​ ಕೊಟ್ಟು ಸೋತೆವು ಎನ್ನುವ ಖುಷಿ ಸುದೀಪ್ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ